ಕಿಂಗ್​ ಕೊಹ್ಲಿ ಜೊತೆ ಓಪನಿಂಗ್ ಬ್ಯಾಟಿಂಗ್ ಮಾಡೋದು ಯಾರು.. ಸಾಲ್ಟ್, ಬೆಥೆಲ್ ಯಾರಿಗೆ ಚಾನ್ಸ್​?

author-image
Bheemappa
Updated On
RCB ಓಪನರ್​ ಫಿಲ್​ ಸಾಲ್ಟ್​ಗೆ ಏನಾಗಿದೆ ಗೊತ್ತಾ.. ಚೆನ್ನೈ ವಿರುದ್ಧ ವಿಸ್ಫೋಟಕ ಬ್ಯಾಟರ್​ ಆಡ್ತಾರಾ?
Advertisment
  • ​ಇಂದಿನ ಐಪಿಎಲ್​ ಪಂದ್ಯದ ಸೆಂಟರ್ ಆಫ್ ಅಟ್ರಾಕ್ಷನ್ ಯಾರು?
  • RCBಯಲ್ಲಿ 3ನೇ ಕ್ರಮಾಂಕದ ಬ್ಯಾಟಿಂಗ್​ಗೆ ಭಾರೀ ಕಾಂಪಿಟೇಷನ್
  • ಎದುರಾಳಿ ಕೋಲ್ಕತ್ತಾ ತಂಡದಲ್ಲಿ ದೈತ್ಯ ಆಟಗಾರರ ಪಡೆಯೇ ಇದೆ

ಐಪಿಎಲ್ ಮರು ಆರಂಭಕ್ಕೆ ಕೌಂಟ್​ಡೌನ್ ಶುರುವಾಗಿದೆ. ಇವತ್ತಿನಿಂದ ಐಪಿಎಲ್ ಮಹಾ ಯುದ್ಧ ಮತ್ತಷ್ಟು ರೋಚಕವಾಗಲಿದೆ. ಮರು ಆರಂಭದ ಐಪಿಎಲ್​ನಲ್ಲಿ ಶುಭಾರಂಭದ ಕನಸು ಕಾಣ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಇವತ್ತೇ ಫ್ಯಾನ್ಸ್​ಗೆ ಗುಡ್ ನ್ಯೂಸ್ ನೀಡೋ ತವಕದಲ್ಲಿದೆ. ಆದ್ರೆ, ಅತ್ತ ಸೇಡಿನ ಸಮರಕ್ಕೆ ಕಾದು ಕುಳಿತಿದೆ. ಈ ಇಬ್ಬರ ಕನಸು ಭಗ್ನಗೊಳಿಸಲು ಮತ್ತೊಂದೆಡೆ ಮಳೆರಾಯನು ಹೊಂಚು ಹಾಕಿದ್ದಾನೆ.

8 ದಿನಗಳ ಬಳಿಕ ಐಪಿಎಲ್ ಮಹಾ ಸಂಗ್ರಾಮದ ಮರು ಆರಂಭಕ್ಕೆ ಕೌಂಟ್​ಡೌನ್ ಶುರುವಾಗಿದೆ. ಮರು ಆರಂಭದ ಮೊದಲ ಪಂದ್ಯದಲ್ಲಿ ಮತ್ತದೇ ಕೊಲ್ಕತ್ತಾ ನೈಟ್​ ರೈಡರ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಸವಾಲ್ ಎಸೆಯುತ್ತಿದೆ. ಬೆಂಗಳೂರಿನ ಚಿನ್ನಸ್ವಾಮಿ ಬ್ಯಾಟಲ್​​ನಲ್ಲಿ ಆರ್​ಸಿಬಿ ಎದುರಿನ ಸೇಡಿಗೆ ಕೊಲ್ಕತ್ತಾ ಸನ್ನದ್ಧವಾಗಿದ್ರೆ, ಇತ್ತ ಗೆಲುವಿನ ನಾಗಲೋಟದ ಕನಸು ಕಾಣ್ತಿರುವ ಆರ್​ಸಿಬಿ, ಇವತ್ತೇ ಪ್ಲೇ ಆಫ್ ನೀಡಲು ಹಾತೊರೆಯುತ್ತಿದೆ.

publive-image

ಇಂದು ಕಿಂಗ್ ಕೊಹ್ಲಿಯ ಜೊತೆಗಾರ ಯಾರು..?

ಇವತ್ತು ಕೊಹ್ಲಿ ಜೊತೆ ಇನ್ನಿಂಗ್ಸ್ ಯಾರು ಆರಂಭಿಸ್ತಾರೆ ಅನ್ನೋದೆ ಯಕ್ಷಪ್ರಶ್ನೆ. ಯಾಕಂದ್ರೆ, ಐಪಿಎಲ್ ಮುಂದೂಡಿಕೆಗೂ ಮುನ್ನ ಫಿಲ್ ಸಾಲ್ಟ್​ ಅಲಭ್ಯತೆಯಲ್ಲಿ ಆಡಿದ್ದ ಬೆಥಲ್ ಸಿಕ್ಕ ಅವಕಾಶದಲ್ಲಿ ಮಿಂಚಿನ ಪ್ರದರ್ಶನ ನೀಡಿದ್ದಾರೆ. ಆದ್ರೀಗ ಪವರ್ ಹಿಟ್ಟರ್ ಫಿಲ್ ಸಾಲ್ಟ್​ ಕೂಡ ಫಿಟ್ ಆಗಿದ್ದಾರೆ. ಹೀಗಾಗಿ ಮ್ಯಾನೇಜ್​ಮೆಂಟ್​​ ಬೆಥೆಲ್​ನ ಮುಂದುವರೆಸುತ್ತಾ.? ಸಾಲ್ಟ್​​ಗೆ ಚಾನ್ಸ್​ ನೀಡುತ್ತಾ.? ಅನ್ನೋ ಪ್ರಶ್ನೆ ಸಹಜವಾಗೇ ಕಾಡ್ತಿದೆ. ಆದ್ರೆ, ಇವರಿಬ್ಬರಲ್ಲಿ ಯಾರೇ ಇನ್ನಿಂಗ್ಸ್​ ಓಪನ್​ ಮಾಡಿದ್ರೂ, ಸಾಲಿಡ್ ಓಪನಿಂಗ್ ಸಿಗೋದು ಫಿಕ್ಸ್. ಸೋ ನೋ ಟೆನ್ಶನ್..

ರಜತ್ ಪಟಿದಾರ್​​​​​​​​​​​​​​​​​​​​​​​​​​​​​​​​​​​ ಫಿಟ್​.. 3ನೇ ಕ್ರಮಾಂಕಕ್ಕೆ ಯಾರು..?

ಇಂಜರಿಯಿಂದ ಬಳಲಿದ್ದ ಕ್ಯಾಪ್ಟನ್ ರಜತ್ ಪಟಿದಾರ್ ಫಿಟ್ ಆಗಿದ್ದಾರೆ. ಆದ್ರೆ, ಮಹತ್ವದ ಪಂದ್ಯಗಳ ದೃಷ್ಟಿಯಿಂದ ರೆಸ್ಟ್ ನೀಡಿದರು ಅಚ್ಚರಿ ಇಲ್ಲ. ಅಕಸ್ಮಾತ್ ರಜತ್ ಹೊರಗುಳಿಯುವುದಾದ್ರೆ, ಜಿತೇಶ್ ಶರ್ಮಾ ತಂಡವನ್ನ ಮುನ್ನಡೆಸಲಿದ್ದಾರೆ. ಆದ್ರೆ, ಕನ್ನಡಿಗ ಪಡಿಕ್ಕಲ್​ರಿಂದ ತೆರವದ 3ನೇ ಕ್ರಮಾಂಕ್ಕೆ ಭಾರೀ ಕಾಂಪಿಟೇಷನ್ ನಡೀತಿದೆ. ಒಂದ್ಕಡೆ ಮಯಾಂಕ್ ಸ್ಥಾನ ತುಂಬುವ ಭರವಸೆಯಲ್ಲಿದ್ದರೆ. ಮತ್ತೊಂದೆಡೆ ಸ್ವಸ್ಥಿಕ್ ಚಿಕಾರ ಮುಂಚೂಣಿ ರೇಸ್​ನಲ್ಲಿದ್ದಾರೆ. ಹೀಗಾಗಿ 3ನೇ ಕ್ರಮಾಂಕದಲ್ಲಿ ಆಡೋದು ಯಾರು ಎಂಬ ಪ್ರಶ್ನೆ ಫ್ಯಾನ್ಸ್​ ಕ್ಯೂರಿಯಾಸಿಟಿ ಹೆಚ್ಚಿಸಿದೆ.

ಟಿಮ್ ಡೇವಿಡ್​​​​​​​, ಶೆಫರ್ಡ್​ ಸೆಂಟರ್ ಆಫ್ ಅಟ್ರಾಕ್ಷನ್!

ಡೇಂಜರಸ್ ಟಿಮ್ ಡೇವಿಡ್, ರೊಮಾರಿಯೊ ಶೆಫರ್ಡ್. ಇವತ್ತಿನ ಪಂದ್ಯದ ಸೆಂಟರ್ ಆಫ್ ಅಟ್ರಾಕ್ಷನ್ ಆಗೋದ್ರಲ್ಲಿ ಡೌಟೇ ಇಲ್ಲ. ಡೆತ್ ಓವರ್​ಗಳಲ್ಲಿ ಎದುರಾಳಿ ಬೌಲರ್​ನ ಚಿಂದಿ ಉಡಾಯಿಸಲಿರುವ ಈ ಡೆಡ್ಲಿ ಬ್ಯಾಟರ್ಸ್​, ಇವತ್ತು ಸಿಕ್ಸರ್​ಗಳ ಸುನಾಮಿ ಸೃಷ್ಟಿಸಿದ್ರೆ. ಕೊಲ್ಜತ್ತಾ ಕಂಗಾಲ್ ಆಗೋಗೋದು ಪಕ್ಕಾ.

ಇದನ್ನೂ ಓದಿ:IPL ಟೀಮ್​ ಓನರ್ ಇಂದ ತಿಮ್ಮಪ್ಪನಿಗೆ ಭಾರೀ ಮೌಲ್ಯದ ಚಿನ್ನ, ವಜ್ರ ಖಚಿತ ಆಭರಣಗಳು ದಾನ ​​

publive-image

ಜೋಶ್ ಅಲಭ್ಯತೆಯಲ್ಲಿ ಬೌಲಿಂಗ್ ವಿಭಾಗಕ್ಕೆ ಅಗ್ನಿಪರೀಕ್ಷೆ!

ಇವತ್ತಿ ಪಂದ್ಯಕ್ಕೆ ವಿಕೆಟ್ ಟೇಕರ್​​ ಜೋಶ್ ಹೇಜಲ್​ವುಡ್ ಅಲಭ್ಯತೆ ಕಾಡಲಿದೆ. ಹೀಗಾಗಿ ಸೌತ್ ಆಫ್ರಿಕಾ ಮಿಸೈಲ್​ ಲುಂಗಿ ಎನ್ಗಿಡಿ, ಭುವನೇಶ್ವರ್​ ಕುಮಾರ್​, ಯಶ್​ ದಯಾಳ್ ಸಂಘಟಿತ ದಾಳಿ ನಡೆಬೇಕಾದ ಸವಾಲು ಇದೆ. ಈ ತ್ರಿವಳಿ ವೇಗಿಗಳ ಜೊತೆಗೆ ಕೃನಾಲ್ ಪಾಂಡ್ಯ, ಸುಯಾಶ್ ಮ್ಯಾಜಿಕ್ ಸ್ಪೆಲ್ ಮಾಡಿದ್ರೆ. ಕೊಲ್ಕತ್ತಾ ಖಲ್ಲಾಸ್ ಆಗೋದು ಗ್ಯಾರಂಟಿ. ಆದ್ರೆ, ಆ ತಂಡವನ್ನು ಅಷ್ಟು ಹಗುರವಾಗಿ ತೆಗೆದುಕೊಳ್ಳವಂತಿಲ್ಲ. ಯಾಕಂದ್ರೆ, ದೈತ್ಯ ಆಟಗಾರರ ಪಡೆಯೇ ಕೊಲ್ಕತ್ತಾ ತಂಡದಲ್ಲಿದೆ.

ಚಿನ್ನಸ್ವಾಮಿಯಲ್ಲಿ ಕೆಕೆಆರ್ ವಿರುದ್ಧ ಆರ್‌ಸಿಬಿಗೆ ಅಪಾಯ..!

ಉದ್ಘಾಟನಾ ಪಂದ್ಯದಲ್ಲಿ ಕೆಕೆಆರ್ ಎದುರು ಗೆದ್ದು ಬೀಗಿದ್ದ ಆರ್​ಸಿಬಿ, ಚಿನ್ನಸ್ವಾಮಿಯಲ್ಲಿ ಸುಲಭಕ್ಕೆ ಸದೆಬಡೆಯೋ ಲೆಕ್ಕಾಚಾರದಲ್ಲಿದೆ. ಆದ್ರೆ, ಇದು ಅಷ್ಟು ಸುಲಭದಲ್ಲ. ಯಾಕಂದ್ರೆ, ಚಿನ್ನಸ್ವಾಮಿಯಲ್ಲಿ ಕೋಲ್ಕತ್ತಾ ಆಡಿರುವ ಕಳೆದ 5 ಪಂದ್ಯಗಳಲ್ಲಿ ಸೋಲನ್ನೇ ನೋಡಿಲ್ಲ. 2015ರಲ್ಲಿ ಕೊನೆ ಬಾರಿಗೆ ಆರ್​ಸಿಬಿ ಎದುರು ಸೋತಿದ್ದ ಕೊಲ್ಕತ್ತಾ, ಆ ನಂತರದ 5 ಚಿನ್ನಸ್ವಾಮಿ ಪಂದ್ಯಗಳಲ್ಲೂ ಗೆದ್ದಿದೆ. ಇನ್​ಫ್ಯಾಕ್ಟ್_ ಚಿನ್ನಸ್ವಾಮಿಯಲ್ಲಿ 18 ಪಂದ್ಯಗಳ ಪೈಕಿ ಕೇವಲ 6ರನ್ನಷ್ಟೇ ಸೋತಿರುವ ಕೆಕೆಆರ್​, ಆರ್​ಸಿಬಿಗೆ ಮುಳ್ಳಾದರು ಅಚ್ಚರಿ ಇಲ್ಲ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment