/newsfirstlive-kannada/media/post_attachments/wp-content/uploads/2024/05/RCB_VIRAT_KARTHIK.jpg)
2025ರ ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಹರಾಜಿನಲ್ಲಿ ಸ್ಟಾರ್​ ಆಟಗಾರರಿಗೆ ಮಣೆ ಹಾಕಿರೋ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಬಲಿಷ್ಠ ತಂಡ ಕಟ್ಟುವಲ್ಲಿ ಯಶಸ್ವಿಯಾಗಿದೆ.
ಮುಂದಿನ ಸೀಸನ್​ನಲ್ಲಿ ಹೇಗಾದ್ರೂ ಮಾಡಿ ಕಪ್​ ಗೆಲ್ಲಲೇಬೇಕು ಎಂದು ಜಿದ್ದಿಗೆ ಬಿದ್ದಿರೋ ಆರ್​​ಸಿಬಿ ಮುಖ್ಯವಾಗಿ ಬೌಲಿಂಗ್ ವಿಭಾಗವನ್ನು ಬಲಪಡಿಸಿದೆ. ಜತೆಗೆ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಬಲಪಡಿಸಲು ಉತ್ತಮ ಆಟಗಾರರನ್ನು ಖರೀದಿ ಮಾಡಿದೆ. ಇದಕ್ಕೂ ಮುನ್ನ ಆರ್​​ಸಿಬಿ ರಜತ್ ಪಟಿದಾರ್, ವಿರಾಟ್ ಕೊಹ್ಲಿ, ಯಶ್ ದಯಾಳ್ ಅವರನ್ನು ಮಾತ್ರ ಉಳಿಸಿಕೊಂಡು ಉಳಿದ ಆಟಗಾರರನ್ನು ಬಿಡುಗಡೆ ಮಾಡಿತ್ತು. ಹರಾಜಿನಲ್ಲಿ ಒಟ್ಟು 19 ಆಟಗಾರ ಖರೀದಿ ಮಾಡಿದ್ದು, ಈಗ ಆರ್​​ಸಿಬಿ 22 ಸದಸ್ಯರ ಬಲಿಷ್ಠ ತಂಡವಾಗಿದೆ. ಆದರೆ, ಆರ್​​​ಸಿಬಿ ತಂಡದಿಂದ ಯುವ ಆಟಗಾರನಿಗೆ ಕೊಕ್​​ ನೀಡಲಾಗಿದೆ.
ಮೆಗಾ ಹರಾಜಿಗೆ ಮುನ್ನವೇ ಆರ್​​​ಸಿಬಿಯಿಂದ ಔಟ್​ ಆಗಿರೋ ಪ್ಲೇಯರ್​ ಮತ್ಯಾರು ಅಲ್ಲ, ಸುಯಾಶ್ ಪ್ರಭುದೇಸಾಯಿ. ಇವರನ್ನು ಹರಾಜಿನಲ್ಲೂ ಆರ್​​ಸಿಬಿ ಬಿಡ್​ ಮಾಡಲಿಲ್ಲ.
ಯಾರು ಈ ಸುಯಾಶ್ ಪ್ರಭುದೇಸಾಯಿ?
ಆರ್​​ಸಿಬಿ ತಂಡದ ಯುವ ಬ್ಯಾಟರ್​​ ಸುಯಾಶ್ ಪ್ರಭುದೇಸಾಯಿ. ಎರಡು ಸೀಸನ್​ಗಳ ಹಿಂದೆ 2023ರ ಐಪಿಎಲ್​ನಲ್ಲಿ ಆರಂಭದಲ್ಲಿ ಆರ್​​ಸಿಬಿ ಪರ ಕಮಾಲ್​ ಮಾಡಿದ್ದ ಈತ ನಂತರ ಹೇಳಿಕೊಳ್ಳುವಷ್ಟು ಪ್ರದರ್ಶನ ನೀಡಲಿಲ್ಲ. 2023ರ ಐಪಿಎಲ್​ನಲ್ಲಿ ಆರ್​​ಸಿಬಿ ಪರ 5 ಪಂದ್ಯ ಆಡಿದ್ದ ಸುಯಾಶ್ ಪ್ರಭುದೇಸಾಯಿ ಗಳಿಸಿದ್ದು ಕೇವಲ 35 ರನ್​​. ಅದರಲ್ಲೂ ಕೇವಲ 2 ಸಿಕ್ಸರ್​​ ಮತ್ತು 1 ಫೋರ್​ ಬಾರಿಸಿದ್ದ. ಇದರ ಪರಿಣಾಮ 2024ರ ಐಪಿಎಲ್​ನಲ್ಲಿ ಹೆಚ್ಚು ಪಂದ್ಯಗಳಲ್ಲಿ ಅವಕಾಶ ಸಿಗಲಿಲ್ಲ. ಆಡಿದ ಒಂದು ಪಂದ್ಯದಲ್ಲಿ ಕೇವಲ 24 ರನ್​ ಗಳಿಸಿದ್ದ. ಅದು ಅಷ್ಟು ಇಂಪ್ಯಾಕ್ಟ್​ ಇನ್ನಿಂಗ್ಸ್​ ಆಗಿರಲಿಲ್ಲ.
ಇದನ್ನೂ ಓದಿ: ಬೆಂಗಳೂರಿಗೆ ಸ್ಫೋಟಕ ಬ್ಯಾಟರ್​ ಎಂಟ್ರಿ; RCB ಸೇರಿದ ಬಗ್ಗೆ ಏನಂದ್ರು ಜಿತೇಶ್​​?
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ