ರೋಹಿತ್ ನಿವೃತ್ತಿಯಿಂದ ಟೆನ್ಷನ್​.. ಟೆನ್ಷನ್​; ಟೀಮ್ ಇಂಡಿಯಾದ ನಾಯಕನ ಸ್ಥಾನ ಯಾವ ಪ್ಲೇಯರ್​ಗೆ?

author-image
Bheemappa
Updated On
ಬೂಮ್ರಾ ಇಂಜುರಿ, ಭಾರತಕ್ಕೆ ದೊಡ್ಡ ಎಫೆಕ್ಟ್​.. ಮ್ಯಾನೇಜ್​ಮೆಂಟ್ ವಿರುದ್ಧ ಮಾಜಿ ಕ್ರಿಕೆಟರ್ ಗರಂ
Advertisment
  • ರೋಹಿತ್ ನಿವೃತ್ತಿ ಬೆನ್ನಲ್ಲೇ ಬಿಸಿಸಿಐಗೆ ಶಾಕ್ ಮೇಲೆ ಶಾಕ್ ಆಯಿತಾ?
  • ಮುಂದಿನ ಟೆಸ್ಟ್ ಸರಣಿಯನ್ನು ಭಾರತ ತಂಡ ಯಾರ ಜೊತೆ ಆಡಲಿದೆ?
  • ರೋಹಿತ್ ನಿವೃತ್ತಿ, ಭಾರತದ ಟೆಸ್ಟ್ ತಂಡದ ನಾಯಕ ಯಾರು ಆಗ್ತಾರೆ?

ಇಂಡಿಯಾ ಕ್ರಿಕೆಟ್​ ಟೀಮ್​ ಈಗ ಟೆಸ್ಟ್​​ ಸಿರೀಸ್​​ನಲ್ಲಿ ಮುನ್ನುಗುವ ಸಮಯ ಬಂದಾಗಿದೆ. ಆದರೇ ಟೆಸ್ಟ್​​ ನಾಯಕನಾಗಿ ರೋಹಿತ್​ ಶರ್ಮಾ ಅವ್ರೇ ಇರ್ತಾರೆ ಅಂದುಕೊಂಡಿದ್ದವರಿಗೆ, ಮೇ 7ರಂದು ರೋಹಿತ್​ ಬಿಗ್ ಶಾಕ್​ ಕೊಟ್ಟಿದ್ದರು. ಆ ಶಾಕ್​ನಿಂದ ಹೊರ ಬರುತ್ತಾ, ಬಿಸಿಸಿಐಗೆ ಮತ್ತೊಂದು ನಿರ್ಧಾರ ಕೈಗೊಳ್ಳೋ ಮುನ್ನವೇ, ಕೊಹ್ಲಿ ಟೆಸ್ಟ್​ ನಿವೃತ್ತಿ ಎಂದು ಮತ್ತೊಂದು ಶಾಕ್​ ಕೊಟ್ಟಿದ್ದರು. ಈಗ ಈ ಬಿಸಿಸಿಐಗೆ ಟೆಸ್ಟ್​​ ಲೀಡರ್​ಗಾಗಿ ಮತ್ತೊಂದು ಹೆಸರನ್ನ ಸಲಹೆ ಮಾಡಲಾಗಿದೆ. ಅದು ಬೇಱರು ಅಲ್ಲಾ.. ಟೀಮ್​ಗೆ ಬಲಗೈ ಬಂಟ ಜಸ್ಪ್ರೀತ್ ಬುಮ್ರಾ.

ಜಸ್ಪ್ರೀತ್ ಬುಮ್ರಾ ಟೆಸ್ಟ್​ ಟ್ರ್ಯಾಕ್​ ರೆಕಾರ್ಡ್​ ಹೇಗಿದೆ ಗೊತ್ತಾ?

ಈ ಬಾರಿಯ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್​​ ಸಿರೀಸ್​ಗೆ ಜಸ್ಪ್ರೀತ್ ಬುಮ್ರಾ ಅವರನ್ನ, ಟೆಸ್ಟ್ ನಾಯಕರನ್ನಾಗಿ ನೇಮಿಸಬೇಕು ಎಂದು ಮಾಜಿ ಕ್ರಿಕೆಟಿಗ ಮದನ್ ಲಾಲ್ ಸಲಹೆ ಕೊಟ್ಟಿದ್ದಾರೆ. ಬುಮ್ರಾ ಅವರ ಟ್ರ್ಯಾಕ್​ ರೆಕಾರ್ಡ್​ ಆಧಾರದ ಮೇಲೆ ಅವರೇ ಈ ಬಾರಿಯ ಟೆಸ್ಟ್​​ ಕ್ರಿಕೆಟ್​ಗೆ ಲೀಡರ್​ ಆಗಿ ಸೂಕ್ತ ಅನ್ನೋ ಅಭಿಪ್ರಾಯವನ್ನ 1983ರ ವಿಶ್ವಕಪ್ ವಿಜೇತ ಭಾರತದ ತಂಡದ ಸದಸ್ಯ, ಮದನ್ ಲಾಲ್ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

publive-image

31 ವರ್ಷದ ಬುಮ್ರಾ.. ಈ ಹಿಂದೆ 2022 ರಲ್ಲಿ ಬರ್ಮಿಂಗ್ಹ್ಯಾಮ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಮರು ನಿಗದಿಯ ಐದನೇ ಟೆಸ್ಟ್‌ನಲ್ಲಿ, ಮತ್ತು 2024-25ರ ಬಾರ್ಡರ್ -ಗವಾಸ್ಕರ್ ಟ್ರೋಫಿಯಲ್ಲಿ ಈ ಎರಡೂ ಮ್ಯಾಚ್​​ಗಳಲ್ಲಿ ಭಾರತವನ್ನ ಮುನ್ನಡೆಸಿದ್ದರು. ಬುಮ್ರಾ ನಾಯಕತ್ವದಲ್ಲೇ, ಕಳೆದ ನವೆಂಬರ್‌ನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ, ಭಾರತ ಆಸ್ಟ್ರೇಲಿಯಾ ವಿರುದ್ಧ 295 ರನ್‌ಗಳ ಭರ್ಜರಿ ಜಯ ಸಾಧಿಸಿದ್ದು ನೆನಪಿದೆ. ಇದು ಆಸ್ಟ್ರೇಲಿಯಾ ನೆಲದಲ್ಲಿ ಭಾರತದ ಬ್ಲಾಕ್​ಬಸ್ಟರ್​​ ಗೆಲುವಾಗಿತ್ತು.

ಫಿಟ್​ ಇದ್ದರೆ.. ಲಭ್ಯವಿದ್ದರೇ.. ಬುಮ್ರಾ ಈಸ್​ ಬೆಸ್ಟ್​​ ಟೆಸ್ಟ್​ ಲೀಡರ್​!

ಇಲ್ಲಿವರೆಗೆ ಜಸ್ಪ್ರೀತ್ ಬುಮ್ರಾ ಭಾರತವನ್ನ 3 ಟೆಸ್ಟ್‌ಗಳಲ್ಲಿ ಮುನ್ನಡೆಸಿರೋ ಹಿಸ್ಟರಿ ಇದೆ. ಬುಮ್ರಾ ನಾಯಕನಾಗಿ ಮೂರು ಟೆಸ್ಟ್ ಪಂದ್ಯಗಳಿಂದ 15 ವಿಕೆಟ್‌ಗಳನ್ನ ಕಬಳಿಸಿದ್ದು, ಪರ್ತ್ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ 18-6-30-5 ಬೆಸ್ಟ್​ ಪರ್ಫಾರ್ಮ್​​ ಕೊಟ್ಟಿದ್ದರು.

ಹಾಗಾಗಿ ಬುಮ್ರಾ ಫಿಟ್ ಆಗಿದ್ದರೆ.. ಲಭ್ಯವಿದ್ದರೇ, ಟೆಸ್ಟ್ ನಾಯಕತ್ವವನ್ನ ವಹಿಸಿಕೊಳ್ಳಬೇಕು. ಭಾರತವನ್ನ ಮುನ್ನಡೆಸಲು, ಜಸ್ಪ್ರೀತ್ ಬುಮ್ರಾ ಸರಿಯಾದ ವ್ಯಕ್ತಿ ಎಂದು ನಾನು ಭಾವಿಸುತ್ತೇನೆ ಎಂದು ಮದನ್​ ಲಾಲ್​ ಹೇಳಿದ್ದಾರೆ.

'ರೋಹಿತ್ ತನ್ನ ನಿರ್ಧಾರದ ಬಗ್ಗೆ ಯೋಚಿಸಿರಬೇಕಿತ್ತು'

ಟೆಸ್ಟ್​ ಅನೌನ್ಸ್​ಗೂ ಮುನ್ನವೆ ಟೆಸ್ಟ್​ ಕ್ರಿಕೆಟ್​ಗೆ ವಿದಾಯ ಹೇಳಿ, ಬಿಸಿಸಿಐಗೆ ಶಾಕ್​ ಕೊಟ್ಟಿದ್ದ ರೋಹಿತ್​ ಶರ್ಮಾ ಬಗ್ಗೆಯೂ ಮದನ್​ ಲಾಲ್​ ಬೇಸರ ವ್ಯಕ್ತ ಪಡಿಸಿದ್ದಾರೆ. ನಿವೃತ್ತಿಯ ಬಗ್ಗೆ ಅವರು ಯಾವುದೇ ನಿರ್ಧಾರ ತೆಗೆದುಕೊಂಡರೂ ಅದು ವೈಯಕ್ತಿಕ ನಿರ್ಧಾರ. ಆದರೇ ಅಂಥಾ ಅನುಭವಿ ಕ್ರಿಕೆಟಿಗ ನಿವೃತ್ತಿ ಪಡೆಯುವ ಸಾಕಷ್ಟು ಯೋಚಿಸಿರಬೇಕಿತ್ತು ಎಂದು ಹೇಳಿದ್ದಾರೆ.

ಇದನ್ನೂ ಓದಿ:ಭಾರತದ ಬಗ್ಗೆ ಪಾಕ್​​ ಏನೇನು ಸುಳ್ಳು ಹೇಳಿದೆ..? ಸತ್ಯ ಬಿಚ್ಚಿಟ್ಟ ಸೋಫಿಯಾ ಖುರೇಷಿ, ವ್ಯೋಮಿಕಾ ಸಿಂಗ್

publive-image

ಫಾರ್ಮ್​ನಲ್ಲಿದ್ದಾರಾ, ಇಲ್ವಾ ಅನ್ನೋದು ಮುಖ್ಯವಲ್ಲ. ಪರ್ಫಾರ್ಮೆನ್ಸ್​ ಇದೆಯಾ ಇಲ್ವಾ ಅನ್ನೋದೇ ಮುಖ್ಯ. ಈ ಹಿಂದೆ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆದ ಹೊಸ ವರ್ಷದ ಟೆಸ್ಟ್‌ನಲ್ಲೂ ಸಹ ಬುಮ್ರಾ ಟೀಮ್​ಗೆ ಬಲ ತುಂಬಿದ್ರು. ಆ ದಿನ ಆ ಮ್ಯಾಚ್​ನಲ್ಲೂ ರೋಹಿತ್ ಶರ್ಮಾ ಇರಲು ಬಯಸಿರಲಿಲ್ಲ ಎಂದು ಮದನ್​ ಲಾಲ್​ ಹೇಳಿದ್ದಾರೆ.

ಸದ್ಯಕ್ಕೆ ಭಾರತ ತಂಡವು ಜೂನ್ 20, ಶುಕ್ರವಾರ ಲೀಡ್ಸ್‌ನ ಹೆಡಿಂಗ್ಲಿಯಲ್ಲಿ ಪ್ರಾರಂಭವಾಗುವ, ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಇಂಗ್ಲೆಂಡ್ ವಿರುದ್ಧ ಸೆಣಸಲಿದೆ. ಆ ಸೆಣಸಾಟಕ್ಕೆ ಬುಮ್ರಾ ಲೀಡರ್​ ಆಗಿರ್ತಾರಾ ಅನ್ನೋದೇ ಕನ್ಫರ್ಮ್​ ಆಗದೇ ಉಳಿದಿರುವ ಸತ್ಯ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment