/newsfirstlive-kannada/media/post_attachments/wp-content/uploads/2024/11/WAQF_4.jpg)
ವಕ್ಫ್ ಬೋರ್ಡ್ ಕಂಡಕಂಡ ಕಡೆಯೆಲ್ಲಾ ಕಬಂಧಬಾಹು ಚಾಚುತ್ತಿರೋದು ಬಗೆದಷ್ಟೂ ಬಯಲಾಗಿದೆ. ಇದುವರೆಗೆ ಹಿಂದೂ ಸಮುದಾಯದ ರೈತರ ಆಸ್ತಿಗಳನ್ನು ಕಬಳಿಸೋ ಆರೋಪ ಕೇಳಿಬಂದಿತ್ತು. ಇದೀಗ ಮುಸ್ಲಿಂ ಸಮುದಾಯ ಆಸ್ತಿಯನ್ನೂ ವಕ್ಫ್ ಬೋರ್ಡ್ ಸ್ವಾಹ ಮಾಡಿದೆ. ಪಹಣಿಯಲ್ಲಿ ವಕ್ಪ್ ಹೆಸರು ಕಂಡು ಜಮೀನು ಮಾಲೀಕರು ಕಂಗಾಲಾಗಿದ್ದಾರೆ.
ಇದು ವಕ್ಫ್ ಪೆಡಂಭೂತ ತಾನು ನಡೆದಿದ್ದೇ ದಾರಿ, ಇಟ್ಟಿದ್ದೇ ಹೆಜ್ಜೆ. ವಕ್ಫ್ಬೋರ್ಡ್ ಗಜಗಾತ್ರದ ಹೊಟ್ಟೆಗೆ ಏನೂ ಸಾಕಾಗುತ್ತಿಲ್ಲ ಅನ್ನಿಸುತ್ತಿದೆ. ಯಾರದ್ದೇ ಜಮೀನೂ ಇದ್ದರೂ ಇದು ನಮ್ಮದು ಎಂದು ಕಬ್ಜಾ ಮಾಡಿಕೊಳ್ಳಲು ಮುಂದಾಗಿದೆ. ಕೇವಲ ಹಿಂದೂ ರೈತರು ಮಾತ್ರವಲ್ಲ ಮುಸ್ಲಿಂರಿಗೆ ಸೇರಿದ ಜಮೀನನ ಪಹಣಿಗಳಲ್ಲೂ ವಕ್ಫ್ ಹೆಸರು ಇರೋದು ಮತ್ತಷ್ಟು ವಿವಾದಕ್ಕೆ ನಾಂದಿಯಾಡಿದೆ.
ಇದನ್ನೂ ಓದಿ: ವಕ್ಫ್ ಬೋರ್ಡ್ ಆಸ್ತಿ ವಿವಾದ, ಕೊನೆಗೂ ಮಣಿದ ಸರ್ಕಾರ.. ರೈತರ ಧರಣಿ ವಾಪಸ್
ಮುಸ್ಲಿಂರ ಭೂಮಿಯ ಪಹಣಿಯಲ್ಲಿ ವಕ್ಫ್ ಹೆಸರು!
ವಿಜಯಪುರದಲ್ಲಿ ವಕ್ಫ್ ಆಸ್ತಿ ವಿವಾದ ಬೆನ್ನಲ್ಲೇ ರಾಜ್ಯದ ವಿವಿಧ ಜಿಲ್ಲೆಗಳಲ್ಲೂ ರೈತರ ಜಮೀನನ್ನು ವಕ್ಫ್ ಖಾತೆಗೆ ಸೇರಿಸಲು ತೋರಿದ ಕೈಚಳಕ ಬಯಲಾಗಿತ್ತು. ಇದರಿಂದ ಆಕ್ರೋಶಗೊಂಡ ರೈತರು ಹೋರಾಟಕ್ಕೆ ಇಳಿದಿದ್ದರು. ಇದರ ಬೆನ್ನಲ್ಲೇ ಎಚ್ಚೆತ್ತ ಸರ್ಕಾರ, ಪಹಣಿಗಳಲ್ಲಿದ್ದ ವಕ್ಫ್ ಹೆಸರನ್ನು ಡಿಲೀಟ್ ಮಾಡಲಾಗಿದೆ. ಇದರ ಬೆನ್ನಲ್ಲೇ ಮುಸ್ಲಿಂ ಮುಖಂಡರು ಕೂಡ ವಕ್ಫ್ ಹೆಸರು ತೆಗೆಯುವಂತೆ ಮನವಿ ಮಾಡಿದ್ದಾರೆ.
ನವಲಗುಂದ 25ಕ್ಕೂ ಹೆಚ್ಚು ಮುಸ್ಲಿಂ ರೈತರ ಪಹಣಿಯಲ್ಲಿ ವಕ್ಫ್ ಹೆಸರು ನಮೂದಾಗಿದೆ. ಕೋರ್ಟ್ ಕೇಸ್ ಇದ್ದರೂ ಸಹ, 2018ರಲ್ಲಿ ಪಹಣಿ ಪತ್ರದಲ್ಲಿ ವಕ್ಫ್ ಹೆಸರು ಸೇರ್ಪಡೆ ಆಗಿದೆ. ಮುಸ್ಲಿಂ ಸಮುದಾಯಕ್ಕೆ ಒಳಿತು ಮಾಡಬೇಕಿದ್ದ ವಕ್ಫ್ ಮುಸ್ಲಿಮರ ಆಸ್ತಿಯನ್ನೂ ಬಿಡುತ್ತಿಲ್ಲ. ಸರ್ಕಾರ ಕೂಡಲೇ ವಕ್ಫ್ ಹೆಸರು ತೆಗೆಯಬೇಕು, ಇಲ್ಲದಿದ್ರೆ ಕೋರ್ಟ್ ಮೊರೆ ಹೋಗಿ ಕೇಸ್ ಹಾಕುತ್ತೇವೆ ಅಂತ ಎಚ್ಚರಿಕೆ ನೀಡಿದ್ದಾರೆ.
‘ಅನಧಿಕೃತವಾಗಿ ವಕ್ಫ್ ಹೆಸರು ನಮೂದು’
ಸುಮಾರು 50 ಎಕರೆಗಿಂತ ಹೆಚ್ಚು ಇರುವ ಹೊಲದಲ್ಲಿ ವಕ್ಫ್ ಬೋರ್ಡ್ನವರು ಅನಧಿಕೃತವಾಗಿ ತಮ್ಮ ಹೆಸರನ್ನು ನಮೂದು ಮಾಡಿದ್ದಾರೆ. ಮುಖ್ಯವಾಗಿ ಹೇಳಬೇಕು ಎಂದರೆ ಮುಸ್ಲಿಂ ರೈತರೇ 20ಕ್ಕಿಂತ ಹೆಚ್ಚು ಜನ ಇದ್ದಾರೆ.
ಮಾಬೂಸಾಬ್ ಯರಗುಪ್ಪಿ, ರೈತ
‘6 ಎಕರೆ ಜಾಗಕ್ಕೆ ವಕ್ಫ್ ಹೆಸರು’
297/ 10 ಸಹೋದರರ ಗಲಾಟೆ ಹಿನ್ನೆಲೆಯಲ್ಲಿ ಕೋರ್ಟ್ನಲ್ಲಿ ಕೇಸ್ ಇದೆ. ಈ ಕೇಸ್ ಇರುವಾಗ ವಕ್ಫ್ ಹೆಸರು ಎಂಟ್ರಿ ಮಾಡಿದ್ದಾರೆ. ವಾಟ್ಸ್ ಅಪ್ನಲ್ಲಿ ನಮಗೆ ಗೊತ್ತಾಯಿತು. ಸಂಬಂಧ ಪಟ್ಟ ಅಧಿಕಾರಿಗಳನ್ನ ಭೇಟಿ ಮಾಡಿ ಮನವಿ ಕೊಟ್ಟಿದ್ದೇವೆ.
ಬಶೀರ್ ಅಹ್ಮದ್ ಹುಳಗುಂದ, ರೈತ
ಒಂದೆಡೆ ರೈತರು ತಮ್ಮ ಜಮೀನುಗಳನ್ನು ಕಾಪಾಡಿಕೊಳ್ಳಲು ಪರದಾಡುತ್ತಿದ್ದರೆ, ಮತ್ತೊಂದೆಡೆ ರಾಜಕೀಯ ನಾಯಕರು ವಕ್ಫ್ ಹೆಸರಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳಲು ಮುಂದಾಗಿದೆ. ಮಾಜಿ ಸಚಿವ ಸಿ.ಸಿ ಪಾಟೀಲ್ ಈಗ ರೈತರ ಜಮೀನು ನಮ್ಮದು ಅಂತಿರುವ ವಕ್ಫ್ ನಾಳೆ ಮಠ ಮಾನ್ಯಗಳ ಜಾಗದ ಮೇಲೆ ಕಣ್ಣು ಹಾಕಬಹುದು. ಕಾಂಗ್ರೆಸ್ಗೆ ಮತ ಹಾಕಿದ ಹಿಂದೂಗಳು ಯೋಚಿಸಬೇಕಿದೆ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಕಾಂಗ್ರೆಸ್ಗೆ ಮತ ಹಾಕಿದ ಹಿಂದೂಗಳು ಯೋಚನೆ ಮಾಡಬೇಕು. ಇವತ್ತು ಯಾರಾದ್ದೋ ಹೊಲಕ್ಕೆ ವಕ್ಫ್ ಬಂದಿದೆ. ನಾಳೆ ನಮ್ಮ ಮನೆ, ಮಠಕ್ಕೆ ಬರುವುದಿಲ್ಲ ಎಂದು ಏನು ಗ್ಯಾರಂಟಿ. ನಮ್ಮಮ ಕೂಡಲಸಂಗಮ ಪೀಠ ಕೂಡ ವಕ್ಫ್ ಬೋರ್ಡ್ ಎನ್ನುತ್ತಾರೋ ಏನು?.
ಸಿ.ಸಿ. ಪಾಟೀಲ್, ಮಾಜಿ ಸಚಿವ
ಬಿಜೆಪಿ ನಾಯಕರು ಹೋರಾಟಕ್ಕೆ ಇಳಿಯಲು ಮುಂದಾಗುತ್ತಿದ್ದಂತೆ, ಕಾಂಗ್ರೆಸ್ ಕೂಡ ಬಿಜೆಪಿಯನ್ನು ಕಟ್ಟಿಹಾಕಲು ಮುಂದಾಗಿದೆ. ನವೆಂಬರ್ 4 ಮತ್ತು 5ರಂದು ವಕ್ಫ್ ಆಸ್ತಿ ವಿವಾದ ಸಂಬಂಧ ಬಹಿರಂಗ ದಾಖಲೆ ಬಿಡುಗಡೆ ಮಾಡಲು ವಕ್ಫ್ ಸಚಿವ ಜಮೀರ್ ಅಹ್ಮದ್ ನಿರ್ಧರಿಸಿದ್ದಾರೆ.
ಬಿಜೆಪಿ ಮುಖಂಡರು ಎಲ್ಲ ಅರ್ಥ ಮಾಡಿಕೊಳ್ಳಬೇಕು. ನಾನು ಎಲ್ಲ ಡಾಟಾವನ್ನ ತರಿಸಿಕೊಳ್ಳುತ್ತಿದ್ದೇನೆ. ಬೆಂಗಳೂರಲ್ಲಿ 4-5 ರಂದು ಮಾಧ್ಯಮಗೋಷ್ಠಿ ಮಾಡುತ್ತೇನೆ. ಬಿಜೆಪಿ ಸರ್ಕಾರದ ಕಾಲದಲ್ಲಿ 2008 ರಿಂದ 2013ರ ವರೆಗೆ ಹಾಗೂ 2019ರಿಂದ 2023ರವರೆಗೆ ನೂರಾರಲ್ಲ, ಸಾವಿರಾರು ನೋಟಿಸ್ ಕೊಟ್ಟಿದ್ದಾರೆ.
ಜಮೀರ್ ಅಹ್ಮದ್, ಸಚಿವ
ಕರ್ನಾಟಕದಲ್ಲಿ ವಕ್ಫ್ ಆಸ್ತಿ ವಿವಾದ ದಿನಕ್ಕೊಂದು ಸ್ವರೂಪ ಪಡೆದುಕೊಳ್ಳುತ್ತಿದ್ದು, ಮುಂದಿನ ದಿನಗಳಲ್ಲಿ ಇದು ಇನ್ಯಾವ ಮಟ್ಟಕ್ಕೆ ಹೋಗುತ್ತೆ ಅನ್ನೋದನ್ನು ಕಾದುನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ