ಟೆಸ್ಟ್​ಗೆ ಗುಡ್​ಬೈ ಬೆನ್ನಲ್ಲೇ ವಿರುಷ್ಕಾ ದಂಪತಿ ದಿಢೀರ್​ ಹೋಗಿದ್ದೆಲ್ಲಿಗೆ..? ಅನುಷ್ಕಾ ಶರ್ಮಾ ಕಣ್ಣೀರು..! VIDEO

author-image
Ganesh
ಟೆಸ್ಟ್​ಗೆ ಗುಡ್​ಬೈ ಬೆನ್ನಲ್ಲೇ ವಿರುಷ್ಕಾ ದಂಪತಿ ದಿಢೀರ್​ ಹೋಗಿದ್ದೆಲ್ಲಿಗೆ..? ಅನುಷ್ಕಾ ಶರ್ಮಾ ಕಣ್ಣೀರು..! VIDEO
Advertisment
  • ವಿರಾಟ್ ಕೊಹ್ಲಿ ಒಬ್ಬ ಮಹಾನ್ ದೈವ ಭಕ್ತ
  • ಸ್ವಾಮೀಜಿಗಳು ಕೊಹ್ಲಿಗೆ ಏನೆಂದು ಆಶೀರ್ವಾದ ಮಾಡಿದರು?
  • ಇತ್ತೀಚೆಗೆ ಟೆಸ್ಟ್ ಕ್ರಿಕೆಟ್​ಗೆ ವಿದಾಯ ಹೇಳಿರುವ ಕೊಹ್ಲಿ

ಟೆಸ್ಟ್​ ಕ್ರಿಕೆಟ್​ಗೆ ಗುಡ್ ಬೈ ಹೇಳಿದ ಬೆನ್ನಲ್ಲೇ ಟೀಮ್ ಇಂಡಿಯಾ ಆಟಗಾರ ವಿರಾಟ್ ಕೊಹ್ಲಿ (Virat Kohli) ಆಧ್ಯಾತ್ಮಿಕ ಪ್ರವಾಸದಲ್ಲಿ ಬ್ಯುಸಿಯಾಗಿದ್ದಾರೆ. ಉತ್ತರ ಪ್ರದೇಶದ ವೃಂದಾವನಕ್ಕೆ (Vrindavan) ಭೇಟಿ ನೀಡಿರುವ ವಿರಾಟ್ ಕೊಹ್ಲಿ, ಅನುಷ್ಕಾ ಶರ್ಮಾ ದಂಪತಿ, ಪ್ರೇಮಾನಂದ ಜಿ ಮಹಾರಾಜ್ ಸ್ವಾಮೀಜಿಗಳ (Premanand Ji Maharaj) ಭೇಟಿ ಮಾಡಿ ಆಶೀರ್ವಾದ ಪಡೆದಿದ್ದಾರೆ.

ಪ್ರೇಮಾನಂದ ಜಿ ಮಹಾರಾಜ್ ಸ್ವಾಮೀಜಿ ಅವರ ಪ್ರವಚನ ಕೇಳಿದ ಅನುಷ್ಕಾ ಶರ್ಮಾ ಕಣ್ಣೀರಿಟ್ಟಿದ್ದಾರೆ. ಎರಡನೇ ಬಾರಿಗೆ ಪ್ರೇಮಾನಂದ ಜಿ ಮಹಾರಾಜ್ ಸ್ವಾಮೀಜಿಗಳ ಆಶೀರ್ವಾದವನ್ನು ವಿರುಷ್ಕಾ ದಂಪತಿ ಪಡೆದುಕೊಂಡಿದೆ. ವಿರುಷ್ಕಾ ದಂಪತಿ ತಮ್ಮ ಇಬ್ಬರು ಮಕ್ಕಳೊಂದಿಗೆ ಭೇಟಿ ನೀಡಿರೋದು ವಿಶೇಷವಾಗಿತ್ತು. ಈ ಹಿಂದೆ ಜನವರಿಯಲ್ಲಿ ಇಲ್ಲಿಗೆ ಭೇಟಿ ನೀಡಿದ್ದರು.

ಇದನ್ನೂ ಓದಿ: ಕೊನೆಗೂ ಈಡೇರಲಿಲ್ಲ ಕೊಹ್ಲಿಯ ಆ ಒಂದು ಕನಸು.. ಸಾಧನೆಯ ಹಮ್ಮೀರನಿಗೆ ಅದೊಂದು ಕೊರಗು..!

ಈ ಸಮೃದ್ಧಿಯು ಕೇವಲ ಅನುಗ್ರಹವಲ್ಲ. ಅದು ಪುಣ್ಯದ ಫಲ. ಇದೊಂದು ದೈವಿಕ ಕಡೆಯ ಚಳವಳಿ. ನೀವು ಹೇಗೆ ಜೀವಿಸುತ್ತಿದ್ದೀರೋ ಹಾಗೆಯೇ ಇರಿ. ಜಗತ್ತಿಗೆ ನಿಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದೀರಿ. ನಿಮ್ಮ ಒಳಮನಸ್ಸಿನ ಯೋಚನೆಗಳು ಬದಲಾಗಲಿ ಎಂದು ಪ್ರೇಮಾನಂದ ಜಿ ಮಹಾರಾಜರು ಆಶೀರ್ವಾದ ಮಾಡಿದ್ದಾರೆ ಎಂದು ವರದಿಯಾಗಿದೆ.
ವಿರಾಟ್ ಕೊಹ್ಲಿ ಒಬ್ಬ ದೈವ ಭಕ್ತ. ಬಿಡುವು ಸಿಕ್ಕಾಗ ದೇವಾಲಯಗಳಿಗೆ, ಭಕ್ತಿ ಮಂದಿರಗಳಿಗೆ ಭೇಟಿ ನೀಡುತ್ತಿರುತ್ತಾರೆ. 2023ರಲ್ಲಿ ಉಜ್ಜಯಿನಿಯ ಮಹಾಕಾಳೇಶ್ವರ ದೇಗುಲಕ್ಕೆ ಭೇಟಿ ನೀಡಿದ್ದರು.

ಇದನ್ನೂ ಓದಿ: ಐಪಿಎಲ್​​ಗೆ ಕೈಕೊಟ್ಟ ಇಂಗ್ಲೆಂಡ್​ನ ಐದು ಸ್ಟಾರ್ ಆಟಗಾರರು.. ಆರ್​ಸಿಬಿಗೂ ಆಘಾತ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment