/newsfirstlive-kannada/media/post_attachments/wp-content/uploads/2024/11/KL-Rahul_Kohli_IPL.jpg)
ಇತ್ತೀಚೆಗೆ ಸೌದಿಯಲ್ಲಿ ನಡೆದ ಬಹುನಿರೀಕ್ಷಿತ 2025ರ ಇಂಡಿಯನ್​ ಪ್ರೀಮಿಯರ್​​ ಲೀಗ್​ ಮೆಗಾ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಉತ್ತಮ ತಂಡ ಆಯ್ಕೆ ಮಾಡಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದ್ರೂ ಸ್ಟಾರ್​ ಆಟಗಾರರ ಖರೀದಿಗೆ ಹಿಂದೇಟು ಹಾಕಿದ್ಯಾಕೆ? ಎಂಬ ದೊಡ್ಡ ಪ್ರಶ್ನೆಯೊಂದು ಎದ್ದಿದೆ. ಈ ಎಲ್ಲ ಪ್ರಶ್ನೆಗಳಿಗೆ ಆರ್​​ಸಿಬಿಯೇ ಉತ್ತರ ನೀಡಿದೆ.
ಐಪಿಎಲ್​​ ಹರಾಜಿಗೆ ಮುನ್ನ ಆರ್​​ಸಿಬಿ ಹೊಸ ಕ್ಯಾಪ್ಟನ್​ಗಾಗಿ ಹುಡುಕಾಟ ನಡೆಸುತ್ತಿದೆ ಎನ್ನುವ ಮಾತುಗಳು ಕೇಳಿ ಬಂದಿದ್ದವು. ಆದರೆ, ಆರ್​​ಸಿಬಿ ಹರಾಜಿನಲ್ಲಿ ತನಗೆ ಅಗತ್ಯ ಇರೋ ಆಟಗಾರರನ್ನು ಪ್ಲಾನ್​​ ಪ್ರಕಾರ ಖರೀದಿ ಮಾಡಿತು. ಅಚ್ಚರಿ ಎಂದರೆ ಆರ್​​​ಸಿಬಿ ಸ್ಟಾರ್​ ಆಟಗಾರರ ಗೋಜಿಗೆ ಹೋಗಲೇ ಇಲ್ಲ. ದೊಡ್ಡ ಮೊತ್ತ ಖರೀದಿ ಮಾಡಲು ಮನಸು ಮಾಡಲೇ ಇಲ್ಲ. ಇದಕ್ಕೆ ಕಾರಣ ಆರ್​​​ಸಿಬಿ ವಿರಾಟ್​ ಕೊಹ್ಲಿ ಅವರಿಗೆ ನಾಯಕತ್ವ ಪಟ್ಟ ಕಟ್ಟಲು ಮುಂದಾಗಿದೆಯಾ? ಎಂಬ ಚರ್ಚೆ ಹುಟ್ಟು ಹಾಕಿದೆ.
10 ಕೋಟಿ ಮಾತ್ರ ಸುರಿಯಲು ಮುಂದಾದ ಆರ್​​ಸಿಬಿ
ಲಕ್ನೋ ಸೂಪರ್​ ಜೈಂಟ್ಸ್​​ ತೊರೆದ ಕೆ.ಎಲ್​ ರಾಹುಲ್​ ಅವರು ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಸೇರಲಿದ್ದಾರೆ ಎಂದು ಹೇಳಲಾಗಿತ್ತು. ಎಲ್​ಎಸ್​​ಜಿ ಕೈ ಬಿಡುತ್ತಿದ್ದಂತೆ ಕೆ.ಎಲ್​ ರಾಹುಲ್​ ಅವರನ್ನು ತವರಿನ ತಂಡಕ್ಕೆ ಕರೆ ತನ್ನಿ ಎಂಬ ಬೇಡಿಕೆ ಹೆಚ್ಚಾಯಿತು. ಆರ್ಸಿಬಿ ಕೂಡ ಈ ನಿಟ್ಟಿನಲ್ಲಿ ಹರಾಜಿನಲ್ಲಿ ಹಣ ಹೂಡಿತು. ಆರ್​​ಸಿಬಿ ಕೇವಲ 10 ಕೋಟಿ ಸುರಿದಿದ್ದು, ಒಂದು ಆಟಗಾರನನ್ನಾಗಿ ಖರೀದಿ ಮಾಡಲು. ಕ್ಯಾಪ್ಟನ್​ ಮಾಡಲು ಬೇಕಾದಷ್ಟು ಹಣ ಸುರಿಯಲು ಆರ್​​ಸಿಬಿ ಮುಂದಾಗಲಿಲ್ಲ. ಕಾರಣ ಆರ್​​ಸಿಬಿ ನಾಯಕನಿಗಾಗಿ ಹುಡುಕಾಟ ನಡೆಸಿಲ್ಲ. ಅಯ್ಯರ್​​, ಪಂತ್​ ಹಿಂದೆಯೂ ಬೆಂಗಳೂರು ಫ್ರಾಂಚೈಸಿ ಹೋಗಲಿಲ್ಲ.
ಮೆಗಾ ಹರಾಜು ಪೂರ್ಣಗೊಂಡಿದೆ. ಈ ಬಾರಿ ಹರಾಜಿನಲ್ಲಿ ಆರ್​​ಸಿಬಿ ಬರೋಬ್ಬರಿ 19 ಆಟಗಾರರನ್ನು ಖರೀದಿ ಮಾಡಿದೆ. ಆರ್​​ಸಿಬಿ ಈ ಮೂಲಕ ಮುಂದಿನ ಸೀಸನ್​ಗೆ 22 ಆಟಗಾರರ ಬಲಿಷ್ಠ ತಂಡ ರೂಪಿಸಿದೆ. ಆದರೀಗ, ಆರ್​​ಸಿಬಿ ತಂಡವನ್ನು ಯಾರು ಮುನ್ನಡೆಸಲಿದ್ದಾರೆ ಎಂಬುದೇ ಪ್ರಶ್ನೆ.
ಸದ್ಯ ಎಲ್ಲರ ಈ ಪ್ರಶ್ನೆಗೆ ಆರ್​​ಸಿಬಿ ತಂಡದಿಂದ ಕೇಳಿ ಬರುತ್ತಿರೋ ಏಕೈಕ ಉತ್ತರ ವಿರಾಟ್​ ಕೊಹ್ಲಿ. ಮುಂದಿನ ಸೀಸನ್​ನಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡವನ್ನು ವಿರಾಟ್​ ಕೊಹ್ಲಿಯೇ ಮುನ್ನಡೆಸುವುದು ಬಹುತೇಕ ಕನ್ಫರ್ಮ್​​ ಆಗಿದೆ.
ಕೊಹ್ಲಿ ಆರ್​​ಸಿಬಿ ಕ್ಯಾಪ್ಟನ್​​
ಐಪಿಎಲ್ ಪ್ರಾರಂಭವಾದ 2008ರಿಂದಲೂ ಕೊಹ್ಲಿ ಆರ್​ಸಿಬಿ ಜೊತೆ ಇದ್ದಾರೆ. ಅನಿಲ್ ಕುಂಬ್ಳೆ ನಿವೃತ್ತಿ ಹೊಂದಿದ ಬಳಿಕ 2011ರಲ್ಲಿ ವಿರಾಟ್ ಕೊಹ್ಲಿ ಆರ್​ಸಿಬಿ ನಾಯಕರಾದರು. ಆದರೆ, ಒಮ್ಮೆಯೂ ಕೊಹ್ಲಿ ಐಪಿಎಲ್ ಟೂರ್ನಿ ಗೆಲ್ಲಲು ಸಾಧ್ಯವಾಗಿಲ್ಲ. ವಿರಾಟ್ ಕೊಹ್ಲಿ 2022 ಟಿ20 ತಂಡದ ಕ್ಯಾಪ್ಟನ್ಸಿಯಿಂದ ಕೆಳಗಿಳಿದರು. ಬಳಿಕ ಐಪಿಎಲ್​​ನಲ್ಲೂ ಆರ್​​ಸಿಬಿ ಕ್ಯಾಪ್ಟನ್ಸಿಗೂ ವಿದಾಯ ಹೇಳಿದ್ರು. ಕೆಲ ಮಾಧ್ಯಮ ವರದಿಗಳ ಪ್ರಕಾರ ವಿರಾಟ್ ಕೊಹ್ಲಿ ಮತ್ತೆ ಆರ್​ಸಿಬಿ ಕ್ಯಾಪ್ಟನ್​ ಆಗೋ ಸಾಧ್ಯತೆ ಇದೆ. ಈ ವಿಚಾರ ಖಚಿತಪಡಿಸಿಕೊಂಡೇ ಆರ್​​ಸಿಬಿ ಹರಾಜಿನಲ್ಲಿ ಕೇವಲ ಆಟಗಾರರನ್ನು ಮಾತ್ರ ಖರೀದಿ ಮಾಡಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us