/newsfirstlive-kannada/media/post_attachments/wp-content/uploads/2023/06/Test-Team-India-1.jpg)
ಬಾಂಗ್ಲಾ ಎದುರಿನ ಮೊದಲ ಟೆಸ್ಟ್ ಪಂದ್ಯಕ್ಕೆ ಟೀಮ್ ಇಂಡಿಯಾ ಪ್ರಕಟವಾಗಿದೆ. ನಿರೀಕ್ಷೆಯಂತೆ ಕೆಲ ಆಟಗಾರರು ಸ್ಥಾನ ಪಡೆದ್ರೆ, ಕೆಲ ಆಟಗಾರರಿಗೆ ಜಾಕ್​ಪಾಟ್​ ಹೊಡೆದಿದೆ. ಅಷ್ಟೇ ಅಲ್ಲ ದುಲೀಪ್ ಟ್ರೋಫಿಯಲ್ಲಿ ಇಂಪ್ರೆಸ್ಸಿಂಗ್ ಪರ್ಫಾಮೆನ್ಸ್​ ನೀಡಿದ್ರು ಕನ್ನಡಿಗ ಪಡಿಕ್ಕಲ್​ಗೆ ಗೇಟ್​ಪಾಸ್​ ನೀಡಲಾಗಿತ್ತು. ಈಗ ದೇವದತ್​​ ಪಡಿಕ್ಕಲ್​ಗೆ ಗುಡ್​ನ್ಯೂಸ್​ ಒಂದಿದೆ.
2ನೇ ಟೆಸ್ಟ್​​​ ಪಂದ್ಯದಲ್ಲಿ ಅವಕಾಶ ಸಿಗುವ ಸಾಧ್ಯತೆ!
ವಿರಾಟ್​ ಕೊಹ್ಲಿ ಆಪ್ತ ಪಡಿಕ್ಕಲ್​ಗೆ 2ನೇ ಟೆಸ್ಟ್​ ಪಂದ್ಯದಲ್ಲಿ ಮಣೆ ಹಾಕುವ ಸಾಧ್ಯತೆ ಇದೆ. ಒಂದು ವೇಳೆ ಮೊದಲ ಪಂದ್ಯದಲ್ಲಿ ಟಾಪ್​ ಆರ್ಡರ್​ ಬ್ಯಾಟರ್ಸ್​​ ವಿಫಲರಾದ್ರೆ, ದುಲೀಪ್​ ಟ್ರೋಫಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿರೋ ದೇವದತ್​ಗೆ ಅವಕಾಶ ಸಿಗಲಿದೆ ಎಂದು ತಿಳಿದು ಬಂದಿದೆ.
/newsfirstlive-kannada/media/post_attachments/wp-content/uploads/2024/09/Devdutt-Padikkal.jpg)
ಸದ್ಯ ಅನಂತಪುರ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ಇಂಡಿಯಾ ಎ ಮತ್ತು ಇಂಡಿಯಾ ಡಿ ಮಧ್ಯೆ ಮಹತ್ವದ ಪಂದ್ಯ ನಡೆಯುತ್ತಿದೆ. ಇದು ದುಲೀಪ್​​ ಟ್ರೋಫಿ ಟೂರ್ನಿಯಲ್ಲೇ ಮಹತ್ವದ ಪಂದ್ಯ ಆಗಿದ್ದು, ಇಂಡಿಯಾ ಡಿ ಪರ ಕನ್ನಡಿಗ ದೇವದತ್​​ ಪಡಿಕ್ಕಲ್​​ ಮಿಂಚಿದ್ದಾರೆ.
ಪಡಿಕ್ಕಲ್​​ ಇಂಪ್ರೆಸ್ಸಿವ್​ ಬ್ಯಾಟಿಂಗ್​​​​
ಮಹತ್ವದ ಪಂದ್ಯದ ಮೊದಲ ಇನ್ನಿಂಗ್ಸ್​ನಲ್ಲಿ ಬ್ಯಾಕ್​ ಟು ಬ್ಯಾಕ್​ ವಿಕೆಟ್​​​ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಇಂಡಿಯಾ ಡಿ ತಂಡಕ್ಕೆ ಪಡಿಕ್ಕಲ್​ ಆಸರೆಯಾದ್ರು. ಕೊನೆವರೆಗೂ ಕ್ರೀಸ್​ನಲ್ಲೇ ನಿಂತು ತಾಳ್ಮೆಯ ಬ್ಯಾಟಿಂಗ್​ ಮಾಡಿದ್ರು.
ಇಂಡಿಯಾ ಎ ಬೌಲರ್​ಗಳ ಬೆಂಡೆತ್ತಿದ ಟೀಮ್​ ಇಂಡಿಯಾದ ಯುವ ಬ್ಯಾಟರ್​​​ ಪಡಿಕ್ಕಲ್​ 124 ಬಾಲ್​ನಲ್ಲಿ 92 ರನ್​ ಚಚ್ಚಿ ಶತಕ ವಂಚಿತರಾದ್ರು. ಬರೋಬ್ಬರಿ 15 ಫೋರ್​ ಸಿಡಿಸಿದ್ರು. ಇವರ ಬ್ಯಾಟಿಂಗ್​ ಸ್ಟ್ರೈಕ್​​ ರೇಟ್​​ 75ಕ್ಕೂ ಹೆಚ್ಚಿತ್ತು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us