ಚಿನ್ನಸ್ವಾಮಿಯಲ್ಲಿ RCB ಫ್ಯಾನ್ಸ್​ ನೋಡಿ ವಿರಾಟ್ ಕೊಹ್ಲಿ ಭಾವುಕ.. ಬಿಳಿ ಜೆರ್ಸಿಯೇ ಕಾರಣನಾ?

author-image
Bheemappa
Updated On
ಚಿನ್ನಸ್ವಾಮಿಯಲ್ಲಿ RCB ಫ್ಯಾನ್ಸ್​ ನೋಡಿ ವಿರಾಟ್ ಕೊಹ್ಲಿ ಭಾವುಕ.. ಬಿಳಿ ಜೆರ್ಸಿಯೇ ಕಾರಣನಾ?
Advertisment
  • ಕೆಂಪಾಗಿರುತ್ತಿದ್ದ ಚಿನ್ನಸ್ವಾಮಿ ಸ್ಟೇಡಿಯಂ ಶ್ವೇತಮಯ ಆಗಿತ್ತು
  • ಆರ್​ಸಿಬಿ ಪಂದ್ಯವನ್ನ ಆಡುವುದಕ್ಕೆ ಬಿಡಲಿಲ್ಲ ವರುಣರಾಯ
  • ಸ್ಟೇಡಿಯಂನಲ್ಲಿ ಎಲ್ಲಿ ನೋಡಿದರೂ ಬಿಳಿ ಜೆರ್ಸಿ ಕಾಣುತ್ತಿತ್ತು

ರಾಯಲ್ ಚಾಲೆಂಜರ್ಸ್​ ಬೆಂಗಳೂರು ಹಾಗೂ ಕೋಲ್ಕತ್ತಾ ನೈಟ್​ ರೈಡರ್ಸ್​ ನಡುವಿನ ಐಪಿಎಲ್ ಪಂದ್ಯ ಮಳೆಯಿಂದ ರದ್ದು ಆಯಿತು. ಟಾಸ್ ಹಾಕುವುದಕ್ಕೂ ಅವಕಾಶ ಕೊಡದ ವರುಣರಾಯ ಪಂದ್ಯವನ್ನು ಆಡದಂತೆ ಮಾಡಿದ. ಈ ಪಂದ್ಯ ನೋಡಲೆಂದು ಬಂದಿದ್ದ ಸಾವಿರಾರು ಅಭಿಮಾನಿಗಳನ್ನು ನೋಡಿ ವಿರಾಟ್ ಕೊಹ್ಲಿ ಭಾವುಕರಾಗಿದ್ದಾರೆ ಎನ್ನಲಾಗಿದೆ.

publive-image

ವಿರಾಟ್ ಕೊಹ್ಲಿ ಅವರು ಇತ್ತೀಚೆಗಷ್ಟೇ ಭಾರತದ ಟೆಸ್ಟ್​ ಕ್ರಿಕೆಟ್​ಗೆ ನಿವೃತ್ತಿ ಘೋಷಣೆ ಮಾಡಿದ್ದರು. ಅಂತಿಮ ಪಂದ್ಯ ಇಲ್ಲದೇ ಟೆಸ್ಟ್​ಗೆ ಕೊಹ್ಲಿ ನಿವೃತ್ತಿ ಘೋಷಿಸಿದ್ದರು. ಇದರಿಂದ ಕೊಹ್ಲಿಗೆ ಗೌರವಯುತವಾದ ವಿದಾಯ ಸಿಕ್ಕಿರಲಿಲ್ಲ. ಇದು ಅಭಿಮಾನಿಗಳಲ್ಲಿ ಸಾಕಷ್ಟು ಬೇಸರ ಮೂಡಿಸಿತ್ತು. ಈ ಹಿನ್ನೆಲೆಯಲ್ಲಿ ವಿರಾಟ್ ಕೊಹ್ಲಿ ಅವರಿಗೆ ವಿಶೇಷ ಗೌರವ ಸೂಚಿಸಬೇಕು ಎಂದು ಆರ್​ಸಿಬಿ ಅಭಿಮಾನಿಗಳು ಪಂದ್ಯಕ್ಕೂ ಮೊದಲೇ ಪ್ಲಾನ್ ಮಾಡಿ ವೈಟ್​ ಜೆರ್ಸಿ ಧರಿಸಿಕೊಂಡು ಬಂದಿದ್ದರು.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳು ವಿರಾಟ್​ ಕೊಹ್ಲಿಗೆ ವಿಶೇಷ ಗೌರವ ಸೂಚಿಸಲು ಬಿಳಿ ಜೆರ್ಸಿ ಧರಿಸಿಕೊಂಡು ಆಗಮಿಸಿದ್ದರು. ಟೆಸ್ಟ್​ನಲ್ಲೂ ಕೊಹ್ಲಿಯನ್ನು ನಾವು ಎಷ್ಟು ಅಭಿಮಾನದಿಂದ ಕಾಣುತ್ತಿದ್ದೇವು ಎನ್ನುವುದನ್ನು ಫ್ಯಾನ್ಸ್​ ಸಾರಿ ಹೇಳಿದರು. ಮೈದಾನವೆಲ್ಲ ಶ್ವೇತಮಯ ಆಗಿತ್ತು.

ಇದನ್ನೂ ಓದಿ: ಕರ್ನಾಟಕದ ಈ ಜಿಲ್ಲೆಯಿಂದ ಪಾದಯಾತ್ರೆ.. ಕೇದಾರನಾಥ ತಲುಪಿದ 70 ವರ್ಷದ ವೃದ್ಧ

publive-image

ಎಂ ಚಿನ್ನಸ್ವಾಮಿ ಸ್ಟೇಡಿಯಂ ಯಾವಾಗಲೂ ಆರ್​ಸಿಬಿ ಪಂದ್ಯ ಇದ್ದಾಗ ಕೆಂಪು ಬಣ್ಣದಿಂದಲೇ ಕಲವರಿಸುತ್ತಿತ್ತು. ಆದರೆ ವಿರಾಟ್​ ಕೊಹ್ಲಿಗೆ ವಿಶೇಷವಾದ ಗೌರವ ಸೂಚಿಸಲೆಂದು ಆರ್​ಸಿಬಿ ಅಭಿಮಾನಿಗಳು ಎಲ್ಲ ಬಿಳಿ ಜೆರ್ಸಿ ತೊಟ್ಟು ಸ್ಟೇಡಿಯಂಗೆ ಆಗಮಿಸಿದ್ದರು. ಯಾವ ಕಡೆ ನೋಡಿದರು ವೈಟ್​ ಜೆರ್ಸಿಯೇ ಕಾಣುತ್ತಿತ್ತು. ಇದನ್ನು ಡೆಸ್ಸಿಂಗ್ ರೂಮ್​ನಿಂದಲೇ ನೋಡಿದ ವಿರಾಟ್ ಕೊಹ್ಲಿ ಅವರು ಭಾವುಕವಾದಂತೆ ಕಂಡಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment