ಚಿನ್ನಸ್ವಾಮಿಯಲ್ಲಿ ಸತತ 2ನೇ ಸೋಲು.. ಪಿಚ್ ಕ್ಯೂರೇಟರ್ ಹೊಣೆ ಮಾಡಿದ ಮ್ಯಾನೇಜ್ಮೆಂಟ್..!

author-image
Bheemappa
Updated On
ವಿರಾಟ್​ ಕೊಹ್ಲಿ V/S ಕೆ.ಎಲ್‌ ರಾಹುಲ್ ಸಮರ; ಇವತ್ತಿನ RCB ಟಾರ್ಗೆಟ್ ಪ್ಲೇ ಆಫ್​ ಅಲ್ಲವೇ ಅಲ್ಲ!
Advertisment
  • ಉತ್ತರದ ಎರಡು ಟೀಮ್​ಗಳಿಂದ ಸೋಲು ಕಂಡಿರುವ ಆರ್​ಸಿಬಿ
  • ಕೆಕೆಆರ್​ ಕ್ಯಾಪ್ಟನ್​, CSK ​ಕೋಚ್​ ಸೋಲಿನ ಬಗ್ಗೆ ಏನಂದರು.?
  • ತವರಲ್ಲಿ ಆರ್​ಸಿಬಿ ಸೋಲಿನ ಬಗ್ಗೆ ಕಾರಣ ಹುಡುಕುತ್ತಾ ಹೋದ್ರೆ..

ಚಿನ್ನಸ್ವಾಮಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಸತತ 2ನೇ ಬಾರಿ ಸೋಲು ಅನುಭವಿಸಿದೆ. ಗುಜರಾತ್ ಮತ್ತು ಡೆಲ್ಲಿ ವಿರುದ್ಧ ತವರಿನಲ್ಲಿ ತೀವ್ರ ಮುಖಭಂಗ ಅನುಭವಿಸಿದ್ದ ಆರ್​ಸಿಬಿ, ಇದೀಗ ಸೋಲಿಗೆ ಬ್ಲೇಮ್ ಗೇಮ್ ಶುರು ಮಾಡಿದೆ. ಅಷ್ಟಕ್ಕೂ ಆರ್​ಸಿಬಿ ಮ್ಯಾನೇಜ್ಮೆಂಟ್ ಮಾಡ್ತಿರೋ ಆರೋಪ ಏನು?. ಬೆಂಗಳೂರು ತಂಡದ ಸೋಲಿಗೆ ಹೊಣೆ ಯಾರು?.

ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧ 6 ವಿಕೆಟ್​ಗಳ ಮುಖಭಂಗ..!

ತವರಿನಲ್ಲಿ ಸತತ 2 ಪಂದ್ಯಗಳ ಸೋಲಿನ ಬಳಿಕ, ಆರ್​ಸಿಬಿ ಮ್ಯಾನೇಜ್ಮೆಂಟ್ ರೊಚ್ಚಿಗೆದ್ದಿದೆ. AWAY ಮ್ಯಾಚ್​​ಗಳನ್ನ ಸುಲಭವಾಗಿ ಗೆಲ್ತಿರುವ ಆರ್​ಸಿಬಿಗೆ, HOME ಗೇಮ್​ಗಳನ್ನ ಯಾಕೆ ಗೆಲ್ಲೋಕೆ ಆಗ್ತಿಲ್ಲ..? ತಪ್ಪೆಲ್ಲಿ ಆಗ್ತಿದೆ.? ಸೋಲಿಗೆ ಕಾರಣ ಏನು?. ಹೀಗೆ ಆರ್​ಸಿಬಿ ಮ್ಯಾನೇಜ್ಮೆಂಟ್, ಸಾಲು ಸಾಲು ಪ್ರಶ್ನೆಗಳಿಗೆ ಉತ್ತರ ಹುಡುಕಲು ಹೊರಟಿದೆ.

publive-image

ಚಿನ್ನಸ್ವಾಮಿಯಲ್ಲೇ ಆರ್​ಸಿಬಿಗೆ ಸತತ ಸೋಲು ಯಾಕೆ..?

ಬೆಂಗಳೂರಿನಲ್ಲೇ ಹೋಂ ಟೀಮ್ ಆರ್​ಸಿಬಿ ಸತತ 2 ಪಂದ್ಯಗಳಲ್ಲಿ ಸೋಲು ಅನುಭವಿಸಿದ್ರೆ, ಹೇಗೆ ತಾನೆ ತಡೆದುಕೊಳ್ಳೋಕೆ ಆಗುತ್ತೆ ಹೇಳಿ?. ಅದ್ರಲ್ಲೂ ನಮ್ಮ ಲೋಕಲ್ ಫ್ಯಾನ್ಸ್​, ಆರ್​ಸಿಬಿ ಸೋಲನ್ನ ಕಂಡಿತ ಸಹಿಸಿಕೊಳ್ಳೋದಕ್ಕೆ ಸಾಧ್ಯವೇ ಇಲ್ಲ ಬಿಡಿ. ಆದ್ರೆ, ಸೋಲಿಗೆ ಉತ್ತರ ಹುಡುಕೋಕೆ ಹೊರಟಿರೋ ಆರ್​ಸಿಬಿ ಮಾನೇಜ್ಮೆಂಟ್​​​, ಕೊಡ್ತಿರೋ ಉತ್ತರ ಏನ್?. ಅದೇ ಬ್ಲೇಮ್ ಗೇಮ್.

ಸೋಲಿನ ಬಳಿಕ ಅಸಮಾಧಾನ ಹೊರಹಾಕಿದ ಬ್ಯಾಟಿಂಗ್ ಕೋಚ್..!

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೋಲಿನ ಬಳಿಕ, ಆರ್​ಸಿಬಿ ಬ್ಯಾಟಿಂಗ್ ಕೋಚ್ ದಿನೇಶ್ ಕಾರ್ತಿಕ್, ಬ್ಲೇಮ್ ಗೇಮ್ ಶುರುಮಾಡಿದ್ದಾರೆ. ನಮ್ಮ ತಂಡದ ಸೋಲಿಗೆ, ಚಿನ್ನಸ್ವಾಮಿ ಪಿಚ್ ಕಾರಣ ಅಂತ ಆರೋಪ ಮಾಡಿದ್ದಾರೆ. ಆರ್​ಸಿಬಿಗೆ ಹೋಂ ಪಿಚ್ ಅಡ್ವಾಂಟೇಜ್ ಆಗಲಿಲ್ಲ ಅಂತ ದಿನೇಶ್ ಕಾರ್ತಿಕ್, ಸೋಲಿಗೆ ಪಿಚ್ ಕ್ಯೂರೇಟರ್ ಹೊಣೆ ಅಂತ ನೇರವಾಗಿ ಆರೋಪ ಮಾಡಿದ್ದಾರೆ.

ಇದನ್ನೂ ಓದಿ: ಗೆಲುವಿಗಾಗಿ ಎದುರು ನೋಡ್ತಿರೋ ಹೈದ್ರಾಬಾದ್​.. ಪಂದ್ಯ ಗೆಲ್ಲಲು ಬಂದ ಶ್ರೇಯಸ್​ ಅಯ್ಯರ್ ಸೇನೆ!

publive-image

ಒಳ್ಳೆ ಪಿಚ್ ಕೇಳಿದ್ವಿ..! ಕೊಟ್ಟಿಲ್ಲ..!

T20 ಕ್ರಿಕೆಟ್ ಅಂದ್ರೆ ರನ್ ನಿರೀಕ್ಷೆ ಇದ್ದೇ ಇರುತ್ತೆ. ಬ್ರಾಡ್​ಕಾಸ್ಟರ್ ಮತ್ತು ಕ್ರಿಕೆಟ್ ಫ್ಯಾನ್ಸ್ ಇದನ್ನೇ ನಿರೀಕ್ಷಿಸುತ್ತಾರೆ. ಎಲ್ಲರೂ ಬೌಂಡರಿಗಳನ್ನ ನೋಡೋಕೆ ಇಷ್ಟ ಪಡ್ತಾರೆ. ನಾವು ಮೊದಲೆರೆಡು ಪಂದ್ಯಗಳಲ್ಲಿ ಒಳ್ಳೆ ಪಿಚ್​ಗಳನ್ನ ಕೇಳಿದ್ವಿ. ಆದ್ರೆ ಕ್ಯೂರೇಟರ್ ಇದನ್ನ ತಳ್ಳಿಹಾಕಿದ್ರು. ರನ್​ಗಳಿಸೋಕೆ ಬ್ಯಾಟರ್ಸ್​ ಸಿಕ್ಕಾಪಟ್ಟೆ ಪರದಾಡಿದ್ರು.

ದಿನೇಶ್ ಕಾರ್ತಿಕ್, ಆರ್​ಸಿಬಿ ಮೆಂಟರ್

ಬ್ಯಾಟಿಂಗ್ ಕೋಚ್, ಮೆಂಟರ್ ದಿನೇಶ್ ಕಾರ್ತಿಕ್​​​​​ ಆರೋಪ ಸರಿನಾ..?

ಕೊಲ್ಕತ್ತಾ ನೈಟ್​ರೈಡರ್ಸ್​ ನಾಯಕ ಅಜಿಂಕ್ಯಾ ರಹಾನೆ ಸಹ, ಕೆಕೆಆರ್ ತವರಿನಲ್ಲಿ​ ಸೋಲೋದಕ್ಕೆ ಪಿಚ್ ಕ್ಯೂರೇಟರ್​​ನತ್ತ ಬೆಟ್ಟು ಮಾಡಿದ್ರು. ಚೆನ್ನೈ ಸೂಪರ್​​ಕಿಂಗ್ಸ್​ ಕೋಚ್ ಸ್ಟೀಫನ್ ಫ್ಲೆಮಿಂಗ್ ಸಹ, ನಮಗೆ ಹೋಂ ಅಡ್ವಾಂಟೇಜ್ ಸಿಗ್ತಿಲ್ಲ. ಪಿಚ್ ಹೋಂ ಟೀಮ್​​​ಗೆ ನೆರವಾಗ್ತಿಲ್ಲ ಅಂತ ಹೇಳಿದ್ರು. ಇದೀಗ ಆರ್​ಸಿಬಿ ಬ್ಯಾಟಿಂಗ್ ಕೋಚ್ ಌಂಡ್ ಮೆಂಟರ್ ದಿನೇಶ್ ಕಾರ್ತಿಕ್ ಸಹ, ಇದೇ ಮಾತನ್ನ ಹೇಳ್ತಿದ್ದಾರೆ. ಅಷ್ಟಕ್ಕೂ ಡಿಕೆ ಆರೋಪ ಸರಿನಾ?.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment