/newsfirstlive-kannada/media/post_attachments/wp-content/uploads/2025/05/Manu-Santraste.jpg)
ಬೆಂಗಳೂರು: ಮೊನ್ನೆಯಷ್ಟೇ ಕಾಮಿಡಿ ಕಿಲಾಡಿ ಖ್ಯಾತಿಯ ಮಡೆನೂರು ಮನು ವಿರುದ್ಧ ಸಹ ನಟಿ ಲೈಂಗಿಕ ದೌರ್ಜನ್ಯ ಆರೋಪ ಮಾಡಿದ್ದರು. ಹೀಗಾಗಿ ಸಂತ್ರಸ್ತೆ ಸಾಲು ಸಾಲು ಆರೋಪದ ಬೆನ್ನಲ್ಲೇ ಅನ್ನಪೂರ್ಣೇಶ್ವರಿ ನಗರ ಪೊಲೀಸರು ಮಡೆನೂರು ಮನು ಅವರನ್ನ ಅರೆಸ್ಟ್ ಮಾಡಿ ತೀವ್ರ ವಿಚಾರಣೆ ಮಾಡಿದ್ದರು.
ಇದನ್ನೂ ಓದಿ: ತಂದೆಯ ‘ಸುಪಾರಿ’ ಆರೋಪಕ್ಕೆ ಸಖತ್ ಟಾಂಗ್ ಕೊಟ್ಟ ಚೈತ್ರಾ ಕುಂದಾಪುರ.. ಏನಂದ್ರು?
ಆದ್ರೆ ಇದೀಗ ಸಂತ್ರಸ್ತೆ ಮತ್ತೊಂದು ಗಂಭೀರವಾದ ಆರೋಪ ಮಾಡಿದ್ದಾರೆ. ಈ ಬಗ್ಗೆ ನ್ಯೂಸ್ ಫಸ್ಟ್ ಜೊತೆ ಸಂತ್ರಸ್ತೆ ಮಾತನಾಡಿದ್ದಾಳೆ. ಸಿನಿಮಾ ಪ್ರಚಾರದ ಗಿಮಿಕ್ಗಾಗಿ ಈ ರೀತಿ ಮಾಡ್ತಿದ್ದಾರೆ ಅಂತ ಸಂತ್ರಸ್ತೆ ಆರೋಪಿಸಿದ್ದಾಳೆ. ಇಡೀ ಸಿನಿಮಾ ಟೀಂಗೆ ನಾನು ಕಂಪ್ಲೇಂಟ್ ಕೊಡೋದು ಗೊತ್ತಿತ್ತು.
ಏಪ್ರಿಲ್ 19ರಂದು ಬಲವಂತವಾಗಿ ಸಿನಿಮಾ ಟೀಂ ಕೆಂಗೇರಿಗೆ ಕರೆದುಕೊಂಡು ಹೋಗಿದ್ರು. ಅಲ್ಲಿಗೆ ಲೇಡಿ ಲಾಯರ್ನ ಕೂಡ ಕರೆಸಿದ್ದರು. ಇವಳು ಹೇಗೆ ಮುಂದುವರೆದ್ರು ನಾವು ಅದನ್ನ ಸಿನಿಮಾ ಪ್ರಮೋಷನ್ಗೆ ಬಳಸಿಕೊಳ್ಳೋಣ ಅಂತ ಸಿನಿಮಾ ತಂಡ ಪ್ಲಾನ್ ಮಾಡಿತ್ತು. ಪ್ರಚಾರಕ್ಕಾಗಿಯೇ ಮನುನನ್ನ ಅವತ್ತು ಕರೆಸಿದ್ರು ಅಂತ ನನಗೆ ಗೊತ್ತಾಗ್ತಿದೆ. ಅವನಿಗೆ ಶಿಕ್ಷೆ ಆಗಲೇ ಬೇಕು ಅಂತ ಸಂತ್ರಸ್ತೆ ಆಗ್ರಹಿಸಿದ್ದಾಳೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ