RCB ಟಾರ್ಗೆಟ್​​ ಲಿಸ್ಟ್​ನಲ್ಲಿತ್ತು ಸಿರಾಜ್​​ ಹೆಸ್ರು; ಕೊಹ್ಲಿ ಆಪ್ತನ ಕೈ ಬಿಡಲು ಅಸಲಿ ಕಾರಣ ಬಹಿರಂಗ

author-image
Ganesh Nachikethu
Updated On
RCB ರಿಟೈನ್​ ಲಿಸ್ಟ್​ನಿಂದ ಸಿರಾಜ್​ ಔಟ್; ಟೀಂ ಇಂಡಿಯಾದ ಸ್ಟಾರ್ ಎಂಟ್ರಿ, ದಯಾಳ್ ಅಲ್ಲ..!
Advertisment
  • ಬಹುನಿರೀಕ್ಷಿತ 2025ರ ಇಂಡಿಯನ್​ ಪ್ರೀಮಿಯರ್​​ ಲೀಗ್​​
  • ತಂಡದ ಸ್ಟಾರ್​ ಆಟಗಾರರನ್ನೇ ಕೈ ಬಿಟ್ಟ ಬೆಂಗಳೂರು ತಂಡ
  • ಟೀಮ್​ನಿಂದ ಕೊಹ್ಲಿ ಆಪ್ತನ ಕೈ ಬಿಡಲು ಕಾರಣವೇನು ಗೊತ್ತಾ?

ಐಪಿಎಲ್‌ 2025ರ ಟೂರ್ನಿಗೆ ಬಲಿಷ್ಠ ತಂಡ ಕಟ್ಟಲು ಮುಂದಾಗಿದ್ದ ಆರ್​​​ಸಿಬಿ ಅಳೆದು ತೂಗಿ ಮೂವರು ಆಟಗಾರರನ್ನು ಮಾತ್ರ ರೀಟೈನ್​ ಮಾಡಿಕೊಂಡಿತ್ತು. ಇತ್ತೀಚೆಗೆ ನಡೆದ ಹರಾಜಿನಲ್ಲಿ ಆರ್​​ಸಿಬಿ ಬರೋಬ್ಬರಿ 19 ಆಟಗಾರರನ್ನು ಖರೀದಿ ಮಾಡಿದೆ. ಆರ್​​ಸಿಬಿ ಈ ಮೂಲಕ ಮುಂದಿನ ಸೀಸನ್​ಗೆ 22 ಆಟಗಾರರ ಬಲಿಷ್ಠ ತಂಡ ರೂಪಿಸಿದೆ.

ಇನ್ನು, ಅದರಲ್ಲೂ ತಂಡದ ಬೌಲಿಂಗ್​​ ವಿಭಾಗದ ಆಧಾರಸ್ಥಂಬ ಆಗಿದ್ದ ಮೊಹಮ್ಮದ್​ ಸಿರಾಜ್​ ಅವರನ್ನು ಕೈ ಬಿಟ್ಟಿದ್ದು ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ. ಆರ್​​ಟಿಎಂ ಕಾರ್ಡ್​ ಬಳಸಿ ಖರೀದಿ ಮಾಡಲು ಅವಕಾಶ ಇದ್ರೂ ಯಾಕೆ ಬಿಡ್​ ಮಾಡಲಿಲ್ಲ? ಅನ್ನೋ ಚರ್ಚೆ ಜೋರಾಗಿದೆ.

ಟೀಮ್​ ಇಂಡಿಯಾದ ಆಲ್​ ಫಾರ್ಮೇಟ್​ ಪ್ಲೇಯರ್​​​ ಮೊಹಮ್ಮದ್​​ ಸಿರಾಜ್​​ ಅವರು. ಇವರನ್ನು ಕೈ ಬಿಟ್ಟು ಆರ್​​​ಸಿಬಿ ಯಶ್​ ದಯಾಳ್​ ಅವರನ್ನು ಉಳಿಸಿಕೊಂಡಿದ್ದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಕಳೆದ ಸೀಸನ್​​ನಲ್ಲಿ ಸಿರಾಜ್​ಗಿಂತಲೂ ಯಶ್​ ದಯಾಳ್​​​ ಅತ್ಯುತ್ತಮ ಪ್ರದರ್ಶನ ನೀಡಿದ್ರು. ದಯಾಳ್​​ ತಾನು ಆಡಿದ 14 ಪಂದ್ಯಗಳಲ್ಲಿ 15 ವಿಕೆಟ್‌ ಪಡೆದಿದ್ರು. ಆರ್‌ಸಿಬಿ ತಂಡವನ್ನು ಪ್ಲೇ-ಆಫ್‌ಗೆ ಕರೆದೊಯ್ಯುವಲ್ಲಿ ದಯಾಳ್ ಪ್ರಮುಖ ಪಾತ್ರವಹಿಸಿದ್ದರು. ಹೀಗಾಗಿ ಸಿರಾಜ್​ ಬದಲಿಗೆ ದಯಾಳ್​ಗೆ ಆರ್​​ಸಿಬಿ ಮಣೆ ಹಾಕಿದೆ ಎಂದು ಹೇಳಲಾಗುತ್ತಿದೆ. ಆದರೆ, ಸಿರಾಜ್​ ಅವರನ್ನು ಕೈ ಬಿಡಲು ಅಸಲಿ ಕಾರಣ ಇಲ್ಲಿದೆ.

ಆರ್​​​ಸಿಬಿ ಲಿಸ್ಟ್​​ನಲ್ಲಿತ್ತು ಸಿರಾಜ್​ ಹೆಸರು

ಮುಂದಿನ ಸೀಸನ್​​ನಲ್ಲಿ ಕಪ್​ ಗೆಲ್ಲಲೇಬೇಕು ಎಂದು ಮುಂದಾಗಿರೋ ಆರ್​ಸಿಬಿ ತನ್ನ ಬೌಲಿಂಗ್​​ ವಿಭಾಗವನ್ನು ಬಲಿಷ್ಠಗೊಳಿಸಲು ಸಾಕಷ್ಟು ಸರ್ಕಸ್​ ಮಾಡಿದೆ. ಆರ್​​ಸಿಬಿ ತನ್ನ ಸ್ಟ್ರಾಟಜಿ ವಿಡಿಯೋವನ್ನು ಸೋಷಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿದೆ. ಫೇಸ್​ ಬೌಲರ್​​ಗಾಗಿ ಆರ್​​ಸಿಬಿ ಮಾಡಿದ ಲಿಸ್ಟ್​ನಲ್ಲಿ ಆಸ್ಟ್ರೇಲಿಯಾದ ವೇಗಿ ಹೆಜಲ್​ವುಡ್​​, ಭುವನೇಶ್ವರ್​ ಕುಮಾರ್​ ಜತೆಗೆ ಸಿರಾಜ್​ ಹೆಸರು ಕೂಡ ಇತ್ತು.

ಸಿರಾಜ್​ ಕೈ ಬಿಡಲು ಅಸಲಿ ಕಾರಣವೇನು?

ಒಂದು ವೇಳೆ ಹೆಜಲ್​ವುಡ್​​, ಭುವನೇಶ್ವರ್​​ ಇಬ್ಬರಲ್ಲಿ ಒಬ್ಬರು ಸಿಗದೆ ಹೋದ್ರೂ ಸಿರಾಜ್​ಗೆ ಮಣೆ ಹಾಕುವ ಪ್ಲಾನ್​ ಆರ್​​ಸಿಬಿ ಮಾಡಿತ್ತು. ಸಿರಾಜ್​ ಅವರನ್ನು ಬಿಡ್​​ 8-12 ಕೋಟಿವರೆಗೂ ಮೀಸಲಿಟ್ಟಿತ್ತು. ಆದರೆ, ಹೆಜಲ್​ವುಡ್​ ಮತ್ತು ಭುವನೇಶ್ವರ್​​ ಇಬ್ರು ಸಿಕ್ಕ ಕಾರಣ ಸಿರಾಜ್​​​ ಗೋಜಿಗೆ ಆರ್​​ಸಿಬಿ ಹೋಗಲಿಲ್ಲ.

ಇದನ್ನೂ ಓದಿ:ಆರ್​​​ಸಿಬಿಗೆ ಜೂನಿಯರ್​​ ಬುಮ್ರಾ ಎಂಟ್ರಿ; ಇವರ ಖರೀದಿ ನಿಜಕ್ಕೂ ಸಖತ್​ ಸರ್​​​ಪ್ರೈಸ್!

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment