ಅಯ್ಯೋ.. ವಿಶಾಲ್‌ಗೆ ಏನಾಯ್ತು? ಈ ವಿಡಿಯೋ ನೋಡಿದ್ರೆ ಶಾಕ್ ಆಗ್ತೀರಾ! ತಮಿಳು ಚಿತ್ರರಂಗ ಹೇಳಿದ್ದೇನು?

author-image
Gopal Kulkarni
Updated On
ಅಯ್ಯೋ.. ವಿಶಾಲ್‌ಗೆ ಏನಾಯ್ತು? ಈ ವಿಡಿಯೋ ನೋಡಿದ್ರೆ ಶಾಕ್ ಆಗ್ತೀರಾ! ತಮಿಳು ಚಿತ್ರರಂಗ ಹೇಳಿದ್ದೇನು?
Advertisment
  • ನಟ ವಿಶಾಲ್ ಪರಿಸ್ಥಿತಿ ಕಂಡು ಮಮ್ಮಲ ಮರುಗಿದ ತಮಿಳು ಚಿತ್ರರಂಗ
  • ವಿಶಾಲ್ ಮೊದಲಿನಂತಾಗಲು ಎಲ್ಲ ಸಹಾಯಕ್ಕೂ ಸಜ್ಜಾದ ಗೆಳೆಯರು
  • ವಿಡಿಯೋ ವೈರಲ್ ಬಳಿಕ ವಿಶಾಲ್​ಗೆ ಕರೆ ಮಾಡಿ ಮಾತನಾಡಿರುವ ಸ್ನೇಹಿತರು

ಕಳೆದ ಎರಡು ದಿನಗಳಿಂದ ಹೆಚ್ಚು ಚರ್ಚೆಗೆ ಬಂದ ವಿಷಯ ಅಂದ್ರೆ ಅದು ತಮಿಳು ಚಿತ್ರನಟ ವಿಶಾಲ್ ಅವರ ಆರೋಗ್ಯದ್ದು. ಹೇಗಿದ್ದ ವಿಶಾಲ್ ಹೇಗಾಗಿದ್ದಾರೆ? ಏನಾಯ್ತು ವಿಶಾಲ್​ಗೆ? ಎಂಬ ಮಾತುಗಳೇ ಹೆಚ್ಚು ಕೇಳಿ ಬರುತ್ತಿವೆ. ನಿಂತರೆ ಆರಡಿ ಎತ್ತರದ ನಿಲುವು. ಕಟ್ಟುಮಸ್ತಾದ ದೇಹ, ಒಬ್ಬ ಖಡಕ್ ಹೀರೋಗೆ ಇರಬೇಕಾದ ಎಲ್ಲಾ ಅಂಶಗಳು ಕಡೆದಿಟ್ಟಂತಹ ದೇಹದಲ್ಲಿಯೇ ಕಾಣುತ್ತಿದ್ದವು. ಅಂತಹ ವಿಶಾಲ್​ ನಡುಗುತ್ತಿರುವ ಕೈಯಲ್ಲಿ, ಸೋತ ದೇಹದಲ್ಲಿ, ಕಳೆಗುಂದಿದ ಮುಖದಲ್ಲಿ, ಯಾವುದೋ ಹತಾಶ ಭಾವದಲ್ಲಿ ಕುಳಿತಿರುವುದನ್ನು ಕಂಡ ಅಭಿಮಾನಿಗಳು ಅಕ್ಷರಶಃ ಈಗ ಕಣ್ಣೀರಾಗಿದ್ದಾರೆ.

ಹೌದು, ಎರಡು ದಿನಗಳ ಹಿಂದೆ ಮಧಾ ಗಜಾ ರಾಜಾ ಸಿನಿಮಾದ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡಿದ್ದ ವಿಶಾಲ್​ರನ್ನು ಕಂಡ ಅಭಿಮಾನಿಗಳು ಈ ಹಿಂದೆ ಎಂದೂ ಕೂಡ ವಿಶಾಲ್​ರನ್ನು ಆ ಪರಿಸ್ಥಿತಿಯಲ್ಲಿ ಕಂಡಿರಲಿಲ್ಲ. ಹೀಗೆ ಅವರನ್ನು ಒಂದ ದಿನ ನೋಡುತ್ತೇವೆ ಕೂಡ ಎಂದುಕೊಂಡಿರಲಿಲ್ಲ. ಅಂದು ತಮಿಳು ನಟನ ಒಂದೊಂದು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದವು. ವಿಡಿಯೋ ನೋಡಿದ ಅಭಿಮಾನಿಗಳು ಅಕ್ಷರಶಃ ಕಣ್ಣೀರು ಹಾಕಿ. ಏನಾಗಿದೆ ವಿಶಾಲ್​ಗೆ? ಯಾಕೆ ಹೀಗಾಗಿದ್ದಾರೆ? ಎಂದು ಪ್ರಶ್ನಿಸಿದ್ದರು. ದೇವರು ಅವರನ್ನು ಶೀಘ್ರವೇ ಗುಣಮುಖಗೊಳಿಸಲಿ ಎಂದು ಪ್ರಾರ್ಥಿಸಿಕೊಂಡಿದ್ದರು. ಸದ್ಯ ವಿಶಾಲ್ ಸ್ಥಿತಿಯನ್ನು ಕಂಡ ತಮಿಳು ಚಿತ್ರರಂಗ ಅವರ ಸಹಾಯಕ್ಕೆ ನಿಂತಿದೆ.

ಇದನ್ನೂ ಓದಿ:ನಟ ವಿಶಾಲ್ ಆರೋಗ್ಯದಲ್ಲಿ ಮತ್ತೆ ಏರುಪೇರು.. ಆಸ್ಪತ್ರೆಗೆ ದಾಖಲು; ವೈದ್ಯರು ಹೇಳಿದ್ದೇನು?

ನಿನ್ನೆ ಮುಂಜಾನೆಯಿಂದ ಪ್ರಸಾರಗೊಂಡ ವಿಶಾಲ್ ಬಗೆಗಿನ ಸುದ್ದಿಗಳು ವಿಶಾಲ್ ಅವರ ಸಿನಿಮಾ ಇಂಡಸ್ಟ್ರೀ ಗೆಳೆಯರ ಗಮನವನ್ನು ಸೆಳೆದಿವೆ. ನಿನ್ನೆಯಿಂದ ನಿರಂತರವಾಗಿ ವಿಶಾಲ್​ಗೆ ಕರೆಗಳು ಹೋಗಿದ್ದು ಅವರ ಆರೋಗ್ಯ ವಿಚಾರಿಸುತ್ತಿದ್ದಾರೆ. ಅದು ಮಾತ್ರವಲ್ಲ ಅವರು ಮೊದಲಿನಂತಾಗಲು ಏನೆಲ್ಲಾ ನೆರುವು ಬೇಕೋ ಆ ಎಲ್ಲಾ ನೆರವನ್ನು ನೀಡಲು ಸಿನಿಮಾ ಜಗತ್ತಿನ ಗೆಳೆಯರು ಸಜ್ಜಾಗಿದ್ದಾರೆ. ಕೆಲವು ಸ್ನೇಹಿತರು ವೈಯಕ್ತಿಕವಾಗಿ ನಟನನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದಾರೆ. ನಿಜಕ್ಕೂ ವಿಶಾಲ್​ಗೆ ಏನಾಗಿದೆ ಎಂದು ವಿಚಾರಿಸಿದ್ದಾರೆ.

ಇದನ್ನೂ ಓದಿ:ನಡುಗುವ ಕೈಗಳು, ತೊದಲು ಮಾತು.. ಮುಚ್ಚಿಟ್ಟಿದ್ದ ಗುಟ್ಟು ಕೊನೆಗೂ ರಟ್ಟಾಯ್ತು; ನಟ ವಿಶಾಲ್​ಗೆ​ ಆಗಿದ್ದೇನು?

ಆದರೆ ವಿಶಾಲ್​ರನ್ನು ವೈಯಕ್ತಿಕವಾಗಿ ಹೋಗಿ ಭೇಟಿಯಾಗಿ ಮಾತನಾಡಿಸಿ ಬಂದ ನಟ ಯಾರು ಅನ್ನೋದರ ಬಗ್ಗೆ ಇನ್ನೂ ಕೂಡ ಸ್ಪಷ್ಟ ಮಾಹಿತಿ ದೊರಕಿಲ್ಲ. ಆದ್ರೆ ವಿಶಾಲ್ ಚೇತರಿಸಿಕೊಂಡು ಮೊದಲಿನಂತಾಗಲು ಬೇಕಾದ ಸಹಾಯ ಮಾಡಲು ಈಗ ಇಡೀ ತಮಿಳು ಚಿತ್ರರಂಗವೇ ಸಜ್ಜಾಗಿದೆ. ಈ ಒಗ್ಗಟ್ಟು ಈ ಪ್ರೀತಿ ವಿಶಾಲ್​ರನ್ನು ಮೊದಲಿನಂತೆ ಮಾಡಬೇಕಿದೆ. ಮತ್ತೆ ಬೆಳ್ಳಿ ತೆರೆಯ ಮೇಲೆ ಆ ಚೇತನ ಮಿಂಚಬೇಕಿದೆ. ಬಂದ ಎಲ್ಲಾ ಕಷ್ಟಗಳು ನೀರಿನಂತೆ ಕರಗಿ. ಅವರ ಬದುಕು ಮೊದಲಿನಂತಾಗಬೇಕಿದೆ ಎಂದೇ ಎಲ್ಲರೂ ಪ್ರಾರ್ಥಿಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment