ಕೊಹ್ಲಿಗೆ ಬೌಲ್ ಮಾಡುವಾಗ ಕಣ್ಣಲ್ಲಿ ನೀರು ತುಂಬಿತ್ತು.. ಗಿಲ್​ರ ಈ ರಿಯಾಕ್ಷನ್ ನೋಡಿದ್ರೆ ನಿಮಗೂ ಚುರ್ ಎನ್ನುತ್ತೆ -VIDEO

author-image
Ganesh
Updated On
ಕೊಹ್ಲಿಗೆ ಬೌಲ್ ಮಾಡುವಾಗ ಕಣ್ಣಲ್ಲಿ ನೀರು ತುಂಬಿತ್ತು.. ಗಿಲ್​ರ ಈ ರಿಯಾಕ್ಷನ್ ನೋಡಿದ್ರೆ ನಿಮಗೂ ಚುರ್ ಎನ್ನುತ್ತೆ -VIDEO
Advertisment
  • ಕೊಹ್ಲಿಗೆ ಬೌಲ್ ಮಾಡಲಾಗದೇ ಕ್ರೀಸ್​ನಲ್ಲೇ ನಿಂತ ಸಿರಾಜ್..!
  • ಮೊದಲ ಬಾರಿಗೆ ಕೊಹ್ಲಿ ವಿರುದ್ಧ ಬೌಲ್ ಮಾಡುವಾಗ ಭಾವುಕ
  • RCB ಫ್ಯಾನ್ಸ್ ಹೃದಯ ಕಲುಕಿದ ಮೊಹ್ಮದ್ ಸಿರಾಜ್

ಆರ್​​ಸಿಬಿ ಜೊತೆಗಿನ ನನ್ನ ಪ್ರಯಾಣ 7 ವರ್ಷಗಳು. ಚಿನ್ನಸ್ವಾಮಿಯಲ್ಲಿ ಜೀವಿಸಿದ್ದೇನೆ. ಇಲ್ಲಿ ಕಲಿತದ್ದು ತುಂಬಾನೇ ಇದೆ. ಆರ್​ಸಿಬಿ ವಿರುದ್ಧ ಆಡುವಾಗ ಸಹಜವಾಗಿಯೇ ಭಾವುಕನಾದೆ. ಆರ್‌ಸಿಬಿ ಜರ್ಸಿಯಲ್ಲಿ ಬೌಲ್ ಮಾಡಿದ ಮೊದಲ ಎಸೆತದಿಂದ, ತೆಗೆದುಕೊಂಡ ಪ್ರತಿ ವಿಕೆಟ್, ಆಡಿದ ಪ್ರತಿ ಪಂದ್ಯ, ನಿಮ್ಮೊಂದಿಗೆ ಹಂಚಿಕೊಂಡ ಪ್ರತಿ ಕ್ಷಣ, ಪ್ರತಿ ಪ್ರಯಾಣ, ಅಭಿಮಾನಿಗಳ ಪ್ರೀತಿ ಅಸಾಧಾರಣ. ಅದಕ್ಕೆ ಭಾವುಕನಾದೆ -ಮೊಹ್ಮದ್ ಸಿರಾಜ್, GTಬೌಲರ್

ಹೌದು, ಮೊಹ್ಮದ್ ಸಿರಾಜ್ ಆರ್​ಸಿಬಿ ಅಭಿಮಾನಿಗಳ ಹೃದಯವನ್ನು ಮತ್ತೆ ಕಲುಕಿದ್ದಾರೆ. ನಿನ್ನೆ ಎಂ.ಚಿನ್ನಸ್ವಾಮಿಯಲ್ಲಿ ಪಂದ್ಯ ಆರಂಭ ಆಗುತ್ತಿದ್ದಂತೆಯೇ ಅಕ್ಷರಶಃ ಭಾವುಕರಾದರು. ತಾವು ಎಮೋಷನಲ್ ಆಗೋದು ಮಾತ್ರವಲ್ಲದೇ, ಆರ್​ಸಿಬಿ ಅಭಿಮಾನಿಗಳನ್ನು ಭಾವುಕ ಕ್ಷಣಕ್ಕೆ ಕೊಂಡೊಯ್ದರು. ಅದಕ್ಕೆ ಕಾರಣ ಗುರುವಿನ ರೂಪದಲ್ಲಿ ಸಿಕ್ಕಿರುವ ವಿರಾಟ್ ಕೊಹ್ಲಿ.

ಆಗಿದ್ದೇನು..?

ಟಾಸ್​ ಗೆದ್ದ ಕ್ರಿಕೆಟ್ ಪ್ರಿನ್ಸ್​ ಗಿಲ್, ಮೊದಲು ಫೀಲ್ಡಿಂಗ್ ಮಾಡಲು ನಿರ್ಧರಿಸಿದರು. ಅಂತೆಯೇ ಮೈದಾನಕ್ಕೆ ಇಳಿದ ಗುಜರಾತ್ ಟೈಟನ್ಸ್, ಆರ್​ಸಿಬಿ ವಿರುದ್ಧ ಸಿರಾಜ್ ಮೂಲಕವೇ ದಾಳಿ ಮಾಡಿಸಿತು. ಗಿಲ್, ಸಿರಾಜ್​ಗೆ ಬಾಲ್ ನೀಡ್ತಿದ್ದಂತೆಯೇ ಭಾವುಕರಾದು. ಮೊದಲ ಎಸೆತವನ್ನು ಫಿಲ್ ಸಾಲ್ಟ್​ಗೆ ಹಾಕಿದರು. ಒಂದು ರನ್​ಗಳಿಸುವ ಮೂಲಕ ಸಾಲ್ಟ್​, ಕೊಹ್ಲಿಗೆ ಸ್ಟ್ರೈಕ್ ನೀಡಿದರು.

ಆಗಲೇ ಗೊತ್ತಾಗಿದ್ದು..

ಯಾವಾಗ ಕೊಹ್ಲಿ ಸ್ಟ್ರೈಕ್ ಬಂದರೋ ಆಗ ಸಿರಾಜ್ ಮತ್ತಷ್ಟು ಭಾವುಕರಾದರು. ಕೊಹ್ಲಿಗೆ ಬಾಲ್ ಎಸೆಯಲು ಪ್ರಯತ್ನಿಸಿದಾಗ ಸಾಧ್ಯವಾಗಲಿಲ್ಲ. ಕ್ರೀಸ್​ ತನಕ ಓಡಿಬಂದು ಅರ್ಧಕ್ಕೆ ನಿಲ್ಲಿಸಿ ಎಮೋಷನಲ್ ಆದರು. ಸಿರಾಜ್​​ ಮನಸ್ಥಿತಿ ಅರ್ಥ ಮಾಡಿಕೊಂಡ ನಾಯಕ ಗಿಲ್, ಸಂತೈಸುವ ನಗುವಿನೊಂದಿಗೆ ಪ್ರತಿಕ್ರಿಯಿಸಿ, ಹುರಿದುಂಬಿಸಿದರು. ಇಲ್ಲಿ ಸಿರಾಜ್​ ತಳಮಳ ಏನೋ ಅನ್ನೋದು ಗಿಲ್ ಅವರ ರಿಯಾಕ್ಷನ್ ವಿವರಿಸಿ ಹೇಳುತ್ತಿತ್ತು.. ​

ಸಿರಾಜ್ ಯಾಕೆ ಹಾಗೆ ಮಾಡಿದರು..?

ಸಿರಾಜ್ ಹಾಗೆ ಮಾಡಲು ಕಾರಣ ಕೊಹ್ಲಿ ಜೊತೆಗಿನ ಒಡನಾಟ. ಕ್ರಿಕೆಟ್​ನಲ್ಲಿ ಸಿರಾಜ್ ಎತ್ತರಕ್ಕೆ ಬೆಳೆಯಲು ಹಿಂದಿರುವ ಶಕ್ತಿಯೇ ಕೊಹ್ಲಿ ಮತ್ತು ಆರ್​ಸಿಬಿ. ಸುದೀರ್ಘ 7 ವರ್ಷಗಳ ಕಾಲ ಆರ್​ಸಿಬಿಯಲ್ಲಿ ಆಡಿದ ಸಿರಾಜ್​ಗೆ ದೊಡ್ಡ ವೇದಿಕೆ ಸಿಕ್ಕಿದ್ದೇ ಕೊಹ್ಲಿಯಿಂದ. ಆರ್​​ಸಿಬಿಯಲ್ಲಿ ಕಿಂಗ್ ಕಲಿಸಿದ ಪಾಠಗಳು! ಈ ಗುರು ಶಿಷ್ಯರ ಬಾಂಧವ್ಯ, ಸಿರಾಜ್ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲೂ ಹೆಸರು ಮಾಡುವಂತೆ ಮಾಡಿತು.

ಸಿರಾಜ್ ಸಂಕಷ್ಟದಲ್ಲಿ ಕೊಹ್ಲಿ..

ಬೌಲಿಂಗ್​ನಲ್ಲಿ ಎಡವಿದಾಗ, ವಿಕೆಟ್ ಪಡೆಯಲು ಪರದಾಡಿದಾಗ, ಆಟದ ಅವಸರದಲ್ಲಿ ಕ್ಯಾಚ್ ಬಿಟ್ಟಾಗ, ಮಿಸ್ ಫೀಲ್ಡಿಂಗ್ ಆದಾಗ, ಕುಗ್ಗಿದ ಮನಸ್ಥಿತಿಯಲ್ಲಿದ್ದಾಗ ಸಿರಾಜ್​ಗೆ ಬೆನ್ನೆಲುಬಾಗಿ, ಸ್ಫೂರ್ತಿಯಾಗಿ ಬೆನ್ನು ತಟ್ಟುತ್ತಿದ್ದೇ ವಿರಾಟ್ ಕೊಹ್ಲಿ. ಅಲ್ಲದೇ ಸಿರಾಜ್​ಗೆ ವೈಯಕ್ತಿಕವಾಗಿಯೂ ಕೊಹ್ಲಿ ಹತ್ತಿರವಾಗಿದ್ದಾರೆ. ತಂದೆಯನ್ನು ಕಳೆದುಕೊಂಡ ನೋವಿನಲ್ಲಿದ್ದಾಗ ಸಿರಾಜ್​ ಸಂಕಷ್ಟಕ್ಕೆ ಹೆಗಲು ಕೊಟ್ಟಿದ್ದೇ ಕೊಹ್ಲಿ. ಆಟದ ಜೊತೆಗೂ ಇಬ್ಬರು ವೈಯಕ್ತಿಕವಾಗಿಯೂ ಉತ್ತಮ ಒಡನಾಟ ಇರುವ ಕಾರಣದಿಂದಲೇ, ಕೊಹ್ಲಿ ವಿರುದ್ಧ ಮೊದಲ ಬಾರಿಗೆ ಬೌಲ್ ಮಾಡುವಾಗ ಭಾವುಕರಾದರು.

ಇದನ್ನೂ ಓದಿ: ಆರ್​​ಸಿಬಿ ವಿರುದ್ಧ ಕಣಕ್ಕೆ ಇಳಿಯುತ್ತಿದ್ದಂತೆ ಸಿರಾಜ್​ ಭಾವುಕ.. ಪಂದ್ಯ ಮುಗಿದ ಮೇಲೆ ಹೇಳಿದ್ದೇನು?

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment