ಇಂದೋರ್ನಲ್ಲಿ ಮೈದಾನಕ್ಕೆ ನುಗ್ಗಿ ಹೈಡ್ರಾಮಾ
ಅಫ್ಘಾನ್ ವಿರುದ್ಧ ಪಂದ್ಯದ ವೇಳೆ ಘಟನೆ
ಕೊಹ್ಲಿಯ ಪಾದ ಮುಟ್ಟಿ ನಮಸ್ಕರಿಸಿದ್ದ ಅಭಿಮಾನಿ
ವಿರಾಟ್ ಕೊಹ್ಲಿಯನ್ನು ನೋಡಬೇಕು, ಮಾತನಾಡಿಸಬೇಕು ಅನ್ನೋದು ಪ್ರತಿಯೊಬ್ಬ ಅಭಿಮಾನಿಯ ಕನಸು. ಹಾಗಂತ ಮೈದಾನಕ್ಕೆ ನುಗ್ಗೋದು ತಪ್ಪು. ಆದ್ರೆ ಈ ಊರಲ್ಲಿ ಆ ತಪ್ಪನ್ನು ಮಾಡಿದವನಿಗೆ ಸನ್ಮಾನ ಮಾಡಿದ್ದಾರೆ.
ಮೊನ್ನೆ ಇಂದೋರ್ನಲ್ಲಿ ನಡೆದ ಟಿ20 ಪಂದ್ಯದಲ್ಲಿ ಅಭಿಮಾನಿಯೊಬ್ಬ ಮೈದಾನಕ್ಕೆ ನುಗ್ಗಿ ಕೊಹ್ಲಿಯ ಹಗ್ ಮಾಡಿ, ಕಾಲಿಗೆ ಬಿದ್ದು ಆಶಿರ್ವಾದ ಪಡೆದ. ಆ ಬಳಿಕ ಸೆಕ್ಯೂರಿಟಿ ಹಾಗೂ ಪೊಲೀಸರು ಆತನನ್ನ ಮೈದಾನದಿಂದ ಹೊರಗೆ ಎಳೆದುಕೊಂಡು ಬಂದರು. ಈ ವೇಳೆ ಕೊಹ್ಲಿ ಹೊಡೆಯಬೇಡಿ ಎಂದು ಹೇಳಿದರು. ಪೊಲೀಸ್ ಸ್ಟೇಷನ್ಗೆ ಕರೆದುಕೊಂಡು ಹೋಗಿ ಪೊಲೀಸರು ತಮ್ಮ ಕೆಲಸವನ್ನು ಮಾಡಿದ್ದರು.
ಇದೆಲ್ಲಾ ಮುಗಿದ ಮೇಲೆ ರಿಲೀಸ್ ಆದ ಕೊಹ್ಲಿಯ ಫ್ಯಾನ್, ತವರಿಗೆ ಮರಳಿದಾಗ ಸರ್ಪ್ರೈಸ್ ಕಾದಿತ್ತು. ಇಡೀ ಊರ ಜನ, ಕುಟುಂಬಸ್ಥರು ಅದ್ದೂರಿ ಸ್ವಾಗತ ಕೋರಿದ್ದಾರೆ. ಯಾಕಂದ್ರೆ ಆ ಊರಿನಲ್ಲಿರೋ ಬಹುತೇಕರು ಕೊಹ್ಲಿಯ ಅಭಿಮಾನಿಗಳು. ನಮ್ಮೂರ ಹುಡುಗ ನಾವು ಆರಾಧಿಸೋ ಕೊಹ್ಲಿಯ ಪಾದ ಮುಟ್ಟಿ ಆಶಿರ್ವಾದ ಪಡೆದಿದ್ದು ಅವರಿಗೆ ಹೆಮ್ಮೆಯ ವಿಚಾರವಂತೆ. ಹೀಗಾಗಿಯೇ ಕೊಹ್ಲಿ ದರ್ಶನ ಪಡೆದ ಅಭಿಮಾನಿಗೆ ಅದ್ದೂರ ಸ್ವಾಗತ ಮಾಡಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
ಇಂದೋರ್ನಲ್ಲಿ ಮೈದಾನಕ್ಕೆ ನುಗ್ಗಿ ಹೈಡ್ರಾಮಾ
ಅಫ್ಘಾನ್ ವಿರುದ್ಧ ಪಂದ್ಯದ ವೇಳೆ ಘಟನೆ
ಕೊಹ್ಲಿಯ ಪಾದ ಮುಟ್ಟಿ ನಮಸ್ಕರಿಸಿದ್ದ ಅಭಿಮಾನಿ
ವಿರಾಟ್ ಕೊಹ್ಲಿಯನ್ನು ನೋಡಬೇಕು, ಮಾತನಾಡಿಸಬೇಕು ಅನ್ನೋದು ಪ್ರತಿಯೊಬ್ಬ ಅಭಿಮಾನಿಯ ಕನಸು. ಹಾಗಂತ ಮೈದಾನಕ್ಕೆ ನುಗ್ಗೋದು ತಪ್ಪು. ಆದ್ರೆ ಈ ಊರಲ್ಲಿ ಆ ತಪ್ಪನ್ನು ಮಾಡಿದವನಿಗೆ ಸನ್ಮಾನ ಮಾಡಿದ್ದಾರೆ.
ಮೊನ್ನೆ ಇಂದೋರ್ನಲ್ಲಿ ನಡೆದ ಟಿ20 ಪಂದ್ಯದಲ್ಲಿ ಅಭಿಮಾನಿಯೊಬ್ಬ ಮೈದಾನಕ್ಕೆ ನುಗ್ಗಿ ಕೊಹ್ಲಿಯ ಹಗ್ ಮಾಡಿ, ಕಾಲಿಗೆ ಬಿದ್ದು ಆಶಿರ್ವಾದ ಪಡೆದ. ಆ ಬಳಿಕ ಸೆಕ್ಯೂರಿಟಿ ಹಾಗೂ ಪೊಲೀಸರು ಆತನನ್ನ ಮೈದಾನದಿಂದ ಹೊರಗೆ ಎಳೆದುಕೊಂಡು ಬಂದರು. ಈ ವೇಳೆ ಕೊಹ್ಲಿ ಹೊಡೆಯಬೇಡಿ ಎಂದು ಹೇಳಿದರು. ಪೊಲೀಸ್ ಸ್ಟೇಷನ್ಗೆ ಕರೆದುಕೊಂಡು ಹೋಗಿ ಪೊಲೀಸರು ತಮ್ಮ ಕೆಲಸವನ್ನು ಮಾಡಿದ್ದರು.
ಇದೆಲ್ಲಾ ಮುಗಿದ ಮೇಲೆ ರಿಲೀಸ್ ಆದ ಕೊಹ್ಲಿಯ ಫ್ಯಾನ್, ತವರಿಗೆ ಮರಳಿದಾಗ ಸರ್ಪ್ರೈಸ್ ಕಾದಿತ್ತು. ಇಡೀ ಊರ ಜನ, ಕುಟುಂಬಸ್ಥರು ಅದ್ದೂರಿ ಸ್ವಾಗತ ಕೋರಿದ್ದಾರೆ. ಯಾಕಂದ್ರೆ ಆ ಊರಿನಲ್ಲಿರೋ ಬಹುತೇಕರು ಕೊಹ್ಲಿಯ ಅಭಿಮಾನಿಗಳು. ನಮ್ಮೂರ ಹುಡುಗ ನಾವು ಆರಾಧಿಸೋ ಕೊಹ್ಲಿಯ ಪಾದ ಮುಟ್ಟಿ ಆಶಿರ್ವಾದ ಪಡೆದಿದ್ದು ಅವರಿಗೆ ಹೆಮ್ಮೆಯ ವಿಚಾರವಂತೆ. ಹೀಗಾಗಿಯೇ ಕೊಹ್ಲಿ ದರ್ಶನ ಪಡೆದ ಅಭಿಮಾನಿಗೆ ಅದ್ದೂರ ಸ್ವಾಗತ ಮಾಡಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್