Advertisment

ಭೂಕುಸಿತ ಸಂಭವಿಸಿ ಇಂದಿಗೆ 4 ದಿನ, ಅವಶೇಷದಡಿ ನಾಲ್ವರು ಜೀವಂತ ಪತ್ತೆ.. ಜೀವ ಉಳಿಸಿದ ಸೇನೆಗೊಂದು ಬಿಗ್ ಸೆಲ್ಯೂಟ್​​

author-image
AS Harshith
Updated On
ಭೂಕುಸಿತ ಸಂಭವಿಸಿ ಇಂದಿಗೆ 4 ದಿನ, ಅವಶೇಷದಡಿ ನಾಲ್ವರು ಜೀವಂತ ಪತ್ತೆ.. ಜೀವ ಉಳಿಸಿದ ಸೇನೆಗೊಂದು ಬಿಗ್ ಸೆಲ್ಯೂಟ್​​
Advertisment
  • ವಯನಾಡು ಭೂಕುಸಿತ ಸಂಭವಿಸಿ ಇಂದಿಗೆ ನಾಲ್ಕು ದಿನ
  • 300ಕ್ಕೂ ಹೆಚ್ಚು ಜನರು ಸಾವು.. 200ಕ್ಕೂ ಹೆಚ್ಚು ಜನರು ನಾಪತ್ತೆ
  • ನಾಲ್ಕು ದಿನವಾದರೂ ಅವಶೇಷದಡಿ ಜೀವಂತವಾಗಿ ಬದುಕುಳಿದ ನಾಲ್ವರು

ಇದು ಪವಾಡವೋ ಅಥವಾ ಪುಣ್ಯವೋ ಗೊತ್ತಿಲ್ಲ. ವಯನಾಡಿನಲ್ಲಿ ಭೂಕುಸಿತ ಸಂಭವಿಸಿ ಇಂದಿಗೆ ನಾಲ್ಕು ದಿನ. ಭಾರತೀಯ ಸೇನೆ ನಾಲ್ಕು ದಿನಗಳ ಬಳಿಕ ಮನೆಯೊಂದರ ಅವಶೇಷದಡಿ ನಾಲ್ವರನ್ನು ಪತ್ತೆ ಮಾಡಿದ್ದು, ಅವರನ್ನು ರಕ್ಷಿಸುವ ಮೂಲಕ ಜೀವ ಉಳಿಸಿದೆ.

Advertisment

publive-image

ಪಟವೆಟ್ಟಿನ್ನುನ್​​ ಪ್ರದೇಶದಲ್ಲಿ ಇಬ್ಬರು ಮಹಿಳೆಯರು ಮತ್ತು ಇಬ್ಬರು ಪುರುಷರು ಪತ್ತೆಯಾಗಿದ್ದಾರೆ. ಅವರನ್ನು ಕಂಜಿರಕಥೋಟೆ ಕುಟುಂಬದ ಜಾನಿ, ಜೋಮೋಲ್​​, ಅಬ್ರಹಾಂ ಮತ್ತು ಕ್ರಿಸ್ಟಿ ಎಂದು ಗುರುತಿಸಲಾಗಿದೆ. ಭಾರತೀಯ ಸೇನೆ ಅವರನ್ನು ರಕ್ಷಿಸಿ ಹೆಲಿಕಾಪ್ಟರ್​ ಮೂಲಕ ಸುರಕ್ಷಿತ ಸ್ಥಳಕ್ಕೆ ರವಾನಿಸಿದೆ. ಮಹಿಳೆಯ ಕಾಲಿಗೆ ಗಂಭೀರ ಗಾಯವಾಗಿದೆ ಎಂದು ತಿಳಿದುಬಂದಿದೆ.

publive-image

ಇದನ್ನೂ ಓದಿ: ಮಗಳ ಮದುವೆಗೆ 4 ತಿಂಗಳು ಬಾಕಿ.. ಅಪ್ಪ-ಅಮ್ಮ, ತಂಗಿಯ ಸಾವಿನ ಶಾಕ್​​ನಿಂದ ಹೊರ ಬಾರದ ಅಕ್ಕ

ವಯನಾಡು ಭೂಕುಸಿತದಲ್ಲಿ ಸುಮಾರು 300ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. 200ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ. ಮುಂಡಕ್ಕೈ ಭಾಗದಲ್ಲಿ ಯಾರೂ ಕೂಡ ಜೀವಂತವಾಗಿರಲು ಸಾಧ್ಯವಿಲ್ಲ ಎಂದು ಭಾರತೀಯ ಸೇನೆ ತಿಳಿಸಿದೆ. ಸದ್ಯ ಶೋಧಕಾರ್ಯ ಮುಂದುವರೆದಿದೆ.

Advertisment

publive-image

ಇದನ್ನೂ ಓದಿ: ಗಲ್ಫ್​​ನಿಂದ ಓಡೋಡಿ ಬಂದ ಮಗನಿಗೆ ಸಿಕ್ಕಿದ್ದು ತಂದೆಯ ಮೃತದೇಹ.. ಅಮ್ಮ, ಹೆಂಡತಿ, ಮಗ ಎಲ್ಲರೂ ನಾಪತ್ತೆ

ವಯನಾಡು ಭೂಕುಸಿತ ಘನಫೋರವಾಗಿದೆ. ಸಾಕಷ್ಟು ಸಾವು-ನೋವು, ನರಳಾಟ ಸಂಭವಿಸಿದೆ. ಅನೇಕ ಕುಟುಂಬಗಳನ್ನು ಈ ಭೂಕುಸಿತ ಮಣ್ಣುಪಾಲು ಮಾಡಿದೆ. ಸದ್ಯ ಘಟನಾ ಸ್ಥಳದಲ್ಲಿ ವಾಸನೆ ಹೆಚ್ಚಾಗುತ್ತಿದೆಯಂತೆ. ಜೊತೆಗೆ H1N​1 ಭೀತಿ ಶುರುವಾಗಿದೆ. ಮುಂಜಾಗೃತೆ ಕ್ರಮವಹಿಸಿ ಕೆಲಸ ಮಾಡಲಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment