ಮಲೆನಾಡಿನಲ್ಲಿದ್ದರೂ ಕುಡಿಯುವ ನೀರಿಗಾಗಿ ಪರದಾಟ
ಬೇಸಿಗೆಯಲ್ಲಿ ಬಾವಿಯಲ್ಲಿ ನೀರು ಬತ್ತಿಹೋಗುತ್ತದೆ
ಚುನಾವಣೆ ಬಹಿಷ್ಕರಿಸಲು ನಿರ್ಧರಿಸಿದ ಗ್ರಾಮಸ್ಥರು
ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರಿನ ಕಳಸ ತಾಲೂಕಿನ ಕುಂಬಳಡಿಕೆಯಲ್ಲಿ ನೀರಿಗಾಗಿ ಹಾಹಾಕಾರ ಶುರುವಾಗಿದೆ. ಪ್ರವಾಹದ ಸಮಯದಲ್ಲಿ ಮನೆ ಕಳೆದುಕೊಂಡ ನಿರಾಶ್ರಿತರಿಗೆ ಮನೆಗಳನ್ನು ನೀಡಲಾಗಿದೆ.
ಆದರೆ ನೀರಿನ ಮೂಲವನ್ನ ಕೊಡ್ಲಿಲ್ಲ. 60 ಕುಟುಂಬಗಳಿಗೆ ಇರೋದು ಕೇವಲ ಒಂದೇ ಬಾವಿ. ಆ ಬಾವಿಯಲ್ಲಿ ನೀರಿದ್ರೆ ನೆಮ್ಮದಿ. ಆದ್ರೆ ಬೇಸಿಗೆ ಶುರುವಾಗ್ತಿದ್ದಂತೆ ಜಲವೇ ಇಲ್ಲದಂತಾಗುತ್ತೆ. ಹೀಗಾಗಿ ಈ ಕುಟುಂಬಗಳು ನೀರಿಗಾಗಿ ಪರದಾಡುವಂತಾಗುತ್ತೆ. ಈಗ ಬೇಸಿಗೆಯ ತಾಪದಿಂದ ಕುಡಿಯುವ ನೀರಿಗಾಗಿ ಹರಸಾಹಸ ಪಡ್ತಿದ್ದಾರೆ.
ಮೂಕ್ಕಾಲು ಕಿಲೋಮೀಟರ್ ಕಾಲ್ನಡಿಗೆಯಲ್ಲಿಯೇ ಹೋಗಿ ನೀರು ತರುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಬರೊಬ್ಬರಿ 5 ವರ್ಷಗಳಿಂದ ಕುಡಿಯುವ ನೀರಿಗಾಗಿ ಜನ ಪರದಾಡ್ತಿದ್ದಾರೆ. ಈ ಬಗ್ಗೆ ಅಧಿಕಾರಿಗಳು ಯಾರೂ ತಲೆ ಕೆಡಿಸಿಕೊಳ್ತಿಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಮಲೆನಾಡಿನಲ್ಲಿದ್ದರೂ ಕುಡಿಯುವ ನೀರಿಗಾಗಿ ಪರದಾಟ
ಬೇಸಿಗೆಯಲ್ಲಿ ಬಾವಿಯಲ್ಲಿ ನೀರು ಬತ್ತಿಹೋಗುತ್ತದೆ
ಚುನಾವಣೆ ಬಹಿಷ್ಕರಿಸಲು ನಿರ್ಧರಿಸಿದ ಗ್ರಾಮಸ್ಥರು
ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರಿನ ಕಳಸ ತಾಲೂಕಿನ ಕುಂಬಳಡಿಕೆಯಲ್ಲಿ ನೀರಿಗಾಗಿ ಹಾಹಾಕಾರ ಶುರುವಾಗಿದೆ. ಪ್ರವಾಹದ ಸಮಯದಲ್ಲಿ ಮನೆ ಕಳೆದುಕೊಂಡ ನಿರಾಶ್ರಿತರಿಗೆ ಮನೆಗಳನ್ನು ನೀಡಲಾಗಿದೆ.
ಆದರೆ ನೀರಿನ ಮೂಲವನ್ನ ಕೊಡ್ಲಿಲ್ಲ. 60 ಕುಟುಂಬಗಳಿಗೆ ಇರೋದು ಕೇವಲ ಒಂದೇ ಬಾವಿ. ಆ ಬಾವಿಯಲ್ಲಿ ನೀರಿದ್ರೆ ನೆಮ್ಮದಿ. ಆದ್ರೆ ಬೇಸಿಗೆ ಶುರುವಾಗ್ತಿದ್ದಂತೆ ಜಲವೇ ಇಲ್ಲದಂತಾಗುತ್ತೆ. ಹೀಗಾಗಿ ಈ ಕುಟುಂಬಗಳು ನೀರಿಗಾಗಿ ಪರದಾಡುವಂತಾಗುತ್ತೆ. ಈಗ ಬೇಸಿಗೆಯ ತಾಪದಿಂದ ಕುಡಿಯುವ ನೀರಿಗಾಗಿ ಹರಸಾಹಸ ಪಡ್ತಿದ್ದಾರೆ.
ಮೂಕ್ಕಾಲು ಕಿಲೋಮೀಟರ್ ಕಾಲ್ನಡಿಗೆಯಲ್ಲಿಯೇ ಹೋಗಿ ನೀರು ತರುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಬರೊಬ್ಬರಿ 5 ವರ್ಷಗಳಿಂದ ಕುಡಿಯುವ ನೀರಿಗಾಗಿ ಜನ ಪರದಾಡ್ತಿದ್ದಾರೆ. ಈ ಬಗ್ಗೆ ಅಧಿಕಾರಿಗಳು ಯಾರೂ ತಲೆ ಕೆಡಿಸಿಕೊಳ್ತಿಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ