ಟೀಮ್ ಇಂಡಿಯಾ ಇಬ್ಭಾಗವಾಗೋ ಭಯ ಕಾಡಿತ್ತಾ ಬಿಸಿಸಿಐಗೆ.?
3 ಬಾರಿ ಐಪಿಎಲ್ ವೇಳೆ ಇಬ್ಬರೂ ಆನ್ಫೀಲ್ಡ್ನಲ್ಲೇ ಕಿತ್ತಾಡಿದ್ದರು
ಆ ಒಂದೇ ಒಂದು ಸಭೆಯಲ್ಲಿ ಇಬ್ಬರ ನಡುವೆ ನಡೆದ ಚರ್ಚೆ ಏನು?
ಶ್ರೀಲಂಕಾ ಎದುರಿನ ಪ್ರವಾಸಕ್ಕೆ ಟೀಮ್ ಅನೌನ್ಸ್ ಆಗೋದ್ರೊಂದಿಗೆ ಬಿಸಿಸಿಐ ಬಾಸ್ಗಳಿಗೆ ಬಿಗ್ ರಿಲೀಫ್ ಸಿಕ್ಕಿದೆ. ಕೋಚ್ ಗೌತಮ್ ಗಂಭೀರ್, ಕಿಂಗ್ ಕೊಹ್ಲಿ. ಈ ಇಬ್ಬರನ್ನ ಹೇಗಪ್ಪಾ ನಿಭಾಯಿಸೋದು ಅನ್ನೋ ಟೆನ್ಶನ್ ಇದೀಗ ದೂರವಾಗಿದೆ. ವೈಮನಸ್ಸು, ಮನಸ್ತಾಪಕ್ಕಿಂತ ದೇಶವೇ ಮುಖ್ಯ ಅನ್ನೋ ಸಂದೇಶವನ್ನ ಕಿಂಗ್ ಕೊಹ್ಲಿ ಸಾರಿದ್ದಾರೆ. ಆ ಒಂದು ಮೀಟಿಂಗ್ ಈ ಬದಲಾವಣೆ ಹಿಂದಿನ ಸೀಕ್ರೆಟ್. ಆ ಮಿಸ್ಟ್ರಿ ಮೀಟಿಂಗ್ನ ಕಥೆಯ ವಿವರ ಇಲ್ಲಿದೆ.
ಟೀಮ್ ಇಂಡಿಯಾ ಹೆಡ್ ಕೋಚ್ ಆಗಿ ಗಂಭೀರ್ ಆಯ್ಕೆಗೂ ಮುನ್ನವೇ ಬಿಸಿಸಿಐ ವಲಯದಲ್ಲಿ ತೀವ್ರ ಆತಂಕ ಕಾಡಿತ್ತು. ಸ್ವಲ್ಪ ಯಡವಟ್ಟಾದ್ರೂ, ಡ್ರೆಸ್ಸಿಂಗ್ ರೂಮ್ ವಾತಾವರಣ ಹಾಳಾಗುವ ಆತಂಕ ಶುರುವಾಗಿತ್ತು. ಜೂನಿಯರ್ಸ್, ಸೀನಿಯರ್ಸ್ ಎನ್ನದೇ ಒಗ್ಗಟ್ಟಿನ ಸಂದೇಶ ಸಾರ್ತಿರೋ ಟೀಮ್ ಇಂಡಿಯಾ ಇಬ್ಭಾಗವಾಗೋ ಭಯ ಕಾಡಿತ್ತು. ಗೌತಮ್ ಗಂಭೀರ್ -ವಿರಾಟ್ ಕೊಹ್ಲಿ ನಡುವೆ ಇದ್ದ ವೈಮನಸ್ಸು ಇದಕ್ಕೆಲ್ಲ ಕಾರಣವಾಗಿತ್ತು.
ಒಂದಲ್ಲ.. ಮೂರು ಬಾರಿ ಆನ್ಫೀಲ್ಡ್ನಲ್ಲೇ ಕಿತ್ತಾಟ.!
ಗೌತಮ್ ಗಂಭೀರ್ -ವಿರಾಟ್ ಕೊಹ್ಲಿ ಆರಂಭದಲ್ಲಿ ಭಾಯಿ- ಭಾಯಿಯಾಗೇ ಇದ್ರು. ಆದ್ರೆ, ಐಪಿಎಲ್ನಲ್ಲಿ ಮೇಲಿಂದ ಮೇಲೆ ನಡೆದ ಘಟನೆಗಳು ಇಬ್ಬರ ನಡುವೆ ಬಿಕ್ಕಟ್ಟು ಸೃಷ್ಟಿ ಮಾಡಿತ್ತು. ಒಂದಲ್ಲ.. ಎರಡಲ್ಲ.. ಬರೋಬ್ಬರಿ 3 ಬಾರಿ ಐಪಿಎಲ್ ವೇಳೆ ಇಬ್ಬರೂ ಆನ್ಫೀಲ್ಡ್ನಲ್ಲೇ ಕಿತ್ತಾಡಿಕೊಂಡಿದ್ರು. ಇಬ್ಬರ ನಡುವಿನ ಜಗಳ ಹೊಡೆದಾಡೋ ಮಟ್ಟಕ್ಕೆ ತಾರಕಕ್ಕೇರಿದ್ದೂ ಇದೇ. ಅಕ್ಷರಶಃ.. ಇಬ್ಬರು ಹಾವು-ಮುಂಗುಸಿ ತರ ಕಿತ್ತಾಡಿದ್ರು.
ಈ ಕಿತ್ತಾಟಗಳ ಕಾರಣದಿಂದಲೇ ಗೌತಮ್ ಗಂಭೀರ್ನ ಕೋಚ್ ಆಗಿ ನೇಮಿಸೋ ಮುಂಚೆ ಬಿಸಿಸಿಐ ವಲಯದಲ್ಲಿ ಆತಂಕ ಕಾಡಿತ್ತು. ಕ್ರಿಕೆಟ್ ಫ್ಯಾನ್ಸ್ ಈ ಬಗ್ಗೆ ಪ್ರಶ್ನೆ ಎತ್ತಿದ್ರು. ಇದೀಗ ಗೌತಮ್ ಗಂಭೀರ್ ಹೆಡ್ ಕೋಚ್ ಆಗಿ ಆಯ್ಕೆಯಾಗಿದ್ದಾಗಿದೆ. ಲಂಕಾ ಸರಣಿಯಿಂದ ರೆಸ್ಟ್ ಬೇಕು ಎಂದಿದ್ದ ಕೊಹ್ಲಿಯನ್ನ ಕೂಡ ತಂಡಕ್ಕೆ ಮಾಡಿದ್ದಾಗಿದೆ. ಆತಂಕವೆಲ್ಲ ದೂರವಾಗಿ ಬಿಸಿಸಿಐ ಬಾಸ್ಗಳು ನಿರಾಳರಾದಂತೆ ಕಾಣ್ತಿದ್ದಾರೆ. ಇದಕ್ಕೆಲ್ಲ ಕಾರಣ ಆ ಒಂದು ಮೀಟಿಂಗ್.
ಒಂದು ಮೀಟಿಂಗ್.. ಆಂತರಿಕ ಕಲಹಕ್ಕೆ ಫುಲ್ಸ್ಟಾಫ್.!
ಟೀಮ್ ಇಂಡಿಯಾ ಬಾರ್ಬೊಡಸ್ನಲ್ಲಿ ವಿಶ್ವಕಪ್ ಗೆಲ್ಲೊದ್ರಿಂದಿಗೆ ರಾಹುಲ್ ದ್ರಾವಿಡ್ ಅಧಿಕಾರವಧಿ ಅಂತ್ಯ ಕಾಣ್ತು. ಅದ್ರ ಬೆನ್ನಲ್ಲೇ, ಅದೇ ಬಾರ್ಬೊಡಸ್ನಲ್ಲಿ ಒಂದು ಹೈವೋಲ್ಟೆಜ್ ಸಭೆ ನಡೀತು. ಬಿಸಿಸಿಐ ಸೆಕ್ರೆಟರಿ ಜಯ್ ಶಾ ಸೇರಿದಂತೆ ಬಿಸಿಸಿಐನ ಪ್ರಮುಖರು ಹಾಗೂ ಕೊಹ್ಲಿ ನಡುವೆ ನಡೆದ ಸಭೆ ಅದಾಗಿತ್ತು. ಆ ಸಭೆಯಲ್ಲೇ ನಡೆದಿದ್ದು ಗೌತಮ್ ಗಂಭೀರ್ ಆಯ್ಕೆ ಬಗೆಗಿನ ಚರ್ಚೆ.
ದೇಶಕ್ಕಾಗಿ ವೈಮನಸ್ಸು ದೂರ ಮಾಡಿದ ವಿರಾಟ್ ಕೊಹ್ಲಿ
ಬಾರ್ಬೊಡಸ್ನಲ್ಲೇ ಹೆಡ್ ಕೋಚ್ ಸ್ಥಾನಕ್ಕೆ ಗೌತಮ್ ಗಂಭೀರ್ ನೇಮಕದ ಬಗ್ಗೆ ಬಿಸಿಸಿಐ ಬಾಸ್ಗಳು ಕೊಹ್ಲಿ ಜೊತೆಗೆ ಚರ್ಚೆಸಿದ್ರಂತೆ. ಇಬ್ಬರ ನಡುವಿನ ವೈಮನಸ್ಸು ತಂಡದ ವಾತಾವರಣ ಹಾಳು ಮಾಡಬಾರದು ಅನ್ನೋದು ಆ ಸಭೆಯ ಉದ್ದೇಶವಾಗಿತ್ತು. ಅಲ್ಲಿ ಮಾತನಾಡಿದ್ದ ಕೊಹ್ಲಿ, ನಮ್ಮಿಬ್ಬರ ನಡುವಿನ ವೈಯಕ್ತಿಕ ಘಟನೆಗಳು ತಂಡಕ್ಕೆ ಯಾವುದೇ ರೀತಿಯಲ್ಲಿ ಸಮಸ್ಯೆ ಉಂಟು ಮಾಡಲ್ಲ. ದೇಶದ ಹಿತವೇ ಮುಖ್ಯ, ತಂಡಕ್ಕಾಗಿ ಈ ಹಿಂದಿನ ವೈಮನಸ್ಸನ್ನ ದೂರ ಮಾಡಲು ಸಿದ್ಧ ಎಂದು ಹೇಳಿದ್ರಂತೆ. ಕೊಹ್ಲಿ ಕಾಂಪ್ರಮೈಸ್ ಆಗೋ ಮಾತು ಆಡಿದ ಮೇಲೆ ಗಂಭೀರ್ ಮುಂದಿನ ಹೆಡ್ ಕೋಚ್ ಅನ್ನೋ ಅಫಿಶೀಯಲ್ ಅನೌನ್ಸ್ಮೆಂಟ್ ಆಗಿದ್ದು.
ಕೊಟ್ಟ ಮಾತಿನಂತೆ ನಡೆದುಕೊಂಡ ಕೊಹ್ಲಿ.!
ಮೀಟಿಂಗ್ನಲ್ಲಿ ದೇಶದ ಹಿತವೇ ಮುಖ್ಯ ಎಂದು ಹೇಳಿದ ಮಾತಿನಂತೆ ಇದೀಗ ಕೊಹ್ಲಿ ನಡೆದುಕೊಂಡಿದ್ದಾರೆ. ಶ್ರೀಲಂಕಾ ಪ್ರವಾಸದ ಏಕದಿನ ಸರಣಿಯಿಂದ ವಿರಾಟ್ ಕೊಹ್ಲಿ ವಿಶ್ರಾಂತಿ ಬಯಸಿದ್ರು. ಆದ್ರೆ, ನಯಾ ಕೋಚ್ ಗಂಭೀರ್ ಚಾಂಪಿಯನ್ಸ್ ಟ್ರೋಫಿಗೆ ಸಿದ್ಧತೆಯ ದೃಷ್ಟಿಯಿಂದ ವಿಶ್ರಾಂತಿ ನೀಡೋಕೆ ಸಾಧ್ಯವಿಲ್ಲ ಅಂತಾ ಹೇಳಿದ್ರು. ಗಂಭೀರ್ ಮಾತಿಗೆ ಒಪ್ಪಿಗೆ ಸೂಚಿಸಿರೋ ಕೊಹ್ಲಿ ಏಕದಿನ ಸರಣಿಯಾಡಲು ಯೆಸ್ ಅಂದಿದ್ದಾರೆ.
ಕೊಟ್ಟ ಮಾತಿನಂತೆ ನಡೆದುಕೊಂಡಿರೋ ಕೊಹ್ಲಿ, ತಂಡದ ಆಯ್ಕೆ ವಿಚಾರದಲ್ಲಿ ಗಂಭೀರ್ ಮಾತಿಗೆ ಬೆಲೆ ಕೊಟ್ಟಿದ್ದಾರೆ. ತಂಡದ ಒಳತಿಗಾಗಿ ವೈಮನಸ್ಸು ತೊಡೆದು ಹಾಕಿ ಸಾಮರಸ್ಯದ ಸಂದೇಶ ಸಾರಿದ್ದಾರೆ. ಮುಂದೆಯು ಡೆಲ್ಲಿ ಬಾಯ್ಸ್ ನಡುವಿನ ಬಾಂಧವ್ಯ ಹೀಗೆ ಇರಲಿ ಅನ್ನೋದು ಫ್ಯಾನ್ಸ್ ಆಶಯವಾಗಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
ಟೀಮ್ ಇಂಡಿಯಾ ಇಬ್ಭಾಗವಾಗೋ ಭಯ ಕಾಡಿತ್ತಾ ಬಿಸಿಸಿಐಗೆ.?
3 ಬಾರಿ ಐಪಿಎಲ್ ವೇಳೆ ಇಬ್ಬರೂ ಆನ್ಫೀಲ್ಡ್ನಲ್ಲೇ ಕಿತ್ತಾಡಿದ್ದರು
ಆ ಒಂದೇ ಒಂದು ಸಭೆಯಲ್ಲಿ ಇಬ್ಬರ ನಡುವೆ ನಡೆದ ಚರ್ಚೆ ಏನು?
ಶ್ರೀಲಂಕಾ ಎದುರಿನ ಪ್ರವಾಸಕ್ಕೆ ಟೀಮ್ ಅನೌನ್ಸ್ ಆಗೋದ್ರೊಂದಿಗೆ ಬಿಸಿಸಿಐ ಬಾಸ್ಗಳಿಗೆ ಬಿಗ್ ರಿಲೀಫ್ ಸಿಕ್ಕಿದೆ. ಕೋಚ್ ಗೌತಮ್ ಗಂಭೀರ್, ಕಿಂಗ್ ಕೊಹ್ಲಿ. ಈ ಇಬ್ಬರನ್ನ ಹೇಗಪ್ಪಾ ನಿಭಾಯಿಸೋದು ಅನ್ನೋ ಟೆನ್ಶನ್ ಇದೀಗ ದೂರವಾಗಿದೆ. ವೈಮನಸ್ಸು, ಮನಸ್ತಾಪಕ್ಕಿಂತ ದೇಶವೇ ಮುಖ್ಯ ಅನ್ನೋ ಸಂದೇಶವನ್ನ ಕಿಂಗ್ ಕೊಹ್ಲಿ ಸಾರಿದ್ದಾರೆ. ಆ ಒಂದು ಮೀಟಿಂಗ್ ಈ ಬದಲಾವಣೆ ಹಿಂದಿನ ಸೀಕ್ರೆಟ್. ಆ ಮಿಸ್ಟ್ರಿ ಮೀಟಿಂಗ್ನ ಕಥೆಯ ವಿವರ ಇಲ್ಲಿದೆ.
ಟೀಮ್ ಇಂಡಿಯಾ ಹೆಡ್ ಕೋಚ್ ಆಗಿ ಗಂಭೀರ್ ಆಯ್ಕೆಗೂ ಮುನ್ನವೇ ಬಿಸಿಸಿಐ ವಲಯದಲ್ಲಿ ತೀವ್ರ ಆತಂಕ ಕಾಡಿತ್ತು. ಸ್ವಲ್ಪ ಯಡವಟ್ಟಾದ್ರೂ, ಡ್ರೆಸ್ಸಿಂಗ್ ರೂಮ್ ವಾತಾವರಣ ಹಾಳಾಗುವ ಆತಂಕ ಶುರುವಾಗಿತ್ತು. ಜೂನಿಯರ್ಸ್, ಸೀನಿಯರ್ಸ್ ಎನ್ನದೇ ಒಗ್ಗಟ್ಟಿನ ಸಂದೇಶ ಸಾರ್ತಿರೋ ಟೀಮ್ ಇಂಡಿಯಾ ಇಬ್ಭಾಗವಾಗೋ ಭಯ ಕಾಡಿತ್ತು. ಗೌತಮ್ ಗಂಭೀರ್ -ವಿರಾಟ್ ಕೊಹ್ಲಿ ನಡುವೆ ಇದ್ದ ವೈಮನಸ್ಸು ಇದಕ್ಕೆಲ್ಲ ಕಾರಣವಾಗಿತ್ತು.
ಒಂದಲ್ಲ.. ಮೂರು ಬಾರಿ ಆನ್ಫೀಲ್ಡ್ನಲ್ಲೇ ಕಿತ್ತಾಟ.!
ಗೌತಮ್ ಗಂಭೀರ್ -ವಿರಾಟ್ ಕೊಹ್ಲಿ ಆರಂಭದಲ್ಲಿ ಭಾಯಿ- ಭಾಯಿಯಾಗೇ ಇದ್ರು. ಆದ್ರೆ, ಐಪಿಎಲ್ನಲ್ಲಿ ಮೇಲಿಂದ ಮೇಲೆ ನಡೆದ ಘಟನೆಗಳು ಇಬ್ಬರ ನಡುವೆ ಬಿಕ್ಕಟ್ಟು ಸೃಷ್ಟಿ ಮಾಡಿತ್ತು. ಒಂದಲ್ಲ.. ಎರಡಲ್ಲ.. ಬರೋಬ್ಬರಿ 3 ಬಾರಿ ಐಪಿಎಲ್ ವೇಳೆ ಇಬ್ಬರೂ ಆನ್ಫೀಲ್ಡ್ನಲ್ಲೇ ಕಿತ್ತಾಡಿಕೊಂಡಿದ್ರು. ಇಬ್ಬರ ನಡುವಿನ ಜಗಳ ಹೊಡೆದಾಡೋ ಮಟ್ಟಕ್ಕೆ ತಾರಕಕ್ಕೇರಿದ್ದೂ ಇದೇ. ಅಕ್ಷರಶಃ.. ಇಬ್ಬರು ಹಾವು-ಮುಂಗುಸಿ ತರ ಕಿತ್ತಾಡಿದ್ರು.
ಈ ಕಿತ್ತಾಟಗಳ ಕಾರಣದಿಂದಲೇ ಗೌತಮ್ ಗಂಭೀರ್ನ ಕೋಚ್ ಆಗಿ ನೇಮಿಸೋ ಮುಂಚೆ ಬಿಸಿಸಿಐ ವಲಯದಲ್ಲಿ ಆತಂಕ ಕಾಡಿತ್ತು. ಕ್ರಿಕೆಟ್ ಫ್ಯಾನ್ಸ್ ಈ ಬಗ್ಗೆ ಪ್ರಶ್ನೆ ಎತ್ತಿದ್ರು. ಇದೀಗ ಗೌತಮ್ ಗಂಭೀರ್ ಹೆಡ್ ಕೋಚ್ ಆಗಿ ಆಯ್ಕೆಯಾಗಿದ್ದಾಗಿದೆ. ಲಂಕಾ ಸರಣಿಯಿಂದ ರೆಸ್ಟ್ ಬೇಕು ಎಂದಿದ್ದ ಕೊಹ್ಲಿಯನ್ನ ಕೂಡ ತಂಡಕ್ಕೆ ಮಾಡಿದ್ದಾಗಿದೆ. ಆತಂಕವೆಲ್ಲ ದೂರವಾಗಿ ಬಿಸಿಸಿಐ ಬಾಸ್ಗಳು ನಿರಾಳರಾದಂತೆ ಕಾಣ್ತಿದ್ದಾರೆ. ಇದಕ್ಕೆಲ್ಲ ಕಾರಣ ಆ ಒಂದು ಮೀಟಿಂಗ್.
ಒಂದು ಮೀಟಿಂಗ್.. ಆಂತರಿಕ ಕಲಹಕ್ಕೆ ಫುಲ್ಸ್ಟಾಫ್.!
ಟೀಮ್ ಇಂಡಿಯಾ ಬಾರ್ಬೊಡಸ್ನಲ್ಲಿ ವಿಶ್ವಕಪ್ ಗೆಲ್ಲೊದ್ರಿಂದಿಗೆ ರಾಹುಲ್ ದ್ರಾವಿಡ್ ಅಧಿಕಾರವಧಿ ಅಂತ್ಯ ಕಾಣ್ತು. ಅದ್ರ ಬೆನ್ನಲ್ಲೇ, ಅದೇ ಬಾರ್ಬೊಡಸ್ನಲ್ಲಿ ಒಂದು ಹೈವೋಲ್ಟೆಜ್ ಸಭೆ ನಡೀತು. ಬಿಸಿಸಿಐ ಸೆಕ್ರೆಟರಿ ಜಯ್ ಶಾ ಸೇರಿದಂತೆ ಬಿಸಿಸಿಐನ ಪ್ರಮುಖರು ಹಾಗೂ ಕೊಹ್ಲಿ ನಡುವೆ ನಡೆದ ಸಭೆ ಅದಾಗಿತ್ತು. ಆ ಸಭೆಯಲ್ಲೇ ನಡೆದಿದ್ದು ಗೌತಮ್ ಗಂಭೀರ್ ಆಯ್ಕೆ ಬಗೆಗಿನ ಚರ್ಚೆ.
ದೇಶಕ್ಕಾಗಿ ವೈಮನಸ್ಸು ದೂರ ಮಾಡಿದ ವಿರಾಟ್ ಕೊಹ್ಲಿ
ಬಾರ್ಬೊಡಸ್ನಲ್ಲೇ ಹೆಡ್ ಕೋಚ್ ಸ್ಥಾನಕ್ಕೆ ಗೌತಮ್ ಗಂಭೀರ್ ನೇಮಕದ ಬಗ್ಗೆ ಬಿಸಿಸಿಐ ಬಾಸ್ಗಳು ಕೊಹ್ಲಿ ಜೊತೆಗೆ ಚರ್ಚೆಸಿದ್ರಂತೆ. ಇಬ್ಬರ ನಡುವಿನ ವೈಮನಸ್ಸು ತಂಡದ ವಾತಾವರಣ ಹಾಳು ಮಾಡಬಾರದು ಅನ್ನೋದು ಆ ಸಭೆಯ ಉದ್ದೇಶವಾಗಿತ್ತು. ಅಲ್ಲಿ ಮಾತನಾಡಿದ್ದ ಕೊಹ್ಲಿ, ನಮ್ಮಿಬ್ಬರ ನಡುವಿನ ವೈಯಕ್ತಿಕ ಘಟನೆಗಳು ತಂಡಕ್ಕೆ ಯಾವುದೇ ರೀತಿಯಲ್ಲಿ ಸಮಸ್ಯೆ ಉಂಟು ಮಾಡಲ್ಲ. ದೇಶದ ಹಿತವೇ ಮುಖ್ಯ, ತಂಡಕ್ಕಾಗಿ ಈ ಹಿಂದಿನ ವೈಮನಸ್ಸನ್ನ ದೂರ ಮಾಡಲು ಸಿದ್ಧ ಎಂದು ಹೇಳಿದ್ರಂತೆ. ಕೊಹ್ಲಿ ಕಾಂಪ್ರಮೈಸ್ ಆಗೋ ಮಾತು ಆಡಿದ ಮೇಲೆ ಗಂಭೀರ್ ಮುಂದಿನ ಹೆಡ್ ಕೋಚ್ ಅನ್ನೋ ಅಫಿಶೀಯಲ್ ಅನೌನ್ಸ್ಮೆಂಟ್ ಆಗಿದ್ದು.
ಕೊಟ್ಟ ಮಾತಿನಂತೆ ನಡೆದುಕೊಂಡ ಕೊಹ್ಲಿ.!
ಮೀಟಿಂಗ್ನಲ್ಲಿ ದೇಶದ ಹಿತವೇ ಮುಖ್ಯ ಎಂದು ಹೇಳಿದ ಮಾತಿನಂತೆ ಇದೀಗ ಕೊಹ್ಲಿ ನಡೆದುಕೊಂಡಿದ್ದಾರೆ. ಶ್ರೀಲಂಕಾ ಪ್ರವಾಸದ ಏಕದಿನ ಸರಣಿಯಿಂದ ವಿರಾಟ್ ಕೊಹ್ಲಿ ವಿಶ್ರಾಂತಿ ಬಯಸಿದ್ರು. ಆದ್ರೆ, ನಯಾ ಕೋಚ್ ಗಂಭೀರ್ ಚಾಂಪಿಯನ್ಸ್ ಟ್ರೋಫಿಗೆ ಸಿದ್ಧತೆಯ ದೃಷ್ಟಿಯಿಂದ ವಿಶ್ರಾಂತಿ ನೀಡೋಕೆ ಸಾಧ್ಯವಿಲ್ಲ ಅಂತಾ ಹೇಳಿದ್ರು. ಗಂಭೀರ್ ಮಾತಿಗೆ ಒಪ್ಪಿಗೆ ಸೂಚಿಸಿರೋ ಕೊಹ್ಲಿ ಏಕದಿನ ಸರಣಿಯಾಡಲು ಯೆಸ್ ಅಂದಿದ್ದಾರೆ.
ಕೊಟ್ಟ ಮಾತಿನಂತೆ ನಡೆದುಕೊಂಡಿರೋ ಕೊಹ್ಲಿ, ತಂಡದ ಆಯ್ಕೆ ವಿಚಾರದಲ್ಲಿ ಗಂಭೀರ್ ಮಾತಿಗೆ ಬೆಲೆ ಕೊಟ್ಟಿದ್ದಾರೆ. ತಂಡದ ಒಳತಿಗಾಗಿ ವೈಮನಸ್ಸು ತೊಡೆದು ಹಾಕಿ ಸಾಮರಸ್ಯದ ಸಂದೇಶ ಸಾರಿದ್ದಾರೆ. ಮುಂದೆಯು ಡೆಲ್ಲಿ ಬಾಯ್ಸ್ ನಡುವಿನ ಬಾಂಧವ್ಯ ಹೀಗೆ ಇರಲಿ ಅನ್ನೋದು ಫ್ಯಾನ್ಸ್ ಆಶಯವಾಗಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ