/newsfirstlive-kannada/media/post_attachments/wp-content/uploads/2025/04/Waqf-Bill-1.jpg)
ಇವತ್ತು ಮಧ್ಯಾಹ್ನ 12ಕ್ಕೆ ಲೋಕಸಭೆಯಲ್ಲಿ ಪರಿಷ್ಕೃತ ವಕ್ಫ್ ತಿದ್ದುಪಡಿ ಮಸೂದೆ ಮಂಡನೆ ಆಗ್ಲಿದೆ. ಕೇಂದ್ರ ಸಂಸದೀಯ ವ್ಯವಹಾರಗಳ ಮತ್ತು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಮಸೂದೆ ಮಂಡಿಸಲಿದ್ದಾರೆ. ಈಗಾಗಲೇ ಮಸೂದೆಯನ್ನ ವಿಪಕ್ಷಗಳು ತೀವ್ರವಾಗಿ ವಿರೋಧಿಸಿವೆ.
ಚರ್ಚೆಗೆ 8 ಗಂಟೆ ಸಮಯ!
ಉದ್ದೇಶಿತ ಕರಡು ಕಾನೂನು ಮುಸ್ಲಿಮರ ಹಕ್ಕುಗಳನ್ನು ಮೊಟಕುಗೊಳಿಸುವ ಪ್ರಯತ್ನ ಅಂತ ವಿಪಕ್ಷಗಳು ಆರೋಪಿಸಿವೆ. ಈ ಮಸೂದೆಯ ವಿರುದ್ಧ ಸಂಘರ್ಷಕ್ಕಿಳಿಯಲು ಸಜ್ಜಾಗ್ತಿರುವ ಮುನ್ಸೂಚನೆ ಕೊಟ್ಟಿವೆ. ವಕ್ಫ್ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಇವತ್ತೇ ಅನುಮೋದನೆ ಪಡೆಯುವ ಸಾಧ್ಯತೆ ಇದೆ. ಇದೇ ಕಾರಣಕ್ಕೆ ಈ ಮಸೂದೆ ಕುರಿತ ಚರ್ಚೆಗೆ ವಿಪಕ್ಷಗಳು 12 ಗಂಟೆ ಕಾಲಾವಕಾಶ ಕೋರಿದ್ದು, ಸಂಸದೀಯ ಸಮಿತಿಯು ಎಂಟು ಗಂಟೆಗಳಷ್ಟು ಕಾಲಾವಧಿಯನ್ನ ನಿಗದಿಗೊಳಿಸಿದೆ. ಇನ್ನು, ಮರುದಿನ ಗುರುವಾರವೇ ರಾಜ್ಯಸಭೆಯಲ್ಲಿ ಮಸೂದೆ ಮಂಡಿಸಲು ಕೇಂದ್ರ ಸಿದ್ಧವಾದಂತೆ ಕಾಣಿಸ್ತಿದೆ.
ಇದನ್ನೂ ಓದಿ: ಕಸದ ಮೇಲೆ ತೆರಿಗೆ.. ಕರ್ನಾಟಕ ಸರ್ಕಾರಕ್ಕೆ ಯಾಕಿಂಥಾ ಸ್ಥಿತಿ ಬಂತು? ಪ್ರಹ್ಲಾದ್ ಜೋಶಿ ಹೇಳಿದ್ದೇನು? VIDEO
/newsfirstlive-kannada/media/post_attachments/wp-content/uploads/2025/04/Waqf-Bill.jpg)
3 ದಿನಗಳು ಸದಸ್ಯರ ಹಾಜರಿಗೆ ಎಲ್ಲಾ ಪಕ್ಷಗಳಿಂದ ವಿಪ್​​!
ಇವತ್ತು, ನಾಳೆ ಮತ್ತು ನಾಡಿದ್ದು ಮೂರು ದಿನಗಳ ಕಾಲ ಲೋಕಸಭೆಯಲ್ಲಿ ಬಹಳ ಮುಖ್ಯವಾದ ವಿಷಯ ಚರ್ಚೆಗೆ ಕೈಗೆತ್ತಿಕೊಳ್ಳಲಾಗ್ತಿದ್ದು, ತನ್ನ ಪಕ್ಷದ ಎಲ್ಲಾ ಸದಸ್ಯರ ಹಾಜರಿಗೆ ಬಿಜೆಪಿ ವಿಪ್​​​ ಜಾರಿ ಮಾಡಿದೆ. ನಾಳೆ ದಿನ ಹಾಜರಿರಲು ರಾಜ್ಯಸಭೆ ಸದಸ್ಯರಿಗೂ ತ್ರೀ ಲೈನ್​​​ ವಿಪ್​​ ಕೊಟ್ಟಿದೆ. ಇತ್ತ ಕಾಂಗ್ರೆಸ್ ಸೇರಿ ಎಲ್ಲಾ ಪಕ್ಷಗಳು ಸಹ ತಮ್ಮ ಸದಸ್ಯರಿಗೆ ಮೂರು ಸಾಲಿನ ವಿಪ್ ಜಾರಿಗೊಳಿಸಿದೆ. ಮುಂದಿನ 3 ದಿನಗಳವರೆಗೆ ಸದನದಲ್ಲಿ ಅವರ ಉಪಸ್ಥಿತಿ ಇರಲೇಬೇಕೆಂದು ಕಡ್ಡಾಯವಾಗಿ ಸೂಚಿಸಿವೆ. ಕಾಂಗ್ರೆಸ್​​ ಏಪ್ರಿಲ್​​​ 3ಕ್ಕೆ ಸೋನಿಯಾ ಗಾಂಧಿ ನೇತೃತ್ವದಲ್ಲಿ ಪಾರ್ಲಿಮೆಂಟ್​​​ ಬೋರ್ಡ್​​ ಮೀಟಿಂಗ್​​ ಕರೆದಿದೆ. ಎನ್​ಸಿಪಿ ಶರದ್​​ ಬಣದ ಸುಪ್ರಿಯಾ ಸುಳೆ, ವಕ್ಫ್​ ಬಿಲ್​ನ ಡಿಬೇಟ್​​ನಲ್ಲಿ ಭಾಗಿ ಆಗೋದಾಗಿ ಹೇಳಿದ್ದಾರೆ.
ಇದೇ ವಿಚಾರವಾಗಿ ನಿನ್ನೆ ಸ್ಪೀಕರ್ ಓಂ ಬಿರ್ಲಾ ಅಧ್ಯಕ್ಷತೆಯಲ್ಲಿ ಬಿಎಸಿ ಸಭೆ ನಡೆಯಿತು.. ಆದ್ರೆ, ಆಡಳಿತ ಮತ್ತು ವಿಪಕ್ಷಗಳ ನಡುವೆ ಒಮ್ಮತ ಮೂಡದ ಕಾರಣ ಇಂಡಿ ಮೈತ್ರಿಕೂಟ ಸಭೆಯಿಂದ ವಿಪಕ್ಷಗಳು ಹೊರನಡೆದಿವೆ.
ಸಂಸತ್​​ನಲ್ಲಿ ಬಲಾಬಲ ಲೆಕ್ಕ!
- ಚಂದ್ರಬಾಬು ಟಿಡಿಪಿ, ನಿತೀಶ್​ಕುಮಾರ್​​ ಜೆಡಿಯು ಬೆಂಬಲ
- ಮಸೂದೆಯ ಪರ ನಿಂತಿದ್ದು, ಬಿಜೆಪಿಯ ಅಳಕು ನಿವಾರಣೆ
- 543 ಸದಸ್ಯ ಬಲದ ಲೋಕಸಭೆಯಲ್ಲಿ NDA 293 ಸಂಸದರು
- ಲೋಕಸಭೆಯಲ್ಲಿ ಅನಾಯಾಸವಾಗಿ ಬಿಲ್​ ಪಾಸ್​​ನ ನಿರೀಕ್ಷೆ
- 245 ಸದಸ್ಯ ಬಲದ ರಾಜ್ಯಸಭೆಯಲ್ಲಿ NDA 125 ಸಂಸದರು
- ರಾಜ್ಯಸಭೆಯಲ್ಲಿ ಸದ್ಯಕ್ಕೆ ಒಟ್ಟು ಒಂಬತ್ತು ಸ್ಥಾನಗಳು ಖಾಲಿ
- ಮಸೂದೆ ಅಂಗೀಕಾರಕ್ಕೆ ಎನ್ಡಿಎಗೆ 118 ಸಂಸದರ ಅಗತ್ಯತೆ
ಫೆಬ್ರವರಿ 13ರಂದು ಸದನ ಸಮಿತಿ ತನ್ನ ವರದಿಯನ್ನ ಸರ್ಕಾರಕ್ಕೆ ಸಲ್ಲಿಸಿತ್ತು.. ಇದೇ ವರದಿಯನ್ನ ಫೆಬ್ರವರಿ 19ರಂದು ಕೇಂದ್ರ ಸಚಿವ ಸಂಪುಟ ಅನುಮೋದಿಸಿದ್ದು, ಇವತ್ತು ಲೋಕಸಭೆಯಲ್ಲಿ ಮಂಡನೆ ಆಗ್ತಿದೆ.. ಒಟ್ಟಾರೆ, ಸಂಸತ್​​​ ಅಧಿವೇಶನ ಶುಕ್ರವಾರ ಅಂತ್ಯ ಆಗ್ತಿದೆ. ಹೀಗಾಗಿ ಇಂದಿನಿಂದ ಮೂರು ದಿನಗಳ ಕಾಲ ಲೋಕಸಭೆ ಅಧಿವೇಶನ ಕಾವೇರಲಿದೆ.
ಇದನ್ನೂ ಓದಿ: ಪ್ರಯಾಗರಾಜ್​ನಲ್ಲಿ ಯಮುನೆ ಗಂಗೆಯೊಂದಿಗೆ ಸೇರುತ್ತಾಳೆ.. ಬ್ರಹ್ಮಪುತ್ರಾ ನದಿ ಜಾಹ್ನವಿಯನ್ನು ಸೇರುವುದು ಎಲ್ಲಿ?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us