ಇದೇ ವಿರಾಟ್​ ಜೀವನದ ಕಠಿಣ ಸವಾಲು.. ನಂಬಿಕೆ ಮತ್ತು ದೇವರ ಪರೀಕ್ಷೆ ಬಗ್ಗೆ ಮಾತನಾಡಿದ ಕಿಂಗ್​ ಕೊಹ್ಲಿ

author-image
AS Harshith
Updated On
ಕೊಹ್ಲಿಯ ನಂ.1 ಪಟ್ಟ ಕಸಿದ ಪಂತ್.. ಹಣ ಗಳಿಕೆಯಲ್ಲಿ ವಿರಾಟ್​​ನ ಸೈಡ್ ಮಾಡಿದ ರಿಷಭ್!
Advertisment
  • 2013-2022ರವರೆಗೆ ಟೀಂ ಇಂಡಿಯಾದ ನಾಯಕನಾಗಿದ್ದ ಕೊಹ್ಲಿ
  • ಅಂತರರಾಷ್ಟ್ರೀಯ ಕ್ರಿಕೆಟಿಗರಲ್ಲಿ ಅಗ್ರ ರನ್​ ಸ್ಕೋರರ್ ಈ ಕಿಂಗ್​
  • ಅದು ಅಂತಿಮವಾಗಿ ದೇವರ ಪರೀಕ್ಷೆ ಎಂದ ವಿರಾಟ್​​ ಕೊಹ್ಲಿ

ವಿರಾಟ್​ ಕೊಹ್ಲಿ ವಿಶ್ವದ ಅತ್ಯಂತ ಯಶಸ್ವಿ ಕ್ರಿಕೆಟಿಗ. ಅನೇಕರಿಗೆ ಸ್ಫೂರ್ತಿಯಾಗಿರುವ ಈ ಸ್ಟಾರ್​​​ ಆಟಗಾರನ ಸ್ಥಿರತೆ ಎಲ್ಲಾ ಸ್ವರೂಪಗಳಲ್ಲಿ ಅವರನ್ನು ಮಿಂಚುವಂತೆ ಮಾಡಿದೆ. 2013ರಿಂದ 2022ರವರೆಗೆ ಟೀಂ ಇಂಡಿಯಾದ ನಾಯಕನಾಗಿ ಮೆರೆದ ಕೊಹ್ಲಿ ಅನೇಕರಿಗೆ ಕಿಂಗ್​ ಎಂದೆನಿಸಿಕೊಂಡಿದ್ದಾರೆ.

ಕೊಹ್ಲಿ ದಾಖಲೆ ಬಗ್ಗೆ ಹೇಳಬೇಕಾಗಿಲ್ಲ. ಹಲವಾರು ದಾಖಲೆಗಳನ್ನು ವಿರಾಟ್​ ಹೊಂದಿದ್ದಾರೆ. 70 ಶತಕಗಳನ್ನು ಬಾರಿಸುವ ಮೂಲಕ ಅಂತರರಾಷ್ಟ್ರೀಯ ಕ್ರಿಕೆಟಿಗರಲ್ಲಿ ಅಗ್ರ ರನ್​ ಸ್ಕೋರರ್​ ಆಗಿದ್ದಾರೆ. 8 ಸಾವಿರ, 9 ಸಾವಿರ, 10 ಸಾವಿರ ಮತ್ತು 11 ಸಾವಿರದಷ್ಟು ODI ರನ್​ಗಳನ್ನು ತಲುಪಿದ ವೇಗದ ಆಟಗಾರರಾಗಿದ್ದಾರೆ.

ಇದನ್ನೂ ಓದಿ: ಅಂತಿಮ ಘಟ್ಟ ತಲುಪಿದ ದರ್ಶನ್ ಕೇಸ್​.. ಶೇ.70ರಷ್ಟು ಕೈ ಸೇರಿದ ರಿಪೋರ್ಟ್​ ಬಗ್ಗೆ​ ಕಮಿಷನರ್ ಏನಂದ್ರು ಗೊತ್ತಾ?

ಇಷ್ಟೆಲ್ಲಾ ಸಾಧನೆ ಮೆರೆದ ಕೊಹ್ಲಿ ಕ್ರಿಕೆಟ್​​ ಜೀವನದಲ್ಲಿ ಕಠಿಣ ಸವಾಲುಗಳನ್ನು ಕಂಡಿದ್ದಾರೆ. 2020 ಮತ್ತು 2022ರ ನಡುವೆ ಕೆಲವು ಪ್ಯಾಚ್​ವರ್ಕ್​ಗಳನ್ನು ಕೊಹ್ಲಿ ಎದುರಿಸಿದ್ದಾರೆ. ಈ ಕುರಿತಾಗಿ ಕೊಹ್ಲಿ ಮನಬಿಚ್ಚಿ ಮಾತನಾಡಿದ್ದಾರೆ.

ಪಾಡ್​​ಕಾಸ್ಟ್​ವೊಂದರಲ್ಲಿ ಜೀವನದ ಕಠಿಣ ಸವಾಲುಗಳನ್ನು ಎದುರಿಸುವ ಬಗ್ಗೆ ವಿರಾಟ್​​ ಮಾತನಾಡಿದ್ದಾರೆ. ಸದ್ಯ ಅವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗುತ್ತಿದೆ.

ಇದನ್ನೂ ಓದಿ: ರಿಷಬ್​ ಶೆಟ್ಟಿಗೆ ರಾಕಿಂಗ್​ ಸ್ಟಾರ್​, ಜ್ಯೂನಿಯರ್​ NTR ಕಡೆಯಿಂದ ಬಂತು ಹೀಗೊಂದು ವಿಶ್​​.. ಏನಂದ್ರು?

ಕೊಹ್ಲಿ ‘ನೀವು ಉತ್ತಮ ಭಾವನೆ ಇಲ್ಲದ ಸಮಯಗಳಿಗೆ ಹೇಗೆ ಪ್ರತಿಕ್ರಿಯಿಸುತ್ತೀರಿ ಮತ್ತು ನೀವು ಆ ಅಲೆಯನ್ನು ಹೇಗೆ ಸವಾರಿ ಮಾಡುತ್ತೀರಿ ಮತ್ತು ವಿಷಯಗಳನ್ನು ಹೇಗೆ ಸ್ವೀಕರಿಸುತ್ತೀರಿ. ನೀವು ಚೆನ್ನಾಗಿ ಕೆಲಸ ಮಾಡುತ್ತಿಲ್ಲ ಎಂದು ನಿಮಗೆ ತಿಳಿದಾಗ ಕೆಲಸ ಮಾಡಲು ಬಯಸುವುದಿಲ್ಲ. ನೀವು ಅಭ್ಯಾಸ ಮಾಡಲು ಬಯಸುವುದಿಲ್ಲ. ನೀವು ಜಿಮ್​ನಲ್ಲಿ ಕಷ್ಟಪಟ್ಟು ಕೆಲಸ ಮಾಡಲು ಬಯಸುವುದಿಲ್ಲ ಎಂದು ನೀವು ಭಾವಿಸಿದಾಗ ಅದು ತುಂಬಾ ಸೂಕ್ಷ್ಮವಾದ ಕೆಲಸವಾಗಿದೆ. ಆದರೆ ನೀವು ವ್ಯಕ್ತಿಯಂತೆ, ನೀವು ಜೀವನದ ಎಲ್ಲಾ ಹಂತಗಳನ್ನು ಗೌರವಿಸುತ್ತಿದ್ದೀರಿ ಎಂದು ಭಾವಿಸುತ್ತೀರಿ. ನಿಮ್ಮ ಕೆಟ್ಟ ಸಮಯದಲ್ಲೂ ಸಹ, ನೀವು ಕಠಿಣ ಕೆಲಸವನ್ನು ಮಾಡಲು ಬದ್ಧರಾಗಿದ್ದೀರಿ. ಆದರೆ ಅದು ಯಶಸ್ಸಿನ ಮೇಲೆ ಆಧಾರಿತವಾಗಿಲ್ಲ. ಇದು ನನಗೆ ಇಲ್ಲಿ ನಿಜವಾದ ಆಟವಾಗಿದೆ. ಏಕೆಂದರೆ ಅದು ಅಂತಿಮವಾಗಿ ದೇವರ ಪರೀಕ್ಷೆಯಾಗಿದೆ’ ಎಂದು ಹೇಳಿದ್ದಾರೆ.

ಕೊಹ್ಲಿ 2019 ಮತ್ತು 2022ರಲ್ಲಿ ಶತಕದ ಬರ ಎದುರಿಸಿದರು. ಸ್ಕೋರ್ ಮಾಡಲು ಪ್ರಯತ್ನಿಸುತ್ತಿದ್ದರಾದರು ಅದು ಸಮಸ್ಯೆಯಾಗಿ ಎದುರಿಸುತ್ತಿದ್ದರು. ಆ ಸಮಯದಲ್ಲಿ ನಾಯಕತ್ವದ ಒತ್ತಡವು ವಿಪರೀತವಾಗಿತ್ತು. ಇದರಿಂದಾಗಿ ಅವರು 2021 ರ ಅಂತ್ಯದ ವೇಳೆಗೆ ಎಲ್ಲಾ ಸ್ವರೂಪಗಳ ನಾಯಕತ್ವದಿಂದ ಕೆಳಗಿಳಿಯಲು ನಿರ್ಧರಿಸಿದರು. ಕೊನೆಗೆ ಅದರಂತೆ ಮಾಡಿದರು

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment