ಕೊಹ್ಲಿ ಭವಿಷ್ಯದ ಪ್ರಶ್ನೆ ಬಗ್ಗೆ ಮೌನದ ಉತ್ತರ ನೀಡಿದ ಜಯ್ ಶಾ
ವೆಸ್ಟ್ ಇಂಡೀಸ್- ಯುಎಸ್ಎನಲ್ಲಿ ನಡೆಯುವ ಟಿ20 ವಿಶ್ವಕಪ್.!
ಟಿ20 ವಿಶ್ವಕಪ್ನಲ್ಲಿ ರೋಹಿತ್ ಶರ್ಮಾನೇ ತಂಡದ ಕ್ಯಾಪ್ಟನ್
ಮುಂಬರೋ ಟಿ20 ವಿಶ್ವಕಪ್ ಟೂರ್ನಿಯಲ್ಲಿ ರೋಹಿತ್ ಶರ್ಮಾನೇ ಟೀಮ್ ಇಂಡಿಯಾದ ಸಾರಥಿ ಅನ್ನೋದು ಅಧಿಕೃತವಾಗಿದೆ. ಆದ್ರೆ, ವಿರಾಟ್ ಕೊಹ್ಲಿಯ ಆಡ್ತಾರಾ, ಇಲ್ವಾ ಅನ್ನೋ ಮಿಲಿಯನ್ ಡಾಲರ್ ಪ್ರಶ್ನೆ ಹಾಗೇ ಉಳಿದಿದೆ. ಕೊಹ್ಲಿ ಭವಿಷ್ಯದ ಪ್ರಶ್ನೆ ಕೇಳಿದ್ರೆ ಜಯ್ ಶಾ ಮೌನದ ಉತ್ತರ ನೀಡಿದ್ದಾರೆ. ಹಾಗಾದ್ರೆ, ಕೊಹ್ಲಿ ಟಿ20 ವಿಶ್ವಕಪ್ ಆಡಲ್ವಾ?.
ತವರಿನಲ್ಲಿ ಇಂಡೋ -ಇಂಗ್ಲೆಂಡ್ ನಡುವೆ ಹೈವೋಲ್ಟೆಜ್ ಟೆಸ್ಟ್ ಸರಣಿ ನಡೀತಾ ಇದೆ. ಉಭಯ ತಂಡಗಳು ಪ್ರತಿಷ್ಠೆಯ ಟ್ರೋಫಿ ಗೆಲ್ಲಲು ಕಾದಾಟ ನಡೆಸ್ತಿವೆ. ಈ ಸರಣಿ ಅಂತ್ಯದ ಬೆನ್ನಲ್ಲೇ ಐಪಿಎಲ್ ಹಂಗಾಮ ಶುರುವಾಗಲಿದೆ. ಇಂಡಿಯನ್ ಪ್ರೀಮಿಯರ್ ಲೀಗ್ನ ರಣರೋಚಕ ಪಂದ್ಯಗಳನ್ನ ರಸದೌತಣ ಸವಿಯಲು ಫ್ಯಾನ್ಸ್ ಸಿದ್ಧರಾಗ್ತಿದ್ದಾರೆ. ಆದ್ರೆ, ಬಿಸಿಸಿಐ ಬಿಗ್ಬಾಸ್ಗಳು ಮಾತ್ರ ಜೂನ್ನಲ್ಲಿ ನಡೆಯೋ ಟಿ20 ವಿಶ್ವಕಪ್ ಗುಂಗಲ್ಲಿದ್ದಾರೆ.
T20 ವಿಶ್ವಕಪ್ ಮೆಗಾ ಟೂರ್ನಿಗೆ ಸದ್ದಿಲ್ಲದೆ ಸಿದ್ಧತೆ.!
ದಶಕದಿಂದ ಐಸಿಸಿ ಟ್ರೋಫಿ ಗೆಲ್ಲಲಾಗದೆ ಅವಮಾನ ಅನುಭವಿಸ್ತಾ ಇರೋ ಬಿಸಿಸಿಐ, ಈ ಬಾರಿ ಆ ಟ್ರೋಫಿ ಬರಕ್ಕೆ ಬ್ರೇಕ್ ಹಾಕಲು ಪಣ ತೊಟ್ಟಿದೆ. ಜೂನ್ನಲ್ಲಿ ವೆಸ್ಟ್ ಇಂಡೀಸ್ ಹಾಗೂ ಯುಎಸ್ಎನಲ್ಲಿ ನಡೆಯೋ ಟಿ20 ವಿಶ್ವಕಪ್ ಮಹಾಸಮರವನ್ನ ಬಿಗ್ಬಾಸ್ಗಳು ಟಾರ್ಗೆಟ್ ಮಾಡಿದ್ದಾರೆ. ಈ ಮೆಗಾ ಟೂರ್ನಿಗೆ ಬಿಸಿಸಿಐ ವಲಯದಲ್ಲಿ ಸದ್ದಿಲ್ಲದೇ ಸಿದ್ಧತೆಯು ಶುರುವಾಗಿದೆ.
ರೋಹಿತ್ ಆಡೋದು ಕನ್ಫರ್ಮ್.. ವಿರಾಟ್ ಡೌಟ್.!
ಸದ್ಯ ಇಂಡೋ-ಇಂಗ್ಲೆಂಡ್ ನಡುವೆ ನಡೀತಾ ಇರೋ 3ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಶನ್ ಬಿಗ್ ಇವೆಂಟ್ ಏರ್ಪಡಿಸಿತ್ತು. ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಜಯ್ ಶಾ, ವಿಶ್ವಕಪ್ ಸಿದ್ಧತೆಯ ಸೀಕ್ರೆಟ್ ಬಿಚ್ಚಿಟ್ರು. ಇಷ್ಟೇ ಅಲ್ಲ, ಚುಟುಕು ವಿಶ್ವಕಪ್ನಲ್ಲಿ ರೋಹಿತ್ ಶರ್ಮಾನೇ ತಂಡದ ಸಾರಥಿ ಎಂದು ಅಧಿಕೃತ ಘೋಷಣೆ ಮಾಡಿದರು. ಆದ್ರೆ, ಕೊಹ್ಲಿ ವಿಚಾರದಲ್ಲಿ ಮಾತ್ರ ತುಟಿಪಿಟಿಕ್ ಅನ್ನಲಿಲ್ಲ.
2023ರಲ್ಲಿ ಅಹ್ಮದಾಬಾದ್ನಲ್ಲಿ ನಾವು ವಿಶ್ವಕಪ್ ಗೆಲ್ಲಲಿಲ್ಲ. ಆದ್ರೆ, ಸತತ 10 ಪಂದ್ಯ ಗೆದ್ದು, ಎಲ್ಲರ ಹೃದಯ ಗೆದ್ದೆವು. ನಾನು ಇವತ್ತು ಪ್ರಮಾಣ ಮಾಡುತ್ತೇನೆ. 2024ರಲ್ಲಿ ಬಾರ್ಬಡೋಸ್ನಲ್ಲಿ ನಾವು ರೋಹಿತ್ ಶರ್ಮಾ ನಾಯಕತ್ವದಲ್ಲಿ ಟ್ರೋಫಿ ಎತ್ತಿ ಹಿಡಿಯುತ್ತೇವೆ. ಭಾರತದ ಭಾವುಟ ಹಾರಿಸುತ್ತೇವೆ.
ಜಯ್ ಶಾ, ಬಿಸಿಸಿಐ ಕಾರ್ಯದರ್ಶಿ
T20 ವಿಶ್ವಕಪ್ ಮಹಾಸಂಗ್ರಾಮದಲ್ಲಿ ಕೊಹ್ಲಿ ಆಡಲ್ವಾ.?
ರೋಹಿತ್ ಶರ್ಮಾ ವಿಚಾರದಲ್ಲಿ ಇದ್ದ ಗೊಂದಲಕ್ಕೆ ಬ್ರೇಕ್ ಹಾಕಿದ ಜಯ್ ಶಾ ವಿರಾಟ್ ಕೊಹ್ಲಿ ವಿಚಾರದಲ್ಲಿ ಮಾತ್ರ ಮೌನಕ್ಕೆ ಜಾರಿದ್ರು. ವಿರಾಟ್ ಕೊಹ್ಲಿ ಆಡ್ತಾರಾ ಎಂಬ ಪ್ರಶ್ನೆಗೆ ಅವರ ಜೊತೆ ಮಾತನಾಡ್ತೀವಿ ಎಂಬ ಸಿಂಪಲ್ ಉತ್ತರ ಕೊಟ್ಟು ಸೈಲೆಂಟ್ ಆಗ್ಬಿಟ್ರು.
ವಿರಾಟ್ ಕೊಹ್ಲಿ ಸಾಮರ್ಥ್ಯದ ಬಗ್ಗೆ ಅನುಮಾನ.?
ಬರೋಬ್ಬರಿ 1 ವರ್ಷದ ಅಂತರದ ಕಮ್ಬ್ಯಾಕ್ ಮಾಡಿದ ಟಿ20 ಸರಣಿಯಲ್ಲಿ ರೋಹಿತ್ ಶರ್ಮಾ ಧಮ್ ದಾರ್ ಶತಕ ಸಿಡಿಸಿ ಗಮನ ಸೆಳೆದ್ರು. ಆದ್ರೆ, ವಿರಾಟ್ ಕೊಹ್ಲಿ ಆಡಿದ 2 ಪಂದ್ಯಗಳಲ್ಲಿ ನೀರಸ ಪರ್ಫಾಮೆನ್ಸ್ ನೀಡಿದ್ರು. ಜೊತೆಗೆ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ನ ಅಗ್ರೆಸ್ಸೀವ್ ಆಟದ ಗೇಮ್ಪ್ಲಾನ್ ಅಡಾಪ್ಟ್ ಮಾಡಿಕೊಳ್ಳುವಲ್ಲೂ ಎಡವಿದ್ರು. ಈ ವೈಫಲ್ಯವೇ ಇದೀಗ ವಿರಾಟ್ ಕೊಹ್ಲಿ ಸ್ಥಾನಕ್ಕೆ ಕುತ್ತು ತಂದಿದೆ.
ಐಪಿಎಲ್ನಲ್ಲಿ ನಿರ್ಧಾರವಾಗಲಿದ್ಯಾ ಕೊಹ್ಲಿ ಭವಿಷ್ಯ.?
ಅಫ್ಘಾನಿಸ್ತಾನ ಎದುರಿನ ಸರಣಿಯಲ್ಲಿ ವಿರಾಟ್ ಕೊಹ್ಲಿ ಹೇಳಿಕೊಳ್ಳುವಂತಾ ಪರ್ಫಾಮೆನ್ಸ್ ನೀಡಲಿಲ್ಲ. ಹೀಗಾಗಿ ಮುಂಬರುವ ಐಪಿಎಲ್ ವಿರಾಟ್ ಕೊಹ್ಲಿ, ಪಾಲಿಗೆ ಅಗ್ನಿಪರೀಕ್ಷೆಯ ಕಣವಾಗಲಿದೆ. ಚುಟುಕು ಸಂಗ್ರಾಮದಲ್ಲಿ ಕೊಹ್ಲಿಯ ಪರ್ಫಾಮೆನ್ಸ್ ಆಧಾರದಲ್ಲಿ ವಿಶ್ವಕಪ್ ಟಿಕೆಟ್ ನೀಡೋದು ಮ್ಯಾನೇಜ್ಮೆಂಟ್ ಲೆಕ್ಕಾಚಾರವಾಗಿದೆ.
ಎರಡೇ 2 ವೈಫಲ್ಯಗಳಿಂದ ಕೊಹ್ಲಿಯ ಸಾಮರ್ಥ್ಯವನ್ನ ಅಳೆಯೋಕೆ ಸಾಧ್ಯ ಇಲ್ಲ. ಕಳೆದ ಟಿ20 ವಿಶ್ವಕಪ್, ಏಕದಿನ ವಿಶ್ಚಕಪ್ನಲ್ಲಿ ವಿರಾಟ್ ನೀಡಿದ ಪರ್ಫಾಮೆನ್ಸ್ ಸಾಮರ್ಥ್ಯಕ್ಕೆ ಸಾಕ್ಷಿ. ಬಿಗ್ಸ್ಟೇಜ್ನಲ್ಲಿ, ಬಿಗ್ ಟೂರ್ನಮೆಂಟ್ಗಳಲ್ಲಿ ಟೀಮ್ ಇಂಡಿಯಾಗೆ ಕೊಹ್ಲಿ ಎಷ್ಟು ಇಂಪಾರ್ಟೆಂಟ್ ಅನ್ನೋದನ್ನ ಇತಿಹಾಸವೇ ಹೇಳುತ್ತೆ. ಹೀಗಾಗಿ ಮುಂಬರುವ ಟಿ20 ವಿಶ್ವಕಪ್ನಿಂದ ಕೊಹ್ಲಿಯನ್ನ ಕೈ ಬಿಡೋದು ಅನುಮಾನ. ಆದ್ರೂ ಸೆಕ್ರೆಟರಿ ಜಯ್ ಶಾ, ಕೊಹ್ಲಿ ಜೊತೆ ಏನು ಮಾತನಾಡ್ತಾರೆ ಅನ್ನೋದು ಕುತೂಹಲ ಮೂಡಿಸಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
ಕೊಹ್ಲಿ ಭವಿಷ್ಯದ ಪ್ರಶ್ನೆ ಬಗ್ಗೆ ಮೌನದ ಉತ್ತರ ನೀಡಿದ ಜಯ್ ಶಾ
ವೆಸ್ಟ್ ಇಂಡೀಸ್- ಯುಎಸ್ಎನಲ್ಲಿ ನಡೆಯುವ ಟಿ20 ವಿಶ್ವಕಪ್.!
ಟಿ20 ವಿಶ್ವಕಪ್ನಲ್ಲಿ ರೋಹಿತ್ ಶರ್ಮಾನೇ ತಂಡದ ಕ್ಯಾಪ್ಟನ್
ಮುಂಬರೋ ಟಿ20 ವಿಶ್ವಕಪ್ ಟೂರ್ನಿಯಲ್ಲಿ ರೋಹಿತ್ ಶರ್ಮಾನೇ ಟೀಮ್ ಇಂಡಿಯಾದ ಸಾರಥಿ ಅನ್ನೋದು ಅಧಿಕೃತವಾಗಿದೆ. ಆದ್ರೆ, ವಿರಾಟ್ ಕೊಹ್ಲಿಯ ಆಡ್ತಾರಾ, ಇಲ್ವಾ ಅನ್ನೋ ಮಿಲಿಯನ್ ಡಾಲರ್ ಪ್ರಶ್ನೆ ಹಾಗೇ ಉಳಿದಿದೆ. ಕೊಹ್ಲಿ ಭವಿಷ್ಯದ ಪ್ರಶ್ನೆ ಕೇಳಿದ್ರೆ ಜಯ್ ಶಾ ಮೌನದ ಉತ್ತರ ನೀಡಿದ್ದಾರೆ. ಹಾಗಾದ್ರೆ, ಕೊಹ್ಲಿ ಟಿ20 ವಿಶ್ವಕಪ್ ಆಡಲ್ವಾ?.
ತವರಿನಲ್ಲಿ ಇಂಡೋ -ಇಂಗ್ಲೆಂಡ್ ನಡುವೆ ಹೈವೋಲ್ಟೆಜ್ ಟೆಸ್ಟ್ ಸರಣಿ ನಡೀತಾ ಇದೆ. ಉಭಯ ತಂಡಗಳು ಪ್ರತಿಷ್ಠೆಯ ಟ್ರೋಫಿ ಗೆಲ್ಲಲು ಕಾದಾಟ ನಡೆಸ್ತಿವೆ. ಈ ಸರಣಿ ಅಂತ್ಯದ ಬೆನ್ನಲ್ಲೇ ಐಪಿಎಲ್ ಹಂಗಾಮ ಶುರುವಾಗಲಿದೆ. ಇಂಡಿಯನ್ ಪ್ರೀಮಿಯರ್ ಲೀಗ್ನ ರಣರೋಚಕ ಪಂದ್ಯಗಳನ್ನ ರಸದೌತಣ ಸವಿಯಲು ಫ್ಯಾನ್ಸ್ ಸಿದ್ಧರಾಗ್ತಿದ್ದಾರೆ. ಆದ್ರೆ, ಬಿಸಿಸಿಐ ಬಿಗ್ಬಾಸ್ಗಳು ಮಾತ್ರ ಜೂನ್ನಲ್ಲಿ ನಡೆಯೋ ಟಿ20 ವಿಶ್ವಕಪ್ ಗುಂಗಲ್ಲಿದ್ದಾರೆ.
T20 ವಿಶ್ವಕಪ್ ಮೆಗಾ ಟೂರ್ನಿಗೆ ಸದ್ದಿಲ್ಲದೆ ಸಿದ್ಧತೆ.!
ದಶಕದಿಂದ ಐಸಿಸಿ ಟ್ರೋಫಿ ಗೆಲ್ಲಲಾಗದೆ ಅವಮಾನ ಅನುಭವಿಸ್ತಾ ಇರೋ ಬಿಸಿಸಿಐ, ಈ ಬಾರಿ ಆ ಟ್ರೋಫಿ ಬರಕ್ಕೆ ಬ್ರೇಕ್ ಹಾಕಲು ಪಣ ತೊಟ್ಟಿದೆ. ಜೂನ್ನಲ್ಲಿ ವೆಸ್ಟ್ ಇಂಡೀಸ್ ಹಾಗೂ ಯುಎಸ್ಎನಲ್ಲಿ ನಡೆಯೋ ಟಿ20 ವಿಶ್ವಕಪ್ ಮಹಾಸಮರವನ್ನ ಬಿಗ್ಬಾಸ್ಗಳು ಟಾರ್ಗೆಟ್ ಮಾಡಿದ್ದಾರೆ. ಈ ಮೆಗಾ ಟೂರ್ನಿಗೆ ಬಿಸಿಸಿಐ ವಲಯದಲ್ಲಿ ಸದ್ದಿಲ್ಲದೇ ಸಿದ್ಧತೆಯು ಶುರುವಾಗಿದೆ.
ರೋಹಿತ್ ಆಡೋದು ಕನ್ಫರ್ಮ್.. ವಿರಾಟ್ ಡೌಟ್.!
ಸದ್ಯ ಇಂಡೋ-ಇಂಗ್ಲೆಂಡ್ ನಡುವೆ ನಡೀತಾ ಇರೋ 3ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಶನ್ ಬಿಗ್ ಇವೆಂಟ್ ಏರ್ಪಡಿಸಿತ್ತು. ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಜಯ್ ಶಾ, ವಿಶ್ವಕಪ್ ಸಿದ್ಧತೆಯ ಸೀಕ್ರೆಟ್ ಬಿಚ್ಚಿಟ್ರು. ಇಷ್ಟೇ ಅಲ್ಲ, ಚುಟುಕು ವಿಶ್ವಕಪ್ನಲ್ಲಿ ರೋಹಿತ್ ಶರ್ಮಾನೇ ತಂಡದ ಸಾರಥಿ ಎಂದು ಅಧಿಕೃತ ಘೋಷಣೆ ಮಾಡಿದರು. ಆದ್ರೆ, ಕೊಹ್ಲಿ ವಿಚಾರದಲ್ಲಿ ಮಾತ್ರ ತುಟಿಪಿಟಿಕ್ ಅನ್ನಲಿಲ್ಲ.
2023ರಲ್ಲಿ ಅಹ್ಮದಾಬಾದ್ನಲ್ಲಿ ನಾವು ವಿಶ್ವಕಪ್ ಗೆಲ್ಲಲಿಲ್ಲ. ಆದ್ರೆ, ಸತತ 10 ಪಂದ್ಯ ಗೆದ್ದು, ಎಲ್ಲರ ಹೃದಯ ಗೆದ್ದೆವು. ನಾನು ಇವತ್ತು ಪ್ರಮಾಣ ಮಾಡುತ್ತೇನೆ. 2024ರಲ್ಲಿ ಬಾರ್ಬಡೋಸ್ನಲ್ಲಿ ನಾವು ರೋಹಿತ್ ಶರ್ಮಾ ನಾಯಕತ್ವದಲ್ಲಿ ಟ್ರೋಫಿ ಎತ್ತಿ ಹಿಡಿಯುತ್ತೇವೆ. ಭಾರತದ ಭಾವುಟ ಹಾರಿಸುತ್ತೇವೆ.
ಜಯ್ ಶಾ, ಬಿಸಿಸಿಐ ಕಾರ್ಯದರ್ಶಿ
T20 ವಿಶ್ವಕಪ್ ಮಹಾಸಂಗ್ರಾಮದಲ್ಲಿ ಕೊಹ್ಲಿ ಆಡಲ್ವಾ.?
ರೋಹಿತ್ ಶರ್ಮಾ ವಿಚಾರದಲ್ಲಿ ಇದ್ದ ಗೊಂದಲಕ್ಕೆ ಬ್ರೇಕ್ ಹಾಕಿದ ಜಯ್ ಶಾ ವಿರಾಟ್ ಕೊಹ್ಲಿ ವಿಚಾರದಲ್ಲಿ ಮಾತ್ರ ಮೌನಕ್ಕೆ ಜಾರಿದ್ರು. ವಿರಾಟ್ ಕೊಹ್ಲಿ ಆಡ್ತಾರಾ ಎಂಬ ಪ್ರಶ್ನೆಗೆ ಅವರ ಜೊತೆ ಮಾತನಾಡ್ತೀವಿ ಎಂಬ ಸಿಂಪಲ್ ಉತ್ತರ ಕೊಟ್ಟು ಸೈಲೆಂಟ್ ಆಗ್ಬಿಟ್ರು.
ವಿರಾಟ್ ಕೊಹ್ಲಿ ಸಾಮರ್ಥ್ಯದ ಬಗ್ಗೆ ಅನುಮಾನ.?
ಬರೋಬ್ಬರಿ 1 ವರ್ಷದ ಅಂತರದ ಕಮ್ಬ್ಯಾಕ್ ಮಾಡಿದ ಟಿ20 ಸರಣಿಯಲ್ಲಿ ರೋಹಿತ್ ಶರ್ಮಾ ಧಮ್ ದಾರ್ ಶತಕ ಸಿಡಿಸಿ ಗಮನ ಸೆಳೆದ್ರು. ಆದ್ರೆ, ವಿರಾಟ್ ಕೊಹ್ಲಿ ಆಡಿದ 2 ಪಂದ್ಯಗಳಲ್ಲಿ ನೀರಸ ಪರ್ಫಾಮೆನ್ಸ್ ನೀಡಿದ್ರು. ಜೊತೆಗೆ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ನ ಅಗ್ರೆಸ್ಸೀವ್ ಆಟದ ಗೇಮ್ಪ್ಲಾನ್ ಅಡಾಪ್ಟ್ ಮಾಡಿಕೊಳ್ಳುವಲ್ಲೂ ಎಡವಿದ್ರು. ಈ ವೈಫಲ್ಯವೇ ಇದೀಗ ವಿರಾಟ್ ಕೊಹ್ಲಿ ಸ್ಥಾನಕ್ಕೆ ಕುತ್ತು ತಂದಿದೆ.
ಐಪಿಎಲ್ನಲ್ಲಿ ನಿರ್ಧಾರವಾಗಲಿದ್ಯಾ ಕೊಹ್ಲಿ ಭವಿಷ್ಯ.?
ಅಫ್ಘಾನಿಸ್ತಾನ ಎದುರಿನ ಸರಣಿಯಲ್ಲಿ ವಿರಾಟ್ ಕೊಹ್ಲಿ ಹೇಳಿಕೊಳ್ಳುವಂತಾ ಪರ್ಫಾಮೆನ್ಸ್ ನೀಡಲಿಲ್ಲ. ಹೀಗಾಗಿ ಮುಂಬರುವ ಐಪಿಎಲ್ ವಿರಾಟ್ ಕೊಹ್ಲಿ, ಪಾಲಿಗೆ ಅಗ್ನಿಪರೀಕ್ಷೆಯ ಕಣವಾಗಲಿದೆ. ಚುಟುಕು ಸಂಗ್ರಾಮದಲ್ಲಿ ಕೊಹ್ಲಿಯ ಪರ್ಫಾಮೆನ್ಸ್ ಆಧಾರದಲ್ಲಿ ವಿಶ್ವಕಪ್ ಟಿಕೆಟ್ ನೀಡೋದು ಮ್ಯಾನೇಜ್ಮೆಂಟ್ ಲೆಕ್ಕಾಚಾರವಾಗಿದೆ.
ಎರಡೇ 2 ವೈಫಲ್ಯಗಳಿಂದ ಕೊಹ್ಲಿಯ ಸಾಮರ್ಥ್ಯವನ್ನ ಅಳೆಯೋಕೆ ಸಾಧ್ಯ ಇಲ್ಲ. ಕಳೆದ ಟಿ20 ವಿಶ್ವಕಪ್, ಏಕದಿನ ವಿಶ್ಚಕಪ್ನಲ್ಲಿ ವಿರಾಟ್ ನೀಡಿದ ಪರ್ಫಾಮೆನ್ಸ್ ಸಾಮರ್ಥ್ಯಕ್ಕೆ ಸಾಕ್ಷಿ. ಬಿಗ್ಸ್ಟೇಜ್ನಲ್ಲಿ, ಬಿಗ್ ಟೂರ್ನಮೆಂಟ್ಗಳಲ್ಲಿ ಟೀಮ್ ಇಂಡಿಯಾಗೆ ಕೊಹ್ಲಿ ಎಷ್ಟು ಇಂಪಾರ್ಟೆಂಟ್ ಅನ್ನೋದನ್ನ ಇತಿಹಾಸವೇ ಹೇಳುತ್ತೆ. ಹೀಗಾಗಿ ಮುಂಬರುವ ಟಿ20 ವಿಶ್ವಕಪ್ನಿಂದ ಕೊಹ್ಲಿಯನ್ನ ಕೈ ಬಿಡೋದು ಅನುಮಾನ. ಆದ್ರೂ ಸೆಕ್ರೆಟರಿ ಜಯ್ ಶಾ, ಕೊಹ್ಲಿ ಜೊತೆ ಏನು ಮಾತನಾಡ್ತಾರೆ ಅನ್ನೋದು ಕುತೂಹಲ ಮೂಡಿಸಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ