ಬಿಗ್ಬಾಸ್ ಮನೆಯಿಂದ ಅಚ್ಚರಿಯಾಗಿ ಹೊರ ಬಂದ ಸ್ಪರ್ಧಿ
ಬಿಗ್ ಮನೆಯಲ್ಲಿ ಉಳಿದುಕೊಂಡ 3 ಸ್ಪರ್ಧಿಗಳು ಮಾತ್ರ
ಸಂಗೀತಾ, ಕಾರ್ತಿಕ್, ಡ್ರೋನ್ ಪ್ರತಾಪ್ ಗೆಲ್ಲೋದ್ಯಾರು?
ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 10 ಗ್ರ್ಯಾಂಡ್ ಫಿನಾಲೆ ನಡೆಯುತ್ತಿದೆ. ಸದ್ಯ ಬಿಗ್ ಮನೆಯಲ್ಲಿ ಕೇವಲ 3 ಸ್ಪರ್ಧಿಗಳು ಉಳಿದುಕೊಂಡಿದ್ದಾರೆ. ಕಳೆದ ಸಂಚಿಕೆಯಲ್ಲಿ ಬಿಗ್ಬಾಸ್ ಮನೆಯಿಂದ ತುಕಾಲಿ ಸಂತೋಷ್ ಆಚೆ ಬಂದಿದ್ದರು. ಬಳಿಕ ಹಳ್ಳಿಕಾರ್ ಒಡೆಯ ವರ್ತೂರು ಸಂತೋಷ್ ಅವರು ಆಚೆ ಬಂದಿದ್ದರು. ಇದೀಗ ಅಚ್ಚರಿ ರೀತಿಯಲ್ಲಿ ವಿನಯ್ ಗೌಡ ಬಿಗ್ಬಾಸ್ 3ನೇ ರನ್ನರ್ ಅಪ್ ಆಗಿದ್ದಾರೆ.
ಸದ್ಯ ಬಿಗ್ಬಾಸ್ ಮನೆಯಲ್ಲಿ ಟಾಪ್ 3 ಕಂಟೆಸ್ಟೆಂಟ್ಸ್ ಉಳಿದುಕೊಂಡಿದ್ದಾರೆ. ಅವರೇ ಡ್ರೋನ್ ಪ್ರತಾಪ್, ಕಾರ್ತಿಕ್ ಮಹೇಶ್, ಸಂಗೀತಾ ಶೃಂಗೇರಿ. ವಿನಯ್ ಗೌಡ ಅವರು ಬಿಗ್ಬಾಸ್ ಮನೆಗೆ ಗ್ರ್ಯಾಂಡ್ ಆಗಿ ಎಂಟ್ರಿ ಕೊಟ್ಟಿದ್ದರು. ಎಂಟ್ರಿ ಕೊಟ್ಟ ಮೊದಲ ವಾರ ಸಂಗೀತಾ ಶೃಂಗೇರಿ ಅವರ ಜೊತೆ ಗಲಾಟೆ ಮಾಡಿಕೊಂಡಿದ್ದರು. ಅಲ್ಲಿಂದ ಬಿಗ್ಬಾಸ್ ಮನೆಯ ಆನೆ ಎಂದು ಹೆಸರನ್ನು ಪಡೆದುಕೊಂಡರು. ಬಳಿಕ ದಿನ ಕಳೆದಂತೆ ಬಿಗ್ಬಾಸ್ ಮನೆಯ ಕೆಲವೊಂದು ಸ್ಪರ್ಧಿಗಳ ಜೊತೆ ವಾಗ್ವಾದಕ್ಕೆ ಇಳಿದಿದ್ದರು. ಅದರಲ್ಲೂ ಸಂಗೀತಾ, ತುಕಾಲಿ ಸಂತೋಷ್, ಕಾರ್ತಿಕ್ ಮಹೇಶ್, ಡ್ರೋನ್ ಪ್ರತಾಪ್, ತನಿಷಾ, ಭಾಗ್ಯಶ್ರೀ ಹೀಗೆ ಹಲವಾರು ಸ್ಪರ್ಧಿಗಳ ಜೊತೆ ಗಲಾಟೆ ಮಾಡಿಕೊಂಡಿದ್ದರು. ಆದಾದ ಬಳಿಕ ಕಿಚ್ಚ ಸುದೀಪ್ ಅವರು ವಿನಯ್ ಗೌಡ ಅವರ ಅಗ್ರೆಶನ್ ಬಗ್ಗೆ ಮಾತಾಡಿದ್ದರು. ಆದಾದ ಬಳಿಕ ತಮ್ಮ ಆಟವನ್ನು ಬೇರೆ ರೀತಿಯಲ್ಲಿ ಆಡಲು ಶುರು ಮಾಡಿದ್ದರು.
ಇದೀಗ ಅಚ್ಚರಿಯ ರೀತಿಯಲ್ಲಿ ಬಿಗ್ಬಾಸ್ ಮನೆಯಿಂದ ಆಚೆ ಬಂದಿದ್ದಾರೆ. ಇನ್ನೂ ಈ ವಿಚಾರ ತಿಳಿಯುತ್ತಿದ್ದಂತೆ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಬೇಸರವನ್ನು ಹೊರ ಹಾಕುತ್ತಿದ್ದಾರೆ. ಸದ್ಯ ಬಿಗ್ಬಾಸ್ ಮನೆಯಲ್ಲಿ ಕೇವಲ 3 ಸ್ಪರ್ಧಿಗಳು ಉಳಿದುಕೊಂಡಿದ್ದಾರೆ. ಈ ಮೂರು ಸ್ಪರ್ಧಿಗಳ ಮಧ್ಯೆ ಬಿಗ್ ಫೈಟ್ ಶುರು ಆಗಿದೆ.
ಬಿಗ್ಬಾಸ್ ಮನೆಯಿಂದ ಅಚ್ಚರಿಯಾಗಿ ಹೊರ ಬಂದ ಸ್ಪರ್ಧಿ
ಬಿಗ್ ಮನೆಯಲ್ಲಿ ಉಳಿದುಕೊಂಡ 3 ಸ್ಪರ್ಧಿಗಳು ಮಾತ್ರ
ಸಂಗೀತಾ, ಕಾರ್ತಿಕ್, ಡ್ರೋನ್ ಪ್ರತಾಪ್ ಗೆಲ್ಲೋದ್ಯಾರು?
ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 10 ಗ್ರ್ಯಾಂಡ್ ಫಿನಾಲೆ ನಡೆಯುತ್ತಿದೆ. ಸದ್ಯ ಬಿಗ್ ಮನೆಯಲ್ಲಿ ಕೇವಲ 3 ಸ್ಪರ್ಧಿಗಳು ಉಳಿದುಕೊಂಡಿದ್ದಾರೆ. ಕಳೆದ ಸಂಚಿಕೆಯಲ್ಲಿ ಬಿಗ್ಬಾಸ್ ಮನೆಯಿಂದ ತುಕಾಲಿ ಸಂತೋಷ್ ಆಚೆ ಬಂದಿದ್ದರು. ಬಳಿಕ ಹಳ್ಳಿಕಾರ್ ಒಡೆಯ ವರ್ತೂರು ಸಂತೋಷ್ ಅವರು ಆಚೆ ಬಂದಿದ್ದರು. ಇದೀಗ ಅಚ್ಚರಿ ರೀತಿಯಲ್ಲಿ ವಿನಯ್ ಗೌಡ ಬಿಗ್ಬಾಸ್ 3ನೇ ರನ್ನರ್ ಅಪ್ ಆಗಿದ್ದಾರೆ.
ಸದ್ಯ ಬಿಗ್ಬಾಸ್ ಮನೆಯಲ್ಲಿ ಟಾಪ್ 3 ಕಂಟೆಸ್ಟೆಂಟ್ಸ್ ಉಳಿದುಕೊಂಡಿದ್ದಾರೆ. ಅವರೇ ಡ್ರೋನ್ ಪ್ರತಾಪ್, ಕಾರ್ತಿಕ್ ಮಹೇಶ್, ಸಂಗೀತಾ ಶೃಂಗೇರಿ. ವಿನಯ್ ಗೌಡ ಅವರು ಬಿಗ್ಬಾಸ್ ಮನೆಗೆ ಗ್ರ್ಯಾಂಡ್ ಆಗಿ ಎಂಟ್ರಿ ಕೊಟ್ಟಿದ್ದರು. ಎಂಟ್ರಿ ಕೊಟ್ಟ ಮೊದಲ ವಾರ ಸಂಗೀತಾ ಶೃಂಗೇರಿ ಅವರ ಜೊತೆ ಗಲಾಟೆ ಮಾಡಿಕೊಂಡಿದ್ದರು. ಅಲ್ಲಿಂದ ಬಿಗ್ಬಾಸ್ ಮನೆಯ ಆನೆ ಎಂದು ಹೆಸರನ್ನು ಪಡೆದುಕೊಂಡರು. ಬಳಿಕ ದಿನ ಕಳೆದಂತೆ ಬಿಗ್ಬಾಸ್ ಮನೆಯ ಕೆಲವೊಂದು ಸ್ಪರ್ಧಿಗಳ ಜೊತೆ ವಾಗ್ವಾದಕ್ಕೆ ಇಳಿದಿದ್ದರು. ಅದರಲ್ಲೂ ಸಂಗೀತಾ, ತುಕಾಲಿ ಸಂತೋಷ್, ಕಾರ್ತಿಕ್ ಮಹೇಶ್, ಡ್ರೋನ್ ಪ್ರತಾಪ್, ತನಿಷಾ, ಭಾಗ್ಯಶ್ರೀ ಹೀಗೆ ಹಲವಾರು ಸ್ಪರ್ಧಿಗಳ ಜೊತೆ ಗಲಾಟೆ ಮಾಡಿಕೊಂಡಿದ್ದರು. ಆದಾದ ಬಳಿಕ ಕಿಚ್ಚ ಸುದೀಪ್ ಅವರು ವಿನಯ್ ಗೌಡ ಅವರ ಅಗ್ರೆಶನ್ ಬಗ್ಗೆ ಮಾತಾಡಿದ್ದರು. ಆದಾದ ಬಳಿಕ ತಮ್ಮ ಆಟವನ್ನು ಬೇರೆ ರೀತಿಯಲ್ಲಿ ಆಡಲು ಶುರು ಮಾಡಿದ್ದರು.
ಇದೀಗ ಅಚ್ಚರಿಯ ರೀತಿಯಲ್ಲಿ ಬಿಗ್ಬಾಸ್ ಮನೆಯಿಂದ ಆಚೆ ಬಂದಿದ್ದಾರೆ. ಇನ್ನೂ ಈ ವಿಚಾರ ತಿಳಿಯುತ್ತಿದ್ದಂತೆ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಬೇಸರವನ್ನು ಹೊರ ಹಾಕುತ್ತಿದ್ದಾರೆ. ಸದ್ಯ ಬಿಗ್ಬಾಸ್ ಮನೆಯಲ್ಲಿ ಕೇವಲ 3 ಸ್ಪರ್ಧಿಗಳು ಉಳಿದುಕೊಂಡಿದ್ದಾರೆ. ಈ ಮೂರು ಸ್ಪರ್ಧಿಗಳ ಮಧ್ಯೆ ಬಿಗ್ ಫೈಟ್ ಶುರು ಆಗಿದೆ.