ರಕ್ಷಿತಾ ಬೆನ್ನಲ್ಲೇ ವಿಜಯಲಕ್ಷ್ಮೀ ಕೌಂಟರ್​​..? ಮಾರ್ಮಿಕ ಪೋಸ್ಟ್ ಮಾಡಿದ ದರ್ಶನ್ ಪತ್ನಿ

author-image
Veena Gangani
Updated On
ಕಾಲಾಯ ತಸ್ಮೈ ನಮಃ..! ಡಿ ಬಾಸ್ ಫ್ಯಾನ್ಸ್​ ಪೇಜ್​ನಿಂದ ಅಭಿಮಾನಿಗಳಿಗೆ ಎಚ್ಚರಿಕೆ
Advertisment
  • ದರ್ಶನ್ ಪತ್ನಿ ವಿಜಯಲಕ್ಷ್ಮಿ ಪೋಸ್ಟ್​ನಲ್ಲಿ ಏನಿದೆ?
  • ‘ಮೂರ್ಖರನ್ನ ಅವರ ಮಾತಿನಿಂದ ಗುರ್ತಿಸಬಹುದು’
  • ರಕ್ಷಿತಾ ಬೆನ್ನಲ್ಲೇ ನಟಿ ರಮ್ಯಾಗೆ ಕೌಂಟರ್​​ ಕೊಟ್ರಾ?

ರೇಣುಕಾಸ್ವಾಮಿ ಪ್ರಕರಣದಲ್ಲಿ ರಮ್ಯಾ ಮತ್ತು ದರ್ಶನ್ ಅಭಿಮಾನಿಗಳ ನಡುವಿನ ವಾರ್​ಗೆ ವಿಜಯಲಕ್ಷ್ಮೀ ಅವರು ಎಂಟ್ರಿ ಕೊಟ್ಟಿದ್ದಾರೆ. ನಟಿ ರಮ್ಯಾ ಸೋಶಿಯಲ್ ಮೀಡಿಯಾದಲ್ಲಿ ರೇಣುಕಾಸ್ವಾಮಿ ಪ್ರಕರಣದ ಆರೋಪಿ, ನಟ ದರ್ಶನ್ ಅಭಿಮಾನಿಗಳ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ.

ಇದನ್ನೂ ಓದಿ: ರಮ್ಯಾ ಪರ ಒಳ್ಳೆ ಹುಡುಗ ಬ್ಯಾಟ್; ದರ್ಶನ್ ಅಭಿಮಾನಿಗಳಿಗೆ ಕೊಟ್ಟ ಸಂದೇಶ ಏನು..?

publive-image

ಅಲ್ಲದೇ ದರ್ಶನ್​ ಅಭಿಮಾನಿಗಳ ವಿರುದ್ಧ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ರಮ್ಯಾ ಮುಂದಾಗಿರೋ ಹೊತ್ತಲ್ಲೇ, ಈ ಕೇಸ್‌ಗೆ ನಟ ದರ್ಶನ್​ ಪತ್ನಿ ವಿಜಯಲಕ್ಷ್ಮೀ ಟ್ವಿಸ್ಟ್​ ಕೊಟ್ಟಿದ್ದಾರೆ. ದರ್ಶನ್​ ಪತ್ನಿ ವಿಜಯಲಕ್ಷ್ಮೀ ಅವರು ಇನ್​ಸ್ಟಾ ಸ್ಟೋರಿಯಲ್ಲಿ ಮಾರ್ಮಿಕವಾದ ಪೋಸ್ಟ್​ವೊಂದನ್ನು ಶೇರ್ ಮಾಡಿಕೊಂಡಿದ್ದಾರೆ.

publive-image

ದರ್ಶನ್ ಪತ್ನಿ ವಿಜಯಲಕ್ಷ್ಮಿ ಪೋಸ್ಟ್​ನಲ್ಲಿ ಏನಿದೆ?

ಬುದ್ಧನ ಫೋಟೋ ಕೆಳಗಡೆ ಇಂಗ್ಲಿಷ್​ನಲ್ಲಿ "A fool is known by his speech; and a wise man by silence ಎಂದು ಬರೆಯಲಾಗಿದೆ. ಅಂದರೆ ಕನ್ನಡದಲ್ಲಿ ಇದರರ್ಥ, ಮೂರ್ಖರನ್ನ ಅವರ ಮಾತಿನಿಂದ ಗುರ್ತಿಸಬಹುದು; ಬುದ್ದಿವಂತನನ್ನ ಮೌನದಿಂದ ಗುರುತಿಸಬಹುದು" ಎಂದಿರೋ ಪೋಸ್ಟ್​ ಶೇರ್ ಮಾಡಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment