/newsfirstlive-kannada/media/post_attachments/wp-content/uploads/2024/05/VIRAT_KOHLI_BATTING_1.jpg)
ಬಹುನಿರೀಕ್ಷಿತ 2025ರ ಇಂಡಿಯನ್ ಪ್ರೀಮಿಯರ್​ ಲೀಗ್​​ ​​ಮೆಗಾ ಹರಾಜಿನಲ್ಲಿ ಸ್ಟಾರ್​​ ಆಟಗಾರರನ್ನು ಖರೀದಿಸಿ ಬಲಿಷ್ಠ ತಂಡ ಕಟ್ಟಿರೋ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಭರ್ಜರಿ ತಯಾರಿ ಮಾಡಿಕೊಂಡಿದೆ. ಕಳೆದ 17 ಸೀಸನ್​ಗಳಿಂದ ಇರೋ ಕಪ್​ ಕೊರಗು ಈ ಬಾರಿ ನೀಗುತ್ತೆ. ಐಪಿಎಲ್​​ ಟ್ರೋಫಿ ನಮ್ಮದಾಗುತ್ತೆ ಅನ್ನೋ ಕನಸು ಆರ್​​ಸಿಬಿ ಮ್ಯಾನೇಜ್​ಮೆಂಟ್​​ದ್ದಾಗಿದೆ. ಹರಾಜಿನ ದೊಡ್ಡ ಜವಾಬ್ದಾರಿ ಮುಗಿಸಿ ಸಮಾಧಾನದ ನಿಟ್ಟುಸಿರು ಬಿಟ್ಟ ಬೆನ್ನಲ್ಲೇ ಅಸಮಾಧಾನದ ಬಿಸಿ ಫ್ರಾಂಚೈಸಿಗೆ ಮುಟ್ಟಿದೆ.
ಸದ್ಯ ಆರ್​​ಸಿಬಿ ಮ್ಯಾನೇಜ್​ಮೆಂಟ್​​ಗೆ ಟೆನ್ಶನ್​ ತಂದಿಟ್ಟಿರೋದು, ಕಿಂಗ್​ ಕೊಹ್ಲಿ ಕೋಪ.! ಹರಾಜು ಅಂತ್ಯಗೊಂಡ ಬೆನ್ನಲ್ಲೇ ವಿರಾಟ್​​ ಕೊಹ್ಲಿ ಮ್ಯಾನೇಜ್​ಮೆಂಟ್​ ಮೇಲೆ ಅಸಮಾಧಾನ ಗೊಂಡಿದ್ದಾರೆ ಅನ್ನೋ ಶಾಕಿಂಗ್​ ಸುದ್ದಿ ಹೊರ ಬಿದ್ದಿದೆ. ಆಟಗಾರರ ಖರೀದಿ ವಿಚಾರದಲ್ಲಿ ಫ್ರಾಂಚೈಸಿ ಮಾಡಿದ ಯಡವಟ್ಟುಗಳು, ಕಿಂಗ್​ ಕೊಹ್ಲಿಯ ಪಿತ್ತ ನೆತ್ತಿಗೇರಿಸಿದೆ ಅನ್ನೋದು ತಂಡದ ಮೂಲಗಳ ಮಾಹಿತಿಯಾಗಿದೆ. ಕೊಹ್ಲಿ ಕೋಪಕ್ಕೆ ಹಲವು ಕಾರಣಗಳಿವೆ.
ಸಿರಾಜ್​ ಕೈ ಬಿಟ್ಟಿದ್ದಕ್ಕೆ ಕೊಹ್ಲಿ ಅಸಮಾಧಾನ
ಮೊಹಮ್ಮದ್​ ಸಿರಾಜ್​ ಆಕ್ಷನ್​ ಕಣಕ್ಕೆ ಬರ್ತಾರೆ ಅನ್ನೋದನ್ನ ಯಾರೂ ನಿರೀಕ್ಷೆನೇ ಮಾಡಿರಲಿಲ್ಲ. ರಿಟೈನ್​ ಮಾಡಿಕೊಳ್ಳುವಲ್ಲಿ ಎಡವಿದ ಆರ್​​ಸಿಬಿ, ಆಕ್ಷನ್​​ನಲ್ಲೂ ಖರೀದಿಸೋ ಗೋಜಿಗೆ ಹೋಗಲಿಲ್ಲ. ಕನಿಷ್ಠ ಒಂದು ಬಾರಿ ಕೂಡ ಬಿಡ್​ ಮಾಡಲಿಲ್ಲ. 3 RTM​ ಅವಕಾಶವಿದ್ರೂ, ಮ್ಯಾನೇಜ್​ಮೆಂಟ್​ ಸೈಲೆಂಟ್​ ಆಗಿ ಕುಳಿತುಬಿಟ್ಟಿತು. 2017ರಿಂದ ಆರ್​​ಸಿಬಿಯ ಭಾಗವಾಗಿದ್ದ ಸಿರಾಜ್​ನ ಬಿಟ್ಟುಕೊಟ್ಟಿದ್ದು, ಕೊಹ್ಲಿಗೆ ಬೇಸರ ತರಿಸಿದೆ.
ತಂಡದ ಬ್ಯಾಕ್​ಬೋನ್​ ಆಗಿದ್ದ ಆಟಗಾರರನನ್ನ ಖರೀದಿಸಲು ಆರ್​​ಸಿಬಿ ಫ್ರಾಂಚೈಸಿ ಮುಂದಾಗಲೇ ಇಲ್ಲ. RTM​​ ಅವಕಾಶವಿದ್ರೂ ನೋ ಎಂದ ಮ್ಯಾನೇಜ್​ಮೆಂಟ್​​ ಅತ್ಯುತ್ತಮ ಆಟಗಾರನನ್ನ ಉದಾರವಾಗಿ ಮುಂಬೈಗೆ ದಾನ ಮಾಡ್ತು. ಇದ್ರಿಂದ ಫ್ಯಾನ್ಸ್​ಗೆ ಆದ ನೋವು, ಬೇಸರ ಅಷ್ಟಿಷ್ಟಲ್ಲ. ಅಭಿಮಾನಿಗಳಿಗೆ ಮಾತ್ರವಲ್ಲ.. ಕಿಂಗ್​ ಕೊಹ್ಲಿಗೂ ಕೂಡ ವಿಲ್​ ಜಾಕ್ಸ್​​ ಬಿಟ್ಟು ಕೊಟ್ಟಿದ್ದು ಬೇಸರ ತರಿಸಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: IPL ಮೆಗಾ ಹರಾಜು; ಆರ್​​ಸಿಬಿಯಿಂದ ಕೊಹ್ಲಿ ಆಪ್ತನ ಕೈ ಬಿಡಲು ಕಾರಣವೇನು?
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ