‘ಕರ್ಣ’ ಸೀರಿಯಲ್​ನಲ್ಲಿ ಬಿಗ್​ ಸ್ಟಾರ್ಸ್ ನಟಿಯರೇ ಏಕೆ? ತಂಡದ ​ಹಿಂದಿನ ಗುಟ್ಟೇನು ಗೊತ್ತಾ?

author-image
Veena Gangani
Updated On
ಒಂದೇ ಫ್ರೇಮ್​ನಲ್ಲಿ ಭವ್ಯಾ ಗೌಡ ಹಾಗೂ ನಮ್ರತಾ ಗೌಡ.. ಕರ್ಣನಿಗೆ ಜೋಡಿಯಾಗೋದು ಯಾರು? VIDEO
Advertisment
  • ತೆರೆಗೆ ಬರೋಕು ಮುನ್ನವೇ ಸಖತ್​ ಸುದ್ದಿಯಲ್ಲಿದ್ದೇ ಹೊಸ ಕರ್ಣ ಸೀರಿಯಲ್
  • ಹೊಸ ಪ್ರತಿಭೆಗಳನ್ನ ಸೆಲೆಕ್ಟ್​ ಮಾಡಿದ್ದ ತಂಡ ದಿಢೀರ್​ ಚೇಂಚ್​ ಮಾಡಿದ್ದೇಕೆ?
  • ಕರ್ಣ ಸೀರಿಯಲ್ ನಟ ಕಿರಣ್​ ರಾಜ್​ಗೆ ಡಬಲ್ ಧಮಾಕ ಏಕೆ ಗೊತ್ತಾ?

ಕಿರುತೆರೆಯ ತುಂಬಾ ತುಂಬಾನೇ ಸ್ಪೆಷಲ್​ ಪ್ರಾಜೆಕ್ಟ್​ ಕರ್ಣ. ಸ್ಟಾರ್ ನಟ, ನಟಿಯರನ್ನ ಹೊಂದಿರೋ ಕರ್ಣನ ಮೇಲೆ ಎಕ್ಸ್​ಫೆಕ್ಟೇಶನ್​ ಜಾಸ್ತಿನೇ ಇದೆ. ಹೊಸ ಪ್ರತಿಭೆಗಳನ್ನ ಸೆಲೆಕ್ಟ್​ ಮಾಡಿದ್ದ ತಂಡ ದಿಢೀರ್​ ಅಂತ ಸ್ಟಾರ್​ ನಟಿಯರನ್ನು ಮಣೆ ಹಾಕಿದ್ಯಾಕೆ? ಸ್ಟಾರ್​ಕಾಸ್ಟ್​ ನೋಡ್ತಿದ್ರೇ ಬಜೆಟ್​ ಕೂಡ ಹೈ ಇದೆ ಎನ್ನಲಾಗ್ತಿದೆ.

publive-image

ಕರ್ಣ ಸಾಕಷ್ಟು ವಿಚಾರವಾಗಿ ಸದ್ದು ಮಾಡ್ತಿರೋ ಧಾರಾವಾಹಿ. ಒಂದೇ ಒಂದು ಪ್ರೋಮೋ ರಿಲೀಸ್​ ಆಗಿರೋದು ಅಷ್ಟೇ ಅದಾಗಲೇ ವೀಕ್ಷಕರು ಕುತೂಹಲದಿಂದ ಕಾಯುವಂತೆ ಮಾಡಿದೆ. ಸೋಷಿಯಲ್​ ಮೀಡಿಯಾದಲ್ಲಿ ಮಿಲಿಯನ್​ಗಟ್ಟಲೇ ವೀಕ್ಷಣೆ ಪಡೆದಿರೋ ಪ್ರೋಮೋಗಳಿಗೆ ಭರ್ಜರಿ ರೆಸ್ಪಾನ್ಸ್​ ಸಿಗ್ತಿದೆ.

publive-image

ಸ್ಟಾರ್​ ನಟ-ನಟಿಯರನ್ನು ಕರ್ಣ ಪ್ರಾಜೆಕ್ಟ್​ ಆಯ್ಕೆ ಮಾಡಿರೋದು ಅಚ್ಚರಿ ಏನ್​ ಅಲ್ಲ. ಅದ್ರೆ ಹೈಯಸ್ಟ್​ ಸಂಭಾವನೆ ನೀಡಿ ಆಯ್ಕೆ ಮಾಡಿಕೊಂಡಿರೋದು ವಿಶೇಷ ಅನ್ಸುತ್ತೆ. ನಾವು ಈ ಹಿಂದೆ ಹೇಳಿದ ಹಾಗೇ ಕಿರಣ್​ ರಾಜ್​ ಅವರಿಗೆ ಹೈಯಸ್ಟ್​ ಸಂಭಾವನೆ ಕೊಡಲಾಗ್ತಿದೆ ಅಂತೆ. ಅದು ಅಲ್ಲದೇ ಜನಪ್ರಿಯ ನಟಿಯರಾದ ಭವ್ಯಾಗೌಡ ಹಾಗೂ ನಮ್ರತಾ ಗೌಡ ಸೀರಿಯಲ್​ಗೆ ಎಂಟ್ರಿ ಕೊಟ್ಟಿದ್ದಾರೆ. ದೊಡ್ಡ ಮಟ್ಟದಲ್ಲೇ ಸೀರಿಯಲ್​ ಲಾಂಚ್ ಮಾಡೊಕೆ ತಯಾರಿ ಮಾಡಿಕೊಳ್ಳುತ್ತಿದೆ ತಂಡ.

publive-image

ಕಿರಣ್​ ರಾಜ್​ಗೆ ಜೋಡಿಯಾಗಿ ಮೊದಲು ಹೊಸ ಪ್ರತಿಭೆಗಳು ಆಯ್ಕೆ ಆಗಿದ್ರು. ಸಡನ್​ ಆಗಿ ಪಾತ್ರಗಳನ್ನ ಬದಲಾಯಿಸೋಕೆ ಕಾರಣ ಇದೆ. ಕಿರಣ್​ ರಾಜ್​ ಅವರ ಪ್ರೋಮೋಗೆ ಭರ್ಜರಿ ರೆಸ್ಪಾನ್ಸ್​ ಬಂತು. ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡಿತ್ತು. ಇದನ್ನ ಅರಿತ ತಂಡ ಸ್ಟಾರ್​ ನಟಿಯರನ್ನೇ ಯಾಕೆ ಕರ್ಣನಿಗೆ ಕರೆತರಬಾರದು ಅಂತ ಯೋಚಿಸುತ್ತಿತ್ತು. ಈ ನಡುವೆ ಫ್ಯಾನ್ಸ್​ ಕೂಡ ಒಂದಿಷ್ಟು ನಟಿಯರನ್ನ ಕರೆತರುವ ಬಗ್ಗೆ ಪ್ರಸ್ತಾಪ ಇಟ್ಟಿದ್ರು. ಅದರಲ್ಲಿ ಮುಖ್ಯವಾಗಿ ಕೇಳಿಬಂದ ಹೆಸರು ಭವ್ಯಾ ಗೌಡ.

publive-image

ಯಾವುದೇ ಪ್ರಾಜೆಕ್ಟ್​ ಆದ್ರೂ ವೀಕ್ಷಕರ ಅಭಿಪ್ರಾಯ, ಪ್ರತಿಕ್ರಿಯೆ ಮೇಲೆ ಸಾಗುತ್ತೆ. ಹೀಗಾಗಿ ಹೊಸ ಪ್ರತಿಭೆಗಳನ್ನ ಕೈ ಬಿಟ್ಟ ತಂಡ ಭವ್ಯಾ ಅವ್ರ ಕರೆತಂದಿದೆ. 4 ವರ್ಷಗಳ ಕಾಲ ಗೀತಾ ಸೀರಿಯಲ್​ನಲ್ಲಿ ಕೆಲಸ ಮಾಡಿದ್ದ ಭವ್ಯಾ ಇದೇ ಮೊದಲ ಬಾರಿಗೆ ಜೀ ಕನ್ನಡಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಇನ್ನು, ಅಚ್ಚರಿ ಎಂಬಂತೆ ಅಭಿಮಾನಿಗಳ ಊಹೆಗೂ ಮೀರಿ ನಮ್ರತಾ ಗೌಡ ಅವರನ್ನು ಮತ್ತೋರ್ವ ನಾಯಕಿ ಪಾತ್ರಕ್ಕೆ ಆಯ್ಕೆ ಮಾಡಲಾಗಿದೆ.

publive-image

ಕಿರಣ್​ ರಾಜ್​, ಭವ್ಯಾ ಗೌಡ ಆಯ್ಕೆ ಬೆನ್ನಲ್ಲೇ ಮತ್ತೊಂದು ಪ್ರಮುಖ ಪಾತ್ರ ಯಾರು ಮಾಡ್ತಾರೆ ಅನ್ನೋದೇ ಪ್ರಶ್ನೆಯಾಗಿ ಉಳಿದುಕೊಂಡಿತ್ತು.​ ಟ್ರೆಂಡಿಂಗ್​ನಲ್ಲಿ ಸ್ಟಾರ್​ ನಟಿಯನ್ನೇ ಪಕ್ಕಾ ತರೋದು ಅನ್ನೋದಂತು ಇತ್ತು. ಅದಕ್ಕೆ ತಕ್ಕಾ ಹಾಗೇ ನಾಗಿಣಿ ಬೆಡಗಿ ನಮ್ರತಾ ಮತ್ತೊಮ್ಮೆ ತವರು ಮನೆಗೆ ಮರಳಿದ್ದಾರೆ. ನಮ್ಮು ಫ್ಯಾನ್ಸ್​ಗೆ ಸಿಕ್ಕಾಪಟ್ಟೆ ಖುಷಿ ಕೊಡೋ ವಿಚಾರ ಇದು. ಇನ್ನೂ, ಪೋಷಕ ಪಾತ್ರಗಳಲ್ಲಿಯೂ ಅಷ್ಟೇ, ಸ್ವಾತಿ, ನಾಗಾಭರಣ, ಆಶಾರಾಣಿ, ಸುಂದರಾಜ್​ ಸೇರಿದಂತೆ ದೊಡ್ಡ ತಾರಾಬಳಗ ಇದೆ.

ಇದನ್ನೂ ಓದಿ:Newsfirst ಜ್ಞಾನ ಸಂಗಮಕ್ಕೆ ಬಂದರೆ ವಿದ್ಯಾರ್ಥಿಗಳಿಗೆ ಏನು ಉಪಯೋಗ?

publive-image

ಒಂದೋಳ್ಳೆ ಧಾರಾವಾಹಿ ಮಾಡ್ಬೇಕು ಅಂತ ಯೋಚಿಸಿದ್ದ ಶ್ರುತಿ ನಾಯ್ಡು ಅವ್ರು ಕರ್ಣನಿಗೆ ವೀಕ್ಷಕರು ನೀಡಿದ ಪ್ರತಿಕ್ರಿಯೇಗೆ ಖುಷಿಯಾಗಿ ಮತ್ತಷ್ಟು ಕಲರ್​​ಫುಲ್​ ಆಗಿ ಕರ್ಣನನ್ನ ಪ್ರೆಜೆಂಟ್​ ಮಾಡೋಕೆ ತಯಾರಾದ್ರು. ದೊಡ್ಡ ಮಟ್ಟದ ಬಂಡವಾಳವಾದ್ರೂ ಯೋಚಿಸದೇ ಸಾಹಸಕ್ಕೆ ಕೈ ಹಾಕಿರೋದು. ಸ್ಟಾರ್​ ನಟ-ನಟಿ ಇರೋದ್ರಿಂದ ಸೀರಿಯಲ್​​ ಗೆದ್ದೇ ಗೆಲ್ಲುತ್ತೆ ಅನ್ನೋದೇ ಇದರ ಹಿಂದಿನ ಗುಟ್ಟು. ಒಟ್ಟಾರೆ ಕರ್ಣ ಯಾವಾಗ ಬರ್ತಾನೆ? ಅಂತ ಅಭಿಮಾನಿಗಳು ಕಾಯ್ತಿದ್ದಾರೆ. ಈ ತಿಂಗಳು ಕೊನೆ ವಾರದಲ್ಲಿ ಇಲ್ಲ ಅಂದರೆ ಮೇ ಮೊದಲ ವಾರದಲ್ಲಿ ಕರ್ಣ ಮನೆ ಮನೆಗೆ ಬರೋ ಚಾನ್ಸ್​ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment