‘ಒಂಟಿಯಾಗಿ ಕುಳಿತು ದುಃಖಿಸಲು ಇಷ್ಟ ಪಡಲ್ಲ’.. BCCI ರೂಲ್ಸ್​ ವಿರುದ್ಧ ವಿರಾಟ್ ಕೊಹ್ಲಿ ಗರಂ!

author-image
Bheemappa
Updated On
‘ಒಂಟಿಯಾಗಿ ಕುಳಿತು ದುಃಖಿಸಲು ಇಷ್ಟ ಪಡಲ್ಲ’.. BCCI ರೂಲ್ಸ್​ ವಿರುದ್ಧ ವಿರಾಟ್ ಕೊಹ್ಲಿ ಗರಂ!
Advertisment
  • ಅನ್​ಬಾಕ್ಸ್​ ಇವೆಂಟ್​ನಲ್ಲಿ ಭಾಗವಹಿಸಲಿರುವ ವಿರಾಟ್ ಕೊಹ್ಲಿ
  • ಬಿಸಿಸಿಐನ ನಿಯಮದ ಕುರಿತು ಕಿಡಿ ಕಾರಿದ ಸ್ಟಾರ್ ಕ್ರಿಕೆಟರ್​
  • ಯಾವ ರೂಲ್ಸ್​ ವಿರುದ್ಧ ವಿರಾಟ್ ಕೊಹ್ಲಿ ವಿರೋಧ ವ್ಯಕ್ತಪಡಿಸಿದ್ರು?

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅನ್​ಬಾಕ್ಸ್​ ಇವೆಂಟ್​ಗಾಗಿ ಸ್ಟಾರ್ ಕ್ರಿಕೆಟರ್ ವಿರಾಟ್ ಕೊಹ್ಲಿ ಅವರು ಸಿಲಿಕಾನ್​ ಸಿಟಿಗೆ ಆಗಮಿಸಿದ್ದಾರೆ. ಆರ್​ಸಿಬಿ ಮೊದಲ ಪಂದ್ಯವನ್ನು ಮಾರ್ಚ್​ 22 ರಂದು ಕೋಲ್ಕತ್ತಾ ವಿರುದ್ಧ ಆಡಲಿದೆ. ಚಾಂಪಿಯನ್ ಟ್ರೋಫಿ ಗೆದ್ದ ಜೋಶ್​ನಲ್ಲಿರುವ ವಿರಾಟ್ ಕೊಹ್ಲಿ, ಬಿಸಿಸಿಐನ ಕುಟುಂಬ ನಿರ್ಬಂಧ ನಿಯಮಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.

ರಾಹುಲ್​ ದ್ರಾವಿಡ್- ಪ್ರಕಾಶ್ ಪಡುಕೋಣೆ ಅಕಾಡೆಮಿಯಲ್ಲಿ ಇನೋವೆಟಿವ್ ಲ್ಯಾಬ್ ಆಯೋಜಿಸಿದ್ದ ಇಂಡಿಯನ್ಸ್​ ಸ್ಪೋರ್ಟ್ಸ್​ ಸಮಿಟ್​ನಲ್ಲಿ ನಿರೂಪಕಿ ಇಸಾ ಗುಹಾ ಅವರ ಸಂದರ್ಶನದಲ್ಲಿ ವಿರಾಟ್​ ಕೊಹ್ಲಿ ಅವರು ಮಾತನಾಡಿ, ವಿದೇಶಗಳಲ್ಲಿ ಕ್ರಿಕೆಟ್ ಆಡುವಾಗ ಕಳಪೆ ಪ್ರದರ್ಶನದಿಂದ ತಂಡ ಸೋತಾಗ ಯಾವುದೇ ಆಟಗಾರ ಒಂಟಿಯಾಗಿ ಕುಳಿತು ದುಃಖಿಸಲು ಇಷ್ಟ ಪಡಲ್ಲ. ಕ್ರಿಕೆಟರ್ ಆಗಿರುವುದರ ಜೊತೆಗೆ ಒತ್ತಡಗಳ ಹೊರತಾಗಿ ಸಾಮಾನ್ಯನಾಗಿರಲು ಇಷ್ಟ ಪಡುತ್ತೇನೆ ಎಂದು ಕೊಹ್ಲಿ ಹೇಳಿದ್ದಾರೆ.

ಇದನ್ನೂ ಓದಿ: 50 ಕ್ರಿಕೆಟ್​​ ಪ್ಲೇಯರ್​ಗಳಿಗೆ ಭಾರೀ ಅವಮಾನ​.. ಹಂಡ್ರೆಡ್​ ಡ್ರಾಫ್ಟ್​ನಲ್ಲಿ ಈ ದೇಶದ ಆಟಗಾರರೆಲ್ಲ ಅನ್​ಸೋಲ್ಡ್!

publive-image

ಮೈದಾನದಿಂದ ಹೊರಗೆ ಬಂದಾಗ ಕುಟುಂಬದೊಂದಿಗೆ ಸಮಯ ಕಳೆಯುವುದರಿಂದ ಆಟಗಾರ ಸಾಮಾನ್ಯ ಸ್ಥಿತಿಗೆ ಬರುತ್ತಾನೆ. ಆಟದ ಜೊತೆ ಜೊತೆಗೆ ಕುಟುಂಬದೊಂದಿಗೆ ಯಾವಾಗ ಇರಲು ಬಯಸುತ್ತೇನೆ. ಮೈದಾನದಲ್ಲಿ ಕ್ರಿಕೆಟ್ ಆಡಿದ ಬಳಿಕ ರೂಮ್​ಗೆ ಹೋಗಿ ಒಬ್ಬನೇ ಕುಳಿತು ದುಃಖಿಸಲು ಆಗಲ್ಲ. ಎಲ್ಲರಂತೆ ಸಾಮಾನ್ಯನಾಗಿ ಇರಬೇಕು. ಆಟದ ಎಲ್ಲ ಜವಾಬ್ದಾರಿ ಮುಗಿದ ಮೇಲೆ ಕುಟುಂಬದ ಜೊತೆ ಸಮಯ ಕಳೆಯಬಹುದು ಎಂದು ವಿರಾಟ್ ಕೊಹ್ಲಿ ಸಮರ್ಥಿಸಿಕೊಂಡಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್​ ಗವಸ್ಕಾರ್ ಟ್ರೋಫಿಯ 5 ಪಂದ್ಯಗಳ ಸರಣಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೀಮ್ ಇಂಡಿಯಾ 3-1 ಅಂತರದಿಂದ ಸೋತಿತ್ತು. ಇದರಿಂದ ಬೇಸರಗೊಂಡಿದ್ದ ಬಿಸಿಸಿಐ ತಂಡದಲ್ಲಿ ಶಿಸ್ತು ಮತ್ತು ಏಕತೆ ತರಲು 10 ಅಂಶಗಳ ನಿಯಮವನ್ನು ಜಾರಿ ಮಾಡಿತ್ತು. ಈ ನಿಯಮ ಪಾಲಿಸದಿದ್ದರೇ ಆಟಗಾರರ ಬಿಸಿಸಿಐ ಒಪ್ಪಂದ, ಶುಲ್ಕ ಕಡಿತ ಹಾಗೂ ಐಪಿಎಲ್​​ನಿಂದ ಬ್ಯಾನ್ ಮಾಡುವ ಶಿಕ್ಷೆಯ ಕುರಿತು ಹೇಳಿತ್ತು. ಇದೀಗ ವಿರಾಟ್ ಕೊಹ್ಲಿಯವರು ಬಿಸಿಸಿಐ ರೂಲ್ಸ್ ವಿರುದ್ಧ ಕಿಡಿ ಕಾರಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment