ಸಂಧ್ಯಾಳ ಸಾವಿಗೆ ಕಾರಣವಾದ ಧನುಷ್ ಹಿನ್ನೆಲೆ ಏನು? ಈತ ಕೋಟ್ಯಾಧಿಪತಿಯ ಮಗ

author-image
AS Harshith
Updated On
Justice For Sandhya: ಸಂಧ್ಯಾ ಸಾವಿನ ಕೇಸ್‌ಗೆ ಹೊಸ ಟ್ವಿಸ್ಟ್‌.. ಆರೋಪಿ ರಕ್ಷಿಸಲು ಕೋಟಿ, ಕೋಟಿ ಆಫರ್‌?
Advertisment
  • ಮೃತ ಸಂಧ್ಯಾಳ ಕುಟುಂಬಕ್ಕೆ ಒಂದೂವರ ಕೋಟಿ ಆಫರ್​
  • ಧನುಷ್ ಯಾರ ಮಗ ಗೊತ್ತಾ? ಆತನ ಹಿನ್ನೆಲೆ ಏನು ತಿಳಿದಿದೆಯಾ?
  • ಪುತ್ರನ ಮೇಲಿದ್ದ ಅತಿಯಾದ ಪ್ರೀತಿಯಿಂದ ಕೇಸ್​ ಮುಚ್ಚಿ ಹಾಕಲು ಯತ್ನ

ದಾರುಣ, ನಿಜಕ್ಕೂ ಈ ಸಾವು ಘೋರ. ತಪ್ಪೇ ಮಾಡದೇ ಮಸಣ ಸೇರಿದ್ದು ನಿಜಕ್ಕೂ ಘೋರ. ವೇರಿ ಟ್ಯಾಲೆಂಟೆಡ್​​, ಅದ್ಭುತ ಕಂಠ ಹೊಂದಿದ್ದ ಸಂಧ್ಯಾ ಮತ್ಯಾರದ್ದೋ ನಿರ್ಲಕ್ಷ್ಯಕ್ಕೆ ಪ್ರಾಣ ಬಿಟ್ಟಿದ್ದಾಳೆ. ಇದೀಗ ಸಂಧ್ಯಾಳ ಸಾವಿಗೆ ನ್ಯಾಯ ಸಿಗುತ್ತೋ? ಇಲ್ಲವೋ? ಅನ್ನೋ ಅನುಮಾನ ಸಾರ್ವಜನಿಕರಲ್ಲಿ ಮೂಡಿದೆ.

ಕೆಂಗೇರಿ ಬಸ್​​ ನಿಲ್ದಾಣದ ಆ ಒಂದು ಜಾಗದಲ್ಲೇ ಸಂಧ್ಯಾ ದಾರುಣವಾಗಿ ಅಪಘಾತಕ್ಕೆ ಬಲಿ ಆಗಿದ್ದಾಳೆ. ಆ ಕ್ಷಣ ಟ್ರಾಫಿಕ್ ಪೊಲೀಸರು ನಡೆದುಕೊಂಡ ರೀತಿ ಜನರನ್ನ ಆಕ್ರೋಶಕ್ಕೆ ದೂಡಿತ್ತು. ನಿಜಕ್ಕೂ ಈ ಕೊಲೆಗಾರನ ಜೊತೆ ಪೊಲೀಸರು ಶಾಮೀಲಾಗಿದ್ದಾರಾ? ಅನ್ನೋ ಮಾತುಗಳು ಕೇಳಿ ಬರ್ತಿವೆ. ಸದ್ಯ ಜನಾಕ್ರೋಶದ ಬಳಿಕ ಆರೋಪಿ ಧನುಷ್​ನನ್ನು ಬಂಧಿಸಿ ಜೈಲಿಗೆ ಕಳಿಸಿದ್ದಾರೆ.

publive-image

ಮೃತ ಸಂಧ್ಯಾಳ ಕುಟುಂಬಕ್ಕೆ ಒಂದೂವರ ಕೋಟಿ ಆಫರ್​

ಇನ್ನು ಮೃತ ಸಂಧ್ಯಾಳ ಕುಟುಂಬಕ್ಕೆ ಆರೋಪಿ ಧನುಷ್ ತಂದೆ ಒಂದೂವರೆ ಕೋಟಿ ಮೊತ್ತ ಬಿಗ್​ ಆಫರ್​ ನೀಡಿದ್ರಂತೆ. ಹಾಗಾದ್ರೆ ಆರೋಪಿ ಧನುಷ್​ನ ತಂದೆ ಯಾರು.. ಅವರ ಹಿನ್ನೆಲೆ ಏನು ಅಂತ ನೋಡೋದಾದ್ರೆ.

ಇದನ್ನೂ ಓದಿ: ಗುರುಪ್ರಸಾದ್ ಆ*ತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್.. ಉಸಿರುಗಟ್ಟಿ ಡೈರೆಕ್ಟರ್​ ಸಾ*ವು

publive-image

ಯಾರು ಈ ಪರಮಶಿವಯ್ಯ?

ಆರೋಪಿ ಧನುಷ್ ಕೋಟ್ಯಾಧಿಪತಿ ಪರಮಶಿವಯ್ಯ ಎಂಬುದು ಗೊತ್ತಾಗಿದೆ. ಎಲ್​ವಿ ಟ್ರಾವೆಲ್ಸ್ ಮಾಲೀಕ ಪರಮಶಿವಯ್ಯರ ಏಕೈಕ ಪುತ್ರ ಆಗಿದ್ದು ಪ್ರೀತಿಯಿಂದ ಬೆಳೆಸಿದ್ದಾರೆ. ಸದ್ಯ ಆರೋಪಿ ಧನುಷ್ ಬಂಧಿಸಿ ಜೈಲಿಗೆ ಕಳುಹಿಸಿರೋ ಪೊಲೀಸರು. ಧನುಷ್​ ತಂದೆ ಪರಮಶಿವಯ್ಯ ಮೂಲತಃ ಮಾಗಡಿಯ ಅಶೆಟ್ಟ ಹಳ್ಳಿಯವರು, 20 ವರ್ಷಗಳಿಂದ ಪಾಪರೆಡ್ಡಿಪಾಳ್ಯದಲ್ಲಿ ಪರಮಶಿವಯ್ಯ ವಾಸ ಮಾಡ್ತಿದ್ದಾರೆ. 9 ವರ್ಷಗಳ ಕಾಲ ಎಸ್​ಆರ್​ಎಸ್​ ಟ್ರಾವಲ್ಸ್​ನಲ್ಲಿ ಪರಮಶಿವಯ್ಯ ಕೆಲಸ ಮಾಡ್ತಿದ್ದರು. 2015ರಲ್ಲಿ ಎಲ್​ವಿ ಟ್ರಾವೆಲ್ಸ್ ಶುರು ಮಾಡಿದ್ದ ಪರಮಶಿವಯ್ಯ, ಎಲ್​ವಿ ಟ್ರಾವೆಲ್ಸ್​ನಿಂದ ಕೋಟ್ಯಾಂತರ ರೂ ಸಂಪಾದನೆ ಮಾಡಿದ್ದರು ಪುತ್ರನ ಮೇಲಿದ್ದ ಅತಿಯಾದ ಪ್ರೀತಿಯಿಂದ ಕೇಸ್​ ಮುಚ್ಚಿ ಹಾಕಲು ಯತ್ನಿಸಿರು ಆರೋಪ ಕೇಳಿ ಬಂದಿದೆ.

publive-image

ಆರೋಪಿ ಆಮಿಷವೊಡ್ಡಿದ್ರೆ ಸೂಕ್ತ ಕ್ರಮ.. ಗೃಹಸಚಿವರ ಸ್ಪಷ್ಟನೆ

ಪ್ರಭಾವಿ ಮಗನ ಕಾರು ಅಪಘಾತ ಕೇಸ್​ನಲ್ಲಿ ಪೊಲೀಸರ ಒಂದೊಂದು ನಡೆಯೂ ಸಾಕಷ್ಟು ಅನುಮಾನ ಮೂಡಿಸಿದೆ. ಪ್ರಕರಣದ ಮುಚ್ಚಿ ಹಾಕಲು ಆಮೀಷವೊಡ್ಡಿದ್ರೆ, ಸೂಕ್ತ ಕ್ರಮಕೈಗೊಳ್ಳುವುದಾಗಿ ಡಾ.ಜಿ.ಪರಮೇಶ್ವರ್​ ಸ್ಪಷ್ಟ ಪಡಿಸಿದ್ದಾರೆ.

ಇದನ್ನೂ ಓದಿ: ಮಕ್ಕಳ ಮಾತಿನಿಂದ ಶುಭಸುದ್ದಿ; ಹೊಸ ವಾಹನ ಖರೀದಿ ಮಾಡುವ ಸಾಧ್ಯತೆ; ಇಲ್ಲಿದೆ ನಿಮ್ಮ ಭವಿಷ್ಯ!

ಒಟ್ಟಾರೆ. ಟೆಕ್ಕಿ ಸಂಧ್ಯಾಳ ಸಾವಿನ ಪ್ರಕರಣದಲ್ಲಿ ಸೂಕ್ತ ನ್ಯಾಯಕ್ಕಾಗಿ ಸಂಬಂಧಿಕರು ಆಗ್ರಹಿಸುತ್ತಿದ್ದಾರೆ. ಇದೀಗ ಪೊಲೀಸರು​ ಸೂಕ್ತ ತನಿಖೆ ನಡೆಸಿ, ಆರೋಪಿಗಳಿಗೆ ಶಿಕ್ಷೆ ಆಗುವಂತೆ ನೋಡಿಕೇಳ್ಳಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment