ಆರ್​ಸಿಬಿ ಪಂದ್ಯಕ್ಕೂ ಮೊದಲು ಹನುಮನ ಮೊರೆ ಹೋದ ಕೊಹ್ಲಿ.. ವಿರುಷ್ಕಾ ದಂಪತಿ ಹೋಗಿದ್ದೆಲ್ಲಿಗೆ..?

author-image
Ganesh
Updated On
ಆರ್​ಸಿಬಿ ಪಂದ್ಯಕ್ಕೂ ಮೊದಲು ಹನುಮನ ಮೊರೆ ಹೋದ ಕೊಹ್ಲಿ.. ವಿರುಷ್ಕಾ ದಂಪತಿ ಹೋಗಿದ್ದೆಲ್ಲಿಗೆ..?
Advertisment
  • ಹನುಮನಿಗೆ ವಿಶೇಷ ಪೂಜೆ ಸಲ್ಲಿಸಿದ ‘ವಿರುಷ್ಕಾ’.!
  • ಅರ್ಚಕರೊಂದಿಗೆ ಆಧ್ಯಾತ್ಮದ ಬಗ್ಗೆ ಕೊಹ್ಲಿ ಚರ್ಚೆ
  • ಕಿಂಗ್​ ವಿರಾಟ್​ ಕೊಹ್ಲಿಗೆ ಹನುಮನ ಬಲ

ಐಪಿಎಲ್​ ನಡುವೆ ಟೆಸ್ಟ್​ ಕ್ರಿಕೆಟ್​ಗೆ ಗುಡ್​ ಬೈ ಹೇಳಿ ಶಾಕ್​ ಕೊಟ್ಟ ವಿರಾಟ್​ ಕೊಹ್ಲಿಯ ಟೆಂಪಲ್​ ರನ್​ ನಡೆಸ್ತಿದ್ದಾರೆ. ಕೆಲ ದಿನಗಳ ಹಿಂದಷ್ಟೇ ವೃಂದಾವನಕ್ಕೆ ತೆರಳಿ ಪರಮಗುರು ಪ್ರೇಮಾನಂದ ಜೀ ಆಶೀರ್ವಾದ ಪಡೆದ ವಿರಾಟ್​ ಇದೀಗ ಅಯೋಧ್ಯೆಗೆ ಭೇಟಿ ನೀಡಿದ್ದಾರೆ. ಪತ್ನಿ ಅನುಷ್ಕಾ ಜೊತೆಗೂಡಿ ಹನುಮನ ದರ್ಶನ ಪಡೆದು ಪುನೀತರಾಗಿದ್ದಾರೆ.

ಅಯೋಧ್ಯೆಗೆ ಭೇಟಿ ನೀಡಿದ ಕೊಹ್ಲಿ

ಐಪಿಎಲ್​ ಪಂದ್ಯದ ಕಾರಣಕ್ಕೆ ಕೊಹ್ಲಿ ಲಕ್ನೋದಲ್ಲಿ ಬೀಡು ಬಿಟ್ಟಿದ್ದಾರೆ. ಸನ್​ರೈಸರ್ಸ್​ ಹೈದ್ರಾಬಾದ್​ ವಿರುದ್ಧದ ಪಂದ್ಯದ ಬಳಿಕ ವಿಶ್ರಾಂತಿಯಲ್ಲಿರೋ ವಿರಾಟ್​ ಕೊಹ್ಲಿ, ಟೆಂಪಲ್​ ರನ್​ ನಡೆಸಿದ್ದಾರೆ. ಪತ್ನಿ ಅನುಷ್ಕಾ ಶರ್ಮಾ ಜೊತೆಗೂಡಿ ಅಯೋಧ್ಯೆಯ ಹನುಮಾನ್​ ಗರ್ಹಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ.

ನಿನ್ನೆ ಬೆಳಗ್ಗೆ ಹನುಮಾನ್​ ಗರ್ಜಿ ದೇವಸ್ಥಾನಕ್ಕೆ ತೆರೆಳಿದ ಕೊಹ್ಲಿ ದಂಪತಿ ಆಂಜನೇಯನಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಬಳಿಕ ಅರ್ಚಕರು ಪ್ರಸಾದದ ರೂಪದಲ್ಲಿ ಅನುಷ್ಕಾ ಹಾಗೂ ಕೊಹ್ಲಿಗೆ ಹಾರ ಹಾಕಿ, ಹಣೆಗೆ ತಿಲಕವಿಟ್ಟಿದ್ದಾರೆ.

ಇದನ್ನೂ ಓದಿ: ಶಮಿ, ಸರ್ಫರಾಜ್ ಖಾನ್​ಗೂ ಆಘಾತ.. ಐದು ಬಿಗ್​ಸ್ಟಾರ್​ಗೆ ಬಿಸಿಸಿಐ ಶಾಕ್..!

publive-image

ಅರ್ಚಕರೊಂದಿಗೆ ಆಧ್ಯಾತ್ಮದ ಬಗ್ಗೆ ಕೊಹ್ಲಿ ಚರ್ಚೆ

ಪೂಜೆ ಸಲ್ಲಿಸಿದ ನಂತರದಲ್ಲಿ ದೇವಸ್ಥಾನದ ಆಡಳಿತ ಮಂಡಳಿ ವಿರಾಟ್​ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾರನ್ನ ಪುರಸ್ಕರಿಸಿದ್ದಾರೆ. ಇದೇ ವೇಳೆ ದೇವಸ್ಥಾನದ ವತಿಯಿಂದ ಹನುಮಾನ್​ ಮೂರ್ತಿಯನ್ನ ನೀಡಿ ಕೊಹ್ಲಿಯನ್ನ ಗೌರವಿಸಿದ್ದಾರೆ. ಆ ಬಳಿಕ ಅರ್ಚಕರೊಂದಿಗೆ ವಿರುಷ್ಕಾ ದಂಪತಿ ಕೆಲ ಕಾಲ ಚರ್ಚೆ ನಡೆಸಿದ್ದಾರೆ. ಆಧ್ಯಾತ್ಮಿಕತೆ, ಸಂಸ್ಕೃತಿ, ದೇವರು ಹಾಗೂ ಪೌರಾಣಿಕ ವಿಚಾರಗಳ ಬಗ್ಗೆ ಮಾಹಿತಿ ಪಡೆದಿದ್ದಾರೆ.

ಆಂಜನೇಯನ ಆರಾಧಕ ಕೊಹ್ಲಿ

ಕಳೆದ ಕೆಲ ವರ್ಷಗಳಲ್ಲಿ ವಿರಾಟ್​ ಕೊಹ್ಲಿ ಜೀವನ ಸಾಕಷ್ಟು ಬದಲಾವಣೆಗೆ ಸಾಕ್ಷಿಯಾಗಿದೆ. ಪೂಜೆ-ಪುನಸ್ಕಾರ ಮಾಡುವವನಂತೆ ಕಾಣ್ತೀನಾ ಎಂದು ಕೇಳಿದ್ದ ಕೊಹ್ಲಿ ಈಗ ಆದ್ಯಾತ್ಮಿಕತೆಯ ಕಡೆಗೆ ಎಷ್ಟರ ಮಟ್ಟಿಗೆ ವಾಲಿದ್ದಾರೆ ಅನ್ನೋದನ್ನ ಬಿಡಿಸಿ ಹೇಳಬೇಕಿಲ್ಲ. ಶಿವನ ಪರಮಭಕ್ತನಾಗಿ ಗುರುತಿಸಿಕೊಂಡಿರೋ ವಿರಾಟ್​, ಆಂಜನೇಯನ ಆರಾಧಕನೂ ಹೌದು.

​​ ಕೊಹ್ಲಿ ಜೊತೆಗೆ ಸದಾ ಕಾಲ ಆಂಜನೇಯ ಇರ್ತಾನೆ. ಪ್ರತಿ ಹೆಜ್ಜೆ ಹೆಜ್ಜೆಯಲ್ಲೂ ಕೊಹ್ಲಿಯ ಜೊತೆ ಶಕ್ತಿಯಾಗಿ ಇರ್ತಾನೆ. ಮಾಸ್ಟರ್​ ಬ್ಲಾಸ್ಟರ್​, ಕ್ರಿಕೆಟ್​ ದೇವರು ಸಚಿನ್​ ತೆಂಡುಲ್ಕರ್​​ ಬ್ಯಾಗ್​ನಲ್ಲಿ ವಿಘ್ನ ನಿವಾರಕ ಗಣೇಶ ಮೂರ್ತಿ ಸದಾ ಇರ್ತಿತ್ತು. ಅದೇ ರೀತಿ ವಿರಾಟ್​ ಕೊಹ್ಲಿಯ ಬ್ಯಾಗ್​​ನಲ್ಲಿ ಹನುಮ ಮೂರ್ತಿ ಇದೆ. ತನ್ನ ಬ್ಯಾಗ್​ನ ಜೀಪ್​​ಗೆ ವಿರಾಟ್​ ಹನುಮಾನ್ ಕೀ ಚೈನ್ ಹಾಕಿದ್ದಾರೆ.

ಇದನ್ನೂ ಓದಿ: ಗೆಲುವಿನೊಂದಿಗೆ ಐಪಿಎಲ್ ಅಭಿಯಾನ ಮುಗಿಸಿದ SRH.. ಕೊನೆ ಪಂದ್ಯದಲ್ಲಿ ಕೆಕೆಆರ್​ಗೆ ಭಾರೀ ಮುಖಭಂಗ!

publive-image

ಪ್ರತಿ ದಿನ ಆಂಜನೇಯನ ಆರಾಧನೆ

ಕೊಹ್ಲಿಯ ಇನ್​​ಸ್ಟಾಗ್ರಾಂನಲ್ಲಿ ಸದಾ ಕಮರ್ಷಿಯಲ್​ ಪೋಸ್ಟ್​ಗಳೇ ಹೆಚ್ಚು ಕಾಣಿಸೋದು. ಅದ್ರ ಹೊರತಾಗಿ ಪತ್ನಿ ಮಕ್ಕಳ ಜೊತೆಗಿನ ಫೋಟೋಸ್​ ಹಂಚಿಕೊಳ್ಳೋದು ಬಿಟ್ರೆ ಕೊಹ್ಲಿ ಬೇರಾವ ​ಪೋಸ್ಟ್ ಮಾಡಲ್ಲ. ಹನುಮ ಜಯಂತಿ ದಿನ ಕೊಹ್ಲಿ ಪೋಸ್ಟರ್​ ಹಂಚಿಕೊಂಡು ಶುಭ ಕೋರಿದ್ರು. ಕೊಹ್ಲಿಯ ಈ ಭಕ್ತಿ ಹನುಮ ಜಯಂತಿಗೆ ಮಾತ್ರವೇ ಸೀಮಿತಗೊಂಡಿದಲ್ಲ. ಆಪ್ತ ಮೂಲಗಳ ಪ್ರಕಾರ ಕೊಹ್ಲಿ ಪ್ರತಿ ದಿನ ಕೂಡ ಆಂಜನೇಯನನ್ನ ಆರಾಧಿಸ್ತಾರೆ. ಸಾಧ್ಯವಾದ್ರೆ ಹನುಮಾನ್ ಚಾಲೀಸ ಪಠಿಸ್ತಾರೆ. ಇಲ್ಲ ಅಂದ್ರೆ ಕೇಳ್ತಾರಂತೆ.

ಟೆಸ್ಟ್​ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ ಬೆನ್ನಲ್ಲೇ ಕೊಹ್ಲಿ ವೃಂದಾವನಕ್ಕೆ ಭೇಟಿ ನೀಡಿದ್ರು. ಪ್ರೇಮಾನಂದ ಮಾಹಾರಾಜ್​​ರ ಆಶೀರ್ವಾದ ಪಡೆದಿದ್ದ ವಿರುಷ್ಕಾ ಆಶೀರ್ವಚನ ಕೇಳಿದ್ರು. ಇನ್ನು, ನೀಮ್ ಕರೋಲಿ ಬಾಬಾರ ಪರ ಭಕ್ತನಾಗಿರೋ ವಿರಾಟ್​​ ಕೊಹ್ಲಿ ಆಗಾಗ ಸತ್ಸಂಗಗಳಲ್ಲಿ ಭಾಗಿಯಾಗಿದ್ದು ಇದೆ. ಇದೆಲ್ಲವನ್ನ ನೋಡಿದ್ರೆ ಕ್ರಿಕೆಟ್​​ನಿಂದ ವಿಮುಖರಾಗ್ತಿರೋ ವಿರಾಟ್​​ ಕೊಹ್ಲಿ, ಆದ್ಯಾತ್ಮದತ್ತ ಹೆಚ್ಚು ವಾಲ್ತಿದ್ದಾರೋದಂತೂ ಸ್ಪಷ್ಟ. ಕೊಹ್ಲಿ ಈ ಬದಲಾವಣೆಗೆ ಕಾರಣ ಏನು ಅನ್ನೋದು ನಿಗೂಢ.

ಇದನ್ನೂ ಓದಿ: ನಾಳೆ ಆರ್​ಸಿಬಿಗೆ ಬಿಗ್​ ಡೇ.. ಲುಂಗಿ, ಬೆಥೆಲ್ ಇಲ್ಲ, ಬಲಿಷ್ಠ ತಂಡದಲ್ಲಿ ಯಾರೆಲ್ಲ ಇರಬಹುದು..?

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment