/newsfirstlive-kannada/media/post_attachments/wp-content/uploads/2025/01/MAYANK_AGARWAL-1.jpg)
ವಿಜಯ್ ಹಜಾರೆ ಟ್ರೋಫಿಯ 2ನೇ ಸೆಮಿಫೈನಲ್ ಪಂದ್ಯ ಮಹಾರಾಷ್ಟ್ರ ಹಾಗೂ ವಿದರ್ಭ ತಂಡಗಳ ನಡುವೆ ನಡೆಯುತ್ತಿದೆ. ಈಗಾಗಲೇ ಮೊದಲ ಬ್ಯಾಟಿಂಗ್ ಮಾಡಿದ ಕರುಣ್ ನಾಯರ್ ನೇತೃತ್ವದ ವಿದರ್ಭ ಟೀಮ್ ಬೃಹತ್ ಮೊತ್ತದ ರನ್ಗಳನ್ನು ಕಲೆ ಹಾಕಿದೆ. 50 ಓವರ್ಗಳಲ್ಲಿ 3 ವಿಕೆಟ್ಗೆ 380 ರನ್ಗಳ ಗುರಿ ನೀಡಿದೆ.
ವಡೋದರದ ಕೋಟಂಬಿ ಸ್ಟೇಡಿಯಂನಲ್ಲಿ ನಡೆದ 2ನೇ ಸೆಮಿಫೈನಲ್ ಪಂದ್ಯದಲ್ಲಿ ಮಹಾರಾಷ್ಟ್ರ ತಂಡದ ನಾಯಕ ರುತುರಾಜ್ ಗಾಯಕ್ವಾಡ್ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಅದರಂತೆ ವಿದರ್ಭ ಪರ ಓಪನರ್ ಆಗಿ ಬ್ಯಾಟಿಂಗ್ಗೆ ಆಗಮಿಸಿದ ಧೃವ್ ಜುರೇಲ್ ಹಾಗೂ ಯಶ್ ರಾಥೋಡ್ ಬ್ಯಾಟಿಂಗ್ನಲ್ಲಿ ಪರಾಕ್ರಮ ಮೆರೆದರು. ಮಹಾರಾಷ್ಟ್ರದ ಆಟಗಾರರನ್ನು ಬೆಂಬಿಡದೇ ಕಾಡಿದ ಈ ಜೋಡಿ ಬಾಲ್ ಅನ್ನ ಮೈದಾನದ ಎಲ್ಲ ಕಡೆ ಬಾರಿಸಿ ಬೌಲರ್ಗಳ ಬೆವರಿಸಿಳಿದರು. ಹೀಗಾಗಿಯೇ ಓಪನರ್ ಆಗಿ ಬಂದ ಇಬ್ಬರು ಸೆಂಚುರಿ ಸಿಡಿಸಿ ಸಂಭ್ರಮಿಸಿದರು.
ಇದನ್ನೂ ಓದಿ: ಸೆಮಿಸ್ನಲ್ಲಿ ಕರ್ನಾಟಕಕ್ಕೆ ಭರ್ಜರಿ ಗೆಲುವು.. ಫೈನಲ್ಗೆ ಎಂಟ್ರಿ ಕೊಟ್ಟ ಮಯಾಂಕ್ ನೇತೃತ್ವದ ಟೀಮ್
ಮನಮೋಹಕ ಬ್ಯಾಟಿಂಗ್ ಮಾಡಿದ ಧೃವ್ ಜುರೇಲ್, 120 ಎಸೆತಗಳಲ್ಲಿ 14 ಬೌಂಡರಿ, 1 ಸಿಕ್ಸರ್ ಸಮೇತ 114 ರನ್ಗಳನ್ನು ಗಳಿಸಿದರು. ಯಶ್ ರಾಥೋಡ್ ಕೂಡ ನಾನೇನು ಕಮ್ಮಿ ಇಲ್ಲ ಎನ್ನುವಂತೆ ಕೇವಲ 101 ಎಸೆತಗಳಲ್ಲಿ 14 ಬೌಂಡರಿ 1 ಸಿಕ್ಸರ್ ಸಮೇತ 116 ರನ್ ಗಳಿಸಿ ಮಹಾರಾಷ್ಟ್ರಕ್ಕೆ ದೊಡ್ಡ ಪೆಟ್ಟು ಕೊಟ್ಟರು. ಇವರ ಬಳಿಕ ಕ್ರೀಸ್ಗೆ ಆಗಮಿಸಿದ ಕ್ಯಾಪ್ಟನ್ ಕರುಣ್ ನಾಯರ್ ಕೂಡ ಹೊಡಿಬಡಿ ಬ್ಯಾಟಿಂಗ್ ಮಾಡಿ ಕೇವಲ 44 ಎಸೆತಗಳಲ್ಲಿ 9 ಫೋರ್, 5 ಭರ್ಜರಿ ಸಿಕ್ಸರ್ ಸಮೇತ 88 ರನ್ ಚಚ್ಚಿ ನಾಟೌಟ್ ಆಗಿ ಉಳಿದರು. ಜೀತೇಶ್ ಶರ್ಮಾ ಕೂಡ ಕೇವಲ 33 ಎಸೆತಗಳಲ್ಲೇ ಅರ್ಧ ಶತಕ ಸಿಡಿಸಿ ತಂಡಕ್ಕೆ ನೆರವಾದರು.
ಈ ಎಲ್ಲರ ಬ್ಯಾಟಿಂಗ್ ನೆರವಿನಿಂದ ವಿದರ್ಭ ತಂಡ ನಿಗದಿತ 50 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 380 ರನ್ಗಳ ಬೃಹತ್ ಟಾರ್ಗೆಟ್ ನೀಡಿದೆ. ಸದ್ಯ ಈ ಗುರಿ ಬೆನ್ನತ್ತಿದ ಮಹಾರಾಷ್ಟ್ರ ಈಗಾಗಲೇ 31 ರನ್ಗೆ ಕ್ಯಾಪ್ಟನ್ ರುತುರಾಜ್ ಗಾಯಕ್ವಾಡ್ ಔಟ್ ಆಗಿದ್ದಾರೆ. ಮಹಾರಾಷ್ಟ್ರ ತಂಡದ ಗೆಲುವು ಕಠಿಣವಾಗಿದೆ. ಸದ್ಯ ಈ 2ನೇ ಸೆಮಿಫೈನಲ್ ಪಂದ್ಯದಲ್ಲಿ ವಿನ್ ಆದವರು ಕರ್ನಾಟಕ ತಂಡದ ವಿರುದ್ಧ ಫೈನಲ್ ಪಂದ್ಯವನ್ನು ಆಡಲಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ