ಭಾರತದಲ್ಲಿ ಮೊಟ್ಟ ಮೊದಲ ಟ್ರೈನ್ ಹೈಜಾಕ್ ನಡೆದಿದ್ದು ಯಾವಾಗ? ಮಾಡಿದ್ದು ಯಾರು? ಹೇಗಿತ್ತು ಆಪರೇಷನ್?

author-image
Gopal Kulkarni
Updated On
ಭಾರತದಲ್ಲಿ ಮೊಟ್ಟ ಮೊದಲ ಟ್ರೈನ್ ಹೈಜಾಕ್ ನಡೆದಿದ್ದು ಯಾವಾಗ? ಮಾಡಿದ್ದು ಯಾರು? ಹೇಗಿತ್ತು ಆಪರೇಷನ್?
Advertisment
  • ದಶಕಗಳ ಹಿಂದೆ ಭಾರತದಲ್ಲಿಯೂ ನಡೆದಿತ್ತು ಟ್ರೇನ್ ಹೈಜಾಕ್​
  • ಜನ ಶತಾಬ್ದಿ ಟ್ರೇನ್ ಹೈಜಾಕ್ ಮಾಡಿದ್ದು ಯಾರು? ಮತ್ತು ಏಕೆ?
  • ಯಾವ ರಾಜ್ಯದಲ್ಲಿ ಇಂತಹದೊಂದು ಖತರ್ನಾಕ್ ಹೈಜಾಕ್ ನಡೆದಿತ್ತು

ಇತ್ತೀಚೆಗೆ ಪಾಕಿಸ್ತಾನದಲ್ಲಿ ಬಲೂಚಿಸ್ತಾನ ಲಿಬರೇಷನ್ ಆರ್ಮಿ ಜಾಫರ್ ಎಕ್ಸ್​ಪ್ರೆಸ್​ ಟ್ರೇನ್​ನನ್ನು ಹೈಜಾಕ್ ಮಾಡಿ ಸುಮಾರು 450 ಜನ ಪ್ರಯಾಣಿಕರನ್ನು ಒತ್ತೆಯಾಳುಗಳನ್ನಾಗಿ ಇಟ್ಟುಕೊಂಡಿತ್ತು. ಕ್ವೆಟ್ಟಾದಿಂದ ಪೇಶಾವರ್​ಗೆ ಹೊರಟಿದ್ದ ಟ್ರೇನ್​ನ್ನು ಹೈಜಾಕ್ ಮಾಡಿದ್ದ ಬಿಎಲ್​ಎ ಜಾಗತಿಕವಾಗಿ ದೊಡ್ಡ ಸುದ್ದಿಯಾಗಿತ್ತು. ಆದ್ರೆ ಭಾರತದಲ್ಲಿಯೂ ಕೂಡ ಇಂತಹುದೇ ಒಂದು ಘಟನೆ ನಡೆದಿತ್ತು. ದಶಕಗಳ ಹಿಂದೆ ಭಾರತದಲ್ಲಿಯೂ ಒಂದು ಟ್ರೇನ್ ಹೈಜಾಕ್ ಆಗಿತ್ತು.

ಫೆಬ್ರವರಿ 6, 2013ರಂದು ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಟ್ರೇನ್ ಹೈಜಾಕ್ ಆಗಿತ್ತು. ಛತ್ತೀಸ್​ಗಢದ ದುರ್ಗ​​ ಎಂಬಲ್ಲಿ ನಟೋರಿಯಸ್​ ರೌಡಿಗಳ ಗುಂಪೊಂದು ಸೇರಿ ಜನ ಶತಾಬ್ದಿ ಟ್ರೇನ್​ನನ್ನು ಹೈಜಾಕ್ ಮಾಡಿದ್ದರು. ಹೈಜಾಕ್​ ಮಾಡಿದ್ದ ಗುಂಪು ಗನ್​ ಪಾಯಿಂಟ್​ನಲ್ಲಿ ಲೋಕೊ ಪೈಲೆಟ್ ಹಾಗೂ ಟ್ರೈನ್​ ಸಿಬ್ಬಂದಿಗಳನ್ನು ಒತ್ತೆಯಾಳುಗಳನ್ನಾಗಿ ಇಟ್ಟುಕೊಂಡಿದ್ದರು. ಜೊತೆಗೆ ಜನಶತಾಬ್ದಿ ರೈಲಿನಲ್ಲಿದ್ದ ಎಲ್ಲಾ ಪ್ರಯಾಣಿಕರು ಕೂಡ ಒತ್ತೆಯಾಳುಗಳಾಗಿದ್ದರು. ಟ್ರೇನ್ ಚಾಲಕನ ನೆತ್ತಿಯ ಮೇಲೆ ಗನ್​ ಇಟ್ಟು ನಾವು ಹೇಳಿದ ಸ್ಟೇಷನ್​ನತ್ತ ರೈಲು ಓಡಿಸು ಎಂಬ ಧಮ್ಕಿ ಕೂಡ ಹಾಕಿದ್ದರು.

publive-image

ನಟೋರಿಯಸ್​ ಗ್ಯಾಂಗ್​ಸ್ಟಾರ್​ ಉಪೇಂದ್ರನ ಮಗ ತನ್ನ ತಂದೆಯನ್ನು ಬಿಡುಗಡೆ ಮಾಡುವಂತೆ ಧಮ್ಕಿ ಹಾಕಿ ಈ ಒಂದು ಟ್ರೇನ್​ನ್ನು ಹೈಜಾಕ್ ಮಾಡಿದ್ದ. ಈ ಟ್ರೇಜ್​ ಹೈಜಾಕ್​ ಹಿಂದಿದ್ದ ಮಾಸ್ಟರ್​​ ಮೈಂಡ್ ಅಂದ್ರೆ ಅದು ಉಪೇಂದ್ರನ ಮಗ ಪ್ರೀತಮ್ ಸಿಂಗ್ ಅಲಿಯಾಸ್ ರಾಜೇಶ್​. ತನ್ನ ಸಹಾಯಕರೊಂದಿಗೆ ಸೇರಿ ಪಕ್ಕಾ ಪ್ಲ್ಯಾನ್ ಮಾಡಿ ಜನ ಶತಾಬ್ದಿ ಎಕ್ಸ್​ಪ್ರೆಸ್​ನ್ನು ಹೈಜಾಕ್ ಮಾಡಿದ್ದ.

publive-image

ಈ ವೇಳೆ ನಟೋರಿಯಸ್ ಗ್ಯಾಂಗ್​ಸ್ಟಾರ್ ಉಪೇಂದ್ರ ಬಿಲಾಸ್ಪುರ್​ ಸೆಂಟ್ರಲ್​ ಜೈಲಿನಲ್ಲಿ ಶಿಕ್ಷ ಅನುಭವಿಸುತ್ತಿದ್ದ. ಕ್ರಿಮಿನಲ್ ಕೇಸ್​ವೊಂದರಲ್ಲಿ ಆರೋಪಿಯಾಗಿದ್ದ ಉಪೇಂದ್ರನ ಪ್ರಕರಣವನ್ನು ವಿಚಾರಣೆ ನಡೆಸಿದ ಕೋರ್ಟ್​ ಅವನನ್ನು ಪೊಲೀಸ್ ಕಸ್ಟಡಿಗೆ ನೀಡಿತ್ತು. ವಿಚಾರಣೆ ಮುಗಿದ ಬಳಿಕ ಉಪೇಂದ್ರನನ್ನು ಕಸ್ಟಡಿಗೆ ಪಡೆದುಕೊಂಡ ಪೊಲೀಸರು ಬಿಲಾಸ್ಪುರ್​​ಗೆ ಅದೇ ಟ್ರೇನ್​ನಲ್ಲಿ ವಾಪಸ್ ಬರುತ್ತಿದ್ದರು. ಇದನ್ನೇ ಎನ್​ಕ್ಯಾಶ್ ಮಾಡಿಕೊಂಡ ಉಪೇಂದ್ರನ ಮಗ ಪ್ರೀತಮ್ ಸಿಂಗ್​ ಜನ ಶತಾಬ್ದಿ ಎಕ್ಸ್​​ಪ್ರೆಸ್​​ನ್ನು ದುರ್ಗ ಮತ್ತ ರಾಯಗಢ ನಡುವೆ ಅವನ ಗುಂಪಿನೊಂದಿಗೆ ಹೈಜಾಕ್ ಮಾಡಿದ.ಟ್ರೇನ್ ಹೈಜಾಕ್ ಮಾಡಿದ ಪ್ರೀತಮ್ ಸಿಂಗ್​​ ಯಶಸ್ವಿಯಾಗಿ ತನ್ನ ತಂದೆಯನ್ನು ಕುಮ್ಹಾರಿ ರೈಲ್ವೆ ಸ್ಟೇಷನ್​ ಬಳಿ ಬಿಡಿಸಿಕೊಂಡು ಸಮೀಪದ ರಾಯ್​ಪುರ್​​​ಗೆ ತನ್ನ ತಂದೆಯೊಂದಿಗೆ ಎಸ್ಕೇಪ್ ಆಗಿದ್ದ
ನಂತರ ಕೆಲವು ತಿಂಗಳ ಬಳಿಕ ಉಪೇಂದ್ರ ಹಾಗೂ ಅವನ ಪುತ್ರ ಪ್ರೀತಮ್ ಸಿಂಗ್ ಹಾಗೂ ಆತನ ಜೊತೆಗಾರರನ್ನು ಸೆರೆಹಿಡಿಯಲಾಯ್ತು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment