/newsfirstlive-kannada/media/post_attachments/wp-content/uploads/2025/07/karna-serial-kannada2.jpg)
ನಿಧಿ ಕನಸಿನಲ್ಲಿ ಕರ್ಣನ ಕನವರಿಕೆ ಜೋರಾಗಿದೆ. ಏನೇ ಪರಿಸ್ಥಿತಿ ಎದುರಾದ್ರೂ ಕರ್ಣನ ಜೊತೆ ಕನಸಿನ ಲೋಕಕ್ಕೆ ಜಾರಿ ಬಿಡ್ತಾಳೆ ನಿಧಿಮಾ.
ಕರ್ಣ ಅಡುಗೆ ಮಾಡೋ ಸ್ಟೈಲ್​ಗೆ ಫಿದಾ ಆಗಿದ್ದ ಡಾಕ್ಟ್ರಮ್ಮ, ತನ್ನ ಮುದ್ದು ಮಾಡ್ತಾ, ಊಟ ಮಾಡಿಸ್ತಿದ್ರೇ ಹೆಂಗಿರುತ್ತೆ ಅಂತ ಕನಸು ಕಾಣೋಕೆ ಶುರು ಮಾಡಿದ್ರು ನೋಡಿ. ಥೇಟ್ ಹಾಲು ಜೇನು ಸಿನಿಮಾ ದಂತಿತ್ತು ಆ ಸೀನ್​.
ಇದನ್ನೂ ಓದಿ: ರಾಶಿ ರಾಶಿ ಚಿನ್ನಾಭರಣದ ಗೊಂಚಲು.. ಲೋಕಾಯುಕ್ತ ಅಧಿಕಾರಿಗಳೇ ಬೆರಗಾದ್ರು..
ವೀಕ್ಷಕರು ಈ ಸೀನ್​ ಅನ್ನು ನೋಡಿ ಸಖತ್ ಎಂಜಾಯ್​ ಮಾಡಿದ್ದಾರೆ. ಇನ್ನೂ, ಶೂಟಿಂಗ್​ ವೇಳೆ ನಡೆದ ಸೀನ್​ ಸಖತ್ ಮಜವಾಗಿದೆ. ಭಾಗ್ಯಲಕ್ಷ್ಮೀ ಸೀರಿಯಲ್​ ನಟಿ ಪದ್ಮಜಾ ರಾವ್​ ಅವರ ಮನೆಯಲ್ಲಿ ಶೂಟಿಂಗ್​ ನಡಿದಿದೆ. ಭವ್ಯಾ-ಕಿರಣ್​ ಸಖತ್​ ಎಂಜಾಯ್​ ಮಾಡ್ತಾ ಪಾತ್ರಕ್ಕೆ ಜೀವ ತುಂಬಿದ್ದಾರೆ.
ನಿನ್ನೆ ಸಂಚಿಕೆನೂ ಅಷ್ಟೇ ಸೂಪರ್​ ಆಗಿ ಮೂಡಿ ಬಂದಿದೆ. ನಿಧಿ ಶ್ರೀಕೃಷ್ಣನ ಭಕ್ತೆ. ಕರ್ಣನಿಗೆ ಕಾಲ್​ ಮಾಡ್ಬೇಕು ಅಂತ ಹಂಬಲಿಸುತ್ತಿದ್ದ ನಿಧಿಗೆ ಅಕ್ಕಾ ನಿತ್ಯಾ ಕಾಲ್​ ಮಾಡೋಕೆ ದಾರಿ ಮಾಡಿಕೊಟ್ಟಳು. ಆಗ ಕೃಷ್ಣನ ವೇಷದಲ್ಲಿ ನಮ್ರತಾ ಕಾಣಿಸಿಕೊಂಡಿದ್ದು ಚಂದವಾಗಿತ್ತು. ಕಿರಣ್​ ರಾಜ್​ಗೂ ಕೃಷ್ಣನ ವೇಷ ತೋಡಿಸಿದ್ರು, ಭವ್ಯಾ ರಾಧೆಯ ರೂಪದಲ್ಲಿ ಪ್ರೀತಿಯ ಮೆರವಣಿಗೆ ಹೊರಟಿದ್ದರು.
ಒಟ್ಟಿನಲ್ಲಿ ಕೃಷ್ಣನನ್ನ ರಾಧೆ ಆರಾಧಿಸೋ ರೀತಿ ಕರ್ಣನನ್ನ ಮನದಲ್ಲೇ ಹಚ್ಚಿಕೊಂಡಿರೋ ನಿಧಿಗೆ ಬಿಗ್​ ಶಾಕ್​ ಎದುರಾಗಲಿದೆ. ಕಾಲೇಜಿನ ತುಂಬಾ ಕರ್ಣ-ನಿಧಿ ಬಗ್ಗೆ ಕೆಟ್ಟದಾಗಿ ಬಿಂಬಿಸೋ ಫೋಟೋಗಳನ್ನ ಅಂಟಿಸಿದ್ದಾನೆ ಕರ್ಣನ ತಮ್ಮ ಸಂಜು. ಇದಕ್ಕೆ ಕರ್ಣ ತಿರುಗೇಟು ಕೊಡ್ತಾನಾ? ಹೀಗಾಗಿ ಕರ್ಣ ಸೀರಿಯಲ್​ ಮುಂದಿನ ನೋಡಲು ವೀಕ್ಷಕರಲ್ಲಿ ಕುತೂಹಲ ಹೆಚ್ಚಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ