/newsfirstlive-kannada/media/post_attachments/wp-content/uploads/2024/05/Virat-Kohli-RCB.jpg)
ವಿರಾಟ್ ಕೊಹ್ಲಿ ಆರ್ಸಿಬಿ ತಂಡಕ್ಕೆ ಮತ್ತೆ ಕ್ಯಾಪ್ಟನ್ ಆಗುತ್ತಾರೆ ಅಂತಾ ಚರ್ಚೆ ಆಗಿತ್ತು. ಕೊನೆಯಲ್ಲಿ ಫ್ರಾಂಚೈಸಿ ರಜತ್ ಪಾಟಿದಾರ್ಗೆ ನಾಯಕತ್ವ ಪಟ್ಟ ಕಟ್ಟಿದೆ. ಬೆನ್ನಲ್ಲೇ ಯಾಕೆ ವಿರಾಟ್ ಕೊಹ್ಲಿ ನಾಯಕತ್ವದ ಜವಾಬ್ದಾರಿ ತೆಗೆದುಕೊಳ್ಳಲಿಲ್ಲ ಎಂಬ ಪ್ರಶ್ನೆ ಇನ್ನೂ ಇದೆ. ಇದೀಗ ಆರ್ಸಿಬಿ ವಿಕೆಟ್ ಕೀಪರ್ ಜಿತೇಶ್ ಶರ್ಮಾ, ಕೊಹ್ಲಿ ಕ್ಯಾಪ್ಟನ್ ಆಗದಿರುವ ಬಗ್ಗೆ ಮಾತನ್ನಾಡಿದ್ದಾರೆ.
ರಜತ್ ಪಾಟೀದಾರ್ ಆರ್ಸಿಬಿ ಕ್ಯಾಪ್ಟನ್ ಆಗುತ್ತಾರೆ ಅಂತಾ ಎಲ್ಲರಿಗೂ ಗೊತ್ತಾದಾಗಲೇ ನನಗೂ ಗೊತ್ತಾಯ್ತು. ಕೆಲವು ವಿಚಾರಗಳು ಅದರಲ್ಲಿ ಭಾಗಿಯಾದಗ ಮಾತ್ರ ಅರ್ಥ ಆಗುತ್ತವೆ. ವಿರಾಟ್ ಭಾಯ್, ಕ್ಯಾಪ್ಟನ್ ಆಗಲು ಬಯಸಲಿಲ್ಲ. ಅವರು ಯಾಕೆ ಕ್ಯಾಪ್ಟನ್ ಆಗಲು ಇಷ್ಟಪಟ್ಟಿಲ್ಲ ಅಂತಾ ನಂಗೆ ಗೊತ್ತಿಲ್ಲ. ತಂಡದ ಮ್ಯಾನೇಜ್ಮೆಂಟ್ನಲ್ಲಿ ನಾನಿಲ್ಲ. ಇದ್ದಿದ್ದರೆ ಹೇಳುತ್ತಿದ್ದೆ. ಕಳೆದ ಎರಡ್ಮೂರು ವರ್ಷಗಳಿಂದ ಅವರು ನಾಯಕತ್ವವನ್ನು ನಿಭಾಯಿಸಿಲ್ಲ. ಹೀಗಾಗಿ ಕ್ಯಾಪ್ಟನ್ಸಿ ಜವಾಬ್ದಾರಿ ಒಪ್ಪಿಕೊಳ್ಳಲು ನಿರಾಕರಿಸಿರಬಹುದು. ನನ್ನ ಪ್ರಕಾರ ರಜತ್ ಪಾಟೀದಾರ್ ಒಳ್ಳೆಯ ಆಯ್ಕೆ
ಇದನ್ನೂ ಓದಿ: ಪುನೀತ್ ರಾಜ್ಕುಮಾರ್ ಹುಟ್ಟು ಹಬ್ಬಕ್ಕೆ ಅಭಿಮಾನಿಗಳಿಗೆ ಗಿಫ್ಟ್… ಅಪ್ಪು ಸಿನಿಮಾ ಮರುಬಿಡುಗಡೆ.. ಅಭಿಮಾನಿಗಳಿಗೆ ಹಬ್ಬ
ರಜತ್ ಪಾಟೀದಾರ್ ಕ್ಯಾಪ್ಟನ್ಸಿಗೆ ಅರ್ಹರಿದ್ದಾರೆ. ಆರ್ಸಿಬಿಯಲ್ಲಿ ಹಲವು ವರ್ಷಗಳಿಂದ ಆಡ್ತಿದ್ದಾರೆ. ನಾನು ರಜತ್ ಜೊತೆ ತುಂಬಾ ಕ್ರಿಕೆಟ್ ಆಡಿದ್ದೇನೆ. ಕ್ಯಾಪ್ಟನ್ಸಿ ವಿಚಾರದಲ್ಲಿ ರಜತ್ಗೆ ಬೆಂಬಲ ನೀಡುತ್ತೇನೆ ಎಂದು ಜಿತೇಶ್ ಶರ್ಮಾ ಹೇಳಿದ್ದಾರೆ. ದಿನೇಶ್ ಕಾರ್ತಿಕ್ ನಿವೃತ್ತಿ ಹಿನ್ನೆಲೆಯಲ್ಲಿ ಆರ್ಸಿಬಿ DK ಉತ್ತರಾಧಿಕಾರಿಯಾಗಿ ಜಿತೇಶ್ ಶರ್ಮಾರನ್ನು ಕರೆದುಕೊಂಡು ಬಂದಿದೆ. ಮೆಗಾ ಹರಾಜಿನಲ್ಲಿ ಜಿತೇಶ್ ಶರ್ಮಾಗೆ ಬರೋಬ್ಬರಿ 11 ಕೋಟಿ ರೂಪಾಯಿ ನೀಡಿದೆ. ಕಳೆದ ಐಪಿಎಲ್ ಸೀಸನ್ನಲ್ಲಿ ಜಿತೇಶ್ ಶರ್ಮಾ ಪಂಜಾಬ್ ಕಿಂಗ್ಸ್ ಪರ ಆಡುತ್ತಿದ್ದರು.
ಇದನ್ನೂ ಓದಿ: Masters League T20 ಗೆದ್ದ ಸಚಿನ್ ನೇತೃತ್ವದ ಇಂಡಿಯಾ ಮಾಸ್ಟರ್ಸ್.. 1 ಕೋಟಿ ರೂಪಾಯಿ ಬಹುಮಾನ
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್