ವಿನೇಶ್ ಪೋಗಟ್ ಅನರ್ಹತೆಯ ವಿರುದ್ಧ ವಿಜಯೇಂದ್ರ ಸಿಂಗ್ ಕೆಂಡ!
‘ಈ ರೀತಿಯ ಒಂದು ನಡೆ ಒಲಿಂಪಿಕ್ಸ್ ಇತಿಹಾಸದಲ್ಲಿ ನಾವು ನೋಡಿಲ್ಲ‘
‘ಇದು ಭಾರತ ಹಾಗೂ ಭಾರತದ ಕುಸ್ತಿಪಟುವಿನ ವಿರುದ್ಧ ಮಹಾ ಷಡ್ಯಂತ್ರ‘
ಪ್ಯಾರಿಸ್: ಇಡೀ ದೇಶಕ್ಕೆ ದೇಶವೇ ಒಂದು ಕಾತರತೆಯನ್ನು, ಕುತೂಹಲವನ್ನು ಹೆಮ್ಮೆಯೊಂದನ್ನ ಎದೆಯಲ್ಲಿಟ್ಟುಕೊಂಡು ಕುಳಿತಿತ್ತು. ಈಗಾಗಲೇ ಮೂರು ಕಂಚಿನ ಪದಕಗಳು ಬಂದಿವೆ. ಚಿನ್ನ, ಬೆಳ್ಳಿ ಬಾಕಿಯಿದೆ. ಫೈನಲ್ಗೆ ಲಗ್ಗೆಯಿಟ್ಟಿರುವ ಕುಸ್ತಿಪಟು ವಿನೇಶ್ ಪೋಗಟ್ ಹಾಗೂ ಜಾವಲಿನ್ ಎಸೆತಗಾರ ನೀರಜ್ ಚೋಪ್ರಾ ಅದನ್ನು ಪೂರ್ಣಗೊಳಿಸಲಿದ್ದಾರೆ ಅನ್ನೋ ತೀವ್ರ ನಿರೀಕ್ಷೆಗಳ ತುದಿಗಾಲಲ್ಲಿ ಇಡೀ ದೇಶವೇ ನಿಂತಿತ್ತು. ಆದ್ರೆ ಇಂದು ಆಗಿದ್ದೇ ಬೇರೆ.
29 ವರ್ಷದ ವಿನೇಶ್ ಎಂಬ ಮಹಾ ಕುಸ್ತಿ ಪ್ರವೀಣೆ, ಎದುರಾದ ಎಲ್ಲಾ ಸವಾಲುಗಳನ್ನು ಅಡ್ಡಡ್ಡ ಮಲಗಿಸಿ ಫೈನಲ್ಗೆ ಎಂಟ್ರಿ ಪಡೆದಿದ್ದಳು. ಆದ್ರೆ 100 ರಿಂದ 150 ಗ್ರಾಮ್ ತೂಕ ಹೆಚ್ಚಾಯ್ತು ಅನ್ನೋ ಕಾರಣದಿಂದಾಗಿ ಬರಿಗೈಯಲ್ಲಿ ಪ್ಯಾರಿಸ್ನಿಂದ ವಾಪಸ್ ಬರುವಂತಾಗಿದೆ. ಇದು ಕೋಟ್ಯಾನುಕೋಟಿ ಭಾರತೀಯರ ಆಸೆಗೆ ತಣ್ಣೀರು ಎರಚಿದಂತಾಗಿದೆ. ನೀತಿ ನಿಯಮಗಳ ಅಡಿಯಲ್ಲಿ ಪೋಗಟ್ ಅನರ್ಹತೆ ಎಷ್ಟು ಸರಿ ಎಂದು ಈಗ ನ್ಯಾಯ ಅನ್ಯಾಯಗಳ ತಕ್ಕಡಿಯಲ್ಲಿ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿಯನ್ನಿಟ್ಟು ತೂಗುತ್ತಿದ್ದಾರೆ. ಇದು ಭಾರತ ಹಾಗೂ ಭಾರತದ ಕುಸ್ತಿಪಟುವಿನ ವಿರುದ್ಧ ನಡೆದಿರುವ ದೊಡ್ಡ ಷಡ್ಯಂತ್ರ ಅನ್ನುತ್ತಿದ್ದಾರೆ 2008ರ ಬೀಜಿಂಗ್ ಒಲಿಂಪಿಕ್ಸ್ನಲ್ಲಿ ಬಾಕ್ಸಿಂಗ್ ವಿಭಾಗದಲ್ಲಿ ಕಂಚು ಪದಕ ಗೆದ್ದಿದ್ದ ವಿಜೇಂದ್ರ ಸಿಂಗ್.
ಇದನ್ನೂ ಓದಿ: ‘ಹೇಳಲು ಈಗ ಏನೂ ಉಳಿದಿಲ್ಲ, ನನ್ನ ಕನಸು ಏನಾಗಿತ್ತು ಅಂದರೆ..’ ಮಹಾವೀರ್ ಫೋಗಟ್ ಕಣ್ಣೀರು
ವಿಜಯೇಂದ್ರ ಸಿಂಗ್ ಹೇಳಿದ್ದೇನು?
ಇದು ಭಾರತ ಹಾಗೂ ವಿನೇಶ್ ಪೋಗಟ್ ವಿರುದ್ಧ ನಡೆದಿರುವ ದೊಡ್ಡ ಷಡ್ಯಂತ್ರ. ಇಡೀ ರಾತ್ರಿಯೊಳಗೆ ಐದರಿಂದ ಆರು ಕೆಜಿ ತೂಕವನ್ನು ಒಬ್ಬ ಕ್ರೀಡಾಳು ಇಳಿಸುತ್ತಾನೆ. ಕೇವಲ 100 ರಿಂದ 150 ಗ್ರಾಂ ತೂಕ ದೊಡ್ಡ ವಿಷಯವಾ, ಪೋಗಟ್ಗೆ ತೂಕ ಇಳಿಸಿಕೊಳ್ಳಲು ಒಂದು ಅವಕಾಶ ನೀಡಬೇಕಿತ್ತು. ಈ ರೀತಿಯ ಅರ್ಹತೆ ಈ ಹಿಂದೆ ಎಂದೂ ನಡೆದಿಲ್ಲ. ಇದು ಅಕ್ಷರಶಃ ಷಡ್ಯಂತ್ರ, ಯಾರಿಗೋ ನಮ್ಮ ಸಂತೋಷವನ್ನು ನೊಡುವುದು ಬೇಕಿಲ್ಲ. ಅವರಿಗೆ ಅದು ಜೀರ್ಣ ಆಗುತ್ತಿಲ್ಲ. ಹೀಗಾಗಿಯೇ ಕುಸ್ತಿಪಟುವನ್ನು ಅನರ್ಹಗೊಳಿಸುವ ಹೆಜ್ಜೆಯನ್ನಿಟ್ಟಿದ್ದಾರೆ ಎಂದು ವಿಜಯೇಂದ್ರ ಸಿಂಗ್ ಹೇಳಿದ್ದಾರೆ.
ಇದನ್ನೂ ಓದಿ:ವಿನೇಶ್ ಫೋಗಟ್ ಮುಂದಿರೋ ಆಯ್ಕೆಗಳೇನು? ಪಿಟಿ ಉಷಾ ಜೊತೆ ಪ್ರಧಾನಿ ಮೋದಿ ಚರ್ಚೆ; ಹೇಳಿದ್ದೇನು?
ಒಲಿಂಪಿಕ್ಸ್ನಂತಹ ಕ್ರೀಡಾಕೂಟದೊಳಗೆ ಭಾಗವಹಿಸುವ ನಮ್ಮಂಥ ಕ್ರೀಡಾಪಟುಗಳಿಗೆ ಯಾವುದೇ ಕೈಬ್ರೋಹೈಡ್ರೆಟ್ಸ್ ಅಥವಾ ಪ್ರೊಟೀನ್ನ ಅಗತ್ಯವಿಲ್ಲ. ನಾವು ಮೊದಲು ರಿಕವರಿ ಆಗಬೇಕು. ತೂಕ ನಿಯಂತ್ರಣ ಅನ್ನೋದು ಕ್ರೀಡಾಪಟುಗಳ ಬದುಕಿನಲ್ಲಿ ಮೊದಲ ಆದ್ಯತೆಯಾಗಿರುತ್ತೆ ಎಂದು ವಿಜಯೇಂದ್ರ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ವಿನೇಶ್ ಪೋಗಟ್ ಅನರ್ಹತೆಯ ವಿರುದ್ಧ ವಿಜಯೇಂದ್ರ ಸಿಂಗ್ ಕೆಂಡ!
‘ಈ ರೀತಿಯ ಒಂದು ನಡೆ ಒಲಿಂಪಿಕ್ಸ್ ಇತಿಹಾಸದಲ್ಲಿ ನಾವು ನೋಡಿಲ್ಲ‘
‘ಇದು ಭಾರತ ಹಾಗೂ ಭಾರತದ ಕುಸ್ತಿಪಟುವಿನ ವಿರುದ್ಧ ಮಹಾ ಷಡ್ಯಂತ್ರ‘
ಪ್ಯಾರಿಸ್: ಇಡೀ ದೇಶಕ್ಕೆ ದೇಶವೇ ಒಂದು ಕಾತರತೆಯನ್ನು, ಕುತೂಹಲವನ್ನು ಹೆಮ್ಮೆಯೊಂದನ್ನ ಎದೆಯಲ್ಲಿಟ್ಟುಕೊಂಡು ಕುಳಿತಿತ್ತು. ಈಗಾಗಲೇ ಮೂರು ಕಂಚಿನ ಪದಕಗಳು ಬಂದಿವೆ. ಚಿನ್ನ, ಬೆಳ್ಳಿ ಬಾಕಿಯಿದೆ. ಫೈನಲ್ಗೆ ಲಗ್ಗೆಯಿಟ್ಟಿರುವ ಕುಸ್ತಿಪಟು ವಿನೇಶ್ ಪೋಗಟ್ ಹಾಗೂ ಜಾವಲಿನ್ ಎಸೆತಗಾರ ನೀರಜ್ ಚೋಪ್ರಾ ಅದನ್ನು ಪೂರ್ಣಗೊಳಿಸಲಿದ್ದಾರೆ ಅನ್ನೋ ತೀವ್ರ ನಿರೀಕ್ಷೆಗಳ ತುದಿಗಾಲಲ್ಲಿ ಇಡೀ ದೇಶವೇ ನಿಂತಿತ್ತು. ಆದ್ರೆ ಇಂದು ಆಗಿದ್ದೇ ಬೇರೆ.
29 ವರ್ಷದ ವಿನೇಶ್ ಎಂಬ ಮಹಾ ಕುಸ್ತಿ ಪ್ರವೀಣೆ, ಎದುರಾದ ಎಲ್ಲಾ ಸವಾಲುಗಳನ್ನು ಅಡ್ಡಡ್ಡ ಮಲಗಿಸಿ ಫೈನಲ್ಗೆ ಎಂಟ್ರಿ ಪಡೆದಿದ್ದಳು. ಆದ್ರೆ 100 ರಿಂದ 150 ಗ್ರಾಮ್ ತೂಕ ಹೆಚ್ಚಾಯ್ತು ಅನ್ನೋ ಕಾರಣದಿಂದಾಗಿ ಬರಿಗೈಯಲ್ಲಿ ಪ್ಯಾರಿಸ್ನಿಂದ ವಾಪಸ್ ಬರುವಂತಾಗಿದೆ. ಇದು ಕೋಟ್ಯಾನುಕೋಟಿ ಭಾರತೀಯರ ಆಸೆಗೆ ತಣ್ಣೀರು ಎರಚಿದಂತಾಗಿದೆ. ನೀತಿ ನಿಯಮಗಳ ಅಡಿಯಲ್ಲಿ ಪೋಗಟ್ ಅನರ್ಹತೆ ಎಷ್ಟು ಸರಿ ಎಂದು ಈಗ ನ್ಯಾಯ ಅನ್ಯಾಯಗಳ ತಕ್ಕಡಿಯಲ್ಲಿ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿಯನ್ನಿಟ್ಟು ತೂಗುತ್ತಿದ್ದಾರೆ. ಇದು ಭಾರತ ಹಾಗೂ ಭಾರತದ ಕುಸ್ತಿಪಟುವಿನ ವಿರುದ್ಧ ನಡೆದಿರುವ ದೊಡ್ಡ ಷಡ್ಯಂತ್ರ ಅನ್ನುತ್ತಿದ್ದಾರೆ 2008ರ ಬೀಜಿಂಗ್ ಒಲಿಂಪಿಕ್ಸ್ನಲ್ಲಿ ಬಾಕ್ಸಿಂಗ್ ವಿಭಾಗದಲ್ಲಿ ಕಂಚು ಪದಕ ಗೆದ್ದಿದ್ದ ವಿಜೇಂದ್ರ ಸಿಂಗ್.
ಇದನ್ನೂ ಓದಿ: ‘ಹೇಳಲು ಈಗ ಏನೂ ಉಳಿದಿಲ್ಲ, ನನ್ನ ಕನಸು ಏನಾಗಿತ್ತು ಅಂದರೆ..’ ಮಹಾವೀರ್ ಫೋಗಟ್ ಕಣ್ಣೀರು
ವಿಜಯೇಂದ್ರ ಸಿಂಗ್ ಹೇಳಿದ್ದೇನು?
ಇದು ಭಾರತ ಹಾಗೂ ವಿನೇಶ್ ಪೋಗಟ್ ವಿರುದ್ಧ ನಡೆದಿರುವ ದೊಡ್ಡ ಷಡ್ಯಂತ್ರ. ಇಡೀ ರಾತ್ರಿಯೊಳಗೆ ಐದರಿಂದ ಆರು ಕೆಜಿ ತೂಕವನ್ನು ಒಬ್ಬ ಕ್ರೀಡಾಳು ಇಳಿಸುತ್ತಾನೆ. ಕೇವಲ 100 ರಿಂದ 150 ಗ್ರಾಂ ತೂಕ ದೊಡ್ಡ ವಿಷಯವಾ, ಪೋಗಟ್ಗೆ ತೂಕ ಇಳಿಸಿಕೊಳ್ಳಲು ಒಂದು ಅವಕಾಶ ನೀಡಬೇಕಿತ್ತು. ಈ ರೀತಿಯ ಅರ್ಹತೆ ಈ ಹಿಂದೆ ಎಂದೂ ನಡೆದಿಲ್ಲ. ಇದು ಅಕ್ಷರಶಃ ಷಡ್ಯಂತ್ರ, ಯಾರಿಗೋ ನಮ್ಮ ಸಂತೋಷವನ್ನು ನೊಡುವುದು ಬೇಕಿಲ್ಲ. ಅವರಿಗೆ ಅದು ಜೀರ್ಣ ಆಗುತ್ತಿಲ್ಲ. ಹೀಗಾಗಿಯೇ ಕುಸ್ತಿಪಟುವನ್ನು ಅನರ್ಹಗೊಳಿಸುವ ಹೆಜ್ಜೆಯನ್ನಿಟ್ಟಿದ್ದಾರೆ ಎಂದು ವಿಜಯೇಂದ್ರ ಸಿಂಗ್ ಹೇಳಿದ್ದಾರೆ.
ಇದನ್ನೂ ಓದಿ:ವಿನೇಶ್ ಫೋಗಟ್ ಮುಂದಿರೋ ಆಯ್ಕೆಗಳೇನು? ಪಿಟಿ ಉಷಾ ಜೊತೆ ಪ್ರಧಾನಿ ಮೋದಿ ಚರ್ಚೆ; ಹೇಳಿದ್ದೇನು?
ಒಲಿಂಪಿಕ್ಸ್ನಂತಹ ಕ್ರೀಡಾಕೂಟದೊಳಗೆ ಭಾಗವಹಿಸುವ ನಮ್ಮಂಥ ಕ್ರೀಡಾಪಟುಗಳಿಗೆ ಯಾವುದೇ ಕೈಬ್ರೋಹೈಡ್ರೆಟ್ಸ್ ಅಥವಾ ಪ್ರೊಟೀನ್ನ ಅಗತ್ಯವಿಲ್ಲ. ನಾವು ಮೊದಲು ರಿಕವರಿ ಆಗಬೇಕು. ತೂಕ ನಿಯಂತ್ರಣ ಅನ್ನೋದು ಕ್ರೀಡಾಪಟುಗಳ ಬದುಕಿನಲ್ಲಿ ಮೊದಲ ಆದ್ಯತೆಯಾಗಿರುತ್ತೆ ಎಂದು ವಿಜಯೇಂದ್ರ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ