ಟೀಮ್ ಇಂಡಿಯಾ ಸೂಪರ್ ಸ್ಟಾರ್ಗಳಿಗೆ ಹೊಸ ಟಾಸ್ಕ್
ಇಶಾನ್ ಕಿಶನ್, ಶ್ರೇಯಸ್ ಅಯ್ಯರ್ಗೆ ಲೈಫ್ಲೈನ್..!
ಪೂಜಾರ-ರಹಾನೆ ಕರಿಯರ್ಗೆ ಕೊನೆಯ ಮೊಳೆ?
ಮುಂಬರೋ ಟೆಸ್ಟ್ ಸೀಸನ್ಗೆ ಟೀಮ್ ಇಂಡಿಯಾ ಸಿದ್ಧತೆ ಸದ್ದಿಲ್ಲದೆ ಆರಂಭವಾಗಿದೆ. ಲಂಕಾ ಪ್ರವಾಸ ಅಂತ್ಯದ ಬಳಿಕ ರಿಲ್ಯಾಕ್ಟ್ ಮೂಡ್ಗೆ ಜಾರಲು ಸಜ್ಜಾಗಿದ್ದ ಆಟಗಾರರಿಗೆ ಬಿಸಿಸಿಐ ಶಾಕ್ ಕೊಟ್ಟಿದೆ. ಸೆಲೆಕ್ಟರ್ ಅಜಿತ್ ಅಗರ್ಕರ್, ಕೋಚ್ ಗೌತಮ್ ಗಂಭೀರ್ ಹೊಸ ಟಾಸ್ಕ್ ನೀಡ್ತಿದ್ದಾರೆ. ಎಲ್ಲಾ ಅಂದುಕೊಂಡಂತೆ ಆದ್ರೆ, ಟೀಮ್ ಇಂಡಿಯಾ ಸ್ಟಾರ್ಗಳೆಲ್ಲಾ ಬೆಂಗಳೂರಿನ ಚಿನ್ನಸ್ವಾಮಿ ಅಂಗಳದಲ್ಲಿ ಶೀಘ್ರದಲ್ಲೇ ಕಣಕ್ಕಿಳಿಯಲಿದ್ದಾರೆ.
ಶ್ರೀಲಂಕಾ ಪ್ರವಾಸ ಅಂತ್ಯದ ಬಳಿಕ ಸುದೀರ್ಘ ವಿಶ್ರಾಂತಿಗೆ ಜಾರೋ ಲೆಕ್ಕಾಚಾರದಲ್ಲಿದ್ದ, ಟೀಮ್ ಇಂಡಿಯಾ ಕ್ರಿಕೆಟರ್ಸ್ ಪ್ಲಾನ್ ಎಲ್ಲಾ ತಲೆ ಕೆಳಗಾಗಿದೆ. ರಿಲ್ಯಾಕ್ಸ್ ಮೂಡ್ಗೆ ಜಾರೋ ಕನವರಿಕೆಯಲ್ಲಿದ್ದ ಆಟಗಾರರಿಗೆ ಬಿಸಿಸಿಐ ಬಾಸ್ಗಳು ಶಾಕ್ ಕೊಟ್ಟಿದ್ದಾರೆ. ಟೀಮ್ ಮ್ಯಾನೇಜ್ಮೆಂಟ್, ಸೆಲೆಕ್ಷನ್ ಕಮಿಟಿ ಜೊತೆ ಹೈವೋಲ್ಟೆಜ್ ಸಭೆ ನಡೆಸಿರೋ ಬಿಸಿಸಿಐ ಬಾಸ್ಗಳು ಆಟಗಾರರಿಗೆ ಹೊಸ ಟಾಸ್ಕ್ ನೀಡಿದ್ದಾರೆ.
ಇದನ್ನೂ ಓದಿ:ಕ್ರಿಕೆಟ್ ಪ್ರೇಮಿಗಳಿಗೆ ಲಾಟರಿ! 50 ರೂಪಾಯಿಂದ ಟಿಕೆಟ್ ಆರಂಭ.. ಊಟ, ಚಹಾ ಎಲ್ಲಾ ಸಿಗುತ್ತೆ..!
ಟೀಮ್ ಇಂಡಿಯಾ ಸೂಪರ್ ಸ್ಟಾರ್ಗಳಿಗೆ ಹೊಸ ಟಾಸ್ಕ್
ಬಾಂಗ್ಲಾ ಎದುರಿನ ಟೆಸ್ಟ್ ಸರಣಿಗೂ ಮುನ್ನ ವಿಶ್ರಾಂತಿಗೆ ಜಾರೋ ಲೆಕ್ಕಾಚಾರದಲ್ಲಿದ್ದ ಟೀಮ್ ಇಂಡಿಯಾ ಸೂಪರ್ ಸ್ಟಾರ್ಗಳಿಗೆ ಬಿಸಿಸಿಐ ಬಾಸ್ಗಳು ಡೊಮೆಸ್ಟಿಕ್ ಕ್ರಿಕೆಟ್ ಆಡುವಂತೆ ಕಟ್ಟಪ್ಪಣೆ ಹೊರಡಿಸಿದ್ದಾರೆ. ಮುಂದಿನ ದಿನಗಳಲ್ಲಿ ಸಾಲು ಸಾಲು ಟೆಸ್ಟ್ ಸರಣಿಗಳನ್ನ ಟೀಮ್ ಇಂಡಿಯಾ ಆಡಲಿದೆ. ಇದ್ರ ಸಿದ್ಧತೆಯ ಭಾಗವಾಗಿ ಸಪ್ಟೆಂಬರ್ 5ರಿಂದ ಆರಂಭವಾಗಲಿರೋ ದುಲೀಪ್ ಟ್ರೋಫಿ ಟೂರ್ನಿಯಲ್ಲಿ ಆಡುವಂತೆ ಭಾರತ ತಂಡದ ಸ್ಟಾರ್ಗಳಿಗೆ ಬಿಸಿಸಿಐ ಸೂಚಿಸಿದೆ.
ಹಾರ್ದಿಕ್, ಬೂಮ್ರಾಗೆ ಟೂರ್ನಿಯಿಂದ ವಿನಾಯಿತಿ
ದುಲೀಪ್ ಟ್ರೋಫಿ ಟೂರ್ನಿಯಿಂದ ಆಲ್ಫಾರ್ಮೆಟ್ ಪ್ಲೇಯರ್, ವೇಗಿ ಜಸ್ಪ್ರಿತ್ ಬೂಮ್ರಾಗೆ ವಿಶ್ರಾಂತಿ ನೀಡಲು ಬಿಸಿಸಿಐ ತಿರ್ಮಾನಿಸಿದೆ. ಟೆಸ್ಟ್ನಿಂದ ದೂರ ಉಳಿದಿರೋದ್ರಿಂದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯಗೂ ವಿನಾಯಿತಿ ನೀಡಲಾಗಿದೆ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿಗೆ ಆಡಬೇಕಾ? ಬೇಡ್ವಾ? ಅನ್ನೋ ನಿರ್ಧಾರವನ್ನ ನೀವೇ ತೆಗೆದುಕೊಳ್ಳಿ ಎಂದಿದೆ. ಇನ್ನುಳಿದಂತೆ, ಉಳಿದೆಲ್ಲಾ ಆಟಗಾರರಿಗೆ ದುಲೀಪ್ ಟ್ರೋಫಿ ಟೂರ್ನಿಯ ಮೊದಲ ಹಂತದ ಪಂದ್ಯಗಳನ್ನಾಡುವಂತೆ ಸೂಚಿಸಲಾಗಿದೆ.
ಇದನ್ನೂ ಓದಿ:ಅಲ್ಲಾಡುತ್ತಿದೆ ಗಿಲ್ ಸ್ಥಾನ.. ಯಂಗ್ ಗನ್ನಿಂದ ಭಾರೀ ಫೈಟ್.. ಬಿಸಿಸಿಐ ಕೊಕ್ ಕೊಟ್ಟರೂ ಅಚ್ಚರಿ ಇಲ್ಲ!
ಸ್ಟಾರ್ಗಳು ಅಖಾಡಕ್ಕೆ, ಬೆಂಗಳೂರಿಗೆ ಪಂದ್ಯ ಶಿಫ್ಟ್
ಟೆಸ್ಟ್ ಸರಣಿಗಳಿಗೆ ಸಿದ್ಧತೆಯ ಭಾಗವಾಗಿ ಸೆಲೆಕ್ಟರ್ ಅಜಿತ್ ಅಗರ್ಕರ್, ಕೋಚ್ ಗೌತಮ್ ಗಂಭೀರ್ ಮಾಡಿರೋ ತಿರ್ಮಾನವನ್ನ ಬಿಸಿಸಿಐ, ಆಟಗಾರರಿಗೆ ತಿಳಿಸಿದೆ. ಕೆ.ಎಲ್ ರಾಹುಲ್, ಶುಭ್ಮನ್ ಗಿಲ್, ಆರ್.ಅಶ್ವಿನ್, ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್ ಹಾಗೂ ಅಕ್ಷರ್ ಪಟೇಲ್ ಸೇರಿದಂತೆ ಟೆಸ್ಟ್ ತಂಡದ ಖಾಯಂ ಆಟಗಾರರಿಗೆ ಬಿಸಿಸಿಐ ಈ ಬಗ್ಗೆ ಸೂಚನೆಯನ್ನೂ ಕಳುಹಿಸಿದೆ. ಆಟಗಾರರು ಕೂಡ ಆಡಲು ಒಕೆ ಅಂದಿದ್ದು, ಹೀಗಾಗಿ ಅನಂತಪುರಂನಿಂದ ಬೆಂಗಳೂರಿಗೆ ಪಂದ್ಯಗಳನ್ನ ಶಿಫ್ಟ್ ಮಾಡಲು ನಿರ್ಧರಿಸಲಾಗಿದೆ. ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ಪಂದ್ಯಗಳು ನಡೆಯಲಿವೆ.
ಇಶಾನ್ ಕಿಶನ್, ಶ್ರೇಯಸ್ ಅಯ್ಯರ್ಗೆ ಲೈಫ್ಲೈನ್
ಕಳೆದ ರಣಜಿ ಸೀಸನ್ ವೇಳೆ ಬಿಸಿಸಿಐ ಸೂಚನೆಯನ್ನ ದಿಕ್ಕರಿಸಿದ್ದ ಇಶಾನ್ ಕಿಶನ್, ಶ್ರೇಯಸ್ ಅಯ್ಯರ್ಗೆ ದುಲೀಪ್ ಟ್ರೋಫಿಯಲ್ಲಿ ಅವಕಾಶ ನೀಡಲು ಬಿಗ್ಬಾಸ್ಗಳು ತೀರ್ಮಾನಿಸಿದ್ದಾರೆ. ರಣಜಿ ಪಂದ್ಯವನ್ನ ಸ್ಕಿಪ್ ಮಾಡಿ ಬಿಸಿಸಿಐ ಕೆಂಗಣ್ಣಿಗೆ ಗುರಿಯಾಗಿದ್ದ ಇಬ್ಬರೂ, ಸೆಂಟ್ರಲ್ ಕಾಂಟ್ರ್ಯಾಕ್ಟ್ ಲಿಸ್ಟ್ನಿಂದ ಔಟ್ ಆಗಿದ್ದರು. ಬಳಿಕ ಪರ್ಫಾಮೆನ್ಸ್ ಆಧಾರದಲ್ಲಿ ಶ್ರೇಯಸ್ ಅಯ್ಯರ್ ಟೀಮ್ ಇಂಡಿಯಾ ರೀ ಎಂಟ್ರಿ ಕೊಟ್ಟಿದ್ದಾರೆ. ಇಶಾನ್ ಕಿಶನ್ ಪಾಲಿಗೆ ತಂಡದ ಡೋರ್ ಇನ್ನೂ ತೆರೆದಿಲ್ಲ. ಇದೀಗ ದುಲೀಪ್ ಟ್ರೋಫಿ ಟೂರ್ನಿಯಲ್ಲಿ ಆಡಿ, ಇಂಪ್ರೆಸ್ಸಿವ್ ಪರ್ಫಾಮೆನ್ಸ್ ನೀಡಿದ್ರೆ ಬಾಗಿಲು ತೆರಯಲಿದೆ.
ಇದನ್ನೂ ಓದಿ:‘ಅಪ್ಪ, ಅಮ್ಮ ಕ್ಯಾನ್ಸರ್ನಿಂದ ತೀರಿ ಹೋದರು..’ ಕುಗ್ಗಲಿಲ್ಲ ಛಲ ಬಿಡದೇ IAS ಅಧಿಕಾರಿಯಾದ ಛಲಗಾರ್ತಿ..!
ಪೂಜಾರ – ರಹಾನೆ ಕರಿಯರ್ಗೆ ಕೊನೇ ಮೊಳೆ
ಟೀಮ್ ಇಂಡಿಯಾದ ಸೀನಿಯರ್ಗಳಾದ ಚೇತೇಶ್ವರ್ ಪೂಜಾರ, ಅಜಿಂಕ್ಯಾ ರಹಾನೆಯನ್ನ ಬಿಸಿಸಿಐ ಹಾಗೂ ಸೆಲೆಕ್ಷನ್ ಕಮಿಟಿ ದುಲೀಪ್ ಟ್ರೋಫಿಯ ಭಾಗವಾಗಿ ಪರಿಗಣಿಸಿಲ್ಲ. ಇದ್ರೊಂದಿಗೆ ಇಬ್ಬರ ಕರಿಯರ್ಗೆ ಬಹುತೇಕ ಕೊನೆ ಮೊಳೆ ಬಿದ್ದಂತಾಗಿದೆ. ಇವ್ರ ಬದಲಾಗಿ ಯುವ ಆಟಗಾರ ಸರ್ಫರಾಜ್ ಖಾನ್, ದೃವ್ ಜುರೇಲ್ ಮೇಲೆ ಬಿಗ್ಬಾಸ್ಗಳ ಕಣ್ಣು ನೆಟ್ಟಿದೆ. ಇಬ್ಬರೂ ಯುವ ಆಟಗಾರರಿಗೆ ದುಲೀಪ್ ಟ್ರೋಫಿ ಆಡುವಂತೆ ಸೂಚಿಸಲಾಗಿದೆ.
ಮುಂದಿನ ದಿನಗಳಲ್ಲಿ ಟೀಮ್ ಇಂಡಿಯಾ ಸಾಲು ಸಾಲು ಟೆಸ್ಟ್ ಸರಣಿಗಳನ್ನು ಆಡಲಿದೆ. ಬಾಂಗ್ಲಾ ಸರಣಿ ಬಳಿಕ ನ್ಯೂಜಿಲೆಂಡ್, ಆ ನಂತರ ಆಸ್ಟ್ರೇಲಿಯಾ ಪ್ರವಾಸದಲ್ಲಿ ಟೆಸ್ಟ್ ಪಂದ್ಯಗಳನ್ನ ಆಡಲಿದೆ. ಕಳೆದ ಕೆಲ ತಿಂಗಳಿಂದ ವೈಟ್ ಬಾಲ್ ಫಾರ್ಮೆಟ್ಗೆ ಟೀಮ್ ಇಂಡಿಯಾ ಸ್ಟಾರ್ಸ್ ಸೀಮಿತವಾಗಿದ್ದಾರೆ. ಇದೀಗ ರೆಡ್ ಬಾಲ್ ಫಾರ್ಮೆಟ್ಗೆ ಶಿಫ್ಟ್ ಆಗಲು ದುಲೀಫ್ ಟ್ರೋಫಿ ಸಹಾಯ ಮಾಡಲಿದೆ. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ದೃಷ್ಟಿಯಿಂದ ಮುಂಬರೋ ಎಲ್ಲಾ ಟೆಸ್ಟ್ ಪಂದ್ಯಗಳು ಭಾರತದ ಪಾಲಿಗೆ ಮೋಸ್ಟ್ ಇಂಪಾರ್ಟೆಂಟ್.! ಇದೆಲ್ಲವನ್ನ ಗಮನದಲ್ಲಿರಿಸಿಕೊಂಡು ಬಿಸಿಸಿಐ ಈ ತೀರ್ಮಾನ ಮಾಡಿದೆ.
ಇದನ್ನೂ ಓದಿ:ಬೂಮ್ರಾ ಮೇಲೆ ಪ್ರೀತಿಯ ಬಾಣ ಎಸೆದ ಬಾಲಿವುಡ್ ಬ್ಯೂಟಿ.. ಯಾರ್ಕರ್ ಕಿಂಗ್ಗೆ ಈಕೆ ಬೋಲ್ಡ್ ಆಗಿದ್ದೇಗೆ..?
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
ಟೀಮ್ ಇಂಡಿಯಾ ಸೂಪರ್ ಸ್ಟಾರ್ಗಳಿಗೆ ಹೊಸ ಟಾಸ್ಕ್
ಇಶಾನ್ ಕಿಶನ್, ಶ್ರೇಯಸ್ ಅಯ್ಯರ್ಗೆ ಲೈಫ್ಲೈನ್..!
ಪೂಜಾರ-ರಹಾನೆ ಕರಿಯರ್ಗೆ ಕೊನೆಯ ಮೊಳೆ?
ಮುಂಬರೋ ಟೆಸ್ಟ್ ಸೀಸನ್ಗೆ ಟೀಮ್ ಇಂಡಿಯಾ ಸಿದ್ಧತೆ ಸದ್ದಿಲ್ಲದೆ ಆರಂಭವಾಗಿದೆ. ಲಂಕಾ ಪ್ರವಾಸ ಅಂತ್ಯದ ಬಳಿಕ ರಿಲ್ಯಾಕ್ಟ್ ಮೂಡ್ಗೆ ಜಾರಲು ಸಜ್ಜಾಗಿದ್ದ ಆಟಗಾರರಿಗೆ ಬಿಸಿಸಿಐ ಶಾಕ್ ಕೊಟ್ಟಿದೆ. ಸೆಲೆಕ್ಟರ್ ಅಜಿತ್ ಅಗರ್ಕರ್, ಕೋಚ್ ಗೌತಮ್ ಗಂಭೀರ್ ಹೊಸ ಟಾಸ್ಕ್ ನೀಡ್ತಿದ್ದಾರೆ. ಎಲ್ಲಾ ಅಂದುಕೊಂಡಂತೆ ಆದ್ರೆ, ಟೀಮ್ ಇಂಡಿಯಾ ಸ್ಟಾರ್ಗಳೆಲ್ಲಾ ಬೆಂಗಳೂರಿನ ಚಿನ್ನಸ್ವಾಮಿ ಅಂಗಳದಲ್ಲಿ ಶೀಘ್ರದಲ್ಲೇ ಕಣಕ್ಕಿಳಿಯಲಿದ್ದಾರೆ.
ಶ್ರೀಲಂಕಾ ಪ್ರವಾಸ ಅಂತ್ಯದ ಬಳಿಕ ಸುದೀರ್ಘ ವಿಶ್ರಾಂತಿಗೆ ಜಾರೋ ಲೆಕ್ಕಾಚಾರದಲ್ಲಿದ್ದ, ಟೀಮ್ ಇಂಡಿಯಾ ಕ್ರಿಕೆಟರ್ಸ್ ಪ್ಲಾನ್ ಎಲ್ಲಾ ತಲೆ ಕೆಳಗಾಗಿದೆ. ರಿಲ್ಯಾಕ್ಸ್ ಮೂಡ್ಗೆ ಜಾರೋ ಕನವರಿಕೆಯಲ್ಲಿದ್ದ ಆಟಗಾರರಿಗೆ ಬಿಸಿಸಿಐ ಬಾಸ್ಗಳು ಶಾಕ್ ಕೊಟ್ಟಿದ್ದಾರೆ. ಟೀಮ್ ಮ್ಯಾನೇಜ್ಮೆಂಟ್, ಸೆಲೆಕ್ಷನ್ ಕಮಿಟಿ ಜೊತೆ ಹೈವೋಲ್ಟೆಜ್ ಸಭೆ ನಡೆಸಿರೋ ಬಿಸಿಸಿಐ ಬಾಸ್ಗಳು ಆಟಗಾರರಿಗೆ ಹೊಸ ಟಾಸ್ಕ್ ನೀಡಿದ್ದಾರೆ.
ಇದನ್ನೂ ಓದಿ:ಕ್ರಿಕೆಟ್ ಪ್ರೇಮಿಗಳಿಗೆ ಲಾಟರಿ! 50 ರೂಪಾಯಿಂದ ಟಿಕೆಟ್ ಆರಂಭ.. ಊಟ, ಚಹಾ ಎಲ್ಲಾ ಸಿಗುತ್ತೆ..!
ಟೀಮ್ ಇಂಡಿಯಾ ಸೂಪರ್ ಸ್ಟಾರ್ಗಳಿಗೆ ಹೊಸ ಟಾಸ್ಕ್
ಬಾಂಗ್ಲಾ ಎದುರಿನ ಟೆಸ್ಟ್ ಸರಣಿಗೂ ಮುನ್ನ ವಿಶ್ರಾಂತಿಗೆ ಜಾರೋ ಲೆಕ್ಕಾಚಾರದಲ್ಲಿದ್ದ ಟೀಮ್ ಇಂಡಿಯಾ ಸೂಪರ್ ಸ್ಟಾರ್ಗಳಿಗೆ ಬಿಸಿಸಿಐ ಬಾಸ್ಗಳು ಡೊಮೆಸ್ಟಿಕ್ ಕ್ರಿಕೆಟ್ ಆಡುವಂತೆ ಕಟ್ಟಪ್ಪಣೆ ಹೊರಡಿಸಿದ್ದಾರೆ. ಮುಂದಿನ ದಿನಗಳಲ್ಲಿ ಸಾಲು ಸಾಲು ಟೆಸ್ಟ್ ಸರಣಿಗಳನ್ನ ಟೀಮ್ ಇಂಡಿಯಾ ಆಡಲಿದೆ. ಇದ್ರ ಸಿದ್ಧತೆಯ ಭಾಗವಾಗಿ ಸಪ್ಟೆಂಬರ್ 5ರಿಂದ ಆರಂಭವಾಗಲಿರೋ ದುಲೀಪ್ ಟ್ರೋಫಿ ಟೂರ್ನಿಯಲ್ಲಿ ಆಡುವಂತೆ ಭಾರತ ತಂಡದ ಸ್ಟಾರ್ಗಳಿಗೆ ಬಿಸಿಸಿಐ ಸೂಚಿಸಿದೆ.
ಹಾರ್ದಿಕ್, ಬೂಮ್ರಾಗೆ ಟೂರ್ನಿಯಿಂದ ವಿನಾಯಿತಿ
ದುಲೀಪ್ ಟ್ರೋಫಿ ಟೂರ್ನಿಯಿಂದ ಆಲ್ಫಾರ್ಮೆಟ್ ಪ್ಲೇಯರ್, ವೇಗಿ ಜಸ್ಪ್ರಿತ್ ಬೂಮ್ರಾಗೆ ವಿಶ್ರಾಂತಿ ನೀಡಲು ಬಿಸಿಸಿಐ ತಿರ್ಮಾನಿಸಿದೆ. ಟೆಸ್ಟ್ನಿಂದ ದೂರ ಉಳಿದಿರೋದ್ರಿಂದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯಗೂ ವಿನಾಯಿತಿ ನೀಡಲಾಗಿದೆ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿಗೆ ಆಡಬೇಕಾ? ಬೇಡ್ವಾ? ಅನ್ನೋ ನಿರ್ಧಾರವನ್ನ ನೀವೇ ತೆಗೆದುಕೊಳ್ಳಿ ಎಂದಿದೆ. ಇನ್ನುಳಿದಂತೆ, ಉಳಿದೆಲ್ಲಾ ಆಟಗಾರರಿಗೆ ದುಲೀಪ್ ಟ್ರೋಫಿ ಟೂರ್ನಿಯ ಮೊದಲ ಹಂತದ ಪಂದ್ಯಗಳನ್ನಾಡುವಂತೆ ಸೂಚಿಸಲಾಗಿದೆ.
ಇದನ್ನೂ ಓದಿ:ಅಲ್ಲಾಡುತ್ತಿದೆ ಗಿಲ್ ಸ್ಥಾನ.. ಯಂಗ್ ಗನ್ನಿಂದ ಭಾರೀ ಫೈಟ್.. ಬಿಸಿಸಿಐ ಕೊಕ್ ಕೊಟ್ಟರೂ ಅಚ್ಚರಿ ಇಲ್ಲ!
ಸ್ಟಾರ್ಗಳು ಅಖಾಡಕ್ಕೆ, ಬೆಂಗಳೂರಿಗೆ ಪಂದ್ಯ ಶಿಫ್ಟ್
ಟೆಸ್ಟ್ ಸರಣಿಗಳಿಗೆ ಸಿದ್ಧತೆಯ ಭಾಗವಾಗಿ ಸೆಲೆಕ್ಟರ್ ಅಜಿತ್ ಅಗರ್ಕರ್, ಕೋಚ್ ಗೌತಮ್ ಗಂಭೀರ್ ಮಾಡಿರೋ ತಿರ್ಮಾನವನ್ನ ಬಿಸಿಸಿಐ, ಆಟಗಾರರಿಗೆ ತಿಳಿಸಿದೆ. ಕೆ.ಎಲ್ ರಾಹುಲ್, ಶುಭ್ಮನ್ ಗಿಲ್, ಆರ್.ಅಶ್ವಿನ್, ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್ ಹಾಗೂ ಅಕ್ಷರ್ ಪಟೇಲ್ ಸೇರಿದಂತೆ ಟೆಸ್ಟ್ ತಂಡದ ಖಾಯಂ ಆಟಗಾರರಿಗೆ ಬಿಸಿಸಿಐ ಈ ಬಗ್ಗೆ ಸೂಚನೆಯನ್ನೂ ಕಳುಹಿಸಿದೆ. ಆಟಗಾರರು ಕೂಡ ಆಡಲು ಒಕೆ ಅಂದಿದ್ದು, ಹೀಗಾಗಿ ಅನಂತಪುರಂನಿಂದ ಬೆಂಗಳೂರಿಗೆ ಪಂದ್ಯಗಳನ್ನ ಶಿಫ್ಟ್ ಮಾಡಲು ನಿರ್ಧರಿಸಲಾಗಿದೆ. ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ಪಂದ್ಯಗಳು ನಡೆಯಲಿವೆ.
ಇಶಾನ್ ಕಿಶನ್, ಶ್ರೇಯಸ್ ಅಯ್ಯರ್ಗೆ ಲೈಫ್ಲೈನ್
ಕಳೆದ ರಣಜಿ ಸೀಸನ್ ವೇಳೆ ಬಿಸಿಸಿಐ ಸೂಚನೆಯನ್ನ ದಿಕ್ಕರಿಸಿದ್ದ ಇಶಾನ್ ಕಿಶನ್, ಶ್ರೇಯಸ್ ಅಯ್ಯರ್ಗೆ ದುಲೀಪ್ ಟ್ರೋಫಿಯಲ್ಲಿ ಅವಕಾಶ ನೀಡಲು ಬಿಗ್ಬಾಸ್ಗಳು ತೀರ್ಮಾನಿಸಿದ್ದಾರೆ. ರಣಜಿ ಪಂದ್ಯವನ್ನ ಸ್ಕಿಪ್ ಮಾಡಿ ಬಿಸಿಸಿಐ ಕೆಂಗಣ್ಣಿಗೆ ಗುರಿಯಾಗಿದ್ದ ಇಬ್ಬರೂ, ಸೆಂಟ್ರಲ್ ಕಾಂಟ್ರ್ಯಾಕ್ಟ್ ಲಿಸ್ಟ್ನಿಂದ ಔಟ್ ಆಗಿದ್ದರು. ಬಳಿಕ ಪರ್ಫಾಮೆನ್ಸ್ ಆಧಾರದಲ್ಲಿ ಶ್ರೇಯಸ್ ಅಯ್ಯರ್ ಟೀಮ್ ಇಂಡಿಯಾ ರೀ ಎಂಟ್ರಿ ಕೊಟ್ಟಿದ್ದಾರೆ. ಇಶಾನ್ ಕಿಶನ್ ಪಾಲಿಗೆ ತಂಡದ ಡೋರ್ ಇನ್ನೂ ತೆರೆದಿಲ್ಲ. ಇದೀಗ ದುಲೀಪ್ ಟ್ರೋಫಿ ಟೂರ್ನಿಯಲ್ಲಿ ಆಡಿ, ಇಂಪ್ರೆಸ್ಸಿವ್ ಪರ್ಫಾಮೆನ್ಸ್ ನೀಡಿದ್ರೆ ಬಾಗಿಲು ತೆರಯಲಿದೆ.
ಇದನ್ನೂ ಓದಿ:‘ಅಪ್ಪ, ಅಮ್ಮ ಕ್ಯಾನ್ಸರ್ನಿಂದ ತೀರಿ ಹೋದರು..’ ಕುಗ್ಗಲಿಲ್ಲ ಛಲ ಬಿಡದೇ IAS ಅಧಿಕಾರಿಯಾದ ಛಲಗಾರ್ತಿ..!
ಪೂಜಾರ – ರಹಾನೆ ಕರಿಯರ್ಗೆ ಕೊನೇ ಮೊಳೆ
ಟೀಮ್ ಇಂಡಿಯಾದ ಸೀನಿಯರ್ಗಳಾದ ಚೇತೇಶ್ವರ್ ಪೂಜಾರ, ಅಜಿಂಕ್ಯಾ ರಹಾನೆಯನ್ನ ಬಿಸಿಸಿಐ ಹಾಗೂ ಸೆಲೆಕ್ಷನ್ ಕಮಿಟಿ ದುಲೀಪ್ ಟ್ರೋಫಿಯ ಭಾಗವಾಗಿ ಪರಿಗಣಿಸಿಲ್ಲ. ಇದ್ರೊಂದಿಗೆ ಇಬ್ಬರ ಕರಿಯರ್ಗೆ ಬಹುತೇಕ ಕೊನೆ ಮೊಳೆ ಬಿದ್ದಂತಾಗಿದೆ. ಇವ್ರ ಬದಲಾಗಿ ಯುವ ಆಟಗಾರ ಸರ್ಫರಾಜ್ ಖಾನ್, ದೃವ್ ಜುರೇಲ್ ಮೇಲೆ ಬಿಗ್ಬಾಸ್ಗಳ ಕಣ್ಣು ನೆಟ್ಟಿದೆ. ಇಬ್ಬರೂ ಯುವ ಆಟಗಾರರಿಗೆ ದುಲೀಪ್ ಟ್ರೋಫಿ ಆಡುವಂತೆ ಸೂಚಿಸಲಾಗಿದೆ.
ಮುಂದಿನ ದಿನಗಳಲ್ಲಿ ಟೀಮ್ ಇಂಡಿಯಾ ಸಾಲು ಸಾಲು ಟೆಸ್ಟ್ ಸರಣಿಗಳನ್ನು ಆಡಲಿದೆ. ಬಾಂಗ್ಲಾ ಸರಣಿ ಬಳಿಕ ನ್ಯೂಜಿಲೆಂಡ್, ಆ ನಂತರ ಆಸ್ಟ್ರೇಲಿಯಾ ಪ್ರವಾಸದಲ್ಲಿ ಟೆಸ್ಟ್ ಪಂದ್ಯಗಳನ್ನ ಆಡಲಿದೆ. ಕಳೆದ ಕೆಲ ತಿಂಗಳಿಂದ ವೈಟ್ ಬಾಲ್ ಫಾರ್ಮೆಟ್ಗೆ ಟೀಮ್ ಇಂಡಿಯಾ ಸ್ಟಾರ್ಸ್ ಸೀಮಿತವಾಗಿದ್ದಾರೆ. ಇದೀಗ ರೆಡ್ ಬಾಲ್ ಫಾರ್ಮೆಟ್ಗೆ ಶಿಫ್ಟ್ ಆಗಲು ದುಲೀಫ್ ಟ್ರೋಫಿ ಸಹಾಯ ಮಾಡಲಿದೆ. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ದೃಷ್ಟಿಯಿಂದ ಮುಂಬರೋ ಎಲ್ಲಾ ಟೆಸ್ಟ್ ಪಂದ್ಯಗಳು ಭಾರತದ ಪಾಲಿಗೆ ಮೋಸ್ಟ್ ಇಂಪಾರ್ಟೆಂಟ್.! ಇದೆಲ್ಲವನ್ನ ಗಮನದಲ್ಲಿರಿಸಿಕೊಂಡು ಬಿಸಿಸಿಐ ಈ ತೀರ್ಮಾನ ಮಾಡಿದೆ.
ಇದನ್ನೂ ಓದಿ:ಬೂಮ್ರಾ ಮೇಲೆ ಪ್ರೀತಿಯ ಬಾಣ ಎಸೆದ ಬಾಲಿವುಡ್ ಬ್ಯೂಟಿ.. ಯಾರ್ಕರ್ ಕಿಂಗ್ಗೆ ಈಕೆ ಬೋಲ್ಡ್ ಆಗಿದ್ದೇಗೆ..?
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್