ನಾಳೆ ಭಾರತ, ಪಾಕಿಸ್ತಾನ ನಡುವಿನ ಮಹತ್ವದ ಪಂದ್ಯ
ಪಾಕ್ ವಿರುದ್ಧ ಗೆಲ್ಲಲು ಈತನೇ ಮಾಸ್ಟರ್ ಮೈಂಡ್..!
ಬಾಬರ್ ಟೀಮ್ಗೆ ಎಚ್ಚರಿಕೆ ಕೊಟ್ಟ ವಿರಾಟ್ ಕೊಹ್ಲಿ
ಈಗಾಗಲೇ ಬಹುನಿರೀಕ್ಷಿತ 2023ರ ಏಷ್ಯಾಕಪ್ ಟೂರ್ನಿ ಆರಂಭವಾಗಿದೆ. ಸೆಪ್ಟೆಂಬರ್ 2ನೇ ತಾರೀಕು ಅಂದರೆ ನಾಳೆ ಟೂರ್ನಿಯ ಮಹತ್ವದ ಪಂದ್ಯದಲ್ಲಿ ಪಾಕ್ ಮತ್ತು ಭಾರತ ತಂಡಗಳು ಭಾಗಿಯಾಗಲಿವೆ. ಇನ್ನು, ಈ ಪಂದ್ಯಕ್ಕಾಗಿ ಇಡೀ ಕ್ರೀಡಾ ಜಗತ್ತೇ ಎದುರು ನೋಡುತ್ತಿದೆ. ಅದರಲ್ಲೂ ಜಗತ್ತು ಕಂಡ ಶ್ರೇಷ್ಠ ಕ್ರಿಕೆಟರ್ ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ವಿರಾಟ್ ಕೊಹ್ಲಿ ಮೇಲೆಯೇ ಎಲ್ಲರ ಕಣ್ಣು ನೆಟ್ಟಿದೆ.
ಕಳೆದ ವರ್ಷ ಟಿ20 ವಿಶ್ವಕಪ್ ಪಂದ್ಯದಲ್ಲಿ ಟೀಂ ಇಂಡಿಯಾ, ಪಾಕ್ ಕಾದಾಟ ನಡೆಸಿದ್ದವು. ಅಂದು ಪಾಕ್ ಎದುರು ಭಾರತ ಸೋತು ಹೋಗಲಿದೆ ಅನ್ನೋ ಪರಿಸ್ಥಿತಿ ನಿರ್ಮಾಣ ಆಗಿತ್ತು. ಬಳಿಕ ಅದ್ಭುತ ಬ್ಯಾಟಿಂಗ್ ಮಾಡಿದ ವಿರಾಟ್ ಕೊಹ್ಲಿ ತಮ್ಮ ಅಸಲಿ ಖದರ್ ತೋರಿಸಿದರು. ಅಜೇಯ 82 ರನ್ ಸಿಡಿಸಿ ಭಾರತವನ್ನು ಗೆಲ್ಲಿಸಿದ್ದರು. ಅಂದಿನ ಪಂದ್ಯವನ್ನು ಯಾರು ಮರೆಯಲು ಸಾಧ್ಯವಿಲ್ಲ. ಹೀಗಾಗಿ ನಾಳೆಯ ಪಂದ್ಯದ ಗೆಲುವು ಕೂಡ ಕೊಹ್ಲಿ ಆಟದ ಮೇಲೆ ನಿಂತಿದೆ. ಹೀಗಿರುವಾಗಲೇ ಈ ಬಗ್ಗೆ ಕೊಹ್ಲಿ ಮಾತಾಡಿದ್ದಾರೆ.
ನಾನು ಯಾವಾಗಲೂ ಬ್ಯಾಟಿಂಗ್ ಸುಧಾರಣೆಗೆ ಒತ್ತು ನೀಡುತ್ತೇನೆ. ಹೀಗಾಗಿಯೇ ಕಳೆದ ಆರು ತಿಂಗಳಲ್ಲಿ ನಡೆದ ಎಲ್ಲಾ ಅಭ್ಯಾಸ ಹಾಗೂ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದೇನೆ. ಇದರ ಪರಿಣಾಮ ಟೀಮ್ ಇಂಡಿಯಾದಲ್ಲಿ ನಾನು ಬೆಸ್ಟ್ ಪರ್ಫಾಮ್ ಮಾಡಲು ಸಾಧ್ಯವಾಗಿದೆ. ಈ ಬಾರಿ 82 ಅಲ್ಲ, ಸೆಂಚೂರಿ ಬಾರಿಸಿ ಟೀಂ ಇಂಡಿಯಾವನ್ನು ಗೆಲ್ಲಿಸೋದೆ ನನ್ನ ಗುರಿ ಎಂದಿದ್ದಾರೆ. ಈ ಮೂಲಕ ಪಾಕ್ ತಂಡಕ್ಕೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಪಾಕ್ ವಿರುದ್ಧ ಮ್ಯಾಚ್ಗೆ ಬಲಿಷ್ಠ ಟೀಂ ಇಂಡಿಯಾ!
ಕ್ಯಾಪ್ಟನ್ ರೋಹಿತ್ ಶರ್ಮಾ, ಚೀಫ್ ಸೆಲೆಕ್ಟರ್ ಅಜಿತ್ ಅಗರ್ಕರ್ ನೇತೃತ್ವದಲ್ಲಿ ನಡೆದ ಮಹತ್ವದ ಸಭೆ ಬಳಿಕ ಏಷ್ಯಾಕಪ್ಗಾಗಿ ಬಲಿಷ್ಠ ಟೀಂ ಇಂಡಿಯಾ ಪ್ರಕಟವಾಗಿದೆ. 17 ಸದಸ್ಯರನ್ನು ಒಳಗೊಂಡ ಟೀಂ ಇಂಡಿಯಾ ಪ್ರಕಟವಾಗಿದ್ದು, ಈ ಬಾರಿ ಕೂಡ ಏಷ್ಯಾಕಪ್ನಲ್ಲಿ ಕ್ಯಾಪ್ಟನ್ ರೋಹಿತ್ ಶರ್ಮಾ ಅವರೇ ತಂಡವನ್ನು ಮುನ್ನಡೆಸಲಿದ್ದಾರೆ. ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯಗೆ ಉಪನಾಯಕನ ಪಟ್ಟ ಕಟ್ಟಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಾಳೆ ಭಾರತ, ಪಾಕಿಸ್ತಾನ ನಡುವಿನ ಮಹತ್ವದ ಪಂದ್ಯ
ಪಾಕ್ ವಿರುದ್ಧ ಗೆಲ್ಲಲು ಈತನೇ ಮಾಸ್ಟರ್ ಮೈಂಡ್..!
ಬಾಬರ್ ಟೀಮ್ಗೆ ಎಚ್ಚರಿಕೆ ಕೊಟ್ಟ ವಿರಾಟ್ ಕೊಹ್ಲಿ
ಈಗಾಗಲೇ ಬಹುನಿರೀಕ್ಷಿತ 2023ರ ಏಷ್ಯಾಕಪ್ ಟೂರ್ನಿ ಆರಂಭವಾಗಿದೆ. ಸೆಪ್ಟೆಂಬರ್ 2ನೇ ತಾರೀಕು ಅಂದರೆ ನಾಳೆ ಟೂರ್ನಿಯ ಮಹತ್ವದ ಪಂದ್ಯದಲ್ಲಿ ಪಾಕ್ ಮತ್ತು ಭಾರತ ತಂಡಗಳು ಭಾಗಿಯಾಗಲಿವೆ. ಇನ್ನು, ಈ ಪಂದ್ಯಕ್ಕಾಗಿ ಇಡೀ ಕ್ರೀಡಾ ಜಗತ್ತೇ ಎದುರು ನೋಡುತ್ತಿದೆ. ಅದರಲ್ಲೂ ಜಗತ್ತು ಕಂಡ ಶ್ರೇಷ್ಠ ಕ್ರಿಕೆಟರ್ ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ವಿರಾಟ್ ಕೊಹ್ಲಿ ಮೇಲೆಯೇ ಎಲ್ಲರ ಕಣ್ಣು ನೆಟ್ಟಿದೆ.
ಕಳೆದ ವರ್ಷ ಟಿ20 ವಿಶ್ವಕಪ್ ಪಂದ್ಯದಲ್ಲಿ ಟೀಂ ಇಂಡಿಯಾ, ಪಾಕ್ ಕಾದಾಟ ನಡೆಸಿದ್ದವು. ಅಂದು ಪಾಕ್ ಎದುರು ಭಾರತ ಸೋತು ಹೋಗಲಿದೆ ಅನ್ನೋ ಪರಿಸ್ಥಿತಿ ನಿರ್ಮಾಣ ಆಗಿತ್ತು. ಬಳಿಕ ಅದ್ಭುತ ಬ್ಯಾಟಿಂಗ್ ಮಾಡಿದ ವಿರಾಟ್ ಕೊಹ್ಲಿ ತಮ್ಮ ಅಸಲಿ ಖದರ್ ತೋರಿಸಿದರು. ಅಜೇಯ 82 ರನ್ ಸಿಡಿಸಿ ಭಾರತವನ್ನು ಗೆಲ್ಲಿಸಿದ್ದರು. ಅಂದಿನ ಪಂದ್ಯವನ್ನು ಯಾರು ಮರೆಯಲು ಸಾಧ್ಯವಿಲ್ಲ. ಹೀಗಾಗಿ ನಾಳೆಯ ಪಂದ್ಯದ ಗೆಲುವು ಕೂಡ ಕೊಹ್ಲಿ ಆಟದ ಮೇಲೆ ನಿಂತಿದೆ. ಹೀಗಿರುವಾಗಲೇ ಈ ಬಗ್ಗೆ ಕೊಹ್ಲಿ ಮಾತಾಡಿದ್ದಾರೆ.
ನಾನು ಯಾವಾಗಲೂ ಬ್ಯಾಟಿಂಗ್ ಸುಧಾರಣೆಗೆ ಒತ್ತು ನೀಡುತ್ತೇನೆ. ಹೀಗಾಗಿಯೇ ಕಳೆದ ಆರು ತಿಂಗಳಲ್ಲಿ ನಡೆದ ಎಲ್ಲಾ ಅಭ್ಯಾಸ ಹಾಗೂ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದೇನೆ. ಇದರ ಪರಿಣಾಮ ಟೀಮ್ ಇಂಡಿಯಾದಲ್ಲಿ ನಾನು ಬೆಸ್ಟ್ ಪರ್ಫಾಮ್ ಮಾಡಲು ಸಾಧ್ಯವಾಗಿದೆ. ಈ ಬಾರಿ 82 ಅಲ್ಲ, ಸೆಂಚೂರಿ ಬಾರಿಸಿ ಟೀಂ ಇಂಡಿಯಾವನ್ನು ಗೆಲ್ಲಿಸೋದೆ ನನ್ನ ಗುರಿ ಎಂದಿದ್ದಾರೆ. ಈ ಮೂಲಕ ಪಾಕ್ ತಂಡಕ್ಕೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಪಾಕ್ ವಿರುದ್ಧ ಮ್ಯಾಚ್ಗೆ ಬಲಿಷ್ಠ ಟೀಂ ಇಂಡಿಯಾ!
ಕ್ಯಾಪ್ಟನ್ ರೋಹಿತ್ ಶರ್ಮಾ, ಚೀಫ್ ಸೆಲೆಕ್ಟರ್ ಅಜಿತ್ ಅಗರ್ಕರ್ ನೇತೃತ್ವದಲ್ಲಿ ನಡೆದ ಮಹತ್ವದ ಸಭೆ ಬಳಿಕ ಏಷ್ಯಾಕಪ್ಗಾಗಿ ಬಲಿಷ್ಠ ಟೀಂ ಇಂಡಿಯಾ ಪ್ರಕಟವಾಗಿದೆ. 17 ಸದಸ್ಯರನ್ನು ಒಳಗೊಂಡ ಟೀಂ ಇಂಡಿಯಾ ಪ್ರಕಟವಾಗಿದ್ದು, ಈ ಬಾರಿ ಕೂಡ ಏಷ್ಯಾಕಪ್ನಲ್ಲಿ ಕ್ಯಾಪ್ಟನ್ ರೋಹಿತ್ ಶರ್ಮಾ ಅವರೇ ತಂಡವನ್ನು ಮುನ್ನಡೆಸಲಿದ್ದಾರೆ. ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯಗೆ ಉಪನಾಯಕನ ಪಟ್ಟ ಕಟ್ಟಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ