/newsfirstlive-kannada/media/post_attachments/wp-content/uploads/2024/12/ROHIT_KOHLI_KL.jpg)
4ನೇ ಟೆಸ್ಟ್ ಪಂದ್ಯದ 2ನೇ ಇನ್ನಿಂಗ್ಸ್ನಲ್ಲಿ ಬ್ಯಾಟ್ ಬೀಸುತ್ತಿರುವ ಟೀಮ್ ಇಂಡಿಯಾ ಮತ್ತೆ ಸಂಕಷ್ಟಕ್ಕೆ ಸಿಲುಕುವ ಎಲ್ಲ ಸೂಚನೆಗಳು ಕಾಣಿಸುತ್ತಿವೆ. ಏಕೆಂದರೆ ಭಾರತದ ಪರ ಮೂವರು ಪ್ರಮುಖ ಬ್ಯಾಟ್ಸ್ಮನ್ಗಳು ಕೇವಲ 10 ರನ್ಗಳ ಗಡಿ ದಾಟುವ ಮೊದಲೇ ಔಟ್ ಆಗಿ ನಿರಾಸೆ ಮೂಡಿಸಿದ್ದಾರೆ.
ಆಸಿಸ್ ನೆಲದಲ್ಲಿ ಬ್ಯಾಟಿಂಗ್ ಮಾಡಲು ತಿಣುಕಾಡುತ್ತಿರುವ ಟೀಮ್ ಇಂಡಿಯಾ ಬ್ಯಾಟ್ಸ್ಮನ್ಸ್ ಪೆವಿಲಿಯನ್ ಪರೇಡ್ ನಡೆಸಿದ್ದಾರೆ. ಭಾರೀ ನಿರೀಕ್ಷೆ ಹುಟ್ಟಿಸಿದ್ದ ರೋಹಿತ್ ಶರ್ಮಾ, ಕೆ.ಎಲ್ ರಾಹುಲ್ ಹಾಗೂ ವಿರಾಟ್ ಕೊಹ್ಲಿ ಈ ಸಲನೂ ಬ್ಯಾಟಿಂಗ್ ಮಾಡುವಲ್ಲಿ ಫೇಲ್ ಆಗಿ, ಅಭಿಮಾನಿಗಳಿಗೆ ಭಾರೀ ನಿರಾಸೆ ಮೂಡಿಸಿದ್ದಾರೆ. ಬಾರ್ಡರ್ ಗವಾಸ್ಕರ್ ಟ್ರೋಫಿ 4 ಪಂದ್ಯಗಳಲ್ಲಿ ರೋಹಿತ್ ಶರ್ಮಾ ಸಾಧನೆ ಏನೇನೂ ಇಲ್ಲ ಎಂದು ಹೇಳಬಹುದು.
ಓಪನರ್ ಆಗಿ ಕ್ರೀಸ್ಗೆ ಆಗಮಿಸಿದ ನಾಯಕ ರೋಹಿತ್ 40 ಬಾಲ್ಗಳಲ್ಲಿ ಕೇವಲ 9 ರನ್ ಹೊಡೆದು ಜಾಗ ಖಾಲಿ ಮಾಡಿದರು. ಇವರ ನಂತರ ಬಂದ ಕೆ.ಎಲ್ ರಾಹುಲ್ ಬಂದ ದಾರಿಗೆ ಸುಂಕವಿಲ್ಲ ಎನ್ನುವಂತೆ ಡಕೌಟ್ ಆಗಿ ಬರಿಗೈಯಲ್ಲಿ ನಡೆದರು. ಬಳಿಕ ಬ್ಯಾಟಿಂಗ್ಗೆ ಆಗಮಿಸಿದ ವಿರಾಟ್ ಕೊಹ್ಲಿ ನಿರೀಕ್ಷೆ ಮೂಡಿಸಿದ್ದರು. ಆದರೆ 29 ಎಸೆತಗಳಲ್ಲಿ ಐದೇ 5 ರನ್ ಗಳಿಸಿ ಆಡುವಾಗ ಮಿಚೆಲ್ ಸ್ಟಾರ್ಕ್ಗೆ ಕ್ಯಾಚ್ ಕೊಟ್ಟು ಮೈದಾನದಿಂದ ಹೊರಕ್ಕೆ ಹೆಜ್ಜೆ ಹಾಕಿದರು.
ಇದನ್ನೂ ಓದಿ:ICC Test Ranking; ಕೊಹ್ಲಿ, ರೋಹಿತ್, ರಾಹುಲ್ ಸ್ಥಾನ ಯಾವುದು.. ಫಸ್ಟ್, ಸೆಕೆಂಡ್ನಲ್ಲಿ ಯಾರಿದ್ದಾರೆ?
ಟೀಮ್ ಇಂಡಿಯಾವನ್ನು ಮೊದಲ ಇನ್ನಿಂಗ್ಸ್ನಲ್ಲಿ ಯಶಸ್ವಿ ಜೈಸ್ವಾಲ್ ಹಾಗೂ ನಿತೀಶ್ಕುಮಾರ್ ರೆಡ್ಡಿ ಕಾಪಾಡಿದ್ದರು. ಸದ್ಯ ಇವರಿಬ್ಬರ ಬ್ಯಾಟಿಂಗ್ನಿಂದ ತಂಡಕ್ಕೆ ಬಲಬರಬಹುದು ಎಂದು ನಿರೀಕ್ಷೆ ಇದೆ. ಒಂದು ದಿನದಲ್ಲಿ 307 ರನ್ಗಳನ್ನು ಟೀಮ್ ಇಂಡಿಯಾ ಗಳಿಸಿದರೆ ಗೆಲುವು ಸಿಕ್ಕಂತೆ. ಈ ರನ್ಗಳನ್ನು ತಲುಪಲಾಗದೇ ಎಲ್ಲರೂ ಬಂದ ಪುಟ್ಟ, ಹೋದ ಪುಟ್ಟ ಎನ್ನುವಂತೆ ಆಡಿದರೆ ಭಾರತಕ್ಕೆ ಸೋಲು ಖಚಿತ ಎನ್ನಬಹುದು.
ಇನ್ನು ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್ನಲ್ಲಿ 474 ರನ್, 2ನೇ ಇನ್ನಿಂಗ್ಸ್ನಲ್ಲಿ 234 ರನ್ಗಳನ್ನು ಗಳಿಸಿತ್ತು. ಇದಕ್ಕೆ ಉತ್ತರವಾಗಿ ಟೀಮ್ ಇಂಡಿಯಾ ಮೊದಲ ಇನ್ನಿಂಗ್ಸ್ನಲ್ಲಿ 358 ಹಾಗೂ ಈಗ ನಡೆಯುತ್ತಿರುವ 2ನೇ ಇನ್ನಿಂಗ್ಸ್ನಲ್ಲಿ 33 ರನ್ಗೆ 3 ವಿಕೆಟ್ ಕಳೆದುಕೊಂಡು ಭಾರೀ ಸಂಕಷ್ಟದಲ್ಲಿ ಇದೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ