ಕೊಹ್ಲಿಯನ್ನ ಸೈಡ್ಲೈನ್ ಮಾಡಿದ್ರಾ ಬಿಗ್ಬಾಸ್ಗಳು?
ಹೊಸ ಕೋಚ್ ಆಯ್ಕೆಯಲ್ಲಿ ಕಿಂಗ್ ಕೊಹ್ಲಿ ಸೈಡ್ಲೈನ್?
ಕೊಹ್ಲಿ ಅಭಿಪ್ರಾಯ ಪಡೆಯದೇ ಗಂಭೀರ್ ನೇಮಕ
ಕಿಂಗ್ ಕೊಹ್ಲಿ ಹಾಕಿದ ಗೆರೆಯನ್ನ ಬಿಸಿಸಿಐ ದಾಟದ ಕಾಲವೊಂದಿತ್ತು. ಅಂದ್ರೆ ವಿರಾಟ್ ಮಾತಿಗೆ ಅಷ್ಟೊಂದು ಮನ್ನಣೆ ಕೊಡ್ತಿತ್ತು. ಕೊಹ್ಲಿ ಟಿ20 ಕ್ರಿಕೆಟ್ಗೆ ಗುಡ್ಬೈ ಹೇಳಿದ್ದೇ ತಡ ಬಿಗ್ಬಾಸ್ಗಳು ವರಸೆ ಬದಲಿಸಿದ್ದಾರೆ. ಕೊಹ್ಲಿ ನಾಮಬಲದಿಂದ ವಿಶ್ವದ ಶ್ರೀಮಂತ ಕ್ರಿಕೆಟ್ ಮಂಡಳಿಯಾಗಿ ಬೆಳೆದ ಬಿಸಿಸಿಐ, ಇದೀಗ ಜಗಮೆಚ್ಚಿದ ವಿರಾಟ್ರನ್ನೇ ಸೈಡ್ಲೈನ್ ಮಾಡಿದೆ.
ವಿರಾಟ್ ಕೊಹ್ಲಿ.. ವಿಶ್ವ ಕ್ರಿಕೆಟ್ನ ಅಗ್ರಜ. ಈ ರಣವಿಕ್ರಮನ ಪ್ರಖ್ಯಾತಿಗೆ ಜಗತ್ತೇ ತಲೆಬಾಗಿದೆ. ಭಾರತೀಯ ಕ್ರಿಕೆಟ್ ಮಟ್ಟಿಗೆ ಕೊಹ್ಲಿ ಮೋಸ್ಟ್ ಪವರ್ಫುಲ್ ಕ್ರಿಕೆಟರ್. ಈ ಮೊದಲು ಬಿಸಿಸಿಐಗೆ ಈ ಗ್ಲೋಬನ್ ಐಕಾನ್ ಹೇಳಿದ್ದೇ ವೇದವಾಕ್ಯ. ಹೊಸ ಕ್ಯಾಪ್ಟನ್, ಹೊಸ ಕೋಚ್ ಆಯ್ಕೆ ಸೇರಿದಂತೆ ಅನೇಕ ನಿರ್ಧಾರಗಳಲ್ಲಿ ಬಿಸಿಸಿಐ ವಿರಾಟ್ ಅಭಿಪ್ರಾಯ ತೆಗೆದುಕೊಳ್ತಿತ್ತು. ಜಂಟಲ್ಮನ್ ಗೇಮ್ನಲ್ಲಿ ಕಿಂಗ್ ಕೊಹ್ಲಿ ಖದರ್ ಕಮ್ಮಿ ಆಗ್ತಿದ್ದಂತೆ ಬಿಗ್ಬಾಸ್ಗಳು ಸೆಂಚುರಿ ಸಾಮ್ರಾಟನನ್ನು ತೆರೆಮರೆಗೆ ಸರಿಸುವ ಪ್ರಯತ್ನಕ್ಕೆ ಕೈ ಹಾಕಿದಂತಿದೆ.
ಇದನ್ನೂ ಓದಿ:ಭರತನಾಟ್ಯ ಪ್ರವೀಣೆ.. ಸ್ವಿಮ್ಮಿಂಗ್, ಚಾರಣ ಅಂದ್ರೆ ಪಂಚಪ್ರಾಣ.. ರಾಧಿಕಾ ಮರ್ಚಂಟ್ ಹಿನ್ನೆಲೆ ಏನು?
ಭಾರತೀಯ ಕ್ರಿಕೆಟ್ನಲ್ಲಿ ಕಮ್ಮಿಯಾಯ್ತಾ ಕೊಹ್ಲಿ ಖದರ್..!
ಟೀಮ್ ಇಂಡಿಯಾದಲ್ಲಿ ಗೌತಮ್ ಗಂಭೀರ್ ಯುಗಾರಂಭವಾಗಿದೆ. ರಾಹುಲ್ ದ್ರಾವಿಡ್ ಉತ್ತರಾಧಿಕಾರಿಯಾಗಿ ಗಂಭೀರ್ ನೇಮಕಗೊಂಡಿದ್ದಾರೆ. ಭಾರತಕ್ಕೆ ಹೊಸ ಕೋಚ್ ಎಂಟ್ರಿಕೊಟ್ಟ ಬೆನ್ನಲ್ಲೆ ಮಾಜಿ ಕ್ಯಾಪ್ಟನ್ ಕೊಹ್ಲಿಗೆ ತಂಡದಲ್ಲಿ ಬೆಲೆಯೇ ಇಲ್ಲದಂತಾಗಿದೆ. ದಶಕಕ್ಕೂ ಅಧಿಕ ಕಾಲ ಕೊಹ್ಲಿ ಹಿಂದೆ ಬೇತಾಳನಂತೆ ಬಿದ್ದಿದ್ದ ಬಿಸಿಸಿಐ, ಇದೀಗ ಮಾಡ್ರನ್ ಕ್ರಿಕೆಟ್ ದೊರೆಯನ್ನು ಲೆಕ್ಕಕ್ಕೆ ತೆಗೆದುಕೊಳ್ತಿಲ್ಲ.
ಹೊಸ ಕೋಚ್ ಆಯ್ಕೆಯಲ್ಲಿ ಕೊಹ್ಲಿ ಸೈಡ್ಲೈನ್..!
ಇದೇ ನೋಡಿ ಅಸಲಿ ಮ್ಯಾಟರ್. ಜುಲೈ 9 ರಂದು ಬಿಸಿಸಿಐ ಟೀಮ್ ಇಂಡಿಯಾ ನೂತನ ಹೆಡ್ಕೋಚ್ ಆಗಿ ಗೌತಮ್ ಗಂಭೀರ್ ಅವರ ಹೆಸರನ್ನು ಅಧಿಕೃತವಾಗಿ ಘೋಷಿಸಿತ್ತು. ಗಂಭೀರ್ ನೇಮಕದ ವೇಳೆ ಬಿಸಿಸಿಐ ಮಾಜಿ ಕ್ಯಾಪ್ಟನ್ ವಿರಾಟ್ ಕೊಹ್ಲಿಯ ಅಭಿಪ್ರಾಯವನ್ನೇ ಕೇಳಿಲ್ವಂತೆ. ಅವರ ಜೊತೆ ಈ ವಿಚಾರವಾಗಿ ಸ್ವಲ್ಪವೂ ಚರ್ಚಿಸದೇ ಗಂಭೀರ್ ಹೆಸರನ್ನು ಅನೌನ್ಸ್ ಮಾಡಲಾಗಿದೆ ಎಂದು ವರದಿಯಾಗಿದೆ.
ಸಾಮಾನ್ಯವಾಗಿ ಕ್ಯಾಪ್ಟನ್ ಅಥವಾ ಕೋಚ್ ನೇಮಕದ ವೇಳೆ ತಂಡದ ಹಿರಿಯ ಆಟಗಾರರ ಅಭಿಪ್ರಾಯ ಪಡೆಯುವ ಪದ್ಧತಿ ಇದೆ. ವಿರಾಟ್ ಕೊಹ್ಲಿ ಕೂಡ ತಂಡದ ಮೋಸ್ಟ್ ಸೀನಿಯರ್ ಪ್ಲೇಯರ್. ಕ್ಯಾಪ್ಟನ್ ರೋಹಿತ್ ಶರ್ಮಾರಷ್ಟೇ ಅನುಭವಿ ಕ್ರಿಕೆಟಿಗ. ಇಂಥಾ ಕೊಹ್ಲಿ ಬಳಿ ಬಿಸಿಸಿಐ, ಸೌಜನ್ಯಕ್ಕೂ ಸಲಹೆ ಕೇಳುವ ಮನಸ್ಸು ಮಾಡಿಲ್ಲ. ಸಂಪೂರ್ಣವಾಗಿ ನಿರ್ಲಕ್ಷಿಸಿ ನ್ಯೂ ಕೋಚ್ ನೇಮಕ ಮಾಡಲಾಗಿದೆ.
ಇದನ್ನೂ ಓದಿ:ಮಿಸ್ಟ್ರಿ ಗರ್ಲ್ ಜೊತೆ ಹಾರ್ದಿಕ್ ಪಾಂಡ್ಯ ಡೇಟಿಂಗ್? ಮಾರ್ಮಿಕವಾಗಿ ಟಾಂಗ್ ಕೊಟ್ಟ ನಟಾಶಾ..!
ಗಂಭೀರ್ ಆಯ್ಕೆಯಲ್ಲಿ ಹಾರ್ದಿಕ್ ಮಾತಿಗೆ ಮನ್ನಣೆ
ಗೌತಮ್ ಗಂಭೀರ್ರನ್ನ ಟೀಮ್ ಇಂಡಿಯಾದ ಕೋಚ್ ಮಾಡೋಕು ಮುಂಚೆ ಹಾರ್ದಿಕ್ ಪಾಂಡ್ಯ ಜೊತೆ ಬಿಸಿಸಿಐ ಮಾತುಕತೆ ನಡೆಸಿದೆ. ಪಾಂಡ್ಯ ಅಭಿಪ್ರಾಯ ಪಡೆದ ಬಳಿಕವೇ ಗೌತಿ, ದ್ರಾವಿಡ್ ಉತ್ತರಾಧಿಕಾರಿ ಪಟ್ಟಕ್ಕೇರಿದ್ದಾರೆ ಎಂಬ ಸುದ್ದಿ ಹರಿದಾಡ್ತಿದೆ. ಹಾರ್ದಿಕ್ ಮಾತಿಗೆ ಮನ್ನಣೆ ಕೊಟ್ಟ ಬಿಸಿಸಿಐ, ಕೊಹ್ಲಿಯನ್ನ ಕಡೆಗಣಿಸಿದೆ.
ಕೊಹ್ಲಿ ತಂಡದ ಎಲ್ಲರಂತೆ ಸಾಮಾನ್ಯ ಆಟಗಾರ ಅಲ್ಲ. ಅವರೊಬ್ಬ ಲೆಜೆಂಡ್ರಿ ಕ್ರಿಕೆಟರ್. 17 ವರ್ಷಗಳ ಕಾಲ ತಂಡಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ನಾಯಕನಾಗಿ ಹಲವು ವರ್ಷಗಳ ಕಾಲ ತಂಡವನ್ನ ಮುನ್ನಡೆಸಿದ್ದಾರೆ. ತಂಡ ಕಟ್ಟಿರೋದ್ರಲ್ಲಿ ವಿರಾಟ್ ಶ್ರಮ ಅಪಾರ. ಇಂತಹ ಅಪಾರ ಅನುಭವವುಳ್ಳ ಆಟಗಾರನನ್ನ ಹೊಸ ಕೋಚ್ ಆಯ್ಕೆಯಲ್ಲಿ ಸೈಡ್ಲೈನ್ ಮಾಡಿದ್ದು ನಿಜಕ್ಕೂ ಯಾರು ಒಪ್ಪುವಂತಹದ್ದಲ್ಲ.
ಇದನ್ನೂ ಓದಿ:ಅಪರ್ಣಾ ತಮ್ಮ ಬದುಕಲ್ಲಿ ಅಳವಡಿಸಿಕೊಂಡಿದ್ದ ಮೂರು ಸೂತ್ರಗಳು.. ಆ ಮುತ್ತಿನಂಥ ಮಾತುಗಳು ಏನು ಗೊತ್ತಾ..?
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
ಕೊಹ್ಲಿಯನ್ನ ಸೈಡ್ಲೈನ್ ಮಾಡಿದ್ರಾ ಬಿಗ್ಬಾಸ್ಗಳು?
ಹೊಸ ಕೋಚ್ ಆಯ್ಕೆಯಲ್ಲಿ ಕಿಂಗ್ ಕೊಹ್ಲಿ ಸೈಡ್ಲೈನ್?
ಕೊಹ್ಲಿ ಅಭಿಪ್ರಾಯ ಪಡೆಯದೇ ಗಂಭೀರ್ ನೇಮಕ
ಕಿಂಗ್ ಕೊಹ್ಲಿ ಹಾಕಿದ ಗೆರೆಯನ್ನ ಬಿಸಿಸಿಐ ದಾಟದ ಕಾಲವೊಂದಿತ್ತು. ಅಂದ್ರೆ ವಿರಾಟ್ ಮಾತಿಗೆ ಅಷ್ಟೊಂದು ಮನ್ನಣೆ ಕೊಡ್ತಿತ್ತು. ಕೊಹ್ಲಿ ಟಿ20 ಕ್ರಿಕೆಟ್ಗೆ ಗುಡ್ಬೈ ಹೇಳಿದ್ದೇ ತಡ ಬಿಗ್ಬಾಸ್ಗಳು ವರಸೆ ಬದಲಿಸಿದ್ದಾರೆ. ಕೊಹ್ಲಿ ನಾಮಬಲದಿಂದ ವಿಶ್ವದ ಶ್ರೀಮಂತ ಕ್ರಿಕೆಟ್ ಮಂಡಳಿಯಾಗಿ ಬೆಳೆದ ಬಿಸಿಸಿಐ, ಇದೀಗ ಜಗಮೆಚ್ಚಿದ ವಿರಾಟ್ರನ್ನೇ ಸೈಡ್ಲೈನ್ ಮಾಡಿದೆ.
ವಿರಾಟ್ ಕೊಹ್ಲಿ.. ವಿಶ್ವ ಕ್ರಿಕೆಟ್ನ ಅಗ್ರಜ. ಈ ರಣವಿಕ್ರಮನ ಪ್ರಖ್ಯಾತಿಗೆ ಜಗತ್ತೇ ತಲೆಬಾಗಿದೆ. ಭಾರತೀಯ ಕ್ರಿಕೆಟ್ ಮಟ್ಟಿಗೆ ಕೊಹ್ಲಿ ಮೋಸ್ಟ್ ಪವರ್ಫುಲ್ ಕ್ರಿಕೆಟರ್. ಈ ಮೊದಲು ಬಿಸಿಸಿಐಗೆ ಈ ಗ್ಲೋಬನ್ ಐಕಾನ್ ಹೇಳಿದ್ದೇ ವೇದವಾಕ್ಯ. ಹೊಸ ಕ್ಯಾಪ್ಟನ್, ಹೊಸ ಕೋಚ್ ಆಯ್ಕೆ ಸೇರಿದಂತೆ ಅನೇಕ ನಿರ್ಧಾರಗಳಲ್ಲಿ ಬಿಸಿಸಿಐ ವಿರಾಟ್ ಅಭಿಪ್ರಾಯ ತೆಗೆದುಕೊಳ್ತಿತ್ತು. ಜಂಟಲ್ಮನ್ ಗೇಮ್ನಲ್ಲಿ ಕಿಂಗ್ ಕೊಹ್ಲಿ ಖದರ್ ಕಮ್ಮಿ ಆಗ್ತಿದ್ದಂತೆ ಬಿಗ್ಬಾಸ್ಗಳು ಸೆಂಚುರಿ ಸಾಮ್ರಾಟನನ್ನು ತೆರೆಮರೆಗೆ ಸರಿಸುವ ಪ್ರಯತ್ನಕ್ಕೆ ಕೈ ಹಾಕಿದಂತಿದೆ.
ಇದನ್ನೂ ಓದಿ:ಭರತನಾಟ್ಯ ಪ್ರವೀಣೆ.. ಸ್ವಿಮ್ಮಿಂಗ್, ಚಾರಣ ಅಂದ್ರೆ ಪಂಚಪ್ರಾಣ.. ರಾಧಿಕಾ ಮರ್ಚಂಟ್ ಹಿನ್ನೆಲೆ ಏನು?
ಭಾರತೀಯ ಕ್ರಿಕೆಟ್ನಲ್ಲಿ ಕಮ್ಮಿಯಾಯ್ತಾ ಕೊಹ್ಲಿ ಖದರ್..!
ಟೀಮ್ ಇಂಡಿಯಾದಲ್ಲಿ ಗೌತಮ್ ಗಂಭೀರ್ ಯುಗಾರಂಭವಾಗಿದೆ. ರಾಹುಲ್ ದ್ರಾವಿಡ್ ಉತ್ತರಾಧಿಕಾರಿಯಾಗಿ ಗಂಭೀರ್ ನೇಮಕಗೊಂಡಿದ್ದಾರೆ. ಭಾರತಕ್ಕೆ ಹೊಸ ಕೋಚ್ ಎಂಟ್ರಿಕೊಟ್ಟ ಬೆನ್ನಲ್ಲೆ ಮಾಜಿ ಕ್ಯಾಪ್ಟನ್ ಕೊಹ್ಲಿಗೆ ತಂಡದಲ್ಲಿ ಬೆಲೆಯೇ ಇಲ್ಲದಂತಾಗಿದೆ. ದಶಕಕ್ಕೂ ಅಧಿಕ ಕಾಲ ಕೊಹ್ಲಿ ಹಿಂದೆ ಬೇತಾಳನಂತೆ ಬಿದ್ದಿದ್ದ ಬಿಸಿಸಿಐ, ಇದೀಗ ಮಾಡ್ರನ್ ಕ್ರಿಕೆಟ್ ದೊರೆಯನ್ನು ಲೆಕ್ಕಕ್ಕೆ ತೆಗೆದುಕೊಳ್ತಿಲ್ಲ.
ಹೊಸ ಕೋಚ್ ಆಯ್ಕೆಯಲ್ಲಿ ಕೊಹ್ಲಿ ಸೈಡ್ಲೈನ್..!
ಇದೇ ನೋಡಿ ಅಸಲಿ ಮ್ಯಾಟರ್. ಜುಲೈ 9 ರಂದು ಬಿಸಿಸಿಐ ಟೀಮ್ ಇಂಡಿಯಾ ನೂತನ ಹೆಡ್ಕೋಚ್ ಆಗಿ ಗೌತಮ್ ಗಂಭೀರ್ ಅವರ ಹೆಸರನ್ನು ಅಧಿಕೃತವಾಗಿ ಘೋಷಿಸಿತ್ತು. ಗಂಭೀರ್ ನೇಮಕದ ವೇಳೆ ಬಿಸಿಸಿಐ ಮಾಜಿ ಕ್ಯಾಪ್ಟನ್ ವಿರಾಟ್ ಕೊಹ್ಲಿಯ ಅಭಿಪ್ರಾಯವನ್ನೇ ಕೇಳಿಲ್ವಂತೆ. ಅವರ ಜೊತೆ ಈ ವಿಚಾರವಾಗಿ ಸ್ವಲ್ಪವೂ ಚರ್ಚಿಸದೇ ಗಂಭೀರ್ ಹೆಸರನ್ನು ಅನೌನ್ಸ್ ಮಾಡಲಾಗಿದೆ ಎಂದು ವರದಿಯಾಗಿದೆ.
ಸಾಮಾನ್ಯವಾಗಿ ಕ್ಯಾಪ್ಟನ್ ಅಥವಾ ಕೋಚ್ ನೇಮಕದ ವೇಳೆ ತಂಡದ ಹಿರಿಯ ಆಟಗಾರರ ಅಭಿಪ್ರಾಯ ಪಡೆಯುವ ಪದ್ಧತಿ ಇದೆ. ವಿರಾಟ್ ಕೊಹ್ಲಿ ಕೂಡ ತಂಡದ ಮೋಸ್ಟ್ ಸೀನಿಯರ್ ಪ್ಲೇಯರ್. ಕ್ಯಾಪ್ಟನ್ ರೋಹಿತ್ ಶರ್ಮಾರಷ್ಟೇ ಅನುಭವಿ ಕ್ರಿಕೆಟಿಗ. ಇಂಥಾ ಕೊಹ್ಲಿ ಬಳಿ ಬಿಸಿಸಿಐ, ಸೌಜನ್ಯಕ್ಕೂ ಸಲಹೆ ಕೇಳುವ ಮನಸ್ಸು ಮಾಡಿಲ್ಲ. ಸಂಪೂರ್ಣವಾಗಿ ನಿರ್ಲಕ್ಷಿಸಿ ನ್ಯೂ ಕೋಚ್ ನೇಮಕ ಮಾಡಲಾಗಿದೆ.
ಇದನ್ನೂ ಓದಿ:ಮಿಸ್ಟ್ರಿ ಗರ್ಲ್ ಜೊತೆ ಹಾರ್ದಿಕ್ ಪಾಂಡ್ಯ ಡೇಟಿಂಗ್? ಮಾರ್ಮಿಕವಾಗಿ ಟಾಂಗ್ ಕೊಟ್ಟ ನಟಾಶಾ..!
ಗಂಭೀರ್ ಆಯ್ಕೆಯಲ್ಲಿ ಹಾರ್ದಿಕ್ ಮಾತಿಗೆ ಮನ್ನಣೆ
ಗೌತಮ್ ಗಂಭೀರ್ರನ್ನ ಟೀಮ್ ಇಂಡಿಯಾದ ಕೋಚ್ ಮಾಡೋಕು ಮುಂಚೆ ಹಾರ್ದಿಕ್ ಪಾಂಡ್ಯ ಜೊತೆ ಬಿಸಿಸಿಐ ಮಾತುಕತೆ ನಡೆಸಿದೆ. ಪಾಂಡ್ಯ ಅಭಿಪ್ರಾಯ ಪಡೆದ ಬಳಿಕವೇ ಗೌತಿ, ದ್ರಾವಿಡ್ ಉತ್ತರಾಧಿಕಾರಿ ಪಟ್ಟಕ್ಕೇರಿದ್ದಾರೆ ಎಂಬ ಸುದ್ದಿ ಹರಿದಾಡ್ತಿದೆ. ಹಾರ್ದಿಕ್ ಮಾತಿಗೆ ಮನ್ನಣೆ ಕೊಟ್ಟ ಬಿಸಿಸಿಐ, ಕೊಹ್ಲಿಯನ್ನ ಕಡೆಗಣಿಸಿದೆ.
ಕೊಹ್ಲಿ ತಂಡದ ಎಲ್ಲರಂತೆ ಸಾಮಾನ್ಯ ಆಟಗಾರ ಅಲ್ಲ. ಅವರೊಬ್ಬ ಲೆಜೆಂಡ್ರಿ ಕ್ರಿಕೆಟರ್. 17 ವರ್ಷಗಳ ಕಾಲ ತಂಡಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ನಾಯಕನಾಗಿ ಹಲವು ವರ್ಷಗಳ ಕಾಲ ತಂಡವನ್ನ ಮುನ್ನಡೆಸಿದ್ದಾರೆ. ತಂಡ ಕಟ್ಟಿರೋದ್ರಲ್ಲಿ ವಿರಾಟ್ ಶ್ರಮ ಅಪಾರ. ಇಂತಹ ಅಪಾರ ಅನುಭವವುಳ್ಳ ಆಟಗಾರನನ್ನ ಹೊಸ ಕೋಚ್ ಆಯ್ಕೆಯಲ್ಲಿ ಸೈಡ್ಲೈನ್ ಮಾಡಿದ್ದು ನಿಜಕ್ಕೂ ಯಾರು ಒಪ್ಪುವಂತಹದ್ದಲ್ಲ.
ಇದನ್ನೂ ಓದಿ:ಅಪರ್ಣಾ ತಮ್ಮ ಬದುಕಲ್ಲಿ ಅಳವಡಿಸಿಕೊಂಡಿದ್ದ ಮೂರು ಸೂತ್ರಗಳು.. ಆ ಮುತ್ತಿನಂಥ ಮಾತುಗಳು ಏನು ಗೊತ್ತಾ..?
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್