/newsfirstlive-kannada/media/post_attachments/wp-content/uploads/2024/11/RCB.jpg)
ಐಪಿಎಲ್ 2025ರ ಟೂರ್ನಿಗೆ ಬಲಿಷ್ಠ ತಂಡ ಕಟ್ಟಲು ಮುಂದಾಗಿದ್ದ ಆರ್​​​ಸಿಬಿ ಅಳೆದು ತೂಗಿ ಮೂವರು ಆಟಗಾರರನ್ನು ಮಾತ್ರ ರೀಟೈನ್​ ಮಾಡಿಕೊಂಡಿತ್ತು. ಇತ್ತೀಚೆಗೆ ನಡೆದ ಹರಾಜಿನಲ್ಲಿ ಆರ್​​ಸಿಬಿ ಬರೋಬ್ಬರಿ 19 ಆಟಗಾರರನ್ನು ಖರೀದಿ ಮಾಡಿದೆ. ಆರ್​​ಸಿಬಿ ಈ ಮೂಲಕ ಮುಂದಿನ ಸೀಸನ್​ಗೆ 22 ಆಟಗಾರರ ಬಲಿಷ್ಠ ತಂಡ ರೂಪಿಸಿದೆ.
ಇನ್ನು, ಅದರಲ್ಲೂ ತಂಡದ ಬೌಲಿಂಗ್​​ ವಿಭಾಗದ ಆಧಾರಸ್ಥಂಬ ಆಗಿದ್ದ ಮೊಹಮ್ಮದ್​ ಸಿರಾಜ್​ ಅವರನ್ನು ಕೈ ಬಿಟ್ಟಿದ್ದು ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ. ಆರ್​​ಟಿಎಂ ಕಾರ್ಡ್​ ಬಳಸಿ ಖರೀದಿ ಮಾಡಲು ಅವಕಾಶ ಇದ್ರೂ ಯಾಕೆ ಬಿಡ್​ ಮಾಡಲಿಲ್ಲ? ಅನ್ನೋ ಚರ್ಚೆ ಜೋರಾಗಿದೆ.
ಸಿರಾಜ್ ಕೈ ಬಿಡಲು ಕಾರಣವೇನು?
ಟೀಮ್​ ಇಂಡಿಯಾದ ಆಲ್​ ಫಾರ್ಮೇಟ್​ ಪ್ಲೇಯರ್​​​ ಮೊಹಮ್ಮದ್​​ ಸಿರಾಜ್​​ ಅವರು. ಇವರನ್ನು ಕೈ ಬಿಟ್ಟು ಆರ್​​​ಸಿಬಿ ಯಶ್​ ದಯಾಳ್​ ಅವರನ್ನು ಉಳಿಸಿಕೊಂಡಿದ್ದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಕಳೆದ ಸೀಸನ್​​ನಲ್ಲಿ ಸಿರಾಜ್​ಗಿಂತಲೂ ಯಶ್​ ದಯಾಳ್​​​ ಅತ್ಯುತ್ತಮ ಪ್ರದರ್ಶನ ನೀಡಿದ್ರು. ದಯಾಳ್​​ ತಾನು ಆಡಿದ 14 ಪಂದ್ಯಗಳಲ್ಲಿ 15 ವಿಕೆಟ್ ಪಡೆದಿದ್ರು. ಆರ್ಸಿಬಿ ತಂಡವನ್ನು ಪ್ಲೇ-ಆಫ್ಗೆ ಕರೆದೊಯ್ಯುವಲ್ಲಿ ದಯಾಳ್ ಪ್ರಮುಖ ಪಾತ್ರವಹಿಸಿದ್ದರು. ಹೀಗಾಗಿ ಸಿರಾಜ್​ ಬದಲಿಗೆ ದಯಾಳ್​ಗೆ ಆರ್​​ಸಿಬಿ ಮಣೆ ಹಾಕಿದೆ.
ಚೆನ್ನೈ ವಿರುದ್ಧ ಖದರ್​ ತೋರಿಸಿದ್ದ ದಯಾಳ್​​
ಕಳೆದ ಸೀಸನ್​​ನಲ್ಲಿ ಲೀಗ್​ ಹಂತದ ಕೊನೆ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ದಯಾಳ್​​​ ತಮ್ಮ ಖದರ್​ ತೋರಿಸಿದ್ದರು. ಕೊನೆಯ ಓವರ್ 6 ಎಸೆತಗಳಲ್ಲಿ 17 ರನ್ಗಳ ಅಗತ್ಯವಿತ್ತು. ಕ್ರೀಸ್ನಲ್ಲಿದ ಎಂಎಸ್ ಧೋನಿ ದಯಾಳ್ ಮೊದಲ ಎಸೆತದಲ್ಲಿ ಭರ್ಜರಿ ಸಿಕ್ಸರ್ ಬಾರಿಸಿದ್ದರು. ಯಾವುದಕ್ಕೂ ಹೆದರದ ದಯಾಳ್​​​ 2ನೇ ಎಸೆತದಲ್ಲಿ ಧೋನಿ ಅವರನ್ನು ಔಟ್ ಮಾಡಿದರು. ನಂತರ ಉಳಿದ 5 ಎಸೆತಗಳಲ್ಲಿ ಕೇವಲ 1 ರನ್ ಮಾತ್ರ ಬಿಟ್ಟುಕೊಟ್ಟು ಆರ್​​ಸಿಬಿ ತಂಡವನ್ನು ಗೆಲ್ಲಿಸಿದ್ರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ