Advertisment

ತಮಿಳುನಾಡಿನಲ್ಲಾದ ರೈಲು ಅಪಘಾತಕ್ಕೆ ನಿಜವಾದ ಕಾರಣವೇನು? ರೇಲ್ವೆ ಅಧಿಕಾರಿಗಳು ತೆರೆದಿಟ್ಟಿದ್ದಾರೆ ಅಸಲಿ ಮಾಹಿತಿ

author-image
Gopal Kulkarni
Updated On
Train accident: ಸಂಕಷ್ಟಕ್ಕೆ ಸಿಲುಕಿದ 45 ಮಂದಿ ಕನ್ನಡಿಗರು; ಹೆಲ್ಪ್​ಲೈನ್ ನಂಬರ್​ ಇಲ್ಲಿದೆ..
Advertisment
  • ತಮಿಳುನಾಡಿನಲ್ಲಿ ಮೈಸೂರು-ಧರ್​ಭಂಗಾ ಭಾಗಮತಿ ಎಕ್ಸ್​ಪ್ರೆಸ್ ಭೀಕರ ಅಪಘಾತ
  • ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆಯಲು ಕಾರಣವೇನು? ಅಧಿಕಾರಿಗಳು ಏನು ಹೇಳ್ತಾರೆ?
  • ಸಿಗ್ನಲ್ ಸರಿಯಾಗಿಯೇ ಇದ್ದರೂ ಹಳಿ ತಪ್ಪಿದ್ದು ಏಕೆ ಈ ಪ್ಯಾಸೆಂಜರ್​ ಟ್ರೇನ್

ತಮಿಳುನಾಡಿನ ತಿರುವಲ್ಲೂರಿನಲ್ಲಿ ಹಳಿ ತಪ್ಪಿದ ಮೈಸೂರು ಧರ್​ಭಂಗಾ ಎಕ್ಸ್​ಪ್ರೆಸ್ ಸುಮಾರು ಗಂಟೆಗೆ 75 ಕಿಲೋ ಮೀಟರ್ ವೇಗದಲ್ಲಿ ಬಂದು ಸ್ಟೇಷನರಿ ಗೂಡ್ಸ್ ರೈಲಿಗೆ ಗುದ್ದಿದೆ ಎಂದು ಹೇಳಲಾಗಿದೆ. ಸಿಗ್ನಲ್​ ರೂಟ್​ನಲ್ಲಿ ಮಿಸ್ ಮ್ಯಾಚ್ ಆದ ಕಾರಣ ಈ ಒಂದು ಅಫಘಾತ ಸಂಭವಿಸಿದೆ ಎಂದು ದಕ್ಷಿಣ ರೈಲ್ವೆಯ ಪ್ರಧಾನ ವ್ಯವಸ್ಥಾಪಕರಾದ ಆರ್.ಎನ್ ಸಿಂಗ್​ ಹೇಳಿದ್ದಾರೆ.

Advertisment

ಮೈಸೂರು ಧರ್​ಭಂಗಾ ಭಾಗಮತಿ ಎಕ್ಸ್​ಪ್ರೆಸ್ ಮೇನ್​ಲೈನ್​ನಲ್ಲಿಯೇ ಬದಲಾವಣೆಗೆಗೊಂಡಿದೆ. ಏನಾಯ್ತು ಅನ್ನೋದು ಇನ್ನೂ ಸ್ಪಷ್ಟವಿಲ್ಲ. ಈ ಕಾರಣದಿಂದಲೇ ಈ ಒಂದ ದುರಂತ ನಡೆದಿದೆ ಎಂದು ಈಗಲೇ ಹೇಳುವುದು ಸಾಧ್ಯವಿಲ್ಲ. ಆದ್ರೆ ಪ್ಯಾಸೆಂಜರ್​ ಎಕ್ಸ್​ಪ್ರೆಸ್ ಅಜಾಗರೂಕತೆಯಿಂದ ಬೇರೆ ಟ್ರ್ಯಾಕ್​ ಮೇಲೆ ಹೋದ ಕಾರಣ ಆ ಟ್ರ್ಯಾಕ್ ಮೇಲೆ ನಿಂತಿದ್ದ ಗೂಡ್ಸ್​ ರೈಲಿಗೆ ಢಿಕ್ಕಿ ಹೊಡೆದು ಈ ಒಂದು ಅಪಘಾತ ಸಂಭವಿಸಿದೆ ಎಂದು ಸಿಂಗ್ ಹೇಳಿದ್ದಾರೆ.

ಇದನ್ನೂ ಓದಿ:ದೇವರ ದಯೆಯಿಂದ ದೊಡ್ಡ ಅನಾಹುತ ತಪ್ಪಿದೆ -ರೈಲು ಅಪಘಾತದ ಬಗ್ಗೆ ಸಚಿವ ಸೋಮಣ್ಣ ಮಾಹಿತಿ

ಇದಕ್ಕೆ ಅಸಲಿ ಕಾರಣವೇನು ಎಂಬುದನ್ನು ಇನ್ನಷ್ಟೇ ತಿಳಿದು ಬರಬೇಕಿದೆ. ಅದನ್ನೇ ಈಗಲೇ ಹೇಳುವುದು ಸಾಧ್ಯವಿಲ್ಲ.ಸಿಗ್ನಲ್​ನ್ನು ಮೇನ್​ಲೈನ್​ಗೆ ಅಂತಲೇ ನೀಡಲಾಗಿತ್ತು. ಆದ್ರೆ ಪ್ಯಾಸೆಂಜರ್​ ಟ್ರೇನ್ ಕ್ಲೋಸ್ ಆದ ಟ್ರ್ಯಾಕ್​ನಲ್ಲಿ ಚಲಿಸಿದ ಕಾರಣ ಈ ಭೀಕರ ಅಪಘಾತ ಸಂಭವಿಸಿದೆ. ಮೈಸೂರು-ಧರ್​ಭಂಗಾ ಭಾಗಮತಿ ಎಕ್ಸ್​್ರೆಸ್​ ಆಂಧ್ರಪ್ರದೇಶದ ಗುಡೂರ್​ಗೆ ಹೊರಟಿತ್ತು. ಈ ವೇಳೆ ತಿರುವಲ್ಲೂರು ಕವರೈಪೆಟ್ಟಾಯಿ ಸ್ಟೇಷನ್​ನಲ್ಲಿ ನಿಲ್ಲಬೇಕಿತ್ತು. ಅದೇ ಲೈನ್​ನಿಂದಲೇ ಗೂಡ್ಸ್ ರೈಲು ಕೂಡ ಗುಡೂರ್​ಗೆ ಹೊರಟಿತ್ತು, ಈ ವೇಳೆ ಹಿಂದಿನಿಂದ ಬಂದ ಗುದ್ದಿದೆ ಪ್ಯಾಸೆಂಜರ್​ ರೈಲು.

Advertisment

publive-image

ಇದನ್ನೂ ಓದಿ:Train accident: ಸಂಕಷ್ಟಕ್ಕೆ ಸಿಲುಕಿದ 45 ಮಂದಿ ಕನ್ನಡಿಗರು; ಹೆಲ್ಪ್​ಲೈನ್ ನಂಬರ್​ ಇಲ್ಲಿದೆ..
1300 ಜನರು ಪ್ರಯಾಣಿಸುತ್ತಿದ್ದ ರೈಲಿನಲ್ಲಿ ಒಟ್ಟು 19 ಜನರು ಗಾಯಗೊಂಡಿದ್ದಾರೆ. ಅದೃಷ್ಟವಷಾತ್ ಯಾವುದೇ ಪ್ರಾಣ ಹಾನಿಗಳು ಸಂಭವಿಸಿಲ್ಲ. ಈಗಾಗಲೇ ಗಾಯಗೊಂಡಿರುವ ಪ್ರಯಾಣಿಕರನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಬಸ್​ಗಳ ಮೂಲಕ ಗಾಯಾಳುಗಳನ್ನು ಚೆನ್ನೈಗೆ ಕರೆದುಕೊಂಡು ಹೋಗಲಾಗಿದೆ. ಚೆನ್ನೈನಿಂದ ಸುಮಾರು 40 ಕಿಲೋ ಮೀಟರ್ ದೂರದಲ್ಲಿ ಈ ಒಂದು ದುರಂತ ಸಂಭವಿಸಿದೆ ಎಂದು ಸಿಂಗ್ ಹೇಳಿದ್ದಾರೆ.

ಇದನ್ನೂ ಓದಿ:ಮೈಸೂರು ದರ್ಭಾಂಗ್​ ಎಕ್ಸ್​ಪ್ರೆಸ್​​ ಅಪಘಾತ; ಹೊತ್ತಿ ಉರಿದ ಟ್ರೇನ್, ಅಸಲಿಗೆ ಆಗಿದ್ದೇನು..?

ಈಗಾಗಲೇ 18 ರೈಲುಗಳನ್ನು ಮಾರ್ಗ ಬದಲಾವಣೆ ಮಾಡಲಾಗಿದೆ. ಈ ಒಂದು ಅಪಘಾತದ ಕುರಿತು ಉನ್ನತ ಮಟ್ಟದ ತನಿಖೆಯನ್ನು ನಡೆಸಲಾಗುವುದು. ಈ ಮೂಲಕ ಅಪಘಾತಕ್ಕೆ ನಿಜವಾದ ಕಾರಣವೇನು ಎಂಬುದು ತಿಳದು ಬರಲಿದೆ ಎಂದು ಹೇಳಿದ್ದಾರೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment