ಬಿಸಿಸಿಐ ಖಡಕ್​​ ವಾರ್ನಿಂಗ್​ ಬೆನ್ನಲ್ಲೇ ಎಚ್ಚೆತ್ತ ವಿರಾಟ್​​.. ಕೊಹ್ಲಿಯಿಂದ ಮಹತ್ವದ ನಿರ್ಧಾರ!

author-image
Ganesh Nachikethu
Updated On
T20 ಆಯ್ತು.. ಈಗ ಮತ್ತೊಂದು ಫಾರ್ಮೆಟ್​ಗೂ ಗುಡ್ ಬೈ ಹೇಳ್ತಾರಾ! ಕೊಹ್ಲಿಯ ಈ ನಿರ್ಧಾರಾ ನಿಜನಾ?
Advertisment
  • ಟೀಮ್​ ಇಂಡಿಯಾ ಆಟಗಾರರಿಗೆ ಬಿಸಿಸಿಐ ಖಡಕ್​ ಎಚ್ಚರಿಕೆ
  • ದೇಶೀಯ ಕ್ರಿಕೆಟ್​ ಆಡುವಂತೆ ವಾರ್ನಿಂಗ್​ ಕೊಟ್ಟ ಬಿಸಿಸಿಐ..!
  • ಬಿಸಿಸಿಐ ವಾರ್ನಿಂಗ್​​ ಬೆನ್ನಲ್ಲೇ ಎಚ್ಚೆತ್ತ ಕ್ರಿಕೆಟರ್​​ ವಿರಾಟ್​ ಕೊಹ್ಲಿ

ಇತ್ತೀಚೆಗಷ್ಟೇ ಭಾರತ ಕ್ರಿಕೆಟ್​ ತಂಡ ಶ್ರೀಲಂಕಾ ಪ್ರವಾಸವನ್ನು ಯಶಸ್ವಿಯಾಗಿ ಮುಗಿಸಿದೆ. ಶ್ರೀಲಂಕಾ ಪ್ರವಾಸ ಮುಗಿಯುತ್ತಿದ್ದಂತೆ ಟೀಮ್​ ಇಂಡಿಯಾ ಆಟಗಾರರಿಗೆ ಐದು ವಾರಗಳ ವಿಶ್ರಾಂತಿ ನೀಡಲಾಗಿದೆ. ಈ ಸಂದರ್ಭವನ್ನು ಸದುಪಯೋಗ ಮಾಡಿಕೊಳ್ಳಲು ಟೀಮ್​ ಇಂಡಿಯಾ ಆಟಗಾರರು ತಮ್ಮದೇ ಪ್ಲ್ಯಾನ್‌ ಮಾಡಿಕೊಂಡಿದ್ದಾರೆ. ಅದರಲ್ಲೂ ಕೆಲವರು ಸ್ಟಾರ್​ ಆಟಗಾರರು ದೇಶೀಯ ಕ್ರಿಕೆಟ್​ ಆಡಲು ಮುಂದಾಗಿರುವುದು ವಿಶೇಷ.

ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿ ಮಾಡಿರೋ ಪ್ರಕಾರ ಟೀಮ್​ ಇಂಡಿಯಾ ಆಟಗಾರರು ವಿಶ್ರಾಂತಿ ಅವಧಿಯನ್ನು ಸದ್ಬಳಕೆ ಮಾಡಿಕೊಳ್ಳಲು ಮುಂದಾಗಿದ್ದಾರೆ. ಸ್ಟಾರ್​ ಆಟಗಾರರೇ ದೇಶೀಯ ಟೂರ್ನಿಯಲ್ಲಿ ಭಾಗವಹಿಸಲು ಸಿದ್ಧರಾಗುತ್ತಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಸೆಪ್ಟಂಬರ್ 19 ರಿಂದ ಬಾಂಗ್ಲಾದೇಶ ವಿರುದ್ಧ ಟೆಸ್ಟ್‌ ಪಂದ್ಯಾವಳಿ ಆರಂಭವಾಗಲಿದೆ. ಇದಕ್ಕೂ ಮುನ್ನ ದುಲೀಪ್‌ ಟ್ರೋಫಿ ನಡೆಯಲಿದೆ.

ದುಲೀಪ್‌ ಟ್ರೋಫಿಯಲ್ಲಿ ವಿರಾಟ್​ ಕೊಹ್ಲಿ

ಟೀಮ್ ಇಂಡಿಯಾದ ಸ್ಟಾರ್ ಆಟಗಾರರಾದ ವಿರಾಟ್‌ ಕೊಹ್ಲಿ ದುಲೀಪ್‌ ಟ್ರೋಫಿ ಆಡಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಆದರೆ, ಇವರು ಯಾವಾಗ ಮೈದಾನ ಪ್ರವೇಶಿಸುತ್ತಾರೆ ಎಂಬ ಬಗ್ಗೆ ಇನ್ನೂ ಯಾವುದೇ ಮಾಹಿತಿ ಸಿಕ್ಕಿಲ್ಲ.

ಬಿಸಿಸಿಐನಿಂದಲೂ ಖಡಕ್​ ವಾರ್ನಿಂಗ್​​

ದುಲೀಪ್ ಟ್ರೋಫಿಗೆ ಎಲ್ಲಾ ಆಟಗಾರರು ಲಭ್ಯ ಇರಬೇಕು ಎಂದು ಬಿಸಿಸಿಐ ಈಗಾಗಲೇ ಖಡಕ್​ ವಾರ್ನಿಂಗ್​​​ ನೀಡಿದೆ. ಸದ್ಯದಲ್ಲೇ ಭಾರತ ಎ, ಇಂಡಿಯಾ ಬಿ, ಇಂಡಿಯಾ ಸಿ ಮತ್ತು ಇಂಡಿಯಾ ಡಿ ತಂಡಗಳನ್ನು ರಚಿಸಲಿದ್ದು, ಎಲ್ಲರೂ ಟೂರ್ನಿಯಲ್ಲಿ ಭಾಗಿಯಾಗಬೇಕು ಎಂದು ಸೂಚನೆ ಕೊಡಲಾಗಿದೆ. ಇದರಿಂದ ಎಚ್ಚೆತ್ತ ವಿರಾಟ್​​ ಕೊಹ್ಲಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಕ್ಯಾಪ್ಟನ್ಸಿಯಿಂದ ಸ್ಟಾರ್​ ಆಟಗಾರ ಔಟ್​​; ಸೂರ್ಯಕುಮಾರ್​ ಯಾದವ್​ಗೆ​​ ಡಬಲ್​ ಧಮಾಕ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment