ಅನ್ನದಾತರಿಗೆ ಗುಡ್​ನ್ಯೂಸ್.. KRS ಡ್ಯಾಂನ ನೀರಿನ ಮಟ್ಟದಲ್ಲಿ ಏರಿಕೆ

author-image
Veena Gangani
Updated On
ರಾಜ್ಯದಲ್ಲಿ ಮಳೆಯ ಅಬ್ಬರ, ನೂರಾರು ಎಕರೆ ಬೆಳೆ ಜಲಮಯ.. ಭೂಕುಸಿತದ ಆತಂಕ
Advertisment
  • ದಿನೇ ದಿನೇ ಹೆಚ್ಚಾಗುತ್ತಿದೆ KRS ಡ್ಯಾಂನ ಒಳಹರಿವು
  • ಮಂಡ್ಯ ಶ್ರೀರಂಗಪಟ್ಟಣ ತಾಲೂಕಿನಲ್ಲಿರೋ KRS ಡ್ಯಾಂ
  • ದಿಢೀರನೇ 16 ಸಾವಿರ ಕ್ಯೂಸೆಕ್​ಗೆ ಏರಿಕೆಯಾದ ಒಳಹರಿವು

ಮಂಡ್ಯ: ಕೊಡಗು, ಕಾವೇರಿ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿರೋ ಹಿನ್ನೆಲೆಯಲ್ಲಿ ಕೆ‌ಆರ್‌ಎಸ್ ಡ್ಯಾಂನ ಒಳಹರಿವು ಹೆಚ್ಚಾಗಿದೆ. ಮಂಡ್ಯ ಶ್ರೀರಂಗಪಟ್ಟಣ ತಾಲೂಕಿನ ಕೆ‌ಆರ್‌ಎಸ್ ಡ್ಯಾಂನಲ್ಲಿ ದಿಢೀರನೇ 16 ಸಾವಿರ ಕ್ಯೂಸೆಕ್​ಗೆ ಒಳಹರಿವು ಏರಿಕೆಯಾಗಿದೆ.

ಇದನ್ನೂ ಓದಿ:ನಾಪತ್ತೆ ಆಗಿದ್ದ ಹರಿಯಾಣ ಮಾಡೆಲ್​ ಪ್ರಕರಣಕ್ಕೆ ಟ್ವಿಸ್ಟ್.. ಮಾಜಿ ಸ್ನೇಹಿತನ ಮೇಲೆ ಗುಮಾನಿ..

publive-image

ಈಗಾಗಲೇ ಕೆ‌ಆರ್‌ಎಸ್ ಡ್ಯಾಂ 111 ಅಡಿ ಭರ್ತಿಯಾಗಿದೆ. ಕಳೆದ 10 ದಿನಗಳಿಂದ 2000 ಕ್ಯೂಸೆಕ್ ಇದ್ದ ಒಳಹರಿವು ಇದೀಗ ಒಳಹರಿವಿನ ಪ್ರಮಾಣ ಭಾರೀ ಏರಿಕೆ ಕಂಡಿದೆ. ಇನ್ನೂ ಡ್ಯಾಂಗೆ 16,936 ಕ್ಯೂಸೆಕ್ ನೀರು ಹರಿದು ಬರ್ತಿದೆ. ಹೀಗಾಗಿ ಡ್ಯಾಂನಿಂದ 951 ಕ್ಯೂಸೆಕ್ ನೀರು ಹೊರಕ್ಕೆ ಬಿಡಲಾಗಿದೆ. 49.452 ಟಿಎಂಸಿ ಸಾಮರ್ಥ್ಯದ ಜಲಾಶಯದಲ್ಲಿ 32.686 ಟಿಎಂಸಿ ನೀರು ಸಂಗ್ರಹವಾಗಿದೆ.

publive-image

ಇಂದಿನ ಕೆ‌ಆರ್‌ಎಸ್ ಜಲಾಶಯದ ನೀರಿನ ಮಟ್ಟ ಹೀಗಿದೆ..

ಗರಿಷ್ಠ ಮಟ್ಟ: 124.80 ಅಡಿ
ಇಂದಿನ ಮಟ್ಟ: 111 ಅಡಿ
ಗರಿಷ್ಠ ಸಾಮರ್ಥ್ಯ: 49.452 ಟಿಎಂಸಿ

ಇಂದಿನ ಸಾಮರ್ಥ್ಯ: 32.686 ಟಿಎಂಸಿ

ಒಳಹರಿವು: 16,936
ಹೊರ ಹರಿವು: 951

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment