/newsfirstlive-kannada/media/post_attachments/wp-content/uploads/2024/04/whatsapp-3.jpg)
ಮೆಟಾ ಒಡೆತನದ ವಾಟ್ಸಪ್ ತನ್ನ ಬಳಕೆದಾರರಿಗೆ ಎಂಡ್-ಟು-ಎಂಡ್ ಎನ್ಕ್ರಿಪ್ಟ್ ಸೇವೆಯನ್ನ ಒದಗಿಸುತ್ತಿದೆ. ಈ ಮೂಲಕ ಬಳಕೆದಾರರನ್ನು ಸುರಕ್ಷಿತವಾಗಿರಿಸಿದೆ. ಆದರೆ ಮುಂದಿನ ದಿನಗಳಲ್ಲಿ ಚಾಟ್ ಎನ್ಕ್ರಿಪ್ಟ್ ಅನ್ನು ಭೇದಿಸಲು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಮಹತ್ವದ ನಿರ್ಧಾರ ಕೈಗೊಳ್ಳಲಿದೆ. ಈ ಮುನ್ನವೇ ಎಚ್ಚೆತ್ತ ವಾಟ್ಸಪ್ ಹೀಗಾದರೆ ನಾವು ಭಾರತದಿಂದ ನಿರ್ಗಮಿಸುತ್ತೇವೆ ಎಂದು ವಾಟ್ಸಪ್ ಎಚ್ಚರಿಕೆ ನೀಡಿದೆ.
ಕಳೆದ ಒಂದು ವರ್ಷದಿಂದ ಭಾರತ ಸರ್ಕಾರ ಮತ್ತು ವಾಟ್ಸಪ್ ಮಧ್ಯೆ ಗೌಪ್ಯತೆ ವಿಚಾರವಾಗಿ ಹೋರಾಟ ನಡೆಯುತ್ತಲೇ ಇದೆ. ಅದರಲ್ಲೂ ಚಾಟ್, ಕರೆ, ವಿಡಿಯೋ ಕರೆಗಳನ್ನು ಸುರಕ್ಷಿತವಾಗಿರಿಸಲು ವಾಟ್ಸಪ್ ಹೋರಾಡುತ್ತಲೇ ಬಂದಿದೆ. ಆದರೆ ಸರ್ಕಾರ ಸಂದೇಶದ ಮೂಲವನ್ನು ತಿಳಿದುಕೊಳ್ಳುವ ನಿಟ್ಟಿನಲ್ಲಿ ದೆಹಲಿ ಕೋರ್ಟ್ ಮೊರೆ ಹೋಗಿತ್ತು.
ಮೆಟಾ-ಮಾಲೀಕತ್ವದ ವಾಟ್ಸಪ್ ಕೋರ್ಟ್ನಲ್ಲಿ ವಾದಿಸಲು ತೇಜಸ್ ಕರಿಯಾ ಅವರನ್ನು ನೇಮಕ ಮಾಡಿತ್ತು. ಅವರು ಎನ್ಕ್ರಿಪ್ಟ್ ಅನ್ನು ಭೇದಿಸಲು ಮುಂದಾದರೆ ಕಾನೂನನ್ನು ಅನುಸರಿಸುವ ಬದಲು ವಾಟ್ಸಪ್ ದೇಶಬಿಟ್ಟು ನಿರ್ಗಮಿಸುವುದಾಗಿ ತಿಳಿಸಿದ್ದರು.
ಜೊತೆಗೆ ವಾಟ್ಸಪ್ ಹಲವು ವೈಶಿಷ್ಟ್ಯ ಜೊತೆಗೆ ಸುರಕ್ಷಿತವಾಗಿರುವುದರಿಂದ ಕೋಟ್ಯಾಂತರ ಜನರು ಬಳಸುತ್ತಿದ್ದಾರೆ. ಯುಪಿಐ ಪಾವತಿ ಸೇವೆ ಒದಗಿಸಿರುವ ದೇಶಗಳಲ್ಲಿ ವಾಟ್ಸಪ್ 400 ಮಿಲಿಯನ್ ಸಕ್ರಿಯ ಬಳಕೆದಾರರನ್ನು ಹೊಂದಿದೆ ಎಂದು ಹೇಳಿದ್ದಾರೆ.
ಏನಿದು ಜಟಾಪಟಿ?
ಮಾಹಿತಿ ತಂತ್ರಜ್ಞಾನ ನಿಯಮ 2021ರ ಅಡಿಯಲ್ಲಿ ವಾಟ್ಸಪ್ ಮತ್ತು ಇನ್ನಿತರ ಮೆಸೇಜಿಂಗ್ ಆ್ಯಪ್ಗಳ ಸಂದೇಶಗಳ ಮೂಲವನ್ನು ಪತ್ತೆ ಹಚ್ಚಲು ಸಲುವಾಗಿ ಎನ್ಕ್ರಿಪ್ಟ್ ನಿಯಮ ಸಡಿಲಗೊಳಿಸುವ ಅಗತ್ಯವಿದೆ ಎಂದು ಭಾರತ ಸರ್ಕಾರ ಹೇಳಿಕೊಂಡು ಬಂದಿದೆ. ಆದರೆ ವಾಟ್ಸಪ್ಬಳಕೆದಾರರಿಗೆ ಸುರಕ್ಷಿತವಾದ ವೈಶಿಷ್ಯದ ಜೊತೆಗೆ ಸೇವೆಯನ್ನು ನೀಡುತ್ತಿರುವಾಗ ಎನ್ಕ್ರಿಪ್ಟ್ ಸಡಿಲಗೊಳಿಸಲು ಸಾಧ್ಯವಿಲ್ಲ ಎಂದು ವಾದಿಸಿದೆ. ಜೊತೆಗೆ ಭಾರತೀಯ ಐಟಿ ನಿಯಮದ ಪ್ರಕಾರ ಮೆಟಾ ಒಡೆತನದ ವಾಟ್ಸಪ್ ಹೋರಾಡುತ್ತಿದೆ. ಮಾತ್ರವಲ್ಲದೆ ಭಾರತೀಯ ಸಂವಿಧಾನದ ಅಡಿಯಲ್ಲಿ ಬಳಕೆದಾರರ ಗೌಪ್ಯತೆ ಉಲ್ಲಂಘಿಸುವುದು ಸರಿಯಲ್ಲ ಎಂದು ಹೇಳಿದೆ.
ಇದನ್ನೂ ಓದಿ:ಹೆಂಡ್ತಿ ವಿಜಯಲಕ್ಷ್ಮಿ ಬಗ್ಗೆ ಇಂಟರೆಸ್ಟಿಂಗ್ ವಿಚಾರ ರಿವೀಲ್ ಮಾಡಿದ ನಟ ದರ್ಶನ್!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ