ಬ್ರಹ್ಮಗಂಟು ಸೀರಿಯಲ್ ನಟಿ ಶೋಭಿತಾ ಕೈ ಹಿಡಿದ ಹುಡುಗ ಯಾರು? ಮದುವೆ ಆದ ಮೇಲೆ ಏನಾಯ್ತು?

author-image
Veena Gangani
Updated On
ಬ್ರಹ್ಮಗಂಟು ಸೀರಿಯಲ್ ನಟಿ ಶೋಭಿತಾ ಕೈ ಹಿಡಿದ ಹುಡುಗ ಯಾರು? ಮದುವೆ ಆದ ಮೇಲೆ ಏನಾಯ್ತು?
Advertisment
  • ನಟಿ ಶೋಭಿತಾ ಮದುವೆಗೆ ಸ್ಟಾರ್ ನಟ ನಟಿಯರು ಭಾಗಿ
  • ಕನ್ನಡ ಸ್ಟಾರ್ ನಟಿ ಶೋಭಿತಾ ಶಿವಣ್ಣಗೆ ದಿಢೀರ್ ಆಗಿದ್ದೇನು?
  • ಮದುವೆ ಬಳಿಕ ಸೀರಿಯಲ್​ನಿಂದ ದೂರ ಉಳಿದುಕೊಂಡಿದ್ದ ನಟಿ

ಕನ್ನಡ ಕಿರುತೆರೆಯ ಬ್ರಹ್ಮಗಂಟು ಸೀರಿಯಲ್ ಖ್ಯಾತಿಯ ಶೋಭಿತಾ ಶಿವಣ್ಣ ಸಾವನ್ನಪ್ಪಿದ್ದಾರೆ. ಕಿರುತೆರೆ ಸ್ಟಾರ್​ ನಟಿ ಹೈದರಾಬಾದ್‌ನಲ್ಲಿ ಸಾವಿಗೆ ಶರಣಾಗಿದ್ದಾರೆ ಎಂಬ ಮಾಹಿತಿ ನ್ಯೂಸ್​ ಫಸ್ಟ್​ಗೆ ಲಭ್ಯವಾಗಿದೆ.

ಇದನ್ನೂ ಓದಿ:ಕರ್ಣಾಟಕ ಬ್ಯಾಂಕ್​ನಿಂದ ಗುಡ್​ನ್ಯೂಸ್; ಖಾಲಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

publive-image

ಬ್ರಹ್ಮಗಂಟು, ನಿನ್ನಿಂದಲೇ ಹೀಗೆ ಹಲವು ಧಾರಾವಾಹಿಯಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು ನಟಿ ಶೋಭಿತಾ ಶಿವಣ್ಣ. ಅದರಲ್ಲೂ ಬ್ರಹ್ಮಗಂಟು ಸೀರಿಯಲ್​​ನಲ್ಲಿ ವಿಲನ್ ಆಗಿ ಕಾಣಿಸಿಕೊಂಡಿದ್ದ ನಟಿ ಶೋಭಿತಾ ಶಿವಣ್ಣ ಅವರಿಗೆ ಸಾಕಷ್ಟು ಫ್ಯಾನ್ಸ್​ ಬಳಗ ಇತ್ತು.

publive-image

ಕಿರುತೆರೆಯಲ್ಲಿ ಅಲ್ಲದೇ ಬೆಳ್ಳಿತೆರೆಯಲ್ಲೂ ನಟಿ ನಟಿಸಿದ್ರು. ವಂದನಾ', 'ಅಟೆಂಪ್ಟ್‌ಟು ಮರ್ಡರ್‌', 'ಜಾಕ್‌ಪಾಟ್' ಸಿನಿಮಾಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದರು. ಇನ್ನೂ ನಟಿ ಶೋಭಿತಾ ಶಿವಣ್ಣ ಅವರು ಮೇ 22 2023ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

publive-image

ಆದರೆ ನಟಿ ಶೋಭಿತಾ ಶಿವಣ್ಣ ಅವರು ಸುಧೀರ್ ಎಂಬುವವರ ಜೊತೆಗೆ ಮದುವೆಯಾಗಿದ್ದರು. ಹೈದರಾಬಾದಿನ ಖಾಸಗಿ ಕಂಪನಿಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಕೆಲಸ ಮಾಡಿತ್ತಿದ್ದರು. ಈ ಇಬ್ಬರ ಮದುವೆಗೆ ಬ್ರಹ್ಮಗಂಟು ಧಾರಾವಾಹಿಯ ನಟ ಹಾಗೂ ನಟಿಯರು ಹಾಜರಾಗಿ ನವ ದಂಪತಿಗಳಿಗೆ ಶುಭ ಹಾರೈಸಿದ್ದರು.

publive-image

ಇವರ ಮದುವೆ ಸುಂದರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗಿದ್ದವು. ಆದರೆ ಮದುವೆಯ ನಂತರ ನಟಿ ಹೈದರಾಬಾದ್‌ನಲ್ಲಿ ವಾಸವಾಗಿದ್ದರು. ಮಧ್ಯರಾತ್ರಿ ಶೋಭಿತಾ ಅವರು ಪ್ರಾಣ ಕಳೆದುಕೊಂಡಿದ್ದಾರೆ ಎನ್ನಲಾಗಿದೆ. ಇನ್ನೂ, ಈ ಶಾಕಿಂಗ್ ಸುದ್ದಿ ತಿಳಿದ ಶೋಭಿತಾ ಕುಟುಂಬಸ್ಥರು ಆಪ್ತ ಸ್ನೇಹಿತರು ಶಾಕ್​ ಆಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment