ಗುಜರಾತ್ ಟೈಟನ್ಸ್​ ಸೇರಿದ ಮೇಲೂ ಚಡಪಡಿಕೆ.. RCB, ಕೊಹ್ಲಿ ಸಹಾಯ ಸ್ಮರಿಸಿ ಸಿರಾಜ್ ಭಾವುಕ

author-image
Ganesh
Updated On
ಗುಜರಾತ್​ನ ಈ ಸ್ಟಾರ್​ಗೆ RCB ಮೇಲೆ ಸಿಟ್ಟು.. ಸೇಡು ತೀರಿಸಿಕೊಳ್ಳಲು ಬಿಗ್ ಪ್ಲಾನ್​..!
Advertisment
  • ನಾಳೆಯಿಂದ ಕ್ರಿಕೆಟ್ ಲೋಕದಲ್ಲಿ ಐಪಿಎಲ್ ಹಬ್ಬ ಶುರು
  • ಗುಜರಾತ್ ಟೈಟನ್ಸ್​ ತಂಡ ಸೇರಿಕೊಂಡಿರುವ ಸಿರಾಜ್
  • ವಿರಾಟ್ ಕೊಹ್ಲಿ ಬಗ್ಗೆ ಮೊಹ್ಮದ್ ಸಿರಾಜ್ ಏನಂದ್ರು..?

ನಾಳೆಯಿಂದ ಐಪಿಎಲ್ (IPL) ಹಬ್ಬ ಶುರುವಾಗುತ್ತಿದೆ. ಹೊಸದಾಗಿ ಗುಜರಾತ್​ ಟೈಟನ್ಸ್ (Gujarat Titans) ತಂಡವನ್ನು ಸೇರಿರುವ ಆರ್​​ಸಿಬಿ ಮಾಜಿ ಆಟಗಾರ ಮೊಮ್ಮದ್ ಸಿರಾಜ್ (Mohammed Siraj) ಭಾವುಕರಾಗಿದ್ದಾರೆ. ಆರ್​ಸಿಬಿಯಲ್ಲಿದ್ದಾಗ ವಿರಾಟ್ ಕೊಹ್ಲಿಯ (Virat Kohli) ಬೆಂಬಲವನ್ನು ಸ್ಮರಿಸಿ ಭಾವುಕರಾಗಿದ್ದಾರೆ.

ಸಿರಾಜ್ ಆರ್​ಸಿಬಿ ಪರ ಒಟ್ಟು ಸೀಸನ್​ ಆಡಿದ್ದಾರೆ. ಆರ್​ಸಿಬಿಯ ನೆಚ್ಚಿನ ಆಟಗಾರರಲ್ಲಿ ಒಬ್ಬರಾಗಿದ್ದ ಸಿರಾಜ್ ಅವರನ್ನು ಈ ವರ್ಷ ತಂಡದಿಂದ ಬಿಡುಗಡೆ ಮಾಡಿದೆ. ಆರ್​ಟಿಎಂ (RTM) ನಿಯಮದಡಿಯಲ್ಲಿ ಉಳಿಸಿಕೊಳ್ಳಲು ಅವಕಾಶವಿದ್ದರೂ ಆರ್​ಸಿಬಿ, ಅವರನ್ನು ಕೈಬಿಟ್ಟಿತ್ತು. ಇದೀಗ ಗುಜರಾತ್ ತಂಡವನ್ನು ಸೇರಿದ ನಂತರ ಕೊಹ್ಲಿಯ ಬೆಂಬಲವನ್ನು ಸ್ಮರಿಸಿದ್ದಾರೆ.

ಇದನ್ನೂ ಓದಿ: ಯಜುವೇಂದ್ರ ಚಹಲ್, ಧನಶ್ರೀ ಡಿವೋರ್ಸ್‌ ಅಧಿಕೃತ; ಜೀವನಾಂಶ ₹60 ಕೋಟಿ ಅಲ್ಲ.. ಮತ್ತೆಷ್ಟು?

publive-image

ಕೊಹ್ಲಿ ನಾಯಕತ್ವದಲ್ಲಿ ಸಿರಾಜ್​​ ಜನಪ್ರಿಯತೆಗೊಂಡರು. ಕೊಹ್ಲಿ ನೀಡಿದ ಅವಕಾಶ ಹಾಗೂ ಬೆಂಬಲದಿಂದಾಗಿ ಸಿರಾಜ್, ಟೀಂ ಇಂಡಿಯಾದ ಪ್ರಮುಖ ಬೌಲರ್​​ ಎನಿಸಿಕೊಂಡರು. ನಿನ್ನೆಯ ದಿನ ಮಾತನಾಡಿರುವ ಸಿರಾಜ್, ಗುಜರಾತ್ ತಂಡವನ್ನು ಸೇರಿಕೊಳ್ಳುತ್ತಿರೋದು ನಿಜಕ್ಕೂ ಖುಷಿ ಆಗುತ್ತಿದೆ. ಸಹೋದರ ವಿರಾಟ್ ಕೊಹ್ಲಿ ನನಗೆ ಕಠಿಣ ಸಂದರ್ಭದಲ್ಲೂ ಸಾಕಷ್ಟು ಬೆಂಬಲ ನೀಡಿದ್ದರು. ಅದರಿಂದ ಆರ್​ಸಿಬಿಯನ್ನು ತೊರೆಯುವಾಗ ಬೇಸರವಾಯ್ತು. ಆದರೆ ಗಿಲ್ ನೇತೃತ್ವದಲ್ಲಿ ನಾವು ಅದ್ಭುತ ತಂಡ ಹೊಂದಿದ್ದೇವೆ ಎಂದಿದ್ದಾರೆ.

ಈ ಬಾರಿಯ ಮೆಗಾ ಹರಾಜಿನಲ್ಲಿ ಗುಜರಾತ್ ಟೈಟನ್ಸ್ ತಂಡವು, ಸಿರಾಜ್​ ಅವರನ್ನು 12.25 ಕೋಟಿಗೆ ಖರೀದಿ ಮಾಡಿದೆ. ಸಿರಾಜ್ ಅವರು 2017ರಲ್ಲಿ ಸನ್ ರೈಸರ್ಸ್​ ಹೈದ್ರಾಬಾದ್​ನಲ್ಲಿ ಆಡುವ ಮೂಲಕ ಐಪಿಎಲ್​​ಗೆ ಪದಾರ್ಪಣೆ ಮಾಡಿದರು. 2018ರಲ್ಲಿ ಆರ್​ಸಿಬಿ 2.20 ಕೋಟಿ ರೂಪಾಯಿ ಸಿರಾಜ್​​ ಅವರನ್ನು ಖರೀದಿ ಮಾಡಿತ್ತು.

ಇದನ್ನೂ ಓದಿ: ಇಂದಿನಿಂದ SSLC ಪರೀಕ್ಷೆ.. ಎಕ್ಸಾಂ ಬರೆಯಲು 8,96,447 ವಿದ್ಯಾರ್ಥಿಗಳು ನೋಂದಣಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment