ಪ್ರಜ್ವಲ್​ ರೇವಣ್ಣ ಮೇಲೆ ಎಷ್ಟು ಕೇಸ್​ಗಳಿವೆ.. ಬೇಲ್​ ಅರ್ಜಿ ವಜಾಕ್ಕೆ ಕೋರ್ಟ್​ ಕೊಟ್ಟ ಕಾರಣವೇನು?

author-image
Bheemappa
Updated On
ಪ್ರಜ್ವಲ್​ ರೇವಣ್ಣ ಮೇಲೆ ಎಷ್ಟು ಕೇಸ್​ಗಳಿವೆ.. ಬೇಲ್​ ಅರ್ಜಿ ವಜಾಕ್ಕೆ ಕೋರ್ಟ್​ ಕೊಟ್ಟ ಕಾರಣವೇನು?
Advertisment
  • ಜನಪ್ರತಿನಿಧಿ ನ್ಯಾಯಾಲಯದಲ್ಲಿ 2ನೇ ಬಾರಿ ಜಾಮೀನು ನಿರಾಕರಣೆ
  • ಜನ ಸೇವೆಯಿಂದ ಪಕ್ಷ ಕಟ್ಟಬೇಕಿದ್ದ ಯುವ ನಾಯಕ ಲಾಕ್ ಆಗಿದ್ದಾರೆ
  • 14 ತಿಂಗಳಿಂದ ಪರಪ್ಪನ ಅಗ್ರಹಾರದ ಜೈಲಿನಲ್ಲಿರುವ ಪ್ರಜ್ವಲ್​ ರೇವಣ್ಣ

ಅತ್ಯಾಚಾರ ಆರೋಪ ಪ್ರಕರಣದಲ್ಲಿ ಜಾಮೀನು ನಿರೀಕ್ಷೆಯಲ್ಲಿ ಮಾಜಿ ಸಂಸದ ಪ್ರಜ್ವಲ್​ ರೇವಣ್ಣಗೆ ಮತ್ತೆ ಆಘಾತವಾಗಿದೆ. ಜಾಮೀನಿಗಾಗಿ ಜನಪ್ರತಿನಿಧಿಗಳ ನ್ಯಾಯಾಯದಲ್ಲಿ 2ನೇ ಬಾರಿ ಸಲ್ಲಿಸಿದ್ದ ಅರ್ಜಿಯೂ ವಜಾಗೊಂಡಿದೆ. ಈಗಾಗಲೇ 14 ತಿಂಗಳಿಂದ ಜೈಲಿನಲ್ಲಿರುವ ಪ್ರಜ್ವಲ್​ಗೆ ಮತ್ತಷ್ಟು ದಿನ ಜೈಲೇ ಗತಿ ಆಗಿದೆ.

ಹೊಳೆನರಸೀಪುರ ಪ್ರಕರಣದಲ್ಲಿ ಪ್ರಜ್ವಲ್​ ರೇವಣ್ಣಗೆ ಮತ್ತೆ ಶಾಕ್​

ಪ್ರಜ್ವಲ್​ ರೇವಣ್ಣ ಹಾಸನ ಲೋಕಸಭಾ ಕ್ಷೇತ್ರದ ಮಾಜಿ ಸಂಸದ. ಜನ ಸೇವೆ ಮೂಲಕ ಜೆಡಿಎಸ್​ ಪಕ್ಷವನ್ನು ಕಟ್ಟ ಬೇಕಿದ್ದ ನಾಯಕ. ಮಾಡಬಾರದ ಕೆಲಸ ಮಾಡಿ, ಜೈಲು ಕಂಬಿ ಹಿಂದೆ ಲಾಕ್​ ಆಗಿದ್ದಾರೆ. ಕಳೆದ 14 ತಿಂಗಳಿನಿಂದ ಪರಪ್ಪನ ಅಗ್ರಹಾರದ ಜೈಲಿನಲ್ಲಿರುವ ಪ್ರಜ್ವಲ್​ ರೇವಣ್ಣಗೆ ಜನಪ್ರತಿನಿಧಿಗಳ ನ್ಯಾಯಾಲಯದ ಮತ್ತೊಮ್ಮೆ ಶಾಕ್​ ನೀಡಿದ್ದು, ಮತ್ತಷ್ಟು ದಿನ ಜೈಲೇ ಗತಿಯಾಗಿದೆ.

publive-image

ಹೊಳೆನರಸೀಪುರ ಕೇಸ್​ನಲ್ಲಿ ಆರೋಪಿ ಪ್ರಜ್ವಲ್ ರೇವಣ್ಣ ಜಾಮೀನು ಕೋರಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಎರಡನೇ ಬಾರಿಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ಕೋರ್ಟ್​, ವಜಾಗೊಳಿಸಿ ಆದೇಶ ಹೊರಡಿಸಿದೆ.

ಪ್ರಜ್ವಲ್​ಗೆ ಮತ್ತಷ್ಟು ದಿನ ಜೈಲೇ ಗತಿ

  • ಹೊಳೆನರಸೀಪುರ ಕೇಸ್​ನಲ್ಲಿ ಈ ಹಿಂದೆಯೂ ಬೇಲ್​ ಅರ್ಜಿ ಸಲ್ಲಿದ್ರು
  • ಮೊದಲ ಅರ್ಜಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ
  • ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ ಎಲ್ಲ ಕಡೆ ವಜಾಗೊಂಡಿತ್ತು
  • ಮತ್ತೆ ಜಾಮೀನು ಕೋರಿ ಕಳೆದ ಜೂನ್‌ನಲ್ಲಿ ಹೈಕೋರ್ಟ್‌ಗೆ ಅರ್ಜಿ
  • ವಿಚಾರಣಾಧೀನ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವಂತೆ ಸೂಚನೆ
  • ಅರ್ಜಿ ಸಲ್ಲಿಸಿದ 10 ದಿನಗಳಲ್ಲಿ ಆದೇಶ ನೀಡುವಂತೆ ಸೂಚಿಸಿತ್ತು
  • ಅದರಂತೆ ಜನಪ್ರತಿನಿಧಿಗಳ ಕೋರ್ಟ್​ಗೆ 2ನೇ ಬಾರಿ ಪ್ರಜ್ವಲ್​ ಅರ್ಜಿ
  • ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಬಂಧನವಾಗಿ 14 ತಿಂಗಳು ಕಳೆದಿದೆ
  • ಇದೇ ಕೇಸ್​ನಲ್ಲಿ HD.ರೇವಣ್ಣ ವಿರುದ್ಧದ ತನಿಖೆಗೆ ಹೈಕೋರ್ಟ್​ ತಡೆ
  • ಹೀಗಾಗಿ ಪ್ರಜ್ವಲ್‌ಗೂ ಜಾಮೀನು ನೀಡುವಂತೆ ಕೋರಿದ್ದ ವಕೀಲರು
  • ವಾದ- ಪತ್ರಿವಾದ ಆಲಿಸಿದ್ದ ಕೋರ್ಟ್​ ಇವತ್ತಿಗೆ ತೀರ್ಪು ಕಾಯ್ದಿಸಿತ್ತು
  • ಇದೀಗ ತೀರ್ಪು ಪ್ರಕಟಿಸಿದ್ದು, ಪ್ರಜ್ವಲ್​ ಸಲ್ಲಿಸಿದ್ದ ಬೇಲ್​ ಅರ್ಜಿ ತಿರಸ್ಕಾರ

ಹಾಗಾದ್ರೆ, ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ, ಪ್ರಜ್ವಲ್​ ರೇವಣ್ಣ ಬೇಲ್​ ಅರ್ಜಿ ವಜಾಗೊಳಿಸಲು ನೀಡಿರುವ ಕಾರಣವೇನು?.

ಇದನ್ನೂ ಓದಿ:ಪ್ರಜ್ವಲ್​ ರೇವಣ್ಣಗೆ ಮತ್ತೆ ಬಿಗ್​ ಶಾಕ್​.. ಜಾಮೀನು ಅರ್ಜಿ ವಜಾ ಮಾಡಿದ ನ್ಯಾಯಾಲಯ

publive-image

ಜಾಮೀನು ನೀಡದಿರಲು ಕಾರಣಗಳೇನು?

  • ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ನಾಲ್ಕು ಪ್ರಕರಣಗಳಿವೆ
  • ಇತರೆ ಮೂರು ಕೇಸ್​ಗಳಲ್ಲಿ ಇನ್ನೂ ಸಾಕ್ಷಿದಾರರ ವಿಚಾರಣೆ ಆಗಿಲ್ಲ
  • ಪ್ರಜ್ವಲ್​ ರೇವಣ್ಣ ಮಾಜಿ ಸಂಸದರಾಗಿದ್ದು ಪ್ರಭಾವಿಗಳಾಗಿದ್ದಾರೆ
  • ಒಂದ್ವೇಳೆ ಬೇಲ್​ ಕೊಟ್ರೆ ಸಾಕ್ಷಿಗಳ ಮೇಲೆ ಪ್ರಭಾವ ಬೀರಬಹುದು
  • ಹೀಗಾಗಿ ಪ್ರಜ್ವಲ್​ ರೇವಣ್ಣಗೆ ಜಾಮೀನು ನೀಡಲು ಸಾಧ್ಯವಿಲ್ಲ

ಹೊಳೆನರಸೀಪುರ ಕೇಸ್​ನಲ್ಲಿ ಈ ಬಾರಿಯಾದರೂ ಜಾಮೀನು ಸಿಗುವ ನಿರೀಕ್ಷೆಯಲ್ಲಿದ್ದ ಪ್ರಜ್ವಲ್​ ರೇವಣ್ಣಗೆ ಮತ್ತೆ ನಿರಾಸೆ ಆಗಿದೆ. ಜುಲೈ 30ರಂದು ಹೊಳೆನರಸೀಪುರದ ಅತ್ಯಾಚಾರ ಕೇಸ್​ನ ತೀರ್ಪು ಪ್ರಕಟವಾಗಲಿದ್ದು, ಜುಲೈ 30 ಪ್ರಜ್ವಲ್​ ರೇವಣ್ಣ ಪಾಲಿಗೆ ಬಿಗ್​ ಡೇ ಆಗಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment