/newsfirstlive-kannada/media/post_attachments/wp-content/uploads/2025/05/VIRAT_KOHLI_Khaleel_Ahmed.jpg)
ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಟೀಮ್ ಅತ್ಯದ್ಭುತ ಗೆಲುವು ಪಡೆದಿದೆ. ಈ ಮೂಲಕ 8 ಪಂದ್ಯಗಳಲ್ಲಿ ಜಯ ಸಾಧಿಸಿ ಪಾಯಿಂಟ್ ಪಟ್ಟಿಯಲ್ಲಿ ಆರ್ಸಿಬಿ 16 ಅಂಕಗಳಿಂದ ಅಗ್ರಸ್ಥಾನ ಪಡೆದುಕೊಂಡಿದೆ. ಆದ್ರೆ ಪಂದ್ಯದ ವೇಳೆ ವಿರಾಟ್ ಕೊಹ್ಲಿ ಹಾಗೂ ಚೆನ್ನೈ ಬೌಲರ್ ಖಲೀಲ್ ಅಹ್ಮದ್ ನಡುವೆ ಬಿಸಿ ಬಿಸಿ ಮಾತುಕತೆ ನಡೆದಿದ್ದು ವಾರ್ನ್ ಕೂಡ ಮಾಡಿದ್ದಾರೆ ಎನ್ನಲಾಗಿದೆ.
ಮೊದಲ ಬ್ಯಾಟಿಂಗ್ ಮಾಡಿದ ಆರ್ಸಿಬಿ ಓಪನರ್ಸ್ ವಿರಾಟ್ ಕೊಹ್ಲಿ, ಜಾಕೋಬ್ ಬೆಥೆಲ್ ಆರಂಭದಿಂದಲೂ ಬಿರುಸಿನ ಬ್ಯಾಟಿಂಗ್ ಪ್ರದರ್ಶನ ಮಾಡಿದರು. 97 ರನ್ವರೆಗೆ ಇಬ್ಬರೂ ಜೊತೆಯಾಟ ಆಡಿ ಚೆನ್ನೈ ಬೌಲರ್ಗೆ ಬೆಂಡೆತ್ತಿದರು. 5ನೇ ಓವರ್ ಮಾಡುತ್ತಿದ್ದ ಖಲೀಲ್ ಅಹ್ಮದ್ಗೆ ಚಳಿ ಬಿಡಿಸಿದ್ದ ಕೊಹ್ಲಿ ಒಂದೇ ಓವರ್ನಲ್ಲಿ ಬ್ಯಾಕ್ ಟು ಬ್ಯಾಕ್ ಸಿಕ್ಸರ್ ಬಾರಿಸಿ ಅದ್ಭುತ ಫಾರ್ಮ್ ಪ್ರದರ್ಶಿಸಿದರು. ಆದರೆ ಕೊಹ್ಲಿ ಬ್ಯಾಟಿಂಗ್ನಿಂದ ಖಲೀಲ್ ಬೇಸರಗೊಂಡರು ಎನಿಸುತ್ತದೆ.
ಏಕೆಂದರೆ 12 ಓವರ್ ಮಾಡುತ್ತಿದ್ದ ಸ್ಯಾಮ್ ಕರನ್ ಅವರ ಬೌಲಿಂಗ್ನಲ್ಲಿ ವಿರಾಟ್ ಕೊಹ್ಲಿ ಗ್ಯಾಪ್ ಹಾಕಲು ಹೋಗಿ ಖಲೀಲ್ ಅಹ್ಮದ್ಗೆ ಸುಲಭವಾಗಿ ಕ್ಯಾಚ್ ಕೊಟ್ಟರು. ಇದನ್ನು ದೊಡ್ಡ ಮಟ್ಟದಲ್ಲಿ ಸಂಭ್ರಮಿಸಿದ ಖಲೀಲ್, ಬಾಲ್ ಜೋರಾಗಿ ನೆಲಕ್ಕೆ ಎಸೆದು ಕೋಪ ತೋರಿಸಿದರು. ಈ ರಿವೆಂಜ್ ಮನಸಲ್ಲಿ ಇಟ್ಟುಕೊಂಡಿದ್ದ ಕೊಹ್ಲಿ ಅದನ್ನು ತೀರಿಸಿಯೇ ಬಿಟ್ಟರು.
ಇದನ್ನೂ ಓದಿ: ಕೇವಲ ಒಂದೇ 1 ರನ್ನಿಂದ ಆರೆಂಜ್ ಕ್ಯಾಪ್ ಪಡೆದ ಕಿಂಗ್ ಕೊಹ್ಲಿ.. ಪರ್ಪಲ್ ಕ್ಯಾಪ್ ಕೂಡ ಕನ್ನಡಿಗನಿಗೆ
ಚೆನ್ನೈ ವಿರುದ್ಧ ಆರ್ಸಿಬಿ ಗೆದ್ದ ಬಳಿಕ ಆಟಗಾರರು ಪರಸ್ಪರ ಮಾತನಾಡುವಾಗ ಖಲೀಲ್ ಅಹ್ಮದ್ಗೆ ಕೊಹ್ಲಿ ಎಲ್ಲವನ್ನು ಹಿಂದಕ್ಕೆ ಕೊಟ್ಟಿದ್ದಾರೆ. ಕೋಪದಲ್ಲೇ ಮಾತನಾಡಿದ ಕೊಹ್ಲಿ, ನೇರನೇರವಾಗಿಯೇ ಟಕ್ಕರ್ ಕೊಟ್ಟಿದ್ದಾರೆ. ಮುಂದಿನ ಯಾವುದಾದರೂ ಮ್ಯಾಚ್ ಅಲ್ಲಿ ಸಿಗು ಐತಿ ನಿನಗೆ ಎಂದಿದ್ದಾರೆ. ಇದಕ್ಕೆ ಖಲೀಲ್ ಅಹ್ಮದ್ ಎದುರುತ್ತರ ಕೊಡಲು ಬಂದರು ಕೊಹ್ಲಿ ಯಾವುದನ್ನು ಕಿವಿಗೆ ಹಾಕೊಂಡಿಲ್ಲ.
Never mess with King Kohli 👑 pic.twitter.com/tPGZ56MUfu
— 𝗘𝗸𝗻𝗮𝘁𝗵 (@TheRcbian) May 4, 2025
ಇನ್ನು ಈ ಪಂದ್ಯದಲ್ಲಿ ಭಾರೀ ದುಬಾರಿಯಾದ ಖಲೀಲ್ ಅಹ್ಮದ್ 3 ಓವರ್ಗಳನ್ನು ಮಾಡಿ ಯಾವುದೇ ವಿಕೆಟ್ ಪಡೆಯದೇ ಒಟ್ಟು 65 ರನ್ ನೀಡಿದರು. ಅಲ್ಲದೇ 19ನೇ ಓವರ್ನಲ್ಲಿ ರೊಮಾರಿಯೋ ಶೆಫರ್ಡ್ ಇಂದ 33 ರನ್ಗಳನ್ನು ಬಾರಿಸಿಕೊಂಡು ಅವಮಾನಕ್ಕೆ ಒಳಗಾದರು. ಇವರ ಓವರ್ನಲ್ಲಿ ಬಂದ ರನ್ಗಳೇ ಚೆನ್ನೈ ತಂಡ ಸೋಲಲು ಕಾರಣವಾಯಿತು ಎಂದು ಫ್ಯಾನ್ಸ್ ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ