/newsfirstlive-kannada/media/post_attachments/wp-content/uploads/2025/05/Josh_Hazlewood.jpg)
ಚೆನ್ನೈ ಸೂಪರ್ ಕಿಂಗ್ಸ್​ ವಿರುದ್ಧ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ, ತವರಿನ ಪಿಚ್​ನಲ್ಲಿ ಅಖಾಡಕ್ಕೆ ಧುಮುಕಿದೆ. ಎರಡು ತಂಡಗಳು ಗೆಲುವಿಗಾಗಿ ಭಾರೀ ಪೈಪೋಟಿ ನಡೆಸಿವೆ. ಆದರೆ ಪೇಸ್​ ಬೌಲರ್ ಆಗಿರುವ​ ಜೋಶ್ ಹ್ಯಾಜಲ್ವುಡ್​ರನ್ನ ಆರ್​ಸಿಬಿ ತಂಡದಿಂದ ಹೊರಗಿಡಲಾಗಿದೆ.
ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಪಿಎಲ್​ ಪಂದ್ಯದಲ್ಲಿ ಚೆನ್ನೈ ಮತ್ತು ಆರ್​ಸಿಬಿ ಕಾದಾಟ ನಡೆಸುತ್ತಿವೆ. ಈಗಾಗಲೇ ಹನ್ನೊಂದು ಆಟಗಾರರ ಹೆಸರನ್ನು ಪ್ರಕಟಿಸಿರುವ ಆರ್​ಸಿಬಿ, ಜೋಶ್ ಹ್ಯಾಜಲ್ವುಡ್​ರನ್ನ ಕೈಬಿಟ್ಟಿದೆ. ಓಪನರ್​ ಫಿಲ್ ಸಾಲ್ಟ್​ ಜ್ವರದಿಂದ ಬಳಲುತ್ತಿರುವ ಬೆನ್ನಲ್ಲೇ ಪೇಸ್​ ಬೌಲರ್​ ಅನ್ನು ತಂಡದಿಂದ ಹೊರಗಿಟ್ಟಿರುವುದು ಫ್ಯಾನ್ಸ್​ಗೆ ಬೇಸರ ತರಿಸಿದೆ.
ಟಾಸ್ ಸೋತ ನಂತರ ಮಾತನಾಡಿದ ನಾಯಕ ರಜತ್ ಪಾಟಿದಾರ್ ಅವರು, ಜೋಶ್ ಹ್ಯಾಜಲ್ವುಡ್​ ಅವರನ್ನು ತಂಡದಿಂದ ಹೊರಗಿಟ್ಟಿರುವುದಕ್ಕೆ ಯಾವುದೇ ಕಾರಣ ಹೇಳಿಲ್ಲ. ಇದರ ಬದಲಾಗಿ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದೆ. ಹ್ಯಾಜಲ್ವುಡ್ ಬದಲಿಗೆ ಲುಂಗಿ ಎನ್ಗಿಡಿ ಬೌಲಿಂಗ್ ಮಾಡಲಿದ್ದಾರೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: RCB ಅಭಿಮಾನಿಗಳು ಯಾವಾಗಲೂ ಲಾಯಲ್ ಎನ್ನುವುದಕ್ಕೆ ಈ ಸ್ಟೋರಿನೇ ಸಾಕ್ಷಿ.. ಹೇಗೆ?
/newsfirstlive-kannada/media/post_attachments/wp-content/uploads/2025/05/Josh_Hazlewood_new.jpg)
ಇನ್ನು ಇಂಪ್ಯಾಕ್ಟ್​ ಪ್ಲೇಯರ್​ ಆಗಿ ಹ್ಯಾಜಲ್ವುಡ್ ಕಣಕ್ಕೆ ಇಳಿಯುತ್ತಾರೆ ಎಂದು ನೋಡಿದರೆ ಆ ಲಿಸ್ಟ್​ನಲ್ಲೂ ಹೆಸರು ಇಲ್ಲ. ಒಟ್ಟಿನಲ್ಲಿ ಇಂದಿನ ತಂಡದಲ್ಲಿ ಹ್ಯಾಜಲ್ವುಡ್ ಇಲ್ಲದೇ ಇರುವುದು ಆರ್​ಸಿಬಿಗೆ ನಷ್ಟವೇ ಎಂದು ಹೇಳಬಹುದು. ಇನ್ನು ಟೂರ್ನಿಯಲ್ಲಿ ಬೌಲಿಂಗ್​ನಲ್ಲಿ ಪರಾಕ್ರಮ ಮೆರೆದಿರುವ ಹ್ಯಾಜಲ್ವುಡ್ ಅವರು, 10 ಪಂದ್ಯಗಳಿಂದ 18 ವಿಕೆಟ್​ಗಳನ್ನು ಕಬಳಿಸಿ ಪರ್ಪಲ್ ಕ್ಯಾಪ್​ ರೇಸ್​ನಲ್ಲಿ 2ನೇ ಸ್ಥಾನ ಪಡೆದಿದ್ದಾರೆ.
ಅಲ್ಲದೇ ಈ ಹಿಂದಿನ ಪಂದ್ಯದಲ್ಲಿ ಪರ್ಪಲ್ ಕ್ಯಾಪ್ ಕೂಡ ಪಡೆದಿದ್ದರು. ಈ ಸೀಸನ್​ನಲ್ಲಿ 33 ರನ್​ಗೆ 4 ವಿಕೆಟ್​ ಉರುಳಿಸಿರುವುದು ಹ್ಯಾಜಲ್ವುಡ್ ಅವರ ಅತ್ಯುತ್ತಮ ಸಾಧನೆ ಆಗಿದೆ. ಇಂತಹ ಸಮಯದಲ್ಲಿ ಅವರನ್ನು ಆರ್​ಸಿಬಿಯಿಂದ ಹೊರಗಿಟ್ಟಿದ್ದು ಬೇಸರವೇ ಎಂದು ಹೇಳಬಹುದು. ಕ್ರಿಕೆಟ್​ ಮೂಲಗಳ ಪ್ರಕಾರ ಜೋಶ್​ ಹ್ಯಾಜಲ್ವುಡ್​ ಭುಜದ ನೋವಿನಿಂದ ಬಳಲುತ್ತಿದ್ದಾರೆ ಎನ್ನಲಾಗಿದೆ. ಆದ್ರೆ ಈ ಬಗ್ಗೆ ಅಧಿಕೃತವಾಗಿ ಆರ್​ಸಿಬಿ ಮಾಹಿತಿ ನೀಡಿಲ್ಲ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us