/newsfirstlive-kannada/media/post_attachments/wp-content/uploads/2025/05/RCB-Captain-Jitesh-Sharma.jpg)
ಲಕ್ನೋದ ಏಕಾನಾ ಸ್ಟೇಡಿಯಂನಲ್ಲಿ ಚೇಸಿಂಗ್ಗಿಳಿದ ಆರ್ಸಿಬಿ ಸನ್ರೈಸರ್ಸ್ಗಿಂತ ಸ್ಫೋಟಕ ಆರಂಭವನ್ನೇ ಪಡೆದುಕೊಳ್ತು. ಆದ್ರೆ, ಅಂತಿಮ ಹಂತದಲ್ಲಿ ಎಡವಿ ಬಿತ್ತು. ಒಂದು ರನೌಟ್ ಆರ್ಸಿಬಿಯ ಸೋಲಿಗೆ ಗುರಿ ಮಾಡಿತು. ಇಷ್ಟೇ ಅಲ್ಲ.. ಟಾಪ್ 2 ಸ್ಥಾನದ ಕನಸಿಗೂ ಕೊಳ್ಳಿ ಇಡ್ತು. ಹಾಗಾದ್ರೆ, ಆರ್ಸಿಬಿ ಎಡವಿದ್ದೆಲ್ಲಿ?
232 ರನ್ಗಳ ಬಿಗ್ ಟಾರ್ಗೆಟ್ ಚೇಸ್ಗಿಳಿದ ಆರ್ಸಿಬಿ ತಂಡದ ಬೊಂಬಾಟ್ ಆರಂಭ ಪಡೆದುಕೊಳ್ತು. ಎಲ್ರೂ ಫಿಲ್ ಸಾಲ್ಟ್ ಸ್ಫೋಟಕ ಆಟವಾಡ್ತಾರೆ ಅನ್ನೋ ನಿರೀಕ್ಷೆಯಲ್ಲಿದ್ರು. ಆದ್ರೆ, ಕಿಂಗ್ ಕೊಹ್ಲಿ ವೀರಾವೇಷದ ಆಟವಾಡಿದ್ರು. ವಿರಾಟ ರೂಪ ದರ್ಶನಕ್ಕೆ ಹೈದರಾಬಾದ್ ಥಂಡಾ ಹೊಡೆದು ಬಿಟ್ಟಿತು.
ಪವರ್ ಪ್ಲೇನಲ್ಲಿ ಪವರ್ಫುಲ್ ಇನ್ನಿಂಗ್ಸ್ ಕಟ್ಟಿದ ವಿರಾಟ್ ಕೊಹ್ಲಿ 7 ಬೌಂಡರಿ, 1 ಸಿಕ್ಸರ್ ಸಿಡಿಸಿದ್ರು. 172ರ ಸ್ಟ್ರೈಕ್ರೇಟ್ನಲ್ಲಿ 25 ಎಸೆತಗಳಲ್ಲೇ 43 ರನ್ ಸಿಡಿಸಿದ್ರು. ಮತ್ತೊರ್ವ ಓಪನರ್ ಫಿಲ್ ಸಾಲ್ಟ್ ಕೊಹ್ಲಿಗೆ ಸಖತ್ ಸಾಥ್ ನೀಡಿದ್ರು. ಪರಿಣಾಮ ಸಾಲಿಡ್ ಓಪನಿಂಗ್ ಪಡೆದುಕೊಂಡ ಆರ್ಸಿಬಿ ಪವರ್ ಪ್ಲೇನಲ್ಲಿ ವಿಕೆಟ್ ನಷ್ಟವಿಲ್ಲದೇ 72 ರನ್ಗಳಿಸಿತು.
43 ರನ್ಗಳಿಸಿ ವಿರಾಟ್ ಕೊಹ್ಲಿ ಔಟ್ ಆದ್ರು. ಆ ಬಳಿಕ ಫಿಲ್ ಸಾಲ್ಟ್ ರೌದ್ರಾವತಾರ ತಾಳಿದ್ರು. ಮೈದಾನದ ಉದ್ದಗಲಕ್ಕೂ ಚೆಂಡಿನ ದರ್ಶನ ಮಾಡಿದ್ರು. 5 ಸಿಕ್ಸರ್, 4 ಬೌಂಡರಿ ಬಾರಿಸಿದ ಫಿಲ್ ಸಾಲ್ಟ್ ಹಾಫ್ ಸೆಂಚುರಿ ಸಿಡಿಸಿದ್ರು.
ಮಯಾಂಕ್ ಅಗರ್ವಾಲ್ ಹೀಗೆ ಬಂದು ಹಾಗೇ ಹೋದ್ರೆ, 32 ಎಸೆತಗಳಲ್ಲಿ 62 ರನ್ಗಳಿಸಿದ್ದ ಫಿಲ್ ಸಾಲ್ಟ್ ಬಿಗ್ ಶಾಟ್ ಹೊಡೆಯೋ ಯತ್ನದಲ್ಲಿ ವಿಕೆಟ್ ಕೈ ಚೆಲ್ಲಿದ್ರು. ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿದ ರಜತ್ ಪಟಿದಾರ್ ಬಳಿಕ ಜಿತೇಶ್ ಶರ್ಮಾ ಕೆಲ ಕಾಲ ಲಕ್ನೋ ಬೌಲರ್ಗಳನ್ನ ಕಾಡಿದ್ರು. ಜಿತೇಶ್ ಶರ್ಮಾ 2 ಸಿಕ್ಸರ್, 1 ಬೌಂಡರಿ ಬಾರಿಸಿ ಮಿಂಚಿದ್ರು.
ಆದ್ರೆ, ಸಡನ್ ಆಗಿ ಇಡೀ ಗೇಮ್ಗೆ ಟ್ವಿಸ್ಟ್ ಸಿಕ್ಕಿತು. 15.4ನೇ ಓವರ್ನಲ್ಲಿ ರಜತ್ ಪಾಟಿದಾರ್ ಬೇಜವಾವ್ಧಾರಿತನದಲ್ಲಿ ರನೌಟ್ಗೆ ಬಲಿಯಾದ್ರು. ಅಲ್ಲಿಯವರೆಗೆ ಗೆಲುವಿನ ಟ್ರ್ಯಾಕ್ನಲ್ಲಿದ್ದ ಆರ್ಸಿಬಿ ಈ ರನೌಟ್ನ ಬಳಿಕ ಹಳಿ ತಪ್ಪಿತು.
ರಜತ್ ಪಾಟಿದಾರ್ ಪತನದ ಬಳಿಕ ಆರ್ಸಿಬಿ ಆಟಗಾರರ ಪೆವಿಲಿಯನ್ ಪರೇಡ್ ನಡೀತು. ರೊಮಾರಿಯೋ ಶೆಫರ್ಡ್, ಜಿತೇಶ್ ಶರ್ಮಾ ಬ್ಯಾಕ್ ಟು ಬ್ಯಾಕ್ ಪೆವಿಲಿಯನ್ ಸೇರಿದ್ರು. ಇಂಜುರಿ ನೋವಿನ ನಡುವೆ ಬ್ಯಾಟಿಂಗ್ಗೆ ಬಂದ ಟಿಮ್ ಡೇವಿಡ್ 1 ರನ್ಗಳಿಸಿದ್ರಷ್ಟೇ. ಕೃನಾಲ್ ಪಾಂಡ್ಯ ಹಿಟ್ ವಿಕೆಟ್ ಆಗಿ ನಿರ್ಗಮಿಸಿದ್ರೆ, ಯಶ್ ದಯಾಳ್ ಅಂತಿಮ ಓವರ್ನಲ್ಲಿ ಹರ್ಷಲ್ ಪಟೇಲ್ಗೆ ವಿಕೆಟ್ ಒಪ್ಪಿಸಿದ್ರು.
ಇದನ್ನೂ ಓದಿ: RCB ವಿರುದ್ಧ ಗೆದ್ದು ಬೀಗಿದ ಸನ್ರೈಸರ್ಸ್ ಹೈದರಾಬಾದ್.. ಬೆಂಗಳೂರು ಸೋಲಿಗೆ ಕಾರಣವೇನು?
19.5 ಓವರ್ಗಳಲ್ಲಿ ಆರ್ಸಿಬಿಯನ್ನ ಕಟ್ಟಿ ಹಾಕಿದ ಸನ್ರೈಸರ್ಸ್ ಹೈದ್ರಾಬಾದ್ 42 ರನ್ಗಳ ಭರ್ಜರಿ ಜಯ ಸಾಧಿಸಿತು. 189 ರನ್ಗಳಿಸಿ ಆಲೌಟ್ ಆದ ಆರ್ಸಿಬಿ ರನ್ರೇಟ್ನಲ್ಲಿ ಕುಸಿತ ಕಾಣ್ತು. ಟಾಪ್ 2 ಸ್ಥಾನದಲ್ಲಿರೋ ಕನಸು ಕಾಣ್ತಿದ್ದ ರಾಯಲ್ ಚಾಲೆಂಜರ್ಸ್ 3ನೇ ಸ್ಥಾನಕ್ಕೆ ಕುಸಿಯಿತು.
ಹೈದರಾಬಾದ್ ವಿರುದ್ಧ ಸೋಲಿನ ಬಳಿಕ ಆರ್ಸಿಬಿ ನಾಯಕ ಜಿತೇಶ್ ಶರ್ಮಾ ಅವರು ಮಾತನಾಡಿದರು. ನಮ್ಮ ತಂಡವು ಹೆಚ್ಚು 20-30 ರನ್ಗಳನ್ನ ಬಿಟ್ಟು ಕೊಟ್ಟಿದೆ. ಪವರ್ ಪ್ಲೇಯಲ್ಲಿ ಎದುರಾಳಿಗಳ ಬ್ಯಾಟಿಂಗ್ ಉತ್ತಮವಾಗಿತ್ತು. ಮೊದಲ 6 ಓವರ್ಗಳಲ್ಲಿ ನಮಗೆ ಹಿನ್ನಡೆಯಾದರು ಮಧ್ಯಮ ಹಾಗೂ ಕೊನೆಯ ಓವರ್ಗಳಲ್ಲಿ ನಮ್ಮ ಬೌಲರ್ಗಳು ಉತ್ತಮ ಆಟ ಪ್ರದರ್ಶಿಸಿದರು ಎಂದರು.
ಈ ಪಂದ್ಯದ ಸೋಲು ಒಳ್ಳೆಯದೇ ಎಂದಿರುವ ಆರ್ಸಿಬಿ ನಾಯಕ ಉತ್ತಮ ಆಟ ಪ್ರದರ್ಶನಕ್ಕೆ ಇದೊಂದು ಪಾಠವಾಗಿದೆ. ತಪ್ಪುಗಳನ್ನ ಸರಿಪಡಿಸಿಕೊಂಡು ಮುಂದಿನ ಪಂದ್ಯಗಳಿಗೆ ರೆಡಿಯಾಗುತ್ತೇವೆ ಎಂದು ಜಿತೇಶ್ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ