ಹರಿಣಗಳನ್ನು ಬೇಟೆಯಾಡಿದ ಟೀಮ್ ಇಂಡಿಯನ್ ಟೈಗರ್ಸ್
ಕೊನೆಗೂ ಫಲಿಸಿತು ಕೋಟ್ಯಾನುಕೋಟಿ ಅಭಿಮಾನಿಗಳ ಪ್ರಾರ್ಥನೆ
ಕಪ್ ಗೆಲ್ಲಿಸಿ ನೇರವಾಗಿ ಪತ್ನಿ ರಿತಿಕಾ ಬಳಿ ತೆರಳಿದ ಹಿಟ್ಮ್ಯಾನ್
ಅಸಂಖ್ಯಾತ ಅಭಿಮಾನಿಗಳ ಪ್ರಾರ್ಥನೆ ಕೊನೆಗೂ ಫಲಿಸಿದೆ. ಐಸಿಸಿ ಇವೆಂಟ್ನಲ್ಲಿ ಕೊನೆಗೂ ಅದೃಷ್ಟ ಟೀಮ್ ಇಂಡಿಯಾದ ಕೈಹಿಡಿದಿದೆ. ICC ಟ್ರೊಫಿ ಗೆಲ್ಲಲಾಗದ ಕೊರಗಿಗೆ ಫುಲ್ ಸ್ಟಾಫ್ ಬಿದ್ದಿದೆ. ವೆಸ್ಟ್ ಇಂಡೀಸ್ನ ಬಾರ್ಬಡೋಸ್ನಲ್ಲಿ ಹರಿಣಗಳ ಬೇಟೆಯಾಡಿದ ಇಂಡಿಯನ್ ಟೈಗರ್ಸ್, ಚುಟುಕು ಚಾಂಪಿಯನ್ ಆಗಿದ್ದಾರೆ. ಇಷ್ಟೇ ಅಲ್ಲ, ಭರ್ಜರಿ ಸಂಭ್ರಮಾಚರಣೆಯನ್ನೂ ಮಾಡಿದ್ದಾರೆ.
ಪಂದ್ಯದ ಆರಂಭಕ್ಕೂ ಮುನ್ನ ಬಾರ್ಬಡೋಸ್ನಲ್ಲಿ ಪಂದ್ಯ ನಡೆಯುತ್ತಾ ಅನ್ನೋ ಡೌಟ್ ಕಾಡಿತ್ತು. ಆ ಬಳಿಕ ಭಾರತೀಯ ಅಭಿಮಾನಿಗಳನ್ನ ಟೀಮ್ ಇಂಡಿಯಾ ಗೆಲ್ಲುತ್ತ ಅನ್ನೋ ಅನುಮಾನ ಶುರುವಾಗಿತ್ತು. ಅಂತಿಮವಾಗಿ ಫಲಿಸಿದ್ದು ಕೋಟ್ಯಾನುಕೋಟಿ ಅಭಿಮಾನಿಗಳ ಪ್ರಾರ್ಥನೆ. ಬಾರ್ಬಡೋಸ್ನಲ್ಲಿ ಆಫ್ರಿಕನ್ಸ್ ಬೇಟೆಯಾಡಿದ ಟೀಮ್ ಇಂಡಿಯನ್ಸ್ ಟಿ20 ವಿಶ್ವಕಪ್ ಕಿರೀಟಕ್ಕೆ ಮುತ್ತಿಕ್ಕಿದ್ದಾರೆ.
ಬಿಕ್ಕಿಬಿಕ್ಕಿ ಕಣ್ಣೀರಿಟ್ಟ ಹಾರ್ದಿಕ್ ಪಾಂಡ್ಯ..!
ಪಂದ್ಯದಲ್ಲಿ ಕೊನೆಯ ಓವರ್ ಬೌಲಿಂಗ್ ಮಾಡಿದ ಹಾರ್ದಿಕ್ ಪಾಂಡ್ಯ ಟೀಮ್ ಇಂಡಿಯಾ ಗೆದ್ದಿದ್ದೇ ಗೆದ್ದಿದ್ದು ಬಿಕ್ಕಿಬಿಕ್ಕಿ ಕಣ್ಣೀರಿಟ್ರು.
ರೋಹಿತ್ಗೆ ಪತ್ನಿಯ ಪ್ರೀತಿಯ ಅಪ್ಪುಗೆ..!
ಕಪ್ ಗೆಲ್ಲಿಸಿ ಕೊಟ್ಟ ರೋಹಿತ್ ಶರ್ಮಾ ನೇರವಾಗಿ ತೆರಳಿದ್ದು ಪತ್ನಿ ರಿತಿಕಾ ಬಳಿ. ಅಂದು ಏಕದಿನ ವಿಶ್ವಕಪ್ ಸೋತಾಗ ಸಂತೈಸಿದ್ದ ಪತ್ನಿ ಬಳಿಕ ಸಂಭ್ರಮ ಹಂಚಿಕೊಂಡರು.
ವಿಡಿಯೋ ಕಾಲ್ ಮಾಡಿ ವಿರಾಟ್ ಭಾವುಕ.!
ಅಗ್ರೆಸ್ಸಿವ್ ಲುಕ್ ಸದಾ ಕಾಣಿಸಿಕೊಳ್ಳೋ ಕಿಂಗ್ ಕೊಹ್ಲಿಯ ಕಣ್ಣಂಚಲ್ಲೂ ನಿನ್ನೆ ನೀರು ಜಿನುಗಿದ್ವು. ಅಂದ್ಹಾಗೆ ಅದು ಕಣ್ಣೀರಲ್ಲ.. ಆನಂದ ಭಾಷ್ಪ.. T20 ವರ್ಲ್ಡ್ಕಪ್ ಗೆದ್ದ ಮೇಲೆ ದ್ರಾವಿಡ್ ನೋಡಿ ಎಲ್ಲರೂ ಶಾಕ್ ಆದರು. ಏಕೆಂದರೆ ಅಷ್ಟೊಂದು ಅಗ್ರೆಸ್ಸಿವ್ ಆಗಿ ರಾಹುಲ್ ದ್ರಾವಿಡ್ ಅವರು ಸಂಭ್ರಮಿಸಿರಲಿಲ್ಲ. ರೋಹಿತ್ ಬಳಗ ಕಪ್ ಗೆಲ್ಲುತ್ತಿದ್ದಂತೆ ದ್ರಾವಿಡ್ ಬಿಗ್ ಸೆಲೆಬ್ರೆಷನ್ ಮಾಡಿದರು. ಇದೇ ವೇಳೆ ಹೆಡ್ಮಾಸ್ಟರ್ನ, ತಂಡದ ಆಟಗಾರರೆಲ್ಲ ಎತ್ತಾಡಿದರು.
ಇದನ್ನೂ ಓದಿ: ವಿಶ್ವಕಪ್ ಗೆಲ್ಲಿಸಿಕೊಟ್ಟು ವಿದಾಯ.. 31 ತಿಂಗಳು, ಅಮೂಲಾಗ್ರ ಬದಲಾವಣೆ.. ಕನ್ನಡದ ಕಣ್ಮಣಿಗೆ ಬಿಗ್ ಸೆಲ್ಯೂಟ್..!
raw emotions of virat kohli 🥺❤️pic.twitter.com/3epMhWDEre
— rea (@reaadubey) June 29, 2024
ವಿಶ್ವಕಪ್ ಗೆಲುವಿನೊಂದಿಗೆ ರಾಹುಲ್ ದ್ರಾವಿಡ್ರ ಕೋಚ್ ಅವಧಿ ಕೂಡ ಅಂತ್ಯಕಂಡಿದೆ. ನಿರ್ಗಮಿಸ್ತಿರೋ ಹೆಡ್ ಮಾಸ್ಟರ್ಗೆ ಗೆಲುವಿನ ಉಡುಗೊರೆ ನೀಡಿರುವ ಕ್ರಿಕೆಟರ್ಸ್, ಮೈದಾನದಲ್ಲೇ ಎತ್ತಾಡಿಸಿ ವಿಶೇಷ ಗೌರವ ಸಲ್ಲಿಸಿದರು. ಟ್ರೋಫಿ ಕೈಗೆ ಸಿಕ್ಕ ಬಳಿಕ ಆಟಗಾರರ ಸಂತೋಷಕ್ಕೆ ಪಾರವೇ ಇರಲಿಲ್ಲ. ಮೈದಾನದಲ್ಲಿ ಸಖತ್ ಸ್ಟೆಪ್ಸ್ ಹಾಕಿ ಮಿಂಚಿದರು. ಆಟಗಾರರು ಮಾತ್ರವಲ್ಲ.. ಇಡೀ ಭಾರತವೇ ಸಂತಸದ ಕಡಲಲ್ಲಿ ಮುಳುಗಿದೆ. ಸಂಭ್ರಮದಲ್ಲಿ ತೇಲಾಡ್ತಿದೆ. ಒಂದು ಟ್ರೋಫಿ ಗೆಲುವು ಅಂತಾ ಹೆಮ್ಮೆ ತಂದಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
ಹರಿಣಗಳನ್ನು ಬೇಟೆಯಾಡಿದ ಟೀಮ್ ಇಂಡಿಯನ್ ಟೈಗರ್ಸ್
ಕೊನೆಗೂ ಫಲಿಸಿತು ಕೋಟ್ಯಾನುಕೋಟಿ ಅಭಿಮಾನಿಗಳ ಪ್ರಾರ್ಥನೆ
ಕಪ್ ಗೆಲ್ಲಿಸಿ ನೇರವಾಗಿ ಪತ್ನಿ ರಿತಿಕಾ ಬಳಿ ತೆರಳಿದ ಹಿಟ್ಮ್ಯಾನ್
ಅಸಂಖ್ಯಾತ ಅಭಿಮಾನಿಗಳ ಪ್ರಾರ್ಥನೆ ಕೊನೆಗೂ ಫಲಿಸಿದೆ. ಐಸಿಸಿ ಇವೆಂಟ್ನಲ್ಲಿ ಕೊನೆಗೂ ಅದೃಷ್ಟ ಟೀಮ್ ಇಂಡಿಯಾದ ಕೈಹಿಡಿದಿದೆ. ICC ಟ್ರೊಫಿ ಗೆಲ್ಲಲಾಗದ ಕೊರಗಿಗೆ ಫುಲ್ ಸ್ಟಾಫ್ ಬಿದ್ದಿದೆ. ವೆಸ್ಟ್ ಇಂಡೀಸ್ನ ಬಾರ್ಬಡೋಸ್ನಲ್ಲಿ ಹರಿಣಗಳ ಬೇಟೆಯಾಡಿದ ಇಂಡಿಯನ್ ಟೈಗರ್ಸ್, ಚುಟುಕು ಚಾಂಪಿಯನ್ ಆಗಿದ್ದಾರೆ. ಇಷ್ಟೇ ಅಲ್ಲ, ಭರ್ಜರಿ ಸಂಭ್ರಮಾಚರಣೆಯನ್ನೂ ಮಾಡಿದ್ದಾರೆ.
ಪಂದ್ಯದ ಆರಂಭಕ್ಕೂ ಮುನ್ನ ಬಾರ್ಬಡೋಸ್ನಲ್ಲಿ ಪಂದ್ಯ ನಡೆಯುತ್ತಾ ಅನ್ನೋ ಡೌಟ್ ಕಾಡಿತ್ತು. ಆ ಬಳಿಕ ಭಾರತೀಯ ಅಭಿಮಾನಿಗಳನ್ನ ಟೀಮ್ ಇಂಡಿಯಾ ಗೆಲ್ಲುತ್ತ ಅನ್ನೋ ಅನುಮಾನ ಶುರುವಾಗಿತ್ತು. ಅಂತಿಮವಾಗಿ ಫಲಿಸಿದ್ದು ಕೋಟ್ಯಾನುಕೋಟಿ ಅಭಿಮಾನಿಗಳ ಪ್ರಾರ್ಥನೆ. ಬಾರ್ಬಡೋಸ್ನಲ್ಲಿ ಆಫ್ರಿಕನ್ಸ್ ಬೇಟೆಯಾಡಿದ ಟೀಮ್ ಇಂಡಿಯನ್ಸ್ ಟಿ20 ವಿಶ್ವಕಪ್ ಕಿರೀಟಕ್ಕೆ ಮುತ್ತಿಕ್ಕಿದ್ದಾರೆ.
ಬಿಕ್ಕಿಬಿಕ್ಕಿ ಕಣ್ಣೀರಿಟ್ಟ ಹಾರ್ದಿಕ್ ಪಾಂಡ್ಯ..!
ಪಂದ್ಯದಲ್ಲಿ ಕೊನೆಯ ಓವರ್ ಬೌಲಿಂಗ್ ಮಾಡಿದ ಹಾರ್ದಿಕ್ ಪಾಂಡ್ಯ ಟೀಮ್ ಇಂಡಿಯಾ ಗೆದ್ದಿದ್ದೇ ಗೆದ್ದಿದ್ದು ಬಿಕ್ಕಿಬಿಕ್ಕಿ ಕಣ್ಣೀರಿಟ್ರು.
ರೋಹಿತ್ಗೆ ಪತ್ನಿಯ ಪ್ರೀತಿಯ ಅಪ್ಪುಗೆ..!
ಕಪ್ ಗೆಲ್ಲಿಸಿ ಕೊಟ್ಟ ರೋಹಿತ್ ಶರ್ಮಾ ನೇರವಾಗಿ ತೆರಳಿದ್ದು ಪತ್ನಿ ರಿತಿಕಾ ಬಳಿ. ಅಂದು ಏಕದಿನ ವಿಶ್ವಕಪ್ ಸೋತಾಗ ಸಂತೈಸಿದ್ದ ಪತ್ನಿ ಬಳಿಕ ಸಂಭ್ರಮ ಹಂಚಿಕೊಂಡರು.
ವಿಡಿಯೋ ಕಾಲ್ ಮಾಡಿ ವಿರಾಟ್ ಭಾವುಕ.!
ಅಗ್ರೆಸ್ಸಿವ್ ಲುಕ್ ಸದಾ ಕಾಣಿಸಿಕೊಳ್ಳೋ ಕಿಂಗ್ ಕೊಹ್ಲಿಯ ಕಣ್ಣಂಚಲ್ಲೂ ನಿನ್ನೆ ನೀರು ಜಿನುಗಿದ್ವು. ಅಂದ್ಹಾಗೆ ಅದು ಕಣ್ಣೀರಲ್ಲ.. ಆನಂದ ಭಾಷ್ಪ.. T20 ವರ್ಲ್ಡ್ಕಪ್ ಗೆದ್ದ ಮೇಲೆ ದ್ರಾವಿಡ್ ನೋಡಿ ಎಲ್ಲರೂ ಶಾಕ್ ಆದರು. ಏಕೆಂದರೆ ಅಷ್ಟೊಂದು ಅಗ್ರೆಸ್ಸಿವ್ ಆಗಿ ರಾಹುಲ್ ದ್ರಾವಿಡ್ ಅವರು ಸಂಭ್ರಮಿಸಿರಲಿಲ್ಲ. ರೋಹಿತ್ ಬಳಗ ಕಪ್ ಗೆಲ್ಲುತ್ತಿದ್ದಂತೆ ದ್ರಾವಿಡ್ ಬಿಗ್ ಸೆಲೆಬ್ರೆಷನ್ ಮಾಡಿದರು. ಇದೇ ವೇಳೆ ಹೆಡ್ಮಾಸ್ಟರ್ನ, ತಂಡದ ಆಟಗಾರರೆಲ್ಲ ಎತ್ತಾಡಿದರು.
ಇದನ್ನೂ ಓದಿ: ವಿಶ್ವಕಪ್ ಗೆಲ್ಲಿಸಿಕೊಟ್ಟು ವಿದಾಯ.. 31 ತಿಂಗಳು, ಅಮೂಲಾಗ್ರ ಬದಲಾವಣೆ.. ಕನ್ನಡದ ಕಣ್ಮಣಿಗೆ ಬಿಗ್ ಸೆಲ್ಯೂಟ್..!
raw emotions of virat kohli 🥺❤️pic.twitter.com/3epMhWDEre
— rea (@reaadubey) June 29, 2024
ವಿಶ್ವಕಪ್ ಗೆಲುವಿನೊಂದಿಗೆ ರಾಹುಲ್ ದ್ರಾವಿಡ್ರ ಕೋಚ್ ಅವಧಿ ಕೂಡ ಅಂತ್ಯಕಂಡಿದೆ. ನಿರ್ಗಮಿಸ್ತಿರೋ ಹೆಡ್ ಮಾಸ್ಟರ್ಗೆ ಗೆಲುವಿನ ಉಡುಗೊರೆ ನೀಡಿರುವ ಕ್ರಿಕೆಟರ್ಸ್, ಮೈದಾನದಲ್ಲೇ ಎತ್ತಾಡಿಸಿ ವಿಶೇಷ ಗೌರವ ಸಲ್ಲಿಸಿದರು. ಟ್ರೋಫಿ ಕೈಗೆ ಸಿಕ್ಕ ಬಳಿಕ ಆಟಗಾರರ ಸಂತೋಷಕ್ಕೆ ಪಾರವೇ ಇರಲಿಲ್ಲ. ಮೈದಾನದಲ್ಲಿ ಸಖತ್ ಸ್ಟೆಪ್ಸ್ ಹಾಕಿ ಮಿಂಚಿದರು. ಆಟಗಾರರು ಮಾತ್ರವಲ್ಲ.. ಇಡೀ ಭಾರತವೇ ಸಂತಸದ ಕಡಲಲ್ಲಿ ಮುಳುಗಿದೆ. ಸಂಭ್ರಮದಲ್ಲಿ ತೇಲಾಡ್ತಿದೆ. ಒಂದು ಟ್ರೋಫಿ ಗೆಲುವು ಅಂತಾ ಹೆಮ್ಮೆ ತಂದಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ