ಸೂಪರ್​ ಸ್ಟಾರ್ ರಜನಿಕಾಂತ್ ಬಣ್ಣಗಳ ಹಬ್ಬವನ್ನು ಆಚರಿಸೋದಿಲ್ಲ ಏಕೆ? ಇಲ್ಲಿದೆ ಆ ಸೀಕ್ರೆಟ್!

author-image
Veena Gangani
Updated On
ಆಸ್ಪತ್ರೆಗೆ ದಾಖಲಾದ ನಟ ರಜನಿಕಾಂತ್​.. ಕಾರ್ಡಿಯಾಕ್​ ಕ್ಯಾಥ್​ ಲ್ಯಾಬ್​​ನಲ್ಲಿ ಚಿಕಿತ್ಸೆ! ಅಂಥದ್ದೇನಾಯ್ತು?
Advertisment
  • ಸೂಪರ್​ ಸ್ಟಾರ್​ ಬದುಕಿನ ಆ ಒಂದು ದಿನದ ರಹಸ್ಯವೇ ರಣರೋಚಕ!
  • ನಟ ರಜನಿಕಾಂತ್​ ಹೋಳಿ ಹಬ್ಬದ ದಿನ ಆ ಒಬ್ಬರನ್ನೇ ಭೇಟಿ ಮಾಡ್ತಾರೆ!
  • ಬಣ್ಣದ ಹಬ್ಬದಂದು ಆ ಗುರುವಾಣಿ​ ರಜನಿಯನ್ನ ಎಚ್ಚರಿಸುತ್ತೆ ನಿಜಾನಾ?

10A ಮೆಜೆಸ್ಟಿಕ್​​ ಟು ಶ್ರೀನಗರ ಬಸ್​​ನಲ್ಲಿ ಟಿಕೆಟ್​ ಹರಿಯುತ್ತಿದ್ದ ಕಂಡಕ್ಟರ್​ ಶಿವಾಜಿರಾವ್ ಗಾಯಕ್ವಾಡ್ ಮೆಜೆಸ್ಟಿಕ್​​ ಮಂದಿಗೂ ಸರಿಯಾಗಿ ಗೊತ್ತಿಲ್ಲ. ಆದರೆ, ರಜನಿಕಾಂತ್​ ಅಂದ್ರೆ ಇಡೀ ವಿಶ್ವಕ್ಕೇ ಗೊತ್ತು. ಅದು ಸೂಪರ್​ಸ್ಟಾರ್​ ರಜನಿಕಾಂತ್​ ತಾಕತ್ತು. ಆದ್ರೆ, ಪ್ರತಿ ಹೋಳಿ ಹಬ್ಬದ ದಿನ ರಜನಿಕಾಂತ್​ ಥೇಟ್​ ದಳಪತಿ ಸಿನಿಮಾ ಸೀನ್​ ತರಹವೇ ಫುಲ್ ಸೈಲೆಂಟ್​ ಆಗ್ತಾರೆ.

ಇದನ್ನೂ ಓದಿ:ಭಾರತದ ರಾಷ್ಟ್ರೀಯ ಆಹಾರ ಯಾವುದು ಗೊತ್ತಾ? ಈ ಭೋಜನವನ್ನೇ ಆಯ್ಕೆ ಮಾಡಲು ಕಾರಣವೇನು?

publive-image

ಕಳೆದ 50 ವರ್ಷಗಳಿಂದಲೂ ಹೋಳಿ ಹಬ್ಬದ ದಿನ ರಜನಿಕಾಂತ್​ ಒಂದು ವ್ರತದಂತೆಯೇ ಆ ಒಬ್ಬ ವ್ಯಕ್ತಿಯನ್ನು ಭೇಟಿ ಮಾಡಿ ಆಶೀರ್ವಾದ ಪಡೆಯುತ್ತಿದ್ದರು. ಆದರೆ, ಕಳೆದ 11 ವರ್ಷಗಳಿಂದ ರಜನಿ ಬದುಕಿನ ಚೀಫ್ ಗೆಸ್ಟ್​​ ಭೇಟಿ ಸಿಗ್ತಿಲ್ಲ. ಅಷ್ಟಕ್ಕೂ ಏನಿದು ರಜನಿಕಾಂತ್​ ಬದುಕಿನ ಹೋಳಿ ಸೀಕ್ರೆಟ್​ ಅಂತೀರಾ? ಇಲ್ಲಿದೆ ಮಾಹಿತಿ.

publive-image

ರಜನಿಕಾಂತ್​ ವಯಸ್ಸು 74 ಅಲ್ಲವೇ ಅಲ್ಲ.. ಜಸ್ಟ್​ 50 ವರ್ಷ!

ಸೂಪರ್​ಸ್ಟಾರ್​ ರಜನಿಕಾಂತ್​​ಗೆ ಇದೀಗ 74 ವರ್ಷ ವಯಸ್ಸು. ಆದ್ರೆ, ಅದು ಶಿವಾಜಿ ರಾವ್ ಗಾಯಕ್ವಾಡ್​​ ಹೆಸರು ಅನ್ನೋ ಬಿಎಂಟಿಸಿ ಕಂಡಕ್ಟರ್​ ವಯಸ್ಸು. ರಜನಿಕಾಂತ್​​ ಅನ್ನೋ ಸೂಪರ್​ಸ್ಟಾರ್​ಗೀಗ 50 ವರ್ಷ. ಕಲಾವಿದ ಆಗಬೇಕು ಅಂತ ಕಂಡಕ್ಟರ್​ ವೃತ್ತಿಗೆ ರಾಜೀನಾಮೆ ಕೊಟ್ಟು ಮದ್ರಾಸ್​​ನಲ್ಲಿ ಅಲೆದಾಡಿ ಅಪಮಾನ ಕಂಡಿದ್ದ ಶಿವಾಜಿರಾವ್​ ಬದುಕನ್ನೇ ಬದಲಿಸಿದ್ದು ಖ್ಯಾತ ನಿರ್ದೇಶಕ ದಿವಂಗತ ಕೆ. ಬಾಲಚಂದರ್. ಇದೇ ಕೆ. ಬಾಲಚಂದರ್​ ಶಿವಾಜಿ ರಾವ್ ಗಾಯಕ್ವಾಡ್​​ ಹೆಸರನ್ನು 1975 ಮಾರ್ಚ್​​ 27ರ ಹೋಳಿ ಹಬ್ಬದ ದಿನವೇ ಬದಲಿಸಿದ್ರು. ಭರ್ತಿ 50 ವರ್ಷಗಳ ಹಿಂದೆ ಬಾಲಚಂದರ್​ ರಜನಿಕಾಂತ್​ ಅಂತ ಮರು ನಾಮಕರಣ ಮಾಡಿದ್ರು. ಇದೇ ಕಾರಣಕ್ಕೆ ರಜನಿಕಾಂತ್​​ ಹೋಳಿ ಹಬ್ಬವನ್ನು ಒಂದು ವ್ರತದಂತೆ ಆಚರಿಸುತ್ತಿದ್ರು.

publive-image

ಪ್ರತಿ ಹೋಳಿ ಹಬ್ಬದ ದಿನವೂ ರಜನಿ ಗುರು ಪೂಜೆ ಮಾಡುತ್ತಿದ್ದರು!

ಶಿವಾಜಿರಾವ್ ಗಾಯಕ್ವಾಡ್​ ರಜನಿಕಾಂತ್​ ಆದಾಗಿನಿಂದ 2014ರವರೆಗೂ ಪ್ರತಿ ಹೋಳಿ ಹಬ್ಬದ ದಿನ ಗುರುವನ್ನು ಭೇಟಿ ಮಾಡಿ ಆಶೀರ್ವಾದ ಪಡೆದು ಬರ್ತಿದ್ರು. ಆದ್ರೆ 2014ರಲ್ಲಿ ಕೆ. ಬಾಲಚಂದರ್​ ಸಾವನ್ನಪ್ಪಿದ್ರು. ಅವತ್ತಿನಿಂದ ರಜನಿ ಮನೆಯಲ್ಲೇ ಗುರುವನ್ನು ನಮಿಸುವ ಹಾಗೂ ಹೋಳಿ ಹಬ್ಬದ ದಿನ ಯಾವುದೇ ಬಣ್ಣ ಹಚ್ಚದೇ ಒಂದು ಪವಿತ್ರ ಹಬ್ಬದಂತೆ ಗುರುವನ್ನು ನೆನೆಯುತ್ತಿದ್ದಾರೆ. ಒಂದು ಸಂದರ್ಶನದಲ್ಲಿ ಖುದ್ದು ಬಾಲಚಂದರ್​ ರಜನಿಗೆ ಪ್ರಶ್ನಿಸುತ್ತಾರೆ. ನನಗಾಗಿ ಒಂದು ದಿನ ಬಣ್ಣ ಹಚ್ಚುತ್ತೀಯಾ? ಅಂತ ಪ್ರಶ್ನಿಸಿದ್ರು. ಅದ್ಯಾವ ದಿನ ಹೇಳಿ ಸಾರ್ ಅಂತ ಕೇಳಿದ್ರು ರಜನಿ. ಹೋಳಿ ಹಬ್ಬದ ದಿನ ಅಂದ ಕೂಡಲೇ ನಕ್ಕ ರಜನಿ, ನಿಮಗೆ ಗೊತ್ತಲ್ವಾ ಸಾರ್ ಆ ದಿನ ನಾನು ಬಣ್ಣ ಹಚ್ಚೋದಿಲ್ಲ ಅಂತ ಹೇಳಿದ್ರು. ಇಬ್ಬರು ನಕ್ಕಿದ್ರು. ಅವತ್ತೇ ರಜನಿಯ ಹೋಳಿ ರಹಸ್ಯ ಬಯಲಾಗಿತ್ತು. ಈ ಕ್ಷಣಕ್ಕೂ ಗುರು ಬಾಲಚಂದರ್​ ಶಿವಾಜಿ ಕಿವಿಯಲ್ಲಿ ರಜನಿಕಾಂತ್​ ಅಂತ ಹೇಳಿದ ಧ್ವನಿ ಪ್ರತಿ ಹೋಳಿ ಹಬ್ಬದಂದು ಮಾರ್ದನಿಸುತ್ತದೆ.

ವಿಶೇಷ ವರದಿ: ಬಸವರಾಜು ಸಿ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment