ಜೈಲಿಂದ ಬರ್ತಿದ್ದಂತೆ ಅಲ್ಲು ಅರ್ಜುನ್​​ ಮನೆಗೆ ವಿಜಯ್ ದೇವರಕೊಂಡ ದೌಡು; ಯಾರೆಲ್ಲಾ ಬಂದಿದ್ರು?

author-image
Veena Gangani
Updated On
ಅಲ್ಲು ಅರ್ಜುನ್ ಅರೆಸ್ಟ್ ಕೇಸ್‌.. ಹೈದರಾಬಾದ್‌ ಮನೆಗೆ ರಿಯಲ್ ಸ್ಟಾರ್‌ ಉಪೇಂದ್ರ ಭೇಟಿ; ಮಹತ್ವದ ಚರ್ಚೆ!
Advertisment
  • ಸಂಧ್ಯಾ ಥಿಯೇಟರ್ ಕಾಲ್ತುಳಿತ ಕೇಸ್​ನಲ್ಲಿ ಜೈಲುಪಾಲಾಗಿದ್ದ ನಟ
  • ಜ್ಯುಬಿಲಿ ಹಿಲ್ಸ್ ನಿವಾಸಕ್ಕೆ ಟಾಲಿವುಡ್​​ ಸ್ಟಾರ್​​ಗಳು ಆಗಮನ
  • 4 ವಾರಗಳ ಕಾಲ ನಟನಿಗೆ ಹೈಕೋರ್ಟ್ ಮಧ್ಯಂತರ ಜಾಮೀನು

ಸಂಧ್ಯಾ ಥಿಯೇಟರ್ ಕಾಲ್ತುಳಿತ ಪ್ರಕರಣದಲ್ಲಿ ಜೈಲು ಸೇರಿದ್ದ ಸ್ಟಾರ್ ನಟ ಅಲ್ಲು ಅರ್ಜುನ್​ ರಿಲೀಸ್​ ಆಗಿದ್ದಾರೆ. ಇಂದು ಬೆಳಗ್ಗೆ ಚಂಚಲಗೂಡ ಸೆಂಟ್ರಲ್ ಜೈಲಿನಿಂದ ಅಲ್ಲು ಅರ್ಜುನ್ ಬಿಡುಗಡೆಯಾಗಿದ್ದಾರೆ. ಇದೇ ವಿಚಾರ ತಿಳಿದ ಕೂಡಲೇ ಕುಟುಂಬಸ್ಥರು ಹಾಗೂ ಅಭಿಮಾನಿಗಳು ಹಾಗೂ ಸ್ನೇಹಿತರು ಫುಲ್​ ಖುಷ್ ಆಗಿದ್ದಾರೆ.

ಇದನ್ನೂ ಓದಿ: ಅಲ್ಲು ಅರ್ಜುನ್ ಜೊತೆ ಪೊಲೀಸರು ಅನುಚಿತ ವರ್ತನೆ ಆರೋಪ; ಅಷ್ಟಕ್ಕೂ ಮನೆಯಲ್ಲಿ ಆಗಿದ್ದೇನು..?

publive-image

ನಟ ಅಲ್ಲು ಅರ್ಜುನ್​ ಜೈಲಿನಿಂದ ರಿಲೀಸ್ ಆಗಿ ಮನೆಗೆ ಬರುತ್ತಿದ್ದಂತೆ ಅಪ್ಪಿಕೊಂಡು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಅಪ್ಪನ ಆಗಮನಕ್ಕೆ ಇಬ್ಬರು ಮಕ್ಕಳು ಕೂಡ ಖುಷಿಯಾಗಿದ್ದಾರೆ. ಇದಾದ ಬಳಿಕ ಕುಂಬಳಕಾಯಿ ಒಡೆದು ಅಲ್ಲು ಅರ್ಜುನ್‌ಗೆ ದೃಷ್ಟಿ ತೆಗೆದಿದ್ದಾರೆ. ಇನ್ನೂ, 4 ವಾರಗಳ ಕಾಲ ಹೈಕೋರ್ಟ್ ಮಧ್ಯಂತರ ಜಾಮೀನು ನೀಡಿದೆ. ನಿನ್ನೆಯೇ ಬೇಲ್​​ ಸಿಕ್ಕರೂ ಕೂಡ ಅಲ್ಲು ಅರ್ಜುನ್​​ ಜೈಲಿನಲ್ಲಿ ಒಂದು ರಾತ್ರಿ ಕಳೆಯುವಂತಾಗಿತ್ತು.

publive-image

ಇದೀಗ ನಟ ಅಲ್ಲು ಅರ್ಜುನ್​ ಮನೆಗೆ ಸ್ಟಾರ್​ ನಟರು ಭೇಟಿ ಕೊಡುತ್ತಿದ್ದಾರೆ. ಈಗಾಗಲೇ ಜೈಲಿನಿಂದ ಆಚೆ ಬಂದ ಅಲ್ಲು ಅರ್ಜುನ್ ನಿವಾಸಕ್ಕೆ ನಿರ್ದೇಶಕ ಸುಕುಮಾರ್ ಹಾಗೂ ನಿರ್ಮಾಪಕ ದಿಲ್​ ರಾಜ್ ಭೇಟಿ ಕೊಟ್ಟಿದ್ದಾರೆ. ಇವರ ಜೊತೆಗೆ ಸ್ಟಾರ್ ನಟಿ ವಿಜಯ್ ದೇವರಕೊಂಡ, ಸಹೋದರ ಆನಂದ್ ದೇವರಕೊಂಡ ಕೂಡ ಅಲ್ಲು ಅರ್ಜುನ್​ ಭೇಟಿಗೆ ಬಂದಿದ್ದಾರೆ. ಅಲ್ಲದೇ ಅಲ್ಲು ಅರ್ಜುನ್ ಮನೆ ಮುಂದೆ ನೂರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment